ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 25 ಮಂಗಳವಾರ 2022

ಓದುಗರ ಪತ್ರ

ಘಸ್ನಿ ಮೊಹಮ್ಮದ್ ಸರ್ಕಾರ?

ನಮ್ಮ ನಿರೀಕ್ಷೆಗೂ ಮೀರಿ ಉತ್ತಮ ಕೆಲಸ ಮಾಡುತ್ತದೆಯೆಂಬ ಭಾ.ಜ.ಪ. ಸರ್ಕಾರದ ನಡೆಯು, ದೆಹಲಿಯಿಂದ ದೇವಗಿರಿಗೆ ಹೋಗಿ ಮತ್ತೆ ಅಲ್ಲಿಂದ ದೆಹಲಿಗೇ ರಾಜಧಾನಿಯನ್ನು ಬದಲಿಸಿದ ಘಸ್ನಿ ಮೊಹಮ್ಮದ್ ಆಡಳಿತವನ್ನು ನೆನಪಿಸುತ್ತಿದೆ.

ಹಲವಾರು ಆದೇಶಗಳನ್ನು ಬೆಳಗ್ಗೆ ಹೊರಡಿಸಿ ರಾತ್ರಿಯ ವೇಳೆಗೆ ಅದನ್ನು ವಾಪಸ್ಸು ಪಡೆಯುವ ಕೆಟ್ಟ ಚಾಳಿ ಈ ಸರ್ಕಾರದ್ದಾಗಿದೆ.
ಇದೀಗ ಮಕ್ಕಳ ಪೋಷಕರಿಂದ ದೇಣಿಗೆ ಪಡೆಯುವ ಸುತ್ತೋಲೆಯನ್ನು ವಾಪಸ್ ಪಡೆದ ಸರ್ಕಾರ ಥೇಟ್ ಘಸ್ನಿ ಮೊಹಮದನ ಆಡಳಿತವನ್ನೇ ಮೀರಿಸುವಂತಿದೆ. ಹುಚ್ಮುಂಡೆ ಮದುವೆಯಲ್ಲಿ ಉಂಡೋನೇ ಜಾಣವೆನ್ನುವಂತೆ ಸರ್ಕಾರವೇ ಭ್ರಷ್ಟ ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಾ ದುರಾಡಳಿತ ಮಾಡುತ್ತಾ ಇದ್ದರೆ, ಈ ಪಕ್ಷಕ್ಕೆ ಹೆಚ್ಚು ಮತನೀಡಿ ಕೈಸುಟ್ಟುಕೊಂಡ ಮತದಾರರು ಕೈ ಕೈ ಹಿಸಕಿಕೊಳ್ಳುತ್ತಾ ಸಕಾಲಕ್ಕಾಗಿ ಕಾಯುತ್ತಿದ್ದಾರೆ!

ಕೊ.ಸು.ನರಸಿಂಹ ಮೂರ್ತಿ, ಹಿರಿಯ ನಾಗರಿಕ, ಚಾಮರಾಜಪುರಂ, ಮೈಸೂರು.


ಉತ್ಕೃಷ್ಟ ನಾಯಕನ ರಾಜಕೀಯ ವಿದಾಯ!

ನಾನು ಸುಮಾರು ೩೦ ವರ್ಷಗಳ ಹಿಂದೆ ಜೀವನೋಪಾಯಕ್ಕಾಗಿ ಮೈಸೂರಿಗೆ ಬಂದವನು. ಮೈಸೂರಿನ ಸ್ಥಳೀಯ ಪತ್ರಿಕೆ ಓದುವುದು ತುಂಬಾ ಆಸಕ್ತಿದಾಯಕವಾಗಿತ್ತು. ಅಂದಿನಿಂದಿಲೂ ಬಹಳ ಕುತೂಹಲದಿಂದ ಸ್ಥಳೀಯ ಮತ್ತು ರಾಜ್ಯ ರಾಜಕಾರಣದ ವಿದ್ಯಮಾನಗಳನ್ನು ಗಮನಿಸುತ್ತಿದ್ದೆ. ನಿಜಲಿಂಗಪ್ಪ, ಡಿ.ದೇವರಾಜ ಅರಸು, ರಾಮಕೃಷ್ಣ ಹೆಗಡೆಯವರ

ಬಗ್ಗೆ ಕೇಳಿ ತಿಳಿದು ಅಭಿಮಾನಿಸುತ್ತಿದ್ದ ನಮಗೆ ಅಂದಿನ ದಿನಗಳಲ್ಲಿ ಕಂಡಿದ್ದು ಓರ್ವ ದಕ್ಷ ನಾಯಕನಾಗಿ ಬೆಳೆಯುತ್ತಿದ್ದ ಶ್ರೀನಿವಾಸ್‌ಪ್ರಸಾದ್ ಅವರು. ಬಡವರು ಮತ್ತು ಶೋಷಿತರ ಪರವಾಗಿ ಜಾತ್ಯಾತೀತವಾಗಿ ಅವರು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ಸಾರ್ವಜನಿಕವಾಗಿ ಜನಮನ್ನಣೆಗಳಿಸುತ್ತಿದ್ದವು. ಅಂದಿನಿಂದ ಇಂದಿನವರೆಗೂ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ
ಸಿಡಿದೆದ್ದು ವಿರೋಧಿಸಿದ್ದನ್ನು ನಾನು ನೋಡಿದ್ದೇನೆ. ಇಂತಂಹ ಪ್ರಾಮಾಣಿಕ ರಾಜಕೀಯ ನಾಯಕ ಇತ್ತೀಚಿಗೆ ಮೈಸೂರಿನ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾ.ಸಂತೋಷ್‌ಹೆಗ್ಡೆಯವರ ಉಪಸ್ಥಿತಿಯಲ್ಲಿ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದು ನಮ್ಮ ಅಚ್ಚು-ಮೆಚ್ಚಿನ ಮೇಷ್ಟ್ರು ನಮ್ಮ ಶಾಲೆಯನ್ನು ಬಿಟ್ಟು ಹೋಗುವಂತೆ ಭಾಸವಾಯಿತು. ನನ್ನ ಮನಸ್ಸಿಗೆ ಮತ್ತೊಬ್ಬ ಪ್ರಸಾದರು ಈ ಸಮಾಜಕ್ಕೆ ಸಿಗಲು ಸಾಧ್ಯವೇ? ಎಂದೆನಿಸಿದಾಗ
ನನಗರಿವಿಲ್ಲದೆ ನನ್ನಕಣ್ಣಲ್ಲಿ ಕಂಬನಿ ಜಿನುಗಿತು.
ಶಾಂತರಾಮ್ ಶೆಟ್ಟಿ, ಮೈಸೂರು.


ರಾಜ್ಯೋತ್ಸವ ಪ್ರಶಸ್ತಿ ಅರ್ಹರಿಗಿರಲಿ!

 

ರಾಜ್ಯೋತ್ಸವ ಪ್ರಶಸ್ತಿಗೆ

೨೮,೦೦೦ ಅರ್ಜಿಯಂತೆ!

೨೯ಕ್ಕೆ ಪಟ್ಟಿ ಬಿಡುಗಡೆ

ಆಗಲಿದೆಯಂತೆ.

ಪ್ರಶಸ್ತಿಗಾಗಿ ನಡೆಯದಿರಲಿ ಲಾಬಿ.

ಅರ್ಹರಿಗಷ್ಟೆ ಸಿಗಲಿ ಪ್ರಶಸ್ತಿಯ ಗರಿ.

ಇದರಿಂದ ಹೆಚ್ಚಾಗಲಿ ಕನ್ನಡಿಗರ ಸಿರಿ!

ಹರಳಹಳ್ಳಿಪುಟ್ಟರಾಜು, ಪಾಂಡವಪುರ.


ಇದೇ ಅಲ್ಲವೇ ರಾಜಕೀಯ ಎಂದರೆ!!

ವಸತಿ ಸಚಿವ ಸೋಮಣ್ಣ, ತನ್ನ ಸಮಸ್ಯೆ ಹೇಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದು, ಎಲ್ಲಾ ಕಡೆ ವೈರಲ್ ಆಗಿದೆ. ಒಂದು ತಾಸಿನ ನಂತರ ಕಪಾಳಕ್ಕೆ ಹೊಡೆಸಿಕೊಂಡ ಮಹಿಳೆ ಮಾತ್ರ ಅವರು ನನಗೆ ಹೊಡೆದೇ ಇಲ್ಲ, ನನಗೇನು ಆಗಿಲ್ಲ
ಅವರದೇನು ತಪ್ಪಿಲ್ಲ ಎನ್ನುತ್ತಾರೆ. ಕಣ್ಣಾರೆ ಕಂಡ ದೃಶ್ಯವನ್ನೇ ಇಲ್ಲ ಎನ್ನುತ್ತಾರಲ್ಲ? ಇದೇ ಅಲ್ಲವೇ ರಾಜಕೀಯ ಎಂದರೆ!!

ಬೂಕನಕೆರೆ ವಿಜೇಂದ್ರ ಮೈಸೂರು.

 

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

7 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

35 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago