ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 12 ಶನಿವಾರ 2022

ಖಾತಾ ವರ್ಗಾವಣೆಯಲ್ಲಿ ವಿಳಂಬ

೦೧.೦೪.೨೦೨೨ರಿಂದ ಮೈಸೂರು ವರ್ತುಲ ರಸ್ತೆಯ ಹೊರಗಿರುವ ಬಡಾವಣೆಗಳ ನಿರ್ವಹಣೆಯನ್ನು ಪಟ್ಟಣ ಪಂಚಾಯ್ತಿಯ ವ್ಯಾಪ್ತಿಗೆ ಸೇರಿಸಿ ಸರ್ಕಾರ ಆದೇಶ ಹೊರಡಿಸಿದೆ. ಮುಡಾ ವ್ಯಾಪ್ತಿಯಿಂದ ಹೊರವಲಯದ ಬಡಾವಣೆಗಳನ್ನು ಹೊರಗಿಟ್ಟ ಸರ್ಕಾರ ಪಟ್ಟಣ ಪಂಚಾಯ್ತಿಯಲ್ಲಿ ಸ್ವತ್ತಿನ ಖಾತೆಯನ್ನು ಮಾಡಿಸಬೇಕೆಂದೂ ಆದೇಶಿಸಿದ್ದು ಅದರಂತೆ ನಿವೇಶನ / ಮನೆಗಳ ಖಾತೆಯನ್ನು ಪಟ್ಟಣ ಪಂಚಾಯ್ತಿಯಲ್ಲಿ ಸ್ವತ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳೊಂದಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಿ ಖಾತೆ ವರ್ಗಾವಣೆ ಮಾಡಿಸಿಕೊಂಡು ಕಂದಾಯ ನಿಗದಿಯಾದ ನಂತರ ಕಂದಾಯ ಪಾವತಿ ಮಾಡಬೇಕೆಂದೂ ಸೂಚಿಸಿದೆ.
ನಾನು ಮೈಸೂರಿನ ಕೇರ್ಗಳ್ಳಿಯಲ್ಲಿರುವ ನ್ಯಾಯಾಂಗ ಬಡಾವಣೆಯ ನನ್ನ ನಿವೇಶನ ಸಂಖ್ಯೆ ೧೩೧ ರ ಖಾತೆಯನ್ನು
ಮುಡಾದಿಂದ ಬೋಗಾದಿಯ ಪಟ್ಟಣ ಪಂಚಾಯ್ತಿಯಲ್ಲಿ ವರ್ಗಾಯಿಸಲು ೧೧.೦೮.೨೦೨೨ ರಲ್ಲಿ ಅರ್ಜಿಯನ್ನು ಕೊಟ್ಟು ಮೂರು ತಿಂಗಳೇ ಆಗಿದೆ. ಬೋಗಾದಿ ಪಟ್ಟಣ ಪಂಚಾಯ್ತಿ ಕಚೇರಿಯು ಇನ್ನೂ ನನ್ನ ನಿವೇಶನದ ಖಾತಾ ಬದಲಾವಣೆಯನ್ನು ಮಾಡುತ್ತಲೇ ಇದೆ! ಅರ್ಜಿಯಲ್ಲಿ ನಮ್ಮ ಫೋನ್ ಸಂಖ್ಯೆ ಸಹಾ ನಮೂದಿಸಿದ್ದೇನೆ. ಅರ್ಜಿಯ ಕಥೆ ಏನಾಯಿತೆಂಬುವುದನ್ನು ಪಟ್ಟಣ ಪಂಚಾಯ್ತಿ ಕಚೇರಿಯವರು ತಿಳಿಸಲಾಗದೇ? ನಾವೇ ಐದು ಕಿಲೋಮೀಟರ್ ಹೋಗಿ ವಿಚಾರಿಸಲಾದೀತೇ? ಆದುದರಿಂದ ಸಬೂಬು ಹೇಳದೇ ಪಟ್ಟಣ ಪಂಚಾಯ್ತಿಯು ಖಾತಾ ವರ್ಗಾವಣೆಯನ್ನು ಮಾಡಿ ಕಂದಾಯ ಕಟ್ಟಿಸಿಕೊಳ್ಳಬೇಕೆಂದು ಸರ್ಕಾರವನ್ನು ನಾನು ಒತ್ತಾಯಿಸುತ್ತೇನೆ.

-ಕೊ.ಸು.ನರಸಿಂಹ ಮೂರ್ತಿ, ಹಿರಿಯ ನಾಗರಿಕ, ಚಾಮರಾಜಪುರಂ, ಮೈಸೂರು.


ಭತ್ತ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ

ರಾಜ್ಯದ ಬಹುತೇಕ ಕಡೆ ಭತ್ತ ಕಟಾವು ಅಂತಿಮ ಹಂತ ತಲುಪಿದ್ದರೂ, ರಾಜ್ಯ ಸರ್ಕಾರ ಖರೀದಿ ಕೇಂದ್ರವನ್ನೂ ಆರಂಭಿಸಿಲ್ಲ, ಹೀಗಾಗಿ ಕಳೆದ ಬಾರಿಯಂತೆ ರೈತರು ಮಿಲ್‌ಗಳಿಗೆ ತಾವು ಬೆಳೆದ ಬಹುಪಾಲು ಭತ್ತ ನೀಡಲು ಆರಂಭಿಸುತ್ತಿದ್ದಾರೆ. ಪ್ರತಿ ಬಾರಿಯೂ ಸರಕಾರ ರೈತರು ಕಟಾವು ಮಾಡಿದ ಭತ್ತ ಮಧ್ಯವರ್ತಿಗಳ ಕೈಸೇರಿದ ಬಳಿಕ ಬೆಂಬಲ ಬೆಲೆ ಘೋಷಿಸುವುದು, ಖರೀದಿ ಕೇಂದ್ರ ಆರಂಭಿಸುವುದು ಮಾಡಿಕೊಂಡು ಬಂದಿದೆ. ಈ ಬಾರಿಯೂ ಇಂತಹುದೆ ಕಥೆ. ಇನ್ನೂ ಖರೀದಿ ಕೇಂದ್ರ ತೆರೆದಿಲ್ಲ. ಬಹಳ ಕಡೆ ಸಣ್ಣ ಹಿಡುವಳಿದಾರರಿಗೆ ಕಟಾವು ಮಾಡಿದ ಭತ್ತವನ್ನು ಸಂಗ್ರಹಿಸಿ ಇಟ್ಟುಕೊಂಡು ಸರ್ಕಾರ ಖರೀದಿ ಕೇಂದ್ರ ತೆರೆಯುವವರೆಗೂ ಕಾಯಲು ಬೇಕಾದ ವ್ಯವಸ್ಥೆ ಇಲ್ಲದಿರುವುದರಿಂದ ಕಟಾವು ಆಗುತ್ತಿದ್ದಂತೆ ಭತ್ತ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಬಾರಿಯೂ ಸರ್ಕಾರ ಭತ್ತ ಬೆಳೆಗಾರರನ್ನು ಕಡೆಗಣಿಸುತ್ತಿದೆ. ಸಣ್ಣ ರೈತರು ಭತ್ತವನ್ನು ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆ ಹೊಂದಿರದ ಕಾರಣ ಮಧ್ಯವರ್ತಿಗಳಿಗೆ ಲಾಭ ಆಗುತ್ತಿದೆ. ತಕ್ಷಣವೇ ಖರೀದಿ ಕೇಂದ್ರ ಸ್ಥಾಪಿಸಿ ರೈತರಿಗೆ ನೆರವಾಗಬೇಕು.

-ವಿಜಯಕುಮಾರ್ ಎಚ್.ಕೆ. ಮೈಸೂರು.


ಪ್ರತಿಮೆ- ಪ್ರಶ್ನೆ…?!

 

ಅಲ್ಲಲ್ಲಿ ನಿಂತಿವೆ

ಮುಗಿಲೆತ್ತರಕ್ಕೆ..

ಬುದ್ಧ ಬಸವ ಅಂಬೇಡ್ಕರ

ಕನಕ ಗಾಂಧಿ ನೆಹರು ಪಟೇಲ್

ಕೆಂಪೇಗೌಡರ ಪ್ರತಿಮೆಗಳು

ಎತ್ತರ ಮಹತ್ತರ !

ನಮ್ಮ ತತ್ವಾದರ್ಶಗಳು…

ಎಲ್ಲಿ ಹೋದವು ?!

ಎಂದು
ಕೇಳಿಬಿಟ್ಟರೆ

ಆ ಪ್ರತಿಮೆಗಳು

ಇದೆಯಾ ನಮ್ಮಲ್ಲಿ ಉತ್ತರ ?!

-ಮ.ಗು.ಬಸವಣ್ಣ, ಜೆ ಎಸ್ ಎಸ್ ಸಂಸ್ಥೆ, ಸುತ್ತೂರು.


ಪೇ ಆಂಡ್ ಪಾರ್ಕ್ ಬೇಡ

ಮೈಸೂರಿನ ಪ್ರಮುಖ ರಸ್ತೆಗಳಾದ ಡಿ.ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ ಹಾಗೂ ಅಶೋಕ ರಸ್ತೆಗಳಲ್ಲಿ ವಾಹನ ನಿಲುಗಡೆಗಾಗಿ ಪೇ ಆಂಡ್ ಪಾರ್ಕ್ ಜಾರಿಗೆ ತರುವುದಾಗಿ ಇತ್ತೀಚೆಗೆ ಮಹಾಪೌರರು ತಿಳಿಸಿರುತ್ತಾರೆ .
ಈಗಾಗಲೇ ಪುರಭವನದ ಆವರಣದಲ್ಲಿ ವಾಹನ ನಿಲುಗಡೆಗಾಗಿಯೇ ಬಹುಮಹಡಿ ಕಟ್ಟಡ ನಿರ್ಮಾಣವಾಗುತ್ತಿದೆ, ಅರಸು ರಸ್ತೆಯ ಅನತಿ ದೂರದಲ್ಲಿಯೇ ಅಂಬೇಡ್ಕರ್ ಭವನ ನಿರ್ಮಾಣವಾಗುತ್ತಿದೆ, ಸಮೀಪದಲ್ಲಿಯೇ ಗಾಡಿ ಚೌಕದ ಜಾಗವೂ ಸಹ ಖಾಲಿ ಇದೆ. ಇಲ್ಲೆಲ್ಲಾ ವಾಹನ ನಿಲುಗಡೆ ವ್ಯವಸ್ಥೆಯಾದ ನಂತರವೂ ಸಮಸ್ಯೆ ಮುಂದುವರೆದರೆ ಮಾತ್ರ ಸಾರ್ವಜನಿಕರಿಂದ ಹಣ ಪಡೆದು ಪೇ ಆಂಡ್ ಪಾರ್ಕ್ ಮಾಡುವ ಬಗ್ಗೆ ಯೋಚನೆ ಮಾಡುವುದು ಸೂಕ್ತ.
ಸಾರ್ವಜನಿಕ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಯಾವುದೇ ಸೂಕ್ತ ವ್ಯವಸ್ಥೆ ಹಾಗೂ ಸುರಕ್ಷತೆ ಕಲ್ಪಿಸದೇ, ಈಗಾಗಲೇ ರಸ್ತೆ ತೆರಿಗೆ ಪಾವತಿಸಿ ವಾಹನ ಖರೀದಿಸಿರುವ ಸಾರ್ವಜನಿಕರಿಗೆ ಹಾಗೂ ಅತಿ ಹೆಚ್ಚು ಉದ್ದಿಮೆ ಹಾಗೂ ಆಸ್ತಿ ತೆರಿಗೆ ಪಾವತಿಸುತ್ತಿರುವ ಈ ರಸ್ತೆಗಳ ಕಟ್ಟಡ ಮಾಲಿಕರು ಹಾಗೂ ವ್ಯಾಪಾರಿಗಳಿಂದ ಪೇ ಆಂಡ್ ಪಾರ್ಕ್ ಹೆಸರಿನಲ್ಲಿ ಸುಲಿಗೆ ಮಾಡಲು ಯೋಚಿಸುತ್ತಿರುವುದನ್ನು ಖಂಡಿಸುತ್ತೇವೆ.

-ಮೈ.ಕಾ.ಪ್ರೇಮ್ ಕುಮಾರ್/ ರಾಕೇಶ್ ಭಟ್, ಮೈಸೂರು ರಕ್ಷಣಾ ವೇದಿಕೆ.

andolanait

Recent Posts

ರೈತರ ಹಿತರಕ್ಷಣೆಗೆ ಕೇಂದ್ರದ ಕದ ತಟ್ಟಿದ ಚಲುವರಾಯಸ್ವಾಮಿ : ತುರ್ತು ಪರಿಹಾರಕ್ಕೆ ಮನವಿ

ಬೆಂಗಳೂರು :  ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಬುಧವಾರ (ಜನವರಿ 7)  ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ…

7 hours ago

ಮೈಸೂರು | ಪಿಸಿ ಮೇಲೆ ಹಲ್ಲೆ, ಮೊಬೈಲ್‌ ದೋಚಿದ ಖದೀಮರು ; ನಾಲ್ವರ ಬಂಧನ

ಮೈಸೂರು : ಮಾದಕ ವ್ಯಸನಿಗಳಾದ ನಾಲ್ವರು ಯುವಕರ ತಂಡ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ನಗದು ಹಾಗೂ ಮೊಬೈಲ್…

7 hours ago

ಫಿಟ್‌ ಮೈಸೂರು ವಾಕ್‌ಥಾನ್‌ಗೆ ಮೈಸೂರು ಸಜ್ಜು

 ಸಾವಿರಾರು ಹೆಜ್ಜೆಗಳೊಂದಿಗೆ ಆರೋಗ್ಯದ ಸಂದೇಶ ಜ.11ರಂದು ನಡೆಯಲಿರುವ ಜಾಗೃತಿ ಅಭಿಯಾನ ಮೈಸೂರು : ಹಲವು ಮೊದಲುಗಳಿಗೆ ನಾಂದಿ ಹಾಡಿರುವ ಸಾಂಸ್ಕೃತಿಕ…

7 hours ago

ಹಿಮದಿಂದ ಆವೃತವಾದ ಕೇದರನಾಥ

ರಾಂಚಿ : ಉತ್ತರ ಭಾರತವು ತೀವ್ರ ಶೀತಗಾಳಿಗೆ ತತ್ತರಿಸಿದ್ದು, ಭಾರೀ ಹಿಮಪಾತದಿಂದ ಪಟ್ಟಣಗಳು, ದೇವಾಲಯಗಳು ಮತ್ತು ಸುತ್ತಮುತ್ತಲಿನ ಬೆಟ್ಟಗಳು ದಟ್ಟ…

7 hours ago

ಹುಲಿ ದಾಳಿಗೆ ಹಸು ಬಲಿ : ವ್ಯಾಘ್ರ ಸೆರೆಗೆ ಗ್ರಾಮಸ್ಥರ ಒತ್ತಾಯ

ಸಿದ್ದಾಪುರ : ವಿರಾಜಪೇಟೆ ತಾಲೂಕು ಮಠ ಗ್ರಾಮದಲ್ಲಿ ಬುಧವಾರ ಸಂಜೆ ಹುಲಿಯೊಂದು ಹಾಲು ಕರೆಯುವ ಹಸುವಿನ ಮೇಲೆ ದಾಳಿ ನಡೆಸಿ…

7 hours ago

ಹಂತ ಹಂತವಾಗಿ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ,ಟ್ರಾಮಾ ಸೆಂಟರ್ ಸ್ಥಾಪನೆ : ಸಿಎಂ ಭರವಸೆ

ಹಾವೇರಿ  : ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿ ಜಿಲ್ಲೆಯಲ್ಲಿ ಕ್ಯಾನ್ಸರ್, ಟ್ರಾಮಾ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ…

8 hours ago