ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 24 ಗುರುವಾರ 2022

ಓದುಗರ ಪತ್ರ

ಖಾಸಗಿಯವರು ನಿರ್ಮಿಸಿದ ಸ್ವಚ್ಛ ತಂಗುದಾಣ

‘ಆಂದೋಲನ’ ಪತ್ರಿಕೆಯಲ್ಲಿ ಮೈಸೂರು ನಗರದಲ್ಲಿರುವ ಬಸ್ ತಂಗುದಾಣಗಳ ಅವ್ಯವಸ್ಥೆಯ ಬಗ್ಗೆ ಬರೆಯುತ್ತಿದ್ದೀರಿ. ಕುವೆಂಪು ನಗರದ ಎನ್-ಬ್ಲಾಕ್, ಮುಖ್ಯ ರಸ್ತೆಯಲ್ಲಿರುವ ದಿ. ಹೋರಿ ಸುಬ್ಬೇಗೌಡ ಸ್ಮಾರಕ ಬಸ್ಸು ನಿಲ್ದಾಣ ಇದಕ್ಕೆ ಅಪವಾದವೆಂತೆ ಇದೆ, ಮೈಸೂರು ನಗರದಲ್ಲೇ ಇದೊಂದು ಸುಂದರ ಮತ್ತು ಸ್ವಚ್ಚ ಬಸ್ಸು ತಂಗುದಾಣವಾಗಿದೆ. ನಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸಿ, ನಿರ್ವಹಣೆ ಮಾಡುತಿದ್ದೇವೆ. ಪ್ರತಿ ಎರಡು- ಮೂರು ದಿನಗಳಿಗೊಮ್ಮೆ ಕಸ ಗುಡಿಸಿ ನೀರಿನಿಂದ ತೊಳೆದು ಸ್ವಚ್ಚಗೊಳಿಸಿ, ಪ್ರತಿ ವರ್ಷಕ್ಕೊಮ್ಮೆ ನಮ್ಮ ಸ್ವತಃ ಖರ್ಚಿನಲ್ಲಿ ಸುಣ್ಣ-ಬಣ್ಣ ಬಳಿಸುತ್ತೇವೆ. ಸರ್ಕಾರದ ವತಿಯಿಂದ ನಿರ್ಮಿಸುವ ಬಸ್ಸು ನಿಲ್ದಾಣಗಳು, ನಿರ್ವಹಣೆ ಇಲ್ಲದೇ ಗಬ್ಬು- ನಾರುತ್ತಿವೆ, ಭಿಕ್ಷುಕರ ತಂಗುದಾಣಗಳಗಿವೆ. ಇನ್ನು ಆ ಪ್ರದೇಶಗಳ ಶಾಸಕರ ಅನುಧಾನದಿಂದ ನಿರ್ಮಾಣ ಮಾಡಿರುವ ಬಸ್ಸು ತಂಗುದಾಣಕ್ಕೆ, ಸ್ಥಳೀಯ ಶಾಸಕರ ಮತ್ತು ಆ ವಾರ್ಡಿನ ಕಾರ್ಪೋರೇಟರ್‌ಗಳ ಭಾವ ಚಿತ್ರಗಳನ್ನು ಹಾಕುವುದಾರೂ ಏಕೆ? ಇವರು ಸ್ವಂತ ಖರ್ಚಿನಲ್ಲಿ ಬಸ್ಸು ತಂಗುದಾಣನ್ನು ನಿರ್ಮಿಸಿದ್ದಾರಾ? ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣ ಮಾಡಿರುವ ಬಸ್ ನಿಲ್ದಾಣಕ್ಕೆ ಇವರ ಫೊಟೋ ಹಾಕಿಸಿಕೊಳ್ಳುವುದು ಎಷ್ಟು ಸರಿ?

-ಬೂಕನಕೆರೆ ವಿಜೇಂದ್ರ, ಮೈಸೂರು.


ವಿಶ್ವಮಾನವ ರೈಲಿನಲ್ಲಿ ಅವ್ಯವಸ್ಥೆ

ಮೈಸೂರಿನಿಂದ ಬೆಳಗಾವಿಗೆ ಪ್ರತಿ ದಿನ ನೇರ ಸಂಪರ್ಕ ಕಲ್ಪಿಸುವ ರೈಲಿಗೆ ನಮ್ಮ ನಾಡಿನ ಪ್ರಸಿದ್ಧ ಕವಿ ನೆನಪಿನ ವಿಶ್ವಮಾನವ ಎಕ್ಸ್‌ಪ್ರೆಸ್ ಹೆಸರು ಇಡಲಾಗಿದೆ. ಈ ರೈಲಿನಲ್ಲಿ ಬೆಳಿಗ್ಗೆ ೬ ಗಂಟೆಗೆ ಹೊರಟು ರಾತ್ರಿ ೧೦ ಗಂಟೆಗೆ ಬೆಳಗಾವಿ ಸೇರುವ ವೇಳೆಗೆ ಪ್ರಯಾಣಿಕರು ಪಡುವ ಬವಣೆ ಹೇಳಲಸಾಧ್ಯ. ಪ್ರತಿ ದಿನ ಸರಿ ಸುಮಾರು ೧ ರಿಂದ ೩ ಗಂಟೆಗಳ ಕಾಲ ಲೇಟಾಗಿ ತಲುಪುವ ಈ ರೈಲಿನ ಸಮಸ್ಯೆ ಸಂಬಂಧಿಸಿದವರ ಗಮನಕ್ಕೆ ಬರದಿರುವುದು ಆಶ್ಚರ್ಯವೇ ಸರಿ. ರಿಸರ್ವ್ ಬೋಗಿಗಳಲ್ಲಿ ತಿರುಗದ ಫ್ಯಾನ್, ನೀರು ಇಲ್ಲದ ಶೌಚಾಲಯ, ಕೆಟ್ಟು ಹೋದ ಶೌಚಾಲಯದ ನಲ್ಲಿ ಗಳು… ಒಂದೇ ಎರಡೇ ಅವ್ಯವಸ್ಥೆಗಳ ಪಟ್ಟಿ. ಸರಿ ಸುಮಾರು ೧೫ ರಿಂದ ೧೯ ಗಂಟೆ ಈ ರೈಲಿನಲ್ಲಿ ಪ್ರಯಾಣ ಮಾಡುವಾಗ ಆಗುವ ಹಿಂಸೆ ವರ್ಣಿಸಲು ಸಾಧ್ಯವಿಲ್ಲ. ಅವ್ಯವಸ್ಥೆ ತುಂಬಿ ತುಳುಕುವ ಈ ರೈಲಿಗೆ ವಿಶ್ವಮಾನವ ಹೆಸರು ಒಂದು ಕಳಂಕ.. ಕ್ಷುಲಕ ವಿಚಾರಗಳಿಗೆ ಬಡಿದಾಡುವ ನಮ್ಮ ಸಂಸದರು, ಶಾಸಕರು ಇನ್ನಿತರರಿಗೆ ಈ ತರದ ಸಮಸ್ಯೆಗಳು ಕಾಣುವುದೇ ಇಲ್ಲವೇ?

-ನಿಡ್ತ ಉಮಾಪತಿ, ಕುವೆಂಪು ನಗರ, ಮೈಸೂರು.


ವಿಶ್ವ ಕಪ್ ಫುಟ್ಬಾಲ್ ಪಂದ್ಯ ವೀಕ್ಷಣೆ

ವಿಶ್ವ ದಾದ್ಯಂತ ಕ್ರೀಡಾ ಪ್ರೇಮಿಗಳ ಕುತೂಹಲವಾಗಿದ್ದ ವಿಶ್ವ ಕಪ್ ಫುಟ್ಬಾಲ್ ಪಂದ್ಯವಳಿ ಆರಂಭವಾಗಿದೆ. ಪಂದ್ಯಾವಳಿ ಪ್ರಸಾರದ ಹಕ್ಕು ಸ್ಪೋರ್ಟ್ಸ್‌೧೮ ಚಾನೆಲ್ ಪಡೆದಿದೆ. ಅದರ ಉಚಿತ ಪ್ರಸಾರಲಭ್ಯವಿಲ್ಲ. ನಾನು ನಮ್ಮ ಕೇಬಲ್ ಆಪರೇರ್ಟ ಗೆ ಕರೆ ಮಾಡಿ ಕೇಳಲಾಗಿ, ಅದು ಪೇ ಚಾನೆಲ್ ರ್ಸ ಅದಕ್ಕೆ ಪ್ರತ್ಯೇಕ ಹಣ ಪಾವತಿ ಮಾಡಿ ಪಡೆಯ ಬೇಕು ಎಂದು ತಿಳಿಸಿದರು.
ಈಗಾಗಲೇ ಕೇಬಲ್ ನವರು ಪ್ರತಿ ೨೮ ದಿನಗಳಿಗೊಮ್ಮೆ ೨೮೦ ರಿಂದ- ೩೦೦ ರೂ ಗಳನ್ನು ಪ್ಯಾಕೇಜ್ ಲೆಕ್ಕಾದಲ್ಲಿ ಪಡೆಯುತ್ತಾರೆ. ಆದರೆ, ವೀಕ್ಷಕರಿಗೆ ಬೇಕಾದ ಚಾನೆಲ್ ನೋಡಲು ಸಾಧ್ಯವಾಗುತ್ತಿಲ್ಲ. ವಿಶ್ವ ಕಪ್ ಫುಟ್ಬಾಲ್ ಪಂದ್ಯವಳಿ ವೀಕ್ಷಿಸಲು ಅನುಕೂಲವಾಗುವಂತೆ ಸಂಬಂಧಪಟ್ಟವರು ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ.

-ಮುಳ್ಳೂರು ಪ್ರಕಾಶ್, ಮೈಸೂರು.


ನಾಚಿಕೆಗೇಡು

ಹೆಗ್ಗೊಠಾರ ಗ್ರಾಮದಲ್ಲಿ ನಡೆದಿರುವ ದಲಿತ ಮಹಿಳೆ ನೀರು ಕುಡಿದ್ದದ್ದಕ್ಕೆ ತೊಂಬೆಯಲ್ಲಿದ್ದ ನೀರನ್ನು ಖಾಲಿ ಮಾಡಿ ಶುದ್ಧೀಕರಿಸಿದ ಘಟನೆ ತುಂಬಾ ಹೇಯಕೃತ್ಯವಾಗಿದೆ. ಅನಾಗರಿಕವಾಗಿ ವರ್ತಿಸಿದವರಿಗೆ ಶಿಕ್ಷೆಯಾಗಲಿ. ಇನ್ನೂ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕೆಲಸ ಆಗಬೇಕಿದೆ.

-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು

andolanait

Recent Posts

ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ

ಮದ್ದೂರು : ತಾಲ್ಲೂಕಿನ ನಿಡಘಟ್ಟದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟುಹೋಗಿದ್ದು, ಅದೃಷ್ಟವಶಾತ್…

9 hours ago

ಮೈಸೂರಿನಲ್ಲಿ ನಾಳೆ ಇಂದ ಮೂರು ದಿನ ದೇಸಿ ಎಣ್ಣೆ ಮೇಳ : ಮೇಳೈಸಲಿದೆ ಸಾಂಪ್ರದಾಯಿಕ ಎಣ್ಣೆ

ಮೈಸೂರು : ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಅಡುಗೆ ಎಣ್ಣೆಗಳು, ಅವುಗಳ ಆರೋಗ್ಯ ಲಾಭಗಳ ಕಾರಣದಿಂದ ಮತ್ತೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿವೆ.…

10 hours ago

ಬಿ-ಖಾತಾಗಳಿಗೂ ʼಎ-ಖಾತಾʼ ಭಾಗ್ಯ ; ಸಂಪುಟ ಸಭೆಯಲ್ಲಿ ನಿರ್ಣಯ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು (ಜ.8) ನಡೆದ 2026ನೇ ಸಾಲಿನ 2ನೇ ಸಚಿವ ಸಂಪುಟದ ಸಭೆಯಲ್ಲಿ…

11 hours ago

ಮಂಡ್ಯದಲ್ಲಿ ಕೆಂಪೇಗೌಡರ ಬೃಹತ್‌ ಪ್ರತಿಮೆ : ಶಿಲ್ಪಿ ಅರುಣ್‌ ಯೋಗಿರಾಜ್‌ಗೆ ಕೆತ್ತನೆ ಜವಾಬ್ದಾರಿ

ಮಂಡ್ಯ : ನಗರಕ್ಕೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿರುವ ಶಾಸಕ ಪಿ. ರವಿಕುಮಾರಗೌಡ ಅವರು, ಒಕ್ಕಲಿಗ ಜನಾಂಗದ ಹಲವು ವರ್ಷಗಳ…

12 hours ago

ಬೀದಿಬದಿ ವ್ಯಾಪಾರಿಗಳ ವಲಯ ನಿರ್ಮಿಸಲು ಚಿಂತನೆ : ಸಂಸದ ಯದುವೀರ್‌

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಗರದಲ್ಲಿ ಬೀದಿಬದಿ ವ್ಯಾಪಾರಿಗಳ ವಲಯ ನಿರ್ಮಿಸಲು ಆದ್ಯತೆ ನೀಡಲಾಗುವುದು…

13 hours ago

ಗೃಹಲಕ್ಷ್ಮಿ ಹಣ ಶೀಘ್ರ ಸಂದಾಯ : ಸಚಿವೆ ಹೆಬ್ಬಾಳಕರ್‌

ಬೆಂಗಳೂರು : ಹಣಕಾಸು ಇಲಾಖೆ ಅನುಮತಿ ನೀಡಿದ ತಕ್ಷಣವೇ 2025ರ ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣವನ್ನು…

13 hours ago