ಎಡಿಟೋರಿಯಲ್

ಆಂದೋಲನ ಓದುಗರ ಪತ್ರ, 18 ಶನಿವಾರ 2023

ಅಶ್ವತ್ಥ ನಾರಾಯಣ ಸಚಿವರೋರೌಡಿಯೋ?

ಸಿದ್ದರಾಮಯ್ಯರವರನ್ನು ‘ಹೊಡೆದು ಹಾಕಬೇಕು’ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣರವರುರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಟೀಕಿಸುವ ಭರದಲ್ಲಿ ಈ ರೀತಿ ಹೇಳಿಕೆ ನೀಡಿರುವುದು ಸಭ್ಯತೆಯೇ ಎಂದು ಪ್ರಶ್ನಿಸುವಂತಾಗಿದೆಡಾ.ಅಶ್ವತ್ಥ ನಾರಾಯಣರವರು ಸಿದ್ದರಾಮಯ್ಯರವರನ್ನು ಟಿಪ್ಪು ಸುಲ್ತಾನ್‌ಗೆ ಹೋಲಿಸಿಉರಿಗೌಡ ಮತ್ತು ನಂಜೇಗೌಡ ಎಂಬುವವರು ಟಿಪ್ಪುವನ್ನು ಏನು ಮಾಡಿದರುಎಂದು ಸಾರ್ವಜನಿಕವಾಗಿ ಅವರೇ ಪ್ರಶ್ನಿಸಿ ಬಳಿಕ ಅವರು ಟಿಪ್ಪುವನ್ನು ಹೊಡೆದು ಹಾಕಿದರು ಎನ್ನುವುದರೊಂದಿಗೆಅದೇ ರೀತಿ ನೀವೂ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎನ್ನುವ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡಿದ್ದಾರೆಈ ಹೇಳಿಕೆಯನ್ನು ನೀಡಿರುವ ಡಾ.ಅಶ್ವತ್ಥ ನಾರಾಯಣರವರು ಸಚಿವರೋ ಅಥವಾ ಬೀದಿ ರೌಡಿಯೋ ಎಂಬ ಅನುಮಾನ ಮೂಡಿದೆಉನ್ನತ ಸ್ಥಾನದಲ್ಲಿದ್ದು ಇವರೇ ಕ್ರೌರ್ಯಕ್ಕೆ ಆಹ್ವಾನ ಕೊಟ್ಟಂತೆ ಪ್ರಚೋದನಾತ್ಮಕ ಹೇಳಿಕೆ ಕೊಡುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆಈ ಹಿಂದೆಯೂ ರಾಮನಗರದ ಸಾರ್ವಜನಿಕ ಸಭೆಯೊಂದರ ವೇದಿಕೆ ಮೇಲೆ ಕುಸ್ತಿ ಪೈಲ್ವಾನರಂತೆ ಎದೆಯ ಮೇಲೆ ಕೈ ತಟ್ಟಿ ‘ಯಾರ್ರೊ ಬನ್ರೋಗಂಡಸರುನೋಡ್ಕೋತ್ತಿನಿ’ ಎಂದು ಕುಸ್ತಿಗೆ ಆಹ್ವಾನಿಸಿದಂತೆ ವರ್ತಿಸಿದ್ದರುಈ ಮೂಲಕ ತಾನೊಬ್ಬ ರಾಜಕಾರಣಿ ಎನ್ನುವುದಕ್ಕಿಂತ ತಾನೊಬ್ಬ ರೌಡಿ ಎಂಬುದನ್ನು ಸಾಬೀತು ಮಾಡಲು ಮುಂದಾಗಿದ್ದಾರೆಇಂತಹ ರಾಜಕಾರಣಿಗಳಿಂದ ಇಂದು ಸಮಾಜದಲ್ಲಿ ಶಾಂತಿ ಕದಡುವ ಸನ್ನಿವೇಶಗಳು ಉದ್ಭವವಾಗುತ್ತಿದ್ದುಇವರುಗಳ ವಿರುದ್ಧ ಪೊಲೀಸರು ಏಕೆ ‘ರೌಡಿ’ ಶೀಟರ್ ಎಂದು ಪ್ರಕರಣ ದಾಖಲಿಸಬಾರದು?

ಬೂಕನಕೆರೆ ವಿಜೇಂದ್ರಕುವೆಂಪುನಗರಮೈಸೂರು


ಬದಲಾವಣೆ? ಭರದಿಂದ ಬರುತ್ತಿದೆ,

ಬಿರುಗಾಳಿಯಂತೆ ಚುನಾವಣೆ:

ಯಾರು ಯಾರಿಂದಲೋ

ಯಾರು ಯಾರಿಗೋ ಚಿತಾವಣೆ!

ಚಿತೆ’ಗೆ ಬೀಳುವವರು ಯಾರೊ;

ಅಗ್ನಿ ಪರೀಕ್ಷೆ’ಯನ್ನು ಉತ್ತರಿಸುವವರು ಯಾರೊ

ಕಾದು ನೋಡೋಣಅಂತೂ

ಹಲವು ಪ್ರಶ್ನೆಗಳಿಗೆ ಉತ್ತರ

ಕಾಣಿಸಲಿದೆ ಚುನಾವಣೆ;

ಏನಾದರೇನುನಿರೀಕ್ಷಿಸಲಾಗದು

ಭಾರಿ ಬದಲಾವಣೆ!

(ಖಾಲಿ ಖಾಲಿ ಜನ ಸಾಮಾನ್ಯರ ಹಣೆ).

– ಸಿಪಿಕೆಮೈಸೂರು.


ಗಡಿಭಾಗದಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು ಉತ್ತಮ ಬೆಳವಣಿಗೆ

ಕರ್ನಾಟಕದ ಗಡಿಭಾಗದ ತಾಲ್ಲೂಕ್ಕಾಗಿರುವ ಎಚ್.ಡಿ.ಕೋಟೆ ವ್ಯಾಪ್ತಿಯಲ್ಲಿ ನೆರೆ ರಾಜ್ಯದವರ ಪ್ರಭಾವ ಹೆಚ್ಚಾಗಿದ್ದುಇದರಿಂದ ಗಡಿಯಲ್ಲಿ ಕನ್ನಡ ಭಾಷೆ ನಶಿಸುವಂತಾಗಿದೆಈಗಾಗಲೇ ತಾಲ್ಲೂಕಿನ ಸಾಕಷ್ಟು ಜನರು ಕೇರಳದೊಂದಿಗೆ ವ್ಯವಹಾರಿಕ ಸಂಪರ್ಕ ಹೊಂದಿರುವುದರಿಂದ ಕೆಲಸ ಕಾರ್ಯಗಳಿಗೆ ಕೇರಳದವರ ಮೊರೆ ಹೋಗುತ್ತಿದ್ದಾರೆಈ ವೇಳೆ ಕನ್ನಡದಲ್ಲಿ ವ್ಯವಹರಿಸುವ ಬದಲಿಗೆ ಮಲಯಾಳಂ ಭಾಷೆಯಲ್ಲಿಯೇ ವ್ಯವಹರಿಸುತ್ತಿದ್ದುಕ್ಷೇತ್ರದಲ್ಲಿ ಕನ್ನಡ ನಶಿಸುವ ಹಂತದಲ್ಲಿದೆಇನ್ನು ಕೆಲ ಅಂಗಡಿಗಳ ನಾಮಫಲಕಗಳಲ್ಲಿಯೂ ಅನ್ಯಭಾಷೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದುಕನ್ನಡ ಭಾಷೆಯ ಬಳಿಕ ಕಡಿಮೆಯಾಗಿದೆ.ಇಂತಹ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಡಿಭಾಗವಾದ ಅಂತರಸಂತೆಯಲ್ಲಿ ಆಯೋಜಿಸಿದ್ದುಇದು ಈ ಭಾಗದಲ್ಲಿ ಕನ್ನಡದ ಉಳಿವಿನ ಬಗ್ಗೆ ಜಾಗೃತಿಯನ್ನು ಮೂಡಿಸುವಲ್ಲಿ ಎಷ್ಟರಮಟ್ಟಿಗೆ ಪ್ರಭಾವ ಬೀರಬಹುದು ಎಂಬುದನ್ನು ಕಾದನೋಡಬೇಕಿದೆಮತ್ತೊಂದೆಡೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡಿಗರೇ ಹೆಚ್ಚಾಗಿ ಆಗಮಿಸದಿದ್ದದ್ದು ಬೇಸರದ ಸಂಗತಿಯಾಗಿದೆಈಗಾದರೆ ಗಡಿಭಾಗಗಳಲ್ಲಿ ಕನ್ನಡ ಉಳಿಯುವುದು ಹೇಗೆಇಂತಹ ಕಾರ್ಯಕ್ರಮಗಳಿಗೆ ಕನ್ನಡದ ಮನಸ್ಸುಗಳು ಹೆಚ್ಚಾಗಿ ಒಗ್ಗೂಡಬೇಕಿದೆ.ಇದರೊಂದಿಗೆ ನಾವೂ ಅನ್ಯ ರಾಜ್ಯದವರೊಂದಿಗೆ ಹೆಚ್ಚಾಗಿ ನಮ್ಮ ಭಾಷೆಯಲ್ಲಿಯೇ ವ್ಯವಹರಿಸುವ ಮೂಲಕ ಅವರಿಗೆ ನಮ್ಮ ಭಾಷೆಯನ್ನು ಪರಿಚಯಿಸಬೇಕಿದೆಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿರುವಾಗ ಎಲ್ಲರೊಂದಿಗೂ ಕನ್ನಡದಲ್ಲಿಯೇ ವ್ಯವಹರಿಸಬೇಕುಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಅಂತರಸಂತೆಯಲ್ಲಿ ನಡೆದ ಸಮ್ಮೇಳನ ಅನುಕೂಲವಾಗಿದೆ.

ರಾಜೇಶ್ಅಂತರಸಂತೆಎಚ್.ಡಿ.ಕೋಟೆ ತಾ.


ಹುಲಿಮರಿಗಳ ಮೇಲೆ ನಿಗಾ ಅಗತ್ಯ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ.ಕುಪ್ಪೆ ವ್ಯಾಪ್ತಿಯಲ್ಲಿ ಪ್ರವಾಸಿಗರ ನೆಚ್ಚಿನ ಹುಲಿಯಾಗಿದ್ದ ‘ಬ್ಯಾಕ್‌ವಾಟರ್ ಫೀಮೇಲ್’ ಎಂದೇ ಹೆಸರು ಪಡೆದಿದ್ದ ಹೆಣ್ಣು ಹುಲಿಯೊಂದು ಮತ್ತೊಂದು ಹುಲಿಯೊಂದಿಗಿನ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರಿಂದ ರಕ್ಷಣೆಯ ಹಿತದೃಷ್ಟಿಯಿಂದ ಅರಣ್ಯ ಇಲಾಖೆಯು ಹುಲಿಗೆ ಅರಿವಳಿಕೆ ನೀಡಿ ಸೆರೆಹಿಡಿದು ಕೂರ್ಗಳ್ಳಿಯ ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆಗಾಗಿ ರವಾನಿಸಿದೆಆದರೆ ಸೆರೆಯಾಗಿರುವ ಹುಲಿಗೆ ಒಂದು ವರ್ಷ ವಯಸ್ಸಿನ ನಾಲ್ಕು ಮರಿಗಳಿವೆ ಎಂಬುದು ಆತಂಕಕಾರಿಯಾಗಿದೆಕಾಡಿನಲ್ಲಿ ತಾಯಿಯ ಆರೈಕೆಯಲ್ಲಿ ಬೆಳೆಯುತ್ತಿದ್ದ ಮರಿಗಳು ಈಗಾ ಏಕಾಏಕಿ ಕಾಣೆಯಾದ ತಮ್ಮ ತಾಯಿಯನ್ನು ಬಿಟ್ಟು ಕಾಡಿನಲ್ಲಿ ಅನಾಥವಾಗಿ ಹೇಗೆ ಬದುಕುತ್ತವೆ ಎಂಬ ಪ್ರಶ್ನೆ ಉಂಟಾಗಿದೆಅರಣ್ಯ ಇಲಾಖೆಯು ಗಾಯಗೊಂಡ ಹುಲಿಯ ರಕ್ಷಣೆಗೆ ಕ್ರಮವಹಿಸಿದಷ್ಟೇ ಜವಾಬ್ದಾರಿಯುತವಾಗಿ ಮರಿಗಳಿಗೂ ಕಾಡಿನಲ್ಲಿಯೇ ಸೂಕ್ತ ರಕ್ಷಣೆಯನ್ನು ನೀಡಿ ಅವುಗಳೇ ಸ್ವತಃ ಬೇಟೆಯಾಡುವರೆಗೂ ನಿಗಾವಹಿಸಬೇಕಿದೆಈ ಹಿಂದೆಯೂ ಇದೇ ನಾಗರಹೊಳೆ ವ್ಯಾಪ್ತಿಯ ಅಂತರಸಂತೆ ವಲಯದ ತಾರಕ ಗಸ್ತಿನ ಬಳಿ ಹೆಣ್ಣು ಹುಲಿಯೊಂದು ಕಳ್ಳಬೇಟೆಗಾರರ ಉರುಳಿಗೆ ಸಿಲುಕಿ ಸಾವನ್ನಪ್ಪಿತ್ತುಈ ವೇಳೆ ಅರಣ್ಯ ಇಲಾಖೆ ಅದರ ಮರಿಗಳ ಮೇಲೆ ನಿಗಾವಹಿಸಿತಾದರೂ ಒಂದು ಗಂಡು ಮರಿ ಮತ್ತೊಂದು ಹುಲಿಯ ದಾಳಿಗೆ ಸಿಲುಕಿ ಸಾವನ್ನಪ್ಪಿತ್ತುಇದಾದ ಬಳಿಕ ಉಳಿದೆರಡು ಮರಿಗಳು ಏನಾದವು ಎಂಬುದು ಮಾತ್ರ ತಿಳಿಯಲೇ ಇಲ್ಲಈಗ ಅಂತಹದ್ದೇ ಪರಿಸ್ಥಿತಿ ಈ ಹುಲಿ ಮರಿಗಳಿಗೆ ಎದುರಾಗಿದ್ದುಅವುಗಳು ಬಗ್ಗೆ ಅರಣ್ಯ ಇಲಾಖೆ ಸಂಪೂರ್ಣ ನಿಗಾವಹಿಸಬೇಕಿದೆಅಲ್ಲದೆ ದೇಶದ ಇತರೆ ಕಾಡುಗಳಲ್ಲಿ ಈ ರೀತಿ ಮರಿಗಳನ್ನು ಅಗಲಿ ತಾಯಿ ಹುಲಿ ಸಾವನ್ನಪ್ಪಿದ ಸಂದರ್ಭದಲ್ಲಿ ಮರಿಗಳ ರಕ್ಷಣೆಗೆ ಅಲ್ಲಿ ಅನುಸರಿಸಿದ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಇಲ್ಲೂ ಜಾರಿಗೆ ತರುವ ಜವಾಬ್ದಾರಿವಹಿಸಬೇಕಿದೆ.

ಭೂಮಿಕ ಪೂಜಾರಿಪತ್ರಿಕೋದ್ಯಮ ವಿಭಾಗಮಾನಸಗಂಗೋತ್ರಿ ಮೈಸೂರು.

andolanait

Recent Posts

ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಂಡೀಪುರ-ನಾಗರಹೊಳೆ ಸಫಾರಿ ಆರಂಭಿಸಿ: ಸಿಎಂ ಡಿ.ಕೆ.ಶಿವಕುಮಾರ್‌ ಸೂಚನೆ

ಬೆಂಗಳೂರು: ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಂಡೀಪುರ ಹಾಗೂ ನಾಗರಹೊಳೆ ಉದ್ಯಾನಗಳಲ್ಲಿ ಸಫಾರಿ ಆರಂಭಿಸಿ ಎಂದು ಸಿಎಂ ಡಿ.ಕೆ.ಶಿವಕುಮಾರ್‌…

10 hours ago

ವೆನೆಜುವೆಲಾ ಭೂಕಂಪ: ಮೃತರ ಸಂಖ್ಯೆ 1700ಕ್ಕೆ ಏರಿಕೆ

ವೆನೆಜುವೆಲಾ: ಇಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 1700ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 5000ಕ್ಕೂ…

11 hours ago

ರಾಜಸ್ಥಾನದಲ್ಲಿ ಪ್ಯಾರಾಮೆಡಿಕಲ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ನಾಲ್ವರು ಅರೆಸ್ಟ್‌

ಜೈಪುರ: ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ಯಾರಾಮೆಡಿಕಲ್‌ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಯುತ್ತಿದ್ದ ವೇಳೆಯೇ ಪರೀಕ್ಷೆ ಹಾಲ್‌ ಮೇಲೆ ಪೊಲೀಸರು…

11 hours ago

ಎಸ್‌ಐಆರ್‌ ಬಗ್ಗೆ ಗಾಬರಿ ಬೇಡ: ಬಾನು ಮುಷ್ತಾಕ್‌

ಹಾಸನ: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಆರಂಭವಾಗಿದೆ. ಹಾಸನದಲ್ಲಿ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌…

11 hours ago

ನಾಡಿನ ಖ್ಯಾತ ಕಲಾವಿದ ಕೆ.ಟಿ.ಶಿವಪ್ರಸಾದ್‌ ನಿಧನ

ಬೆಂಗಳೂರು: ನಾಡಿನ ಖ್ಯಾತ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತ ‌ಕೆ.ಟಿ. ಶಿವಪ್ರಸಾದ್(77) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.…

12 hours ago

ಕೈಕೊಟ್ಟ ಮುಂಗಾರು: 126 ವರ್ಷಗಳಲ್ಲೇ ಮೂರನೇ ಬಾರಿ ದೇಶದಲ್ಲಿ ಮಳೆ ಕೊರತೆ

ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ಕಳೆದ 126 ವರ್ಷಗಳ ಇತಿಹಾಸದಲ್ಲೇ ಜೂನ್‌ ತಿಂಗಳಿನಲ್ಲಿ ಮೂರನೇ…

13 hours ago