ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 25 ಮಂಗಳವಾರ 2022

ಓದುಗರ ಪತ್ರ

ಘಸ್ನಿ ಮೊಹಮ್ಮದ್ ಸರ್ಕಾರ?

ನಮ್ಮ ನಿರೀಕ್ಷೆಗೂ ಮೀರಿ ಉತ್ತಮ ಕೆಲಸ ಮಾಡುತ್ತದೆಯೆಂಬ ಭಾ.ಜ.ಪ. ಸರ್ಕಾರದ ನಡೆಯು, ದೆಹಲಿಯಿಂದ ದೇವಗಿರಿಗೆ ಹೋಗಿ ಮತ್ತೆ ಅಲ್ಲಿಂದ ದೆಹಲಿಗೇ ರಾಜಧಾನಿಯನ್ನು ಬದಲಿಸಿದ ಘಸ್ನಿ ಮೊಹಮ್ಮದ್ ಆಡಳಿತವನ್ನು ನೆನಪಿಸುತ್ತಿದೆ.

ಹಲವಾರು ಆದೇಶಗಳನ್ನು ಬೆಳಗ್ಗೆ ಹೊರಡಿಸಿ ರಾತ್ರಿಯ ವೇಳೆಗೆ ಅದನ್ನು ವಾಪಸ್ಸು ಪಡೆಯುವ ಕೆಟ್ಟ ಚಾಳಿ ಈ ಸರ್ಕಾರದ್ದಾಗಿದೆ.
ಇದೀಗ ಮಕ್ಕಳ ಪೋಷಕರಿಂದ ದೇಣಿಗೆ ಪಡೆಯುವ ಸುತ್ತೋಲೆಯನ್ನು ವಾಪಸ್ ಪಡೆದ ಸರ್ಕಾರ ಥೇಟ್ ಘಸ್ನಿ ಮೊಹಮದನ ಆಡಳಿತವನ್ನೇ ಮೀರಿಸುವಂತಿದೆ. ಹುಚ್ಮುಂಡೆ ಮದುವೆಯಲ್ಲಿ ಉಂಡೋನೇ ಜಾಣವೆನ್ನುವಂತೆ ಸರ್ಕಾರವೇ ಭ್ರಷ್ಟ ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಾ ದುರಾಡಳಿತ ಮಾಡುತ್ತಾ ಇದ್ದರೆ, ಈ ಪಕ್ಷಕ್ಕೆ ಹೆಚ್ಚು ಮತನೀಡಿ ಕೈಸುಟ್ಟುಕೊಂಡ ಮತದಾರರು ಕೈ ಕೈ ಹಿಸಕಿಕೊಳ್ಳುತ್ತಾ ಸಕಾಲಕ್ಕಾಗಿ ಕಾಯುತ್ತಿದ್ದಾರೆ!

ಕೊ.ಸು.ನರಸಿಂಹ ಮೂರ್ತಿ, ಹಿರಿಯ ನಾಗರಿಕ, ಚಾಮರಾಜಪುರಂ, ಮೈಸೂರು.


ಉತ್ಕೃಷ್ಟ ನಾಯಕನ ರಾಜಕೀಯ ವಿದಾಯ!

ನಾನು ಸುಮಾರು ೩೦ ವರ್ಷಗಳ ಹಿಂದೆ ಜೀವನೋಪಾಯಕ್ಕಾಗಿ ಮೈಸೂರಿಗೆ ಬಂದವನು. ಮೈಸೂರಿನ ಸ್ಥಳೀಯ ಪತ್ರಿಕೆ ಓದುವುದು ತುಂಬಾ ಆಸಕ್ತಿದಾಯಕವಾಗಿತ್ತು. ಅಂದಿನಿಂದಿಲೂ ಬಹಳ ಕುತೂಹಲದಿಂದ ಸ್ಥಳೀಯ ಮತ್ತು ರಾಜ್ಯ ರಾಜಕಾರಣದ ವಿದ್ಯಮಾನಗಳನ್ನು ಗಮನಿಸುತ್ತಿದ್ದೆ. ನಿಜಲಿಂಗಪ್ಪ, ಡಿ.ದೇವರಾಜ ಅರಸು, ರಾಮಕೃಷ್ಣ ಹೆಗಡೆಯವರ

ಬಗ್ಗೆ ಕೇಳಿ ತಿಳಿದು ಅಭಿಮಾನಿಸುತ್ತಿದ್ದ ನಮಗೆ ಅಂದಿನ ದಿನಗಳಲ್ಲಿ ಕಂಡಿದ್ದು ಓರ್ವ ದಕ್ಷ ನಾಯಕನಾಗಿ ಬೆಳೆಯುತ್ತಿದ್ದ ಶ್ರೀನಿವಾಸ್‌ಪ್ರಸಾದ್ ಅವರು. ಬಡವರು ಮತ್ತು ಶೋಷಿತರ ಪರವಾಗಿ ಜಾತ್ಯಾತೀತವಾಗಿ ಅವರು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ಸಾರ್ವಜನಿಕವಾಗಿ ಜನಮನ್ನಣೆಗಳಿಸುತ್ತಿದ್ದವು. ಅಂದಿನಿಂದ ಇಂದಿನವರೆಗೂ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ
ಸಿಡಿದೆದ್ದು ವಿರೋಧಿಸಿದ್ದನ್ನು ನಾನು ನೋಡಿದ್ದೇನೆ. ಇಂತಂಹ ಪ್ರಾಮಾಣಿಕ ರಾಜಕೀಯ ನಾಯಕ ಇತ್ತೀಚಿಗೆ ಮೈಸೂರಿನ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾ.ಸಂತೋಷ್‌ಹೆಗ್ಡೆಯವರ ಉಪಸ್ಥಿತಿಯಲ್ಲಿ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದು ನಮ್ಮ ಅಚ್ಚು-ಮೆಚ್ಚಿನ ಮೇಷ್ಟ್ರು ನಮ್ಮ ಶಾಲೆಯನ್ನು ಬಿಟ್ಟು ಹೋಗುವಂತೆ ಭಾಸವಾಯಿತು. ನನ್ನ ಮನಸ್ಸಿಗೆ ಮತ್ತೊಬ್ಬ ಪ್ರಸಾದರು ಈ ಸಮಾಜಕ್ಕೆ ಸಿಗಲು ಸಾಧ್ಯವೇ? ಎಂದೆನಿಸಿದಾಗ
ನನಗರಿವಿಲ್ಲದೆ ನನ್ನಕಣ್ಣಲ್ಲಿ ಕಂಬನಿ ಜಿನುಗಿತು.
ಶಾಂತರಾಮ್ ಶೆಟ್ಟಿ, ಮೈಸೂರು.


ರಾಜ್ಯೋತ್ಸವ ಪ್ರಶಸ್ತಿ ಅರ್ಹರಿಗಿರಲಿ!

 

ರಾಜ್ಯೋತ್ಸವ ಪ್ರಶಸ್ತಿಗೆ

೨೮,೦೦೦ ಅರ್ಜಿಯಂತೆ!

೨೯ಕ್ಕೆ ಪಟ್ಟಿ ಬಿಡುಗಡೆ

ಆಗಲಿದೆಯಂತೆ.

ಪ್ರಶಸ್ತಿಗಾಗಿ ನಡೆಯದಿರಲಿ ಲಾಬಿ.

ಅರ್ಹರಿಗಷ್ಟೆ ಸಿಗಲಿ ಪ್ರಶಸ್ತಿಯ ಗರಿ.

ಇದರಿಂದ ಹೆಚ್ಚಾಗಲಿ ಕನ್ನಡಿಗರ ಸಿರಿ!

ಹರಳಹಳ್ಳಿಪುಟ್ಟರಾಜು, ಪಾಂಡವಪುರ.


ಇದೇ ಅಲ್ಲವೇ ರಾಜಕೀಯ ಎಂದರೆ!!

ವಸತಿ ಸಚಿವ ಸೋಮಣ್ಣ, ತನ್ನ ಸಮಸ್ಯೆ ಹೇಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದು, ಎಲ್ಲಾ ಕಡೆ ವೈರಲ್ ಆಗಿದೆ. ಒಂದು ತಾಸಿನ ನಂತರ ಕಪಾಳಕ್ಕೆ ಹೊಡೆಸಿಕೊಂಡ ಮಹಿಳೆ ಮಾತ್ರ ಅವರು ನನಗೆ ಹೊಡೆದೇ ಇಲ್ಲ, ನನಗೇನು ಆಗಿಲ್ಲ
ಅವರದೇನು ತಪ್ಪಿಲ್ಲ ಎನ್ನುತ್ತಾರೆ. ಕಣ್ಣಾರೆ ಕಂಡ ದೃಶ್ಯವನ್ನೇ ಇಲ್ಲ ಎನ್ನುತ್ತಾರಲ್ಲ? ಇದೇ ಅಲ್ಲವೇ ರಾಜಕೀಯ ಎಂದರೆ!!

ಬೂಕನಕೆರೆ ವಿಜೇಂದ್ರ ಮೈಸೂರು.

 

andolanait

Recent Posts

ಓದುಗರ ಪತ್ರ: ಮೇಕೆ.. ಡಿಕೆ !

ಮೇಕೆ.. ಡಿಕೆ ! ಅಂದು, ಹರಿಯುವ ಕಾವೇರಿ ನದಿಯ ಈ ಕಡೆಯಿಂದ ಆ ಕಡೆಗೆ ಜಿಗಿದು ದಾಟಿ ಬಿಟ್ಟಿತಂತೆ ಮೇಕೆ…

20 hours ago

ಓದುಗರ ಪತ್ರ: ಮಂತ್ರಾಲಯ ಮಠದ ಕಾರ್ಯ ಜನಮೆಚ್ಚುವಂತಹದ್ದು

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಸುಮಾರು ೪೦ ಎಕರೆ ಪ್ರದೇಶದಲ್ಲಿ ಜಲಾಶಯ…

20 hours ago

ಓದುಗರ ಪತ್ರ: ಕಾವೇರಿ: ಶಾಶ್ವತ ಪರಿಹಾರ ಅಗತ್ಯ

ಕಳೆದ ವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ಮುಂದಿನ ೧೫ ದಿನಗಳ ಕಾಲ, ಪ್ರತಿ ದಿನ ೩,೫೦೦ ಕ್ಯೂಸೆಕ್…

20 hours ago

ಕಾಯಕಲ್ಪಕ್ಕೆ ಕಾದಿವೆ ನಿರ್ಲಕ್ಷಿತ ಸರ್ಕಾರಿ ಆಸ್ತಿಗಳು

ವಸಂತಕುಮಾರ್ ಮೈಸೂರು ಮಠ, ಸಾಮಾಜಿಕ ಹೋರಾಟಗಾರ ಮೈಸೂರಿನಲ್ಲಿ ಹಲವೆಡೆ ದುಸ್ಥಿತಿಯಲ್ಲಿರುವ ಹಾಗೂ ಅನೈರ್ಮಲ್ಯ ತಾಣವಾಗಿರುವ ಹಲವು ಸರ್ಕಾರಿ ಕಟ್ಟಡಗಳು, ವಾಚನಾಲಯ…

20 hours ago

ಮೀಸಲಾತಿ ಸೌಲಭ್ಯಕ್ಕೆ ವಿರೋಧವೇಕೆ?

ಟಿ.ಕೆ.ಹರೀಶ್ ಸಾಮಾಜಿಕ ನ್ಯಾಯ ಒದಗಿಸುವ ಸಂವಿಧಾನಾತ್ಮಕ ವ್ಯವಸ್ಥೆ ಮೀಸಲಾತಿ ಭಾರತದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಸಾಮಾಜಿಕ ನ್ಯಾಯದ ಸಾಧನವಾಗಿ ಜಾರಿಗೆ ತರಲಾಗಿದೆ.…

20 hours ago

ಬಿರುಕು ಬಿಡುತ್ತಿರುವ ಕೆರೆ ಕೋಡಿಯ ಗೋಡೆ

ದೂರ ನಂಜುಂಡಸ್ವಾಮಿ ದೂರ ಗ್ರಾಮದ ಕೆರೆಯ ಪೂರ್ವಭಾಗದ ಕೋಡಿಯನ್ನು ದುರಸ್ತಿಪಡಿಸಿ, ಹೂಳು ತೆಗೆಯಲು ಆಗ್ರಹ ದೂರ: ಮೈಸೂರು ತಾಲ್ಲೂಕಿನ ಜಯಪುರ…

23 hours ago