ಓದುಗರ ಪತ್ರ
ರೋಗಿಗಳಿಗೆ ದ್ರೋಹ ಬಗೆದ ರಾಜ್ಯ ಸರ್ಕಾರ
ಸಂಸದ ಪ್ರತಾಪ್ ಸಿಂಹ ಅವರು ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ರಾಜ್ಯ ಸರ್ಕಾರ ಮೈಸೂರಿನ ಕ್ಯಾನ್ಸರ್ ಆಸ್ಪತ್ರೆಗೆ ದಡದಕಲ್ಲಹಳ್ಳಿ ಬಳಿ ೧೮ ಎಕರೆ ಜಮೀನನ್ನು ಮಂಜೂರು ಮಾಡಿದೆ ಎನ್ನುವ ಬ್ರೇಕಿಂಗ್ ನ್ಯೂಸ್ ನೀಡಿದರು. ಅದಕ್ಕೆ ತಾವೇ ಕಾರಣ ಎನ್ನುವುದನ್ನು ಕೂಡ ಸೂಚ್ಯವಾಗಿ ಘೋಷಿಸಿಕೊಂಡರು. ದುರಂತವೆಂದರೆ, ಈ ೧೮ ಎಕರೆಯ ಕುರಿತಾದ ಸರ್ಕಾರಿ ಆದೇಶವನ್ನು ಸ್ವತಃ ಪ್ರತಾಪ್ ಸಿಂಹ ಅಥವಾ ಅವರ ಬೆಂಬಲಿಗರು ಸರಿಯಾಗಿ ಓದಿಕೊಂಡಿದ್ದರೆ, ಅವರು ತಮ್ಮದೇ ಪಕ್ಷದ ರಾಜ್ಯ ಸರ್ಕಾರವನ್ನು ನೇರವಾಗಿ ಟೀಕಿಸಬೇಕಿತ್ತು. ಏಕೆಂದರೆ ಸರ್ಕಾರ ನೀಡುತ್ತಿರುವುದು ೧೮ ಎಕರೆ ಗೋಮಾಳ ಜಮೀನನ್ನು. ಆದರೆ ಈ ಉಚಿತ ಆಸ್ಪತ್ರೆ ಆರಂಭಿಸಬೇಕಿದ್ದರೆ ವೈದ್ಯಕೀಯ ಶಿಕ್ಷಣ ಇಲಾಖೆ ಮಾರುಕಟ್ಟೆ ದರದ ಶೇಕಡಾ ಐವತ್ತರಷ್ಟು ಬೆಲೆಯನ್ನು ಸರ್ಕಾರಕ್ಕೆ ಕಟ್ಟಬೇಕಂತೆ. ಸರಕಾರಿ ಆಸ್ಪತ್ರೆಗೆ ಗೋಮಾಳ ಮಾರುತ್ತಿರುವ ಕುಖ್ಯಾತಿಯ ನಿರ್ಣಯ ಇದು. ಇದನ್ನು ಸಾಧನೆ ಎನ್ನುವವರಿಗೆ ಏನೆನ್ನಬೇಕು? ಇದು ಕ್ಯಾನ್ಸರ್ ರೋಗಿಗಳಿಗೆ ಮಾಡಿದ ದ್ರೋಹ ಅಲ್ಲವೇ? ಪ್ರತಾಪ್ ಸಿಂಹ ಅವರು ತಮ್ಮ ಆತ್ಮ ಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲಿ. ಈಗ ವೈದ್ಯಕೀಯ ಶಿಕ್ಷಣ ಇಲಾಖೆ ಈ ಜಮೀನಿಗೆ ಹಣ ನೀಡಿದರೆ, ಅದರ ಪರಿಣಾಮ ಚಿಕಿತ್ಸಾ ವೆಚ್ಚ ಜಾಸ್ತಿಯಾಗುತ್ತದೆ. ವ್ಯವಸ್ಥೆಗಳು ಕಡಿಮೆಯಾಗುತ್ತವೆ. ಮೊದಲೇ ಅರೋಗ್ಯ ಕ್ಷೇತ್ರಕ್ಕೆ ಸರ್ಕಾರ ನೀಡುತ್ತಿರುವ ಅನುದಾನ ಬಕಾಸುರನ ಹೊಟ್ಟೆಗೆ ಮಜ್ಜಿಗೆಯಂತಿದೆ. ಗೋಮಾಳವನ್ನು ಆಸ್ಪತ್ರೆಗೆ ಉಚಿತವಾಗಿ ನೀಡಲಾಗದಷ್ಟೂ ಸಂವೇದನೆ ಕಳೆದುಕೊಂಡಿದೆಯೇ ರಾಜ್ಯ ಸರ್ಕಾರ?
–ಸಿಂಚನ ಅಧಿಕಾರಿ, ವಿಜಯನಗರ, ಮೈಸೂರು.
ಕಾಮುಕನಿಗೆ ಗಲ್ಲು ಶಿಕ್ಷೆಯಾಗಲಿ
ಗುರು ದೇವೊ ಭವ ಎನ್ನುವ ಕಾಲವೊಂದಿತ್ತು. ಪಾಠ ಹೇಳಿ ಕೊಡುವ ಗುರು ದೇವರಿಗೆ ಸಮಾನ. ಮೊನ್ನೆ ಮಳವಳ್ಳಿಯ ಕಾಮುಕ ಶಿಕ್ಷಕನೊಬ್ಬ ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಆಘಾತಕಾರಿ ಸಂಗತಿ. ಪ್ರಜ್ಞಾವಂತ ಶಿಕ್ಷಕರೇ ಈತನಿಗೆ ಗಲ್ಲು ಶಿಕ್ಷೆ ಯಾಗುವಂತೆ ಪ್ರತಿಭಟಿಸಿದರೆ ಮಾತ್ರ ಸಮಾಜವೇ ಶಿಕ್ಷಕರ ಬಗ್ಗೆ ಹೆಮ್ಮೆಪಡುವಂತಾಗುತ್ತದೆ.
–ಬೂಕನಕೆರೆ ವಿಜೇಂದ್ರ, ಮೈಸೂರು.
ಟಿಕೆಟ್ ವಿತರಣೆ ಪುನಾರಂಭಿಸಿ
ಮೈಸೂರಿನ ಚಾಮರಾಜಪುರಂ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು ಮತ್ತು ಹಲವಾರು ಕಡೆಗಳಿಗೆ ಹೋಗುವ ದೈನಂದಿನ ರೈಲುಗಳ ಟಿಕೆಟ್ಗಳನ್ನು ನೀಡುತ್ತಿದ್ದರು. ಕುವೆಂಪುನಗರ, ಸರಸ್ವತಿಪುರಂ, ಜಯನಗರ, ಕೃಷ್ಣಮೂರ್ತಿಪುರಂ ಸೇರಿದಂತೆ ಹಲವಾರು ಬಡಾವಣೆಗಳ ಜನಗಳು ಇಲ್ಲಿ ಟಿಕೆಟ್ ಖರೀದಿಸುತ್ತಿದ್ದರು. ಇದರಿಂದ ಮುಖ್ಯ ರೈಲ್ವೆ ನಿಲ್ದಾಣದಲ್ಲಿ ಸರತಿಸಾಲಿನಲ್ಲಿ ನಿಲ್ಲುವ ಕೆಲಸ ತಪ್ಪುತ್ತಿತ್ತು. ಶೀಘ್ರವಾಗಿ ಪ್ರಯಾಣ ಮಾಡಲು ಅನುಕೂಲವಾಗುತ್ತಿತ್ತು. ಆದರೆ ಇದ್ದಕಿದ್ದಂತೆ ಇಲ್ಲಿ ಟಿಕೆಟ್ ನೀಡುವುದನ್ನು ನಿಲ್ಲಿಸಿದ್ದಾರೆ. ಕಾರಣ ತಿಳಿಯದು. ದಿನದಿಂದ ದಿನಕ್ಕೆ ಜನರಿಗೆ ಅನುಕೂಲ ಮಾಡುವ ಬದಲು ಅನಾನುಕೂಲ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣದಿಂದ ಟಿಕೆಟ್ ನೀಡುವುದನ್ನು ಪ್ರಾರಂಭಿಸಬೇಕು.
–ಶ್ರೀಕಂಠ ಹೆಚ್.ಜಿ., ಜಯನಗರ, ಮೈಸೂರು.
ಪಿತೂರಿಯ ತನಿಖೆಯೂ ಆಗಲಿ
ಫೋಕ್ಸೋ ಕಾಯಿದೆಯಡಿ ಬಂಧಿತರಾಗಿರುವ ಚಿತ್ರದುರ್ಗದ ಮುರಾಘಮಠದ ಶಿವಮೂರ್ತಿ ಶರಣರ ವಿರುದ್ಧ ಮೈಸೂರಿನಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಆದರೆ ಚಿತ್ರ ದುರ್ಗದಲ್ಲೇ ದೂರು ನೀಡದೇ ಮತ್ತೆ ಮೈಸೂರಿಗೆ ಬಂದು ದೂರು ನೀಡಿದ್ದೇಕೆ? ಎನ್ನುವ ಅನುಮಾನಗಳೂ ಕಾಡುತ್ತವೆ. ಅಲ್ಲದೆ ಪ್ರಕರಣ ದಾಖಲಾಗಿ ಈಗಾಗಲೇ ತನಿಖೆ ಪ್ರಗತಿಯಲ್ಲಿದೆ. ಹೀಗಿರುವಾಗ ಆಗಲೇ ದೂರು ನೀಡದೆ ಈಗ ದೂರು ನೀಡುತ್ತಿರುವುದರ ಹಿಂದೆ ಯಾರದಾದರೂ ಪಿತೂರಿ / ಚಿತಾವಣೆ ಇದೆಯೇ? ಹಾಗಿದ್ದರೆ ಕಾರಣವೇನು ಎನ್ನುವುದೂ ತನಿಖೆ ಯಾಗಬೇಕು.
–ಮುಳ್ಳೂರು ಪ್ರಕಾಶ್, ಕನಕದಾಸ ನಗರ, ಮೈಸೂರು.
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ…
ಬೆಂಗಳೂರು: ರೈತರ ತೀವ್ರ ವಿರೋಧದ ನಡುವೆ ಅಂತಿಮ ಅಧಿಸೂಚನೆ ಹೊರಡಿಸಿ ಬಿಡದಿ ಟೌನ್ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ…
ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ…
ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ, ಹಾಸನ,…
‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…