ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 13 ಮಂಗಳವಾರ 2022

ಕೆರೆಗಳಿಗೆ ಮತ್ತೆ ನ್ಯಾಯ ಸಿಕ್ಕಿದೆ!
ಬೆಂಗಳೂರು ಸೇರಿದಂತೆ
ರಾಜ್ಯದ ಹಲವೆಡೆ
ಬಿದ್ದ ಭಾರೀ
ಮಳೆಗೆ ನಗರಗಳೇ ಮುಳುಗಿವೆ!
ಬಡಾವಣೆಗಳು ಕೆರೆಯಂತಾಗಿವೆ.
ಇದನ್ನೆಲ್ಲ ನೋಡಿದಾಗ ಅನಿಸಿದಿಷ್ಟು-
ಕೆರೆಗಳು ಯಾವ ಕೋರ್ಟಿಗೂ ಹೋಗಿ ಕೇಸ್ ಹಾಕದೇ,
ಯಾವ ಪೊಲೀಸ್ ಸ್ಟೇಷನ್ ಮೇಟ್ಟಿಲೇರದೇ,
ತಮ್ಮೆಲ್ಲಾ ಒತ್ತುವರಿ ಭೂಮಿಯನ್ನು
ಖುದ್ದಾಗಿ ತಾವೇ ಬಿಡಿಸಿಕೊಂಡಿವೆ!!
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.


ಜನರ ಸಮಸ್ಯೆಗಿಂತ ಚುನಾವಣೆ ಮುಖ್ಯವಾಯ್ತೆ?
ರಾಜ್ಯದಲ್ಲಿ ಮಳೆ ಬಂದು ಜನರು ಸಂಕಷ್ಟದಲ್ಲಿದ್ದಾರೆ. ಸುಮಾರು ೭ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ವರದಿಗಳು ಹೇಳುತ್ತಿವೆ. ಬೆಂಗಳೂರಿನಲ್ಲೂ ಮಳೆಯಿಂದಾಗಿ ಸಮಸ್ಯೆಯಾಗಿದೆ. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರೋ ಜನರಿಗೆ ಸ್ಪಂದನೆ ಮಾಡೋದು ಬಿಟ್ಟು ಸಮಾವೇಶ, ಯಾತ್ರೆ ಮಾಡ್ತಿದಾರೆ. ಮಳೆಯಿಂದ ಸಂಕಷ್ಟಕ್ಕೊಳಗಾದ ಜನರಿಗೆ ಪರಿಹಾರ ಕೊಡ್ತೀವಿ ಎಂದು ನಾಮಕಾವಸ್ತೆ ಮಾತುಗಳನ್ನಾಡುತ್ತಿದ್ದಾರೆ. ಪರಿಹಾರ ಬಂತೋ ಇಲ್ಲವೋ ಏನೂ ಕೇಳುತ್ತಿಲ್ಲ. ಇವರಿಗೆ ಚುನಾವಣೆಯೇ ಮುಖ್ಯವಾಗಿದೆ. ಚುನಾವಣೆಗೆ ಇನ್ನೂ ಬಹಳ ದಿನಗಳಿರುವಾಗಲೇ ಅನುದಾನ ಕೊಡ್ತೀವಿ ಎಂದು ಹೇಳುತ್ತಿದ್ದಾರೆ. ನಂತರ ಎಲ್ಲ                     ಪರಿಹಾರವನ್ನು ಅದು ಇದು ಕಾರಣ ಕೊಟ್ಟು ರದ್ದು ಮಾಡ್ತಾರೆ. ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡದೇ ಇದ್ರೆ ಚುನಾವಣೆಯಲ್ಲಿ ತಕ್ಕ ಪಾಠ ಜನರೇ ಕಲಿಸ್ತಾರೆ.
-ಹರ್ಷಿತ ಬಿ.ಸಿ., ವಿದ್ಯಾರ್ಥಿನಿ, ಮೈಸೂರು.

ಪ್ರಥಮ ಪ್ರಜೆಗೆ ಸುಸ್ವಾಗತ
ಈ ಬಾರಿಯ ವಿಶ್ವ ವಿಖ್ಯಾತ  ದಸರಾ ಮಹೋತ್ಸವವನ್ನು ದೇಶದ ಪ್ರಥಮ ಪ್ರಜೆಯಾದ ರಾಷ್ಟಪತಿ ದ್ರೌಪದಿ ಮುರ್ಮು ಉದ್ಘಾಟಿಸಲಿರುವುದು ಸಂತೋಷಕರ ಸಂಗತಿ.  ಇದೇ ಪ್ರಥಮ ಬಾರಿಗೆ ದೇಶದ ರಾಷ್ಟಪತಿಗಳು ದಸರಾ ಮಹೋತ್ಸವವನ್ನು ಉದ್ಘಾಟಿಸುವ ಮೂಲಕ ನಾಡಹಬ್ಬ ದಸರಾದ ಹಿರಿಮೆಯನ್ನು ಹೆಚ್ಚಿಸಲಿದ್ದಾರೆ.  ರಾಷ್ಟಪತಿಗಳ
ಆಗಮನದ ಕಾರಣದಿಂದ ಈ ಬಾರಿಯ ದಸರಾ ಹಿಂದೆಂದೂ ಕಾಣದಿರುವಷ್ಟು ಭದ್ರತೆಯ  ದಸರಾವಾಗಲಿದೆ.
ವರ್ಷದಿಂದ ವರ್ಷಕ್ಕೆ ದಸರಾ ಹಬ್ಬದ ಹಿರಿಮೆ ಹೆಚ್ಚುತ್ತಲೇ ಇದೆ.  ಕೋವಿಡ್ ಸೋಂಕಿನಿಂದಾಗ ಕಳೆದ ಎರಡು ವರ್ಷಗಳಿಂದ ಸರಳ ದಸರಾ ಆಚರಿಸಿದ್ದ ರಾಜ್ಯ ಸರ್ಕಾರವು ಈ ಬಾರಿ ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಹಿಂದೆಯೂ, ಅತಿವೃಷ್ಟಿ, ಅನಾವೃಷ್ಟಿ ಮುಂತಾದ ಕಾರಣಗಳಿಂದ ಸರಳ ರೀತಿಯಲ್ಲಿ ಅಥವಾ ಸಾಂಕೇತಿಕವಾಗಿ  ಆಚರಿಸಿದ್ದೂ ಇದೆ.  ದಸರಾ ಹಬ್ಬ ನಾಡಹಬ್ಬ ಮಾತ್ರವಲ್ಲದೇ ನಾಡಿನ ಐತಿಹಾಸಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿರಿಮೆಯ ಪ್ರದರ್ಶನವೂ ಆಗಿದೆ.
-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು.

ಐತಿಹಾಸಿಕ ನಡೆ
ಈ ಬಾರಿಯ ನಾಡಹಬ್ಬ  ದಸರಾ ಉದ್ಘಾಟನೆ ಮಾಡಲು ಸಮ್ಮತಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಇಂತಹ ನಿರ್ಧಾರ ಕೈಗೊಂಡ       ರಾಜ್ಯ ಸರ್ಕಾರದ ವಿಶಿಷ್ಟ ನಡೆ ಶ್ಲಾಘನೀಯ. ಇತಿಹಾಸ ಅವಲೋಕಿಸಿದಾಗ ಕವಿಗಳು, ಸಾಹಿತಿಗಳು, ಕಲಾವಿದರು, ಪ್ರಗತಿಪರ ಚಿಂತಕರು, ರಾಜಕೀಯ ನಾಯಕರುಗಳು, ಸಾಮಾನ್ಯ ರೈತರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರು ಪಾರಂಪರಿಕ ದಸರಾ ಉತ್ಸವಕ್ಕೆ ಚಾಲನೆ ನೀಡಿದ್ದಾರೆ.   ಸದ್ಯ, ದೇಶದ ಪ್ರಥಮ ಪ್ರಜೆ ಬುಡಕಟ್ಟು ಮಹಿಳೆಯಾದ ದ್ರೌಪದಿ    ಮುರ್ಮು ಅವರ ಆಯ್ಕೆಯು  ಸಂತಸ ತಂದಿದೆ.
೨೦೧೫ರಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನ ಸಾಮಾನ್ಯ ರೈತ ಮಲಾರ ಕಾಲೋನಿಯ ಪುಟ್ಟಯ್ಯ ಉದ್ಘಾಟಿಸಿದ್ದರು. ಆಗ, ಅಂದಿನ ಸರ್ಕಾರದ ನಿರ್ಧಾರಕ್ಕೆ ಸಾಕಷ್ಟು ಮೆಚ್ಚುಗೆ ಸಿಕ್ಕಿತು. ಈಗ, ಅಸಾಮಾನ್ಯ, ಪ್ರತಿಷ್ಠಿತ ಹುದ್ದೆಯಲ್ಲಿರುವ ದೇಶದ ಪ್ರಥಮ ಪ್ರಜೆ ಅವರಿಂದ ಚಾಲನೆ ಸಿಗುತ್ತಿದೆ. ಕಳೆದ ಒಂದು ದಶಕದಲ್ಲಿ ಈ ಎರಡು ಚಾರಿತ್ರಿಕ ಹೆಜ್ಜೆಗಳು ಸಾಮಾನ್ಯ- ಅಸಾಮಾನ್ಯರನ್ನು ಒಂದೇ ಕಡೆ ಕಟ್ಟಿಕೊಟ್ಟ ರಂಗಿನ ಮೈಸೂರು ದಸರಾ ವೈಭವವು ಇತಿಹಾಸದ ಪುಟಗಳಲ್ಲಿ ಎಂದಿಗೂ ಮಾಸದೆ ಉಳಿಯುತ್ತವೆ. ಇಂತಹ ಆಲೋಚನಾ ಕ್ರಮ ಕೈಗೊಳ್ಳುವ ಯಾವುದೇ ಸರ್ಕಾರದ ದಿಟ್ಟ ಹೆಜ್ಜೆಯ ನಡೆಗಳು ಸುಂದರ ಗಣರಾಜ್ಯದ ಮಾದರಿ ಪ್ರಜಾಪ್ರಭುತ್ವಕ್ಕೆ ಇನ್ನಷ್ಟು ಮೆರುಗು ತರಲಿದೆ.
– ಅನಿಲ್ ಕುಮಾರ್, ನಂಜನಗೂಡು.
andolanait

Recent Posts

ಓದುಗರ ಪತ್ರ: ಗ್ರಂಥಾಲಯ ನಿರ್ಮಿಸಿ

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಬಾಳೆಕೆರೆ ಗ್ರಾಮದಲ್ಲಿ ಗ್ರಂಥಾಲಯವಿಲ್ಲದೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಗ್ರಾಮದಲ್ಲಿ ೧೦೦ಕ್ಕೂ ಹೆಚ್ಚು…

1 hour ago

ಓದುಗರ ಪತ್ರ: ಪತ್ರಿಕಾ ವಿತರಕರಿಗೆ ಸೌಲಭ್ಯ ಕಲ್ಪಿಸಿ

ಪತ್ರಿಕಾ ವಿತರಕರು ಅಕ್ಷರಶಃ ಸಮಾಜದ ಅದೃಶ್ಯ ಕಾಯಕಯೋಗಿಗಳು. ಮಳೆ, ಗಾಳಿ, ಚಳಿ ಎನ್ನದೆ ಜ್ಞಾನದೀವಿಗೆ ಹಂಚುವ ಇವರ ಬದುಕು ಇಂದಿಗೂ…

1 hour ago

ಓದುಗರ ಪತ್ರ: ಸರ್ಕಾರಿ ಶಾಲೆಗಳನ್ನು ಉನ್ನತೀಕರಣಗೊಳಿಸಿ

ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿರುವ ಸರ್ಕಾರಿ ಶಾಲೆಯನ್ನು ಉನ್ನತಿಕರಣಗೊಳಿಸದೇ ಇರುವುರಿಂದ ಪೋಷಕರು ಮಕ್ಕಳನ್ನು ಶಾಲೆಗೆ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಪ್ರಸ್ತುತ…

1 hour ago

ಓದುಗರ ಪತ್ರ: ಭಾರತೀಯ ರಿಸರ್ವ್ ಬ್ಯಾಂಕಿನ ಕ್ರಮ ಸ್ವಾಗತಾರ್ಹ

ಸೈಬರ್ ವಂಚನೆಯ ಸಂತ್ರಸ್ತರಿಗೆ ಗರಿಷ್ಟ ರೂ.೨೫,೦೦೦ ಪರಿಹಾರ ನೀಡುವುದಾಗಿ ಭಾರತದ ರಿಸರ್ವ್ ಬ್ಯಾಂಕ್ ಪ್ರಕಟಿಸಿರುವುದು ಸ್ವಾಗತಾರ್ಹವಾಗಿದೆ. ಆದರೆ, ಅನೇಕ ಸಂದರ್ಭಗಳಲ್ಲಿ…

1 hour ago

ಓದುಗರ ಪತ್ರ: ಸೆಸ್ಕ್ ಭೂಗತ ಕೇಬಲ್ ಅಳವಡಿಕೆ ಅವಾಂತರಗಳು

ಮೈಸೂರಿನ ಕೆಲವು ಬಡಾವಣೆಗಳಲ್ಲಿ ಈಗಾಗಲೇ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ದವರು ಭೂಗತ ಕೇಬಲ್ ಅಳವಡಿಸುವ ಸಲುವಾಗಿ ಯಂತ್ರಗಳ…

1 hour ago

ವಿವಿಗಳಲ್ಲಿ ಸಾಮಾಜಿಕ ನ್ಯಾಯ: ಸಂಕಟಗಳು – ಸವಾಲುಗಳು

 ಡಾ.ಶಿವಲಿಂಗಸ್ವಾಮಿ ಎಚ್.ಕೆ. ಯುಜಿಸಿ- ೨೦೨೬ ನಿಯಮಾವಳಿಗಳು ಹೇಳುವುದೇನು? ಉನ್ನತ ಶಿಕ್ಷಣದಲ್ಲಿ ಸೃಷ್ಟಿಸಬೇಕಿರುವ ಸಮಾನತೆಗೆ ಸಂಬಂಧಿಸಿದಂತೆ ಯುಜಿಸಿ (ವಿಶ್ವವಿದ್ಯಾಲಯಗಳ ಅನುದಾನ ಆಯೋಗ)-೨೦೨೬ರ…

1 hour ago