ಎಡಿಟೋರಿಯಲ್

ಆಂದೋಲನ ಓದುಗರ ಪತ್ರ, 18 ಶನಿವಾರ 2023

ಅಶ್ವತ್ಥ ನಾರಾಯಣ ಸಚಿವರೋರೌಡಿಯೋ?

ಸಿದ್ದರಾಮಯ್ಯರವರನ್ನು ‘ಹೊಡೆದು ಹಾಕಬೇಕು’ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣರವರುರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಟೀಕಿಸುವ ಭರದಲ್ಲಿ ಈ ರೀತಿ ಹೇಳಿಕೆ ನೀಡಿರುವುದು ಸಭ್ಯತೆಯೇ ಎಂದು ಪ್ರಶ್ನಿಸುವಂತಾಗಿದೆಡಾ.ಅಶ್ವತ್ಥ ನಾರಾಯಣರವರು ಸಿದ್ದರಾಮಯ್ಯರವರನ್ನು ಟಿಪ್ಪು ಸುಲ್ತಾನ್‌ಗೆ ಹೋಲಿಸಿಉರಿಗೌಡ ಮತ್ತು ನಂಜೇಗೌಡ ಎಂಬುವವರು ಟಿಪ್ಪುವನ್ನು ಏನು ಮಾಡಿದರುಎಂದು ಸಾರ್ವಜನಿಕವಾಗಿ ಅವರೇ ಪ್ರಶ್ನಿಸಿ ಬಳಿಕ ಅವರು ಟಿಪ್ಪುವನ್ನು ಹೊಡೆದು ಹಾಕಿದರು ಎನ್ನುವುದರೊಂದಿಗೆಅದೇ ರೀತಿ ನೀವೂ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎನ್ನುವ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡಿದ್ದಾರೆಈ ಹೇಳಿಕೆಯನ್ನು ನೀಡಿರುವ ಡಾ.ಅಶ್ವತ್ಥ ನಾರಾಯಣರವರು ಸಚಿವರೋ ಅಥವಾ ಬೀದಿ ರೌಡಿಯೋ ಎಂಬ ಅನುಮಾನ ಮೂಡಿದೆಉನ್ನತ ಸ್ಥಾನದಲ್ಲಿದ್ದು ಇವರೇ ಕ್ರೌರ್ಯಕ್ಕೆ ಆಹ್ವಾನ ಕೊಟ್ಟಂತೆ ಪ್ರಚೋದನಾತ್ಮಕ ಹೇಳಿಕೆ ಕೊಡುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆಈ ಹಿಂದೆಯೂ ರಾಮನಗರದ ಸಾರ್ವಜನಿಕ ಸಭೆಯೊಂದರ ವೇದಿಕೆ ಮೇಲೆ ಕುಸ್ತಿ ಪೈಲ್ವಾನರಂತೆ ಎದೆಯ ಮೇಲೆ ಕೈ ತಟ್ಟಿ ‘ಯಾರ್ರೊ ಬನ್ರೋಗಂಡಸರುನೋಡ್ಕೋತ್ತಿನಿ’ ಎಂದು ಕುಸ್ತಿಗೆ ಆಹ್ವಾನಿಸಿದಂತೆ ವರ್ತಿಸಿದ್ದರುಈ ಮೂಲಕ ತಾನೊಬ್ಬ ರಾಜಕಾರಣಿ ಎನ್ನುವುದಕ್ಕಿಂತ ತಾನೊಬ್ಬ ರೌಡಿ ಎಂಬುದನ್ನು ಸಾಬೀತು ಮಾಡಲು ಮುಂದಾಗಿದ್ದಾರೆಇಂತಹ ರಾಜಕಾರಣಿಗಳಿಂದ ಇಂದು ಸಮಾಜದಲ್ಲಿ ಶಾಂತಿ ಕದಡುವ ಸನ್ನಿವೇಶಗಳು ಉದ್ಭವವಾಗುತ್ತಿದ್ದುಇವರುಗಳ ವಿರುದ್ಧ ಪೊಲೀಸರು ಏಕೆ ‘ರೌಡಿ’ ಶೀಟರ್ ಎಂದು ಪ್ರಕರಣ ದಾಖಲಿಸಬಾರದು?

ಬೂಕನಕೆರೆ ವಿಜೇಂದ್ರಕುವೆಂಪುನಗರಮೈಸೂರು


ಬದಲಾವಣೆ? ಭರದಿಂದ ಬರುತ್ತಿದೆ,

ಬಿರುಗಾಳಿಯಂತೆ ಚುನಾವಣೆ:

ಯಾರು ಯಾರಿಂದಲೋ

ಯಾರು ಯಾರಿಗೋ ಚಿತಾವಣೆ!

ಚಿತೆ’ಗೆ ಬೀಳುವವರು ಯಾರೊ;

ಅಗ್ನಿ ಪರೀಕ್ಷೆ’ಯನ್ನು ಉತ್ತರಿಸುವವರು ಯಾರೊ

ಕಾದು ನೋಡೋಣಅಂತೂ

ಹಲವು ಪ್ರಶ್ನೆಗಳಿಗೆ ಉತ್ತರ

ಕಾಣಿಸಲಿದೆ ಚುನಾವಣೆ;

ಏನಾದರೇನುನಿರೀಕ್ಷಿಸಲಾಗದು

ಭಾರಿ ಬದಲಾವಣೆ!

(ಖಾಲಿ ಖಾಲಿ ಜನ ಸಾಮಾನ್ಯರ ಹಣೆ).

– ಸಿಪಿಕೆಮೈಸೂರು.


ಗಡಿಭಾಗದಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು ಉತ್ತಮ ಬೆಳವಣಿಗೆ

ಕರ್ನಾಟಕದ ಗಡಿಭಾಗದ ತಾಲ್ಲೂಕ್ಕಾಗಿರುವ ಎಚ್.ಡಿ.ಕೋಟೆ ವ್ಯಾಪ್ತಿಯಲ್ಲಿ ನೆರೆ ರಾಜ್ಯದವರ ಪ್ರಭಾವ ಹೆಚ್ಚಾಗಿದ್ದುಇದರಿಂದ ಗಡಿಯಲ್ಲಿ ಕನ್ನಡ ಭಾಷೆ ನಶಿಸುವಂತಾಗಿದೆಈಗಾಗಲೇ ತಾಲ್ಲೂಕಿನ ಸಾಕಷ್ಟು ಜನರು ಕೇರಳದೊಂದಿಗೆ ವ್ಯವಹಾರಿಕ ಸಂಪರ್ಕ ಹೊಂದಿರುವುದರಿಂದ ಕೆಲಸ ಕಾರ್ಯಗಳಿಗೆ ಕೇರಳದವರ ಮೊರೆ ಹೋಗುತ್ತಿದ್ದಾರೆಈ ವೇಳೆ ಕನ್ನಡದಲ್ಲಿ ವ್ಯವಹರಿಸುವ ಬದಲಿಗೆ ಮಲಯಾಳಂ ಭಾಷೆಯಲ್ಲಿಯೇ ವ್ಯವಹರಿಸುತ್ತಿದ್ದುಕ್ಷೇತ್ರದಲ್ಲಿ ಕನ್ನಡ ನಶಿಸುವ ಹಂತದಲ್ಲಿದೆಇನ್ನು ಕೆಲ ಅಂಗಡಿಗಳ ನಾಮಫಲಕಗಳಲ್ಲಿಯೂ ಅನ್ಯಭಾಷೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದುಕನ್ನಡ ಭಾಷೆಯ ಬಳಿಕ ಕಡಿಮೆಯಾಗಿದೆ.ಇಂತಹ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಡಿಭಾಗವಾದ ಅಂತರಸಂತೆಯಲ್ಲಿ ಆಯೋಜಿಸಿದ್ದುಇದು ಈ ಭಾಗದಲ್ಲಿ ಕನ್ನಡದ ಉಳಿವಿನ ಬಗ್ಗೆ ಜಾಗೃತಿಯನ್ನು ಮೂಡಿಸುವಲ್ಲಿ ಎಷ್ಟರಮಟ್ಟಿಗೆ ಪ್ರಭಾವ ಬೀರಬಹುದು ಎಂಬುದನ್ನು ಕಾದನೋಡಬೇಕಿದೆಮತ್ತೊಂದೆಡೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡಿಗರೇ ಹೆಚ್ಚಾಗಿ ಆಗಮಿಸದಿದ್ದದ್ದು ಬೇಸರದ ಸಂಗತಿಯಾಗಿದೆಈಗಾದರೆ ಗಡಿಭಾಗಗಳಲ್ಲಿ ಕನ್ನಡ ಉಳಿಯುವುದು ಹೇಗೆಇಂತಹ ಕಾರ್ಯಕ್ರಮಗಳಿಗೆ ಕನ್ನಡದ ಮನಸ್ಸುಗಳು ಹೆಚ್ಚಾಗಿ ಒಗ್ಗೂಡಬೇಕಿದೆ.ಇದರೊಂದಿಗೆ ನಾವೂ ಅನ್ಯ ರಾಜ್ಯದವರೊಂದಿಗೆ ಹೆಚ್ಚಾಗಿ ನಮ್ಮ ಭಾಷೆಯಲ್ಲಿಯೇ ವ್ಯವಹರಿಸುವ ಮೂಲಕ ಅವರಿಗೆ ನಮ್ಮ ಭಾಷೆಯನ್ನು ಪರಿಚಯಿಸಬೇಕಿದೆಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿರುವಾಗ ಎಲ್ಲರೊಂದಿಗೂ ಕನ್ನಡದಲ್ಲಿಯೇ ವ್ಯವಹರಿಸಬೇಕುಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಅಂತರಸಂತೆಯಲ್ಲಿ ನಡೆದ ಸಮ್ಮೇಳನ ಅನುಕೂಲವಾಗಿದೆ.

ರಾಜೇಶ್ಅಂತರಸಂತೆಎಚ್.ಡಿ.ಕೋಟೆ ತಾ.


ಹುಲಿಮರಿಗಳ ಮೇಲೆ ನಿಗಾ ಅಗತ್ಯ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ.ಕುಪ್ಪೆ ವ್ಯಾಪ್ತಿಯಲ್ಲಿ ಪ್ರವಾಸಿಗರ ನೆಚ್ಚಿನ ಹುಲಿಯಾಗಿದ್ದ ‘ಬ್ಯಾಕ್‌ವಾಟರ್ ಫೀಮೇಲ್’ ಎಂದೇ ಹೆಸರು ಪಡೆದಿದ್ದ ಹೆಣ್ಣು ಹುಲಿಯೊಂದು ಮತ್ತೊಂದು ಹುಲಿಯೊಂದಿಗಿನ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರಿಂದ ರಕ್ಷಣೆಯ ಹಿತದೃಷ್ಟಿಯಿಂದ ಅರಣ್ಯ ಇಲಾಖೆಯು ಹುಲಿಗೆ ಅರಿವಳಿಕೆ ನೀಡಿ ಸೆರೆಹಿಡಿದು ಕೂರ್ಗಳ್ಳಿಯ ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆಗಾಗಿ ರವಾನಿಸಿದೆಆದರೆ ಸೆರೆಯಾಗಿರುವ ಹುಲಿಗೆ ಒಂದು ವರ್ಷ ವಯಸ್ಸಿನ ನಾಲ್ಕು ಮರಿಗಳಿವೆ ಎಂಬುದು ಆತಂಕಕಾರಿಯಾಗಿದೆಕಾಡಿನಲ್ಲಿ ತಾಯಿಯ ಆರೈಕೆಯಲ್ಲಿ ಬೆಳೆಯುತ್ತಿದ್ದ ಮರಿಗಳು ಈಗಾ ಏಕಾಏಕಿ ಕಾಣೆಯಾದ ತಮ್ಮ ತಾಯಿಯನ್ನು ಬಿಟ್ಟು ಕಾಡಿನಲ್ಲಿ ಅನಾಥವಾಗಿ ಹೇಗೆ ಬದುಕುತ್ತವೆ ಎಂಬ ಪ್ರಶ್ನೆ ಉಂಟಾಗಿದೆಅರಣ್ಯ ಇಲಾಖೆಯು ಗಾಯಗೊಂಡ ಹುಲಿಯ ರಕ್ಷಣೆಗೆ ಕ್ರಮವಹಿಸಿದಷ್ಟೇ ಜವಾಬ್ದಾರಿಯುತವಾಗಿ ಮರಿಗಳಿಗೂ ಕಾಡಿನಲ್ಲಿಯೇ ಸೂಕ್ತ ರಕ್ಷಣೆಯನ್ನು ನೀಡಿ ಅವುಗಳೇ ಸ್ವತಃ ಬೇಟೆಯಾಡುವರೆಗೂ ನಿಗಾವಹಿಸಬೇಕಿದೆಈ ಹಿಂದೆಯೂ ಇದೇ ನಾಗರಹೊಳೆ ವ್ಯಾಪ್ತಿಯ ಅಂತರಸಂತೆ ವಲಯದ ತಾರಕ ಗಸ್ತಿನ ಬಳಿ ಹೆಣ್ಣು ಹುಲಿಯೊಂದು ಕಳ್ಳಬೇಟೆಗಾರರ ಉರುಳಿಗೆ ಸಿಲುಕಿ ಸಾವನ್ನಪ್ಪಿತ್ತುಈ ವೇಳೆ ಅರಣ್ಯ ಇಲಾಖೆ ಅದರ ಮರಿಗಳ ಮೇಲೆ ನಿಗಾವಹಿಸಿತಾದರೂ ಒಂದು ಗಂಡು ಮರಿ ಮತ್ತೊಂದು ಹುಲಿಯ ದಾಳಿಗೆ ಸಿಲುಕಿ ಸಾವನ್ನಪ್ಪಿತ್ತುಇದಾದ ಬಳಿಕ ಉಳಿದೆರಡು ಮರಿಗಳು ಏನಾದವು ಎಂಬುದು ಮಾತ್ರ ತಿಳಿಯಲೇ ಇಲ್ಲಈಗ ಅಂತಹದ್ದೇ ಪರಿಸ್ಥಿತಿ ಈ ಹುಲಿ ಮರಿಗಳಿಗೆ ಎದುರಾಗಿದ್ದುಅವುಗಳು ಬಗ್ಗೆ ಅರಣ್ಯ ಇಲಾಖೆ ಸಂಪೂರ್ಣ ನಿಗಾವಹಿಸಬೇಕಿದೆಅಲ್ಲದೆ ದೇಶದ ಇತರೆ ಕಾಡುಗಳಲ್ಲಿ ಈ ರೀತಿ ಮರಿಗಳನ್ನು ಅಗಲಿ ತಾಯಿ ಹುಲಿ ಸಾವನ್ನಪ್ಪಿದ ಸಂದರ್ಭದಲ್ಲಿ ಮರಿಗಳ ರಕ್ಷಣೆಗೆ ಅಲ್ಲಿ ಅನುಸರಿಸಿದ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಇಲ್ಲೂ ಜಾರಿಗೆ ತರುವ ಜವಾಬ್ದಾರಿವಹಿಸಬೇಕಿದೆ.

ಭೂಮಿಕ ಪೂಜಾರಿಪತ್ರಿಕೋದ್ಯಮ ವಿಭಾಗಮಾನಸಗಂಗೋತ್ರಿ ಮೈಸೂರು.

andolanait

Recent Posts

ಮಂಡ್ಯದಲ್ಲಿ ಭಿಕ್ಷುಕಿ ನಿಧನ : ಮೃತಳ ಮನೆಯಲ್ಲಿ ಮೂಟೆಗಟ್ಟಲೆ ಹಣ ಪತ್ತೆ; ಊರಿಗೂರೇ ಶಾಕ್!

ಮಂಡ್ಯ: ವೃದ್ಧ ಭೀಕ್ಷುಕಿಯೊಬ್ಬರು ತಾನು ಬೇಡಿ ಸಂಗ್ರಹಿಸಿಟ್ಟಿದ್ದ ಸಂಪತ್ತು ಇದೀಗ ಪರರ ಪಾಲಾಗಿರುವ ಸಂಗತಿ ಜನರನ್ನು ಅಚ್ಚರಿಗೊಳಿಸಿದೆ. ಮಂಡ್ಯ ನಗರದ…

5 hours ago

ಜಿಲ್ಲೆಗೊಂದು ಕೈಗಾರಿಕೆ ತರುತ್ತೇನೆ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ

ಪಾಂಡವಪುರ : ಜಿಲ್ಲೆಯ ಜನರ ನಿರೀಕ್ಷೆಯಂತೆ ಕೇಂದ್ರ ಸಚಿವನಾಗಿ ನನ್ನ ಅಧಿಕಾರದ ಅವಧಿಯೊಳಗೆ ಜಿಲ್ಲೆಗೊಂದು ಕೈಗಾರಿಕೆಯನ್ನು ತಂದೇ ತರುತ್ತೇವೆ ಎಂದು…

6 hours ago

ನಕಲಿ ಔಷಧ ತಯಾರಿಕಾ, ಮಾರಾಟ ಜಾಲ ; ವಿದೇಶದಲ್ಲಿ ಕಿಂಗ್‌ಪಿನ್ ಬಂಧನ

ಬೆಂಗಳೂರು : ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಹರಡಿದ್ದ ನಕಲಿ ಔಷಧ ಮಾರಾಟ ಜಾಲದ ಕಿಂಗ್ ಪಿನ್, ವಿದೇಶದಲ್ಲಿ ಅಡಗಿದ್ದ…

7 hours ago

ಗೋಣಿಕೊಪ್ಪ | ಮಾರುಕಟ್ಟೆಯಲ್ಲಿ ಗಸ್ತು ತಿರುಗಿದ ಪೊಲೀಸರು ; ಅಕ್ರಮ ಚಟುವಟಿಕೆ ಮೇಲೆ ನಿಗಾ

ಗೋಣಿಕೊಪ್ಪ : ಗೋಣಿಕೊಪ್ಪ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಅನಧಿಕೃತ ವಾಹನ ನಿಲುಗಡೆ, ರಸ್ತೆ ಅತಿಕ್ರಮಣ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ…

8 hours ago

ಪಾರದೀಪ್ ಕರಾವಳಿಯಲ್ಲಿ ಹಡಗು ಮುಳುಗಡೆ ; ಇಬ್ಬರ ರಕ್ಷಣೆ, 22 ಮಂದಿ ನಾಪತ್ತೆ

72,100 ಟನ್‌ ಕಬ್ಬಿಣದ ಅದಿರು ಇದ್ದ ಹಡಗು ಭುವನೇಶ್ವರ: ಒಡಿಶಾದ ಪಾರದೀಪ್ ಕರಾವಳಿಯ ಆಳ ಸಮುದ್ರದಲ್ಲಿ ಶನಿವಾರ ಭೀಕರ ನೌಕಾ…

9 hours ago

ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮನೆ ಬಾಗಿಲು ಒಡೆದು ಇಡಿ ದಾಳಿ

ಬೆಂಗಳೂರು : ಕೆಪಿಎಸ್‌ಸಿ ಹಗರಣ ಸಂಬಂಧ ಫೋನ್ ಕರೆಗೆ ಪ್ರತಿಕ್ರಿಯಿಸದ ಹಿನ್ನೆಲೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅನುಪಸ್ಥಿತಿಯಲ್ಲಿ ಅವರ…

10 hours ago