ಎಡಿಟೋರಿಯಲ್

ಆಂದೋಲನ ಓದುಗರ ಪತ್ರ: 15 ಶನಿವಾರ 2022

ಓದುಗರಪತ್ರ

ಸುಳ್ಳು ಹೇಳಿದ ಸರಕಾರ !

ದಸರೆಗೆ ಮಾಡಿದ ದೀಪಾಲಂಕಾರವನ್ನು ಅಕ್ಟೋಬರ್ ೧೦ ರವರೆಗೆ ವಿಸ್ತರಣೆ ಮಾಡಲಾಗಿದೆಯೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಚೆಸ್ಕಾಂ ಎಂ.ಡಿ. ಜಯವಿಭವ ಸ್ವಾಮಿಯವರು ಹೇಳಿದ ಹೇಳಿಕೆಗಳು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದನ್ನು ಕಂಡು ನಾವು ದಿನಾಂಕ ೭ರ ಶುಕ್ರವಾರ ರಾತ್ರಿ ಎಂಟರ ನಂತರ ಮೈಸೂರು ನಗರದ ದೀಪಾಲಂಕಾರ ನೋಡಲು ಕೃಷ್ಣರಾಜ ಬೂಲ್‌ವಾರ್ಡ್ ರಸ್ತೆಯಿಂದ ಹೊರಟು

ಹುಣಸೂರು ರಸ್ತೆಗೆ ಸೇರಿದೆವು. ಅಲ್ಲಿಂದಲೇ ಉರಿಯದ ದೀಪಸಾಲುಗಳು ನಮ್ಮನ್ನು ಸ್ವಾಗತಿಸಿದವು. ಹಾಗೇ ಮುಂದೆ ಸಾಗಿ ಬಿ.ಎಂ. ಆಸ್ಪತ್ರೆಯ ಬಳಿ ತಿರಗಿಕೊಂಡು ಕೆ.ಆರ್.ಎಸ್. ರಸ್ತೆಯ ಕಡೆ ಸಾಗಿದೆವು. ಅಲ್ಲಿಂದ ಝಾನ್ಸಿ ಲಕ್ಷ್ಮೀಬಾಯಿ ರಸ್ತೆಗೆ ತಿರುಗಿ ರೈಲ್ವೇ ಸ್ಟೇಶನ್ ದಾಟಿ ಆರ್.ಎಂ.ಸಿ. ಕಡೆಯಿಂದ ಮಿಲೇನಿಯಂ ಸರ್ಕಲ್ ಕಡೆ ಹೋದೆವು.ಅಲ್ಲಿಂದ ಗ್ರಾಮಾಂತರ ಬಸ್ ನಿಲ್ದಾಣದ ಕಡೆ ಹೋದೆವು. ಮುಖ್ಯ ರಸ್ತೆಗಳಲ್ಲಿ ದೀಪಾಲಂಕಾರವಿತ್ತಾದರೂ ಬಹಳಷ್ಟು ರಸ್ತೆಯಲ್ಲಿ ಹಾಕಿದ್ದ ಸಾಲು ದೀಪಗಳು ಉರಿಯುತ್ತಿರಲಿಲ್ಲ. ಶೇ.೮೫ ರಷ್ಟು ಉರಿಯದ ಸಾಲು ದೀಪಗಳನ್ನು ನೋಡಿ ಬೇಸರವಾಯಿತು. ಎರಡು ದಿವಸ ದೀಪಾಲಂಕಾರ ಮುಂದುವರೆಸಲಾಗುತ್ತದೆಯೆಂಬ ಉಸ್ತುವಾರಿ ಸಚಿವರ ಮಾತನ್ನು ನಂಬಿ ನಾವು ಮೂರ್ಖರಾದೆವು. ದೀಪಾಲಂಕಾರವನ್ನು ಪೂರ್ಣಪ್ರಮಾಣದಲ್ಲಿ ಮುಂದುವರೆಸಲಾಗದಿದ್ದರೆ ಸಚಿವರು ಹಾಗೂ ಚೆಸ್ಕಾಂ ಎಂ.ಡಿ .ಸುಮ್ಮನಿರಬೇಕಿತ್ತು.
ಸುಳ್ಳು ಹೇಳಿ ಜನರಿಗೆ ಮೋಸಮಾಡಬಾರದಾಗಿತ್ತು !
ಕೊ.ಸು.ನರಸಿಂಹ ಮೂರ್ತಿ, ಹಿರಿಯ ನಾಗರಿಕ, ಚಾಮರಾಜಪುರಂ, ಮೈಸೂರು. .


ಅವರೂ ಮನುಷ್ಯರಲ್ಲವೇ?

ಇತ್ತೀಚೆಗೆ ಕೆಲವು ರಾಜಕೀಯ ವ್ಯಕ್ತಿಗಳು ಹರಿಜನರ ಮನೆಯಲ್ಲಿ ಊಟ ಮಾಡುವುದು ಮಾಧ್ಯಮಗಳಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗುತ್ತಿರುವುದು ದುರಂತದ ವಿಷಯ. ಹರಿಜನರು ಮನುಷ್ಯರಲ್ಲವೇ ? ಅವರ ಮನೆಯಲ್ಲಿ ಊಟ ಮಾಡುವುದನ್ನೇಕೆ ವೈಭಿಕರಿಸಬೇಕು? ಇದರಿಂದ ಮುಂದಿನ ಪೀಳಿಗೆಗೆ ಕೊಡುವ ಸಂದೇಶವೇನು?

-ಬೂಕನಕೆರೆ ವಿಜೇಂದ್ರ, ಮೈಸೂರು 


ಪರಿಣತಿಮತಿಗಳ್?!

ಆ ಕವಿರಾಜಮಾರ್ಗಕಾರ

ಈಗೇನಾದರೂ ಇದ್ದಿದ್ದರೆ

ಹೇಳುತ್ತಿದ್ದರೇನೊ!

(ಕ್ಷಮಿಸಿ)

ಕನ್ನಡಿಗರ್

ನುಡಿ ಸಮ್ಮೇಳನವಂ

ಮತ್ತೆ ಮತ್ತೆ
ಮುಂದೂಡಬಲ್ಲ

ಪರಿಣತಿಮತಿಗಳ್ ?!

-ಮ ಗು ಬಸವಣ್ಣ, ಜೆಎಸ್‌ಎಸ್ ಸಂಸ್ಥೆ, ಸುತ್ತೂರು.


ದೇವರ ದುಬಾರಿ ದರ್ಶನ

ಹಾಸನಾಂಬ ದೇವಾಲಯದ ಬಾಗಿಲು ೧೪ ದಿನಗಳವರೆಗೆ ತೆರೆದಿದೆ. ಆದರೆ ದೇವರ ದರ್ಶನಕ್ಕೆ ಸಾವಿರ, ಮುನ್ನೂರು ರೂ. ವಿಶೇಷ ದರ್ಶನ ಶುಲ್ಕ ವಿಧಿಸಿರುವುದು ದೇವಾಲಯಗಳ ಮಾರುಕಟ್ಟೆ ಮುಖವನ್ನು ತೆರೆದಿಡುತ್ತವೆ!
ಅಲ್ಲದೆ ದೇವರ ದರ್ಶನವನ್ನು ಕೆಲವೇ ದಿನಗಳಿಗೆ ಸೀಮಿತಗೊಳಿಸಲಾಗಿದೆ. ಆದರೆ ಬರುವ ಭಕ್ತರಿಗೆ ಸರದಿ ಸಾಲಿನಲ್ಲಿ ನಿಲ್ಲುವಂತೆ ಮಾಡಿ ಮದ್ಯಹ್ನ ೨ ಗಂಟೆ ದೇವಸ್ಥಾನದ ಬಾಗಿಲು ಮುಚ್ಚಿ ಭಕ್ತರನ್ನು ಕಾಯಿಸುವುದು ಏಕೆ? ದೇವಸ್ಥಾನಕ್ಕೆ ಬರುವ ಸಾವಿರಾರು ಭಕ್ತರಿಗೆ ಅಲ್ಲಿ ಊಟ, ಶೌಚಾಲಯದ ವ್ಯವಸ್ಥೆ ಯನ್ನು ಜಿಲ್ಲಾಡಳಿತ ಮಾಡಿದೆಯೇ?
ಇನ್ನು ಹಾಸನಾಂಬ ದೇವಾಲಯದಲ್ಲಿ ಹಚ್ಚಿದ ದೀಪ ವರ್ಷವಿಡೀ ಆರದೆ ಉರಿಯುತ್ತಿರುತ್ತದೆ ಎಂದು ಭಕ್ತರನ್ನು ನಂಬಿಸಲಾಗಿದೆ. ವಿಪರ್ಯಾಸವೆಂದರೆ ಇದನ್ನು ನಮ್ಮ ಬಹಳಷ್ಟು ವಿದ್ಯಾವಂತ ಭಕ್ತರೇ ನಂಬುತ್ತಾರೆ! ಅಲ್ಲಿ ವರ್ಷವಿಡೀ ದೀಪ ಉರಿಯುತ್ತದೆ ಎನ್ನುವುದನ್ನು ಕಳೆದ ವರ್ಷ ಅಲ್ಲಿನ ಆಡಳಿತ ಮಂಡಳಿಯೇ ನಿರಾಕರಿಸಿತ್ತು. ದೇವಾಲಯದ ಬಾಗಿಲು ತೆರೆದ ದಿನದಿಂದ ದೇವಾಲಯದ ಬಾಗಿಲು ಮುಚ್ಚುವವರೆಗಿನ ದಿನಗಳವರೆಗೆ ಹಗಲು -ರಾತ್ರಿ ದೀಪ ಆರದಂತೆ ನೋಡಿ ಕೊಳ್ಳ ಲಾಗು ತ್ತದೆ ಎನ್ನುವುದು ಮಾತ್ರ ವಾಸ್ತವ.

-ಮುಳ್ಳೂರು ಪ್ರಕಾಶ್, ಕನಕ ದಾಸ ನಗರ, ಮೈಸೂರು

andolanait

Recent Posts

ಸುಪ್ರೀಂಕೋರ್ಟ್‌ನಲ್ಲಿ ಪ್ರಜ್ವಲ್‌ ರೇವಣ್ಣಗೆ ಹಿನ್ನಡೆ

ನವದೆಹಲಿ: ಮನೆಗೆಲಸದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೀವಾವಧಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ…

9 mins ago

ರಾಜ್ಯದಲ್ಲಿ 1517 ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಕ್ರಮ: ಸಚಿವ ಕೆ.ಎಚ್.ಮುನಿಯಪ್ಪ

ಬೆಳಗಾವಿ: ರಾಜ್ಯದಲ್ಲಿ 1517 ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ…

29 mins ago

ಬೆಂಗಳೂರಿನಲ್ಲಿ ಸಾಕು ಪ್ರಾಣಿಗಳ ಮಾರಣಹೋಮ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾಕು ಅಮಾನವೀಯ ಘಟನೆ ನಡೆದಿದ್ದು, ಸಾಕು ಪ್ರಾಣಿಗಳನ್ನು ಚಿತ್ರಹಿಂಸೆ ನೀಡಿ ಕೊಂದು ವಿಕೃತಿ ಮೆರೆದಿರುವ…

1 hour ago

ನಾಯಕತ್ವ ಬಗ್ಗೆ ಯತೀಂದ್ರ ಹೇಳಿಕೆ: ಇದಕ್ಕೆ ಸಿಎಂ ಉತ್ತರಿಸಲಿ ಎಂದ ಡಿ.ಕೆ.ಶಿವಕುಮಾರ್‌

ಬೆಳಗಾವಿ: ರಾಜ್ಯದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್‌ ಕ್ಲಿಯರ್‌ ಆಗಿ ಹೇಳಿದೆ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ…

2 hours ago

ಜೀವಾವಧಿ ಶಿಕ್ಷೆಯಿಂದ ಪಾರಾಗಲು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಪ್ರಜ್ವಲ್‌ ರೇವಣ್ಣ

ಬೆಂಗಳೂರು: ಮನೆ ಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ…

2 hours ago

ಪೊಲೀಸ್‌ ಇಲಾಖೆಯಲ್ಲಿ 3 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ: ಸಚಿವ ಪರಮೇಶ್ವರ್‌

ಬೆಳಗಾವಿ: ಪೊಲೀಸ್‌ ಇಲಾಖೆಯಲ್ಲಿ 14 ಸಾವಿರ ಹುದ್ದೆಗಳು ಖಾಲಿಯಿದ್ದು, ಈ ಪೈಕಿ 3 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ…

2 hours ago