ಎಡಿಟೋರಿಯಲ್

ಆಂದೋಲನ ಓದುಗರ ಪತ್ರ: 15 ಶನಿವಾರ 2022

ಓದುಗರಪತ್ರ

ಸುಳ್ಳು ಹೇಳಿದ ಸರಕಾರ !

ದಸರೆಗೆ ಮಾಡಿದ ದೀಪಾಲಂಕಾರವನ್ನು ಅಕ್ಟೋಬರ್ ೧೦ ರವರೆಗೆ ವಿಸ್ತರಣೆ ಮಾಡಲಾಗಿದೆಯೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಚೆಸ್ಕಾಂ ಎಂ.ಡಿ. ಜಯವಿಭವ ಸ್ವಾಮಿಯವರು ಹೇಳಿದ ಹೇಳಿಕೆಗಳು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದನ್ನು ಕಂಡು ನಾವು ದಿನಾಂಕ ೭ರ ಶುಕ್ರವಾರ ರಾತ್ರಿ ಎಂಟರ ನಂತರ ಮೈಸೂರು ನಗರದ ದೀಪಾಲಂಕಾರ ನೋಡಲು ಕೃಷ್ಣರಾಜ ಬೂಲ್‌ವಾರ್ಡ್ ರಸ್ತೆಯಿಂದ ಹೊರಟು

ಹುಣಸೂರು ರಸ್ತೆಗೆ ಸೇರಿದೆವು. ಅಲ್ಲಿಂದಲೇ ಉರಿಯದ ದೀಪಸಾಲುಗಳು ನಮ್ಮನ್ನು ಸ್ವಾಗತಿಸಿದವು. ಹಾಗೇ ಮುಂದೆ ಸಾಗಿ ಬಿ.ಎಂ. ಆಸ್ಪತ್ರೆಯ ಬಳಿ ತಿರಗಿಕೊಂಡು ಕೆ.ಆರ್.ಎಸ್. ರಸ್ತೆಯ ಕಡೆ ಸಾಗಿದೆವು. ಅಲ್ಲಿಂದ ಝಾನ್ಸಿ ಲಕ್ಷ್ಮೀಬಾಯಿ ರಸ್ತೆಗೆ ತಿರುಗಿ ರೈಲ್ವೇ ಸ್ಟೇಶನ್ ದಾಟಿ ಆರ್.ಎಂ.ಸಿ. ಕಡೆಯಿಂದ ಮಿಲೇನಿಯಂ ಸರ್ಕಲ್ ಕಡೆ ಹೋದೆವು.ಅಲ್ಲಿಂದ ಗ್ರಾಮಾಂತರ ಬಸ್ ನಿಲ್ದಾಣದ ಕಡೆ ಹೋದೆವು. ಮುಖ್ಯ ರಸ್ತೆಗಳಲ್ಲಿ ದೀಪಾಲಂಕಾರವಿತ್ತಾದರೂ ಬಹಳಷ್ಟು ರಸ್ತೆಯಲ್ಲಿ ಹಾಕಿದ್ದ ಸಾಲು ದೀಪಗಳು ಉರಿಯುತ್ತಿರಲಿಲ್ಲ. ಶೇ.೮೫ ರಷ್ಟು ಉರಿಯದ ಸಾಲು ದೀಪಗಳನ್ನು ನೋಡಿ ಬೇಸರವಾಯಿತು. ಎರಡು ದಿವಸ ದೀಪಾಲಂಕಾರ ಮುಂದುವರೆಸಲಾಗುತ್ತದೆಯೆಂಬ ಉಸ್ತುವಾರಿ ಸಚಿವರ ಮಾತನ್ನು ನಂಬಿ ನಾವು ಮೂರ್ಖರಾದೆವು. ದೀಪಾಲಂಕಾರವನ್ನು ಪೂರ್ಣಪ್ರಮಾಣದಲ್ಲಿ ಮುಂದುವರೆಸಲಾಗದಿದ್ದರೆ ಸಚಿವರು ಹಾಗೂ ಚೆಸ್ಕಾಂ ಎಂ.ಡಿ .ಸುಮ್ಮನಿರಬೇಕಿತ್ತು.
ಸುಳ್ಳು ಹೇಳಿ ಜನರಿಗೆ ಮೋಸಮಾಡಬಾರದಾಗಿತ್ತು !
ಕೊ.ಸು.ನರಸಿಂಹ ಮೂರ್ತಿ, ಹಿರಿಯ ನಾಗರಿಕ, ಚಾಮರಾಜಪುರಂ, ಮೈಸೂರು. .


ಅವರೂ ಮನುಷ್ಯರಲ್ಲವೇ?

ಇತ್ತೀಚೆಗೆ ಕೆಲವು ರಾಜಕೀಯ ವ್ಯಕ್ತಿಗಳು ಹರಿಜನರ ಮನೆಯಲ್ಲಿ ಊಟ ಮಾಡುವುದು ಮಾಧ್ಯಮಗಳಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗುತ್ತಿರುವುದು ದುರಂತದ ವಿಷಯ. ಹರಿಜನರು ಮನುಷ್ಯರಲ್ಲವೇ ? ಅವರ ಮನೆಯಲ್ಲಿ ಊಟ ಮಾಡುವುದನ್ನೇಕೆ ವೈಭಿಕರಿಸಬೇಕು? ಇದರಿಂದ ಮುಂದಿನ ಪೀಳಿಗೆಗೆ ಕೊಡುವ ಸಂದೇಶವೇನು?

-ಬೂಕನಕೆರೆ ವಿಜೇಂದ್ರ, ಮೈಸೂರು 


ಪರಿಣತಿಮತಿಗಳ್?!

ಆ ಕವಿರಾಜಮಾರ್ಗಕಾರ

ಈಗೇನಾದರೂ ಇದ್ದಿದ್ದರೆ

ಹೇಳುತ್ತಿದ್ದರೇನೊ!

(ಕ್ಷಮಿಸಿ)

ಕನ್ನಡಿಗರ್

ನುಡಿ ಸಮ್ಮೇಳನವಂ

ಮತ್ತೆ ಮತ್ತೆ
ಮುಂದೂಡಬಲ್ಲ

ಪರಿಣತಿಮತಿಗಳ್ ?!

-ಮ ಗು ಬಸವಣ್ಣ, ಜೆಎಸ್‌ಎಸ್ ಸಂಸ್ಥೆ, ಸುತ್ತೂರು.


ದೇವರ ದುಬಾರಿ ದರ್ಶನ

ಹಾಸನಾಂಬ ದೇವಾಲಯದ ಬಾಗಿಲು ೧೪ ದಿನಗಳವರೆಗೆ ತೆರೆದಿದೆ. ಆದರೆ ದೇವರ ದರ್ಶನಕ್ಕೆ ಸಾವಿರ, ಮುನ್ನೂರು ರೂ. ವಿಶೇಷ ದರ್ಶನ ಶುಲ್ಕ ವಿಧಿಸಿರುವುದು ದೇವಾಲಯಗಳ ಮಾರುಕಟ್ಟೆ ಮುಖವನ್ನು ತೆರೆದಿಡುತ್ತವೆ!
ಅಲ್ಲದೆ ದೇವರ ದರ್ಶನವನ್ನು ಕೆಲವೇ ದಿನಗಳಿಗೆ ಸೀಮಿತಗೊಳಿಸಲಾಗಿದೆ. ಆದರೆ ಬರುವ ಭಕ್ತರಿಗೆ ಸರದಿ ಸಾಲಿನಲ್ಲಿ ನಿಲ್ಲುವಂತೆ ಮಾಡಿ ಮದ್ಯಹ್ನ ೨ ಗಂಟೆ ದೇವಸ್ಥಾನದ ಬಾಗಿಲು ಮುಚ್ಚಿ ಭಕ್ತರನ್ನು ಕಾಯಿಸುವುದು ಏಕೆ? ದೇವಸ್ಥಾನಕ್ಕೆ ಬರುವ ಸಾವಿರಾರು ಭಕ್ತರಿಗೆ ಅಲ್ಲಿ ಊಟ, ಶೌಚಾಲಯದ ವ್ಯವಸ್ಥೆ ಯನ್ನು ಜಿಲ್ಲಾಡಳಿತ ಮಾಡಿದೆಯೇ?
ಇನ್ನು ಹಾಸನಾಂಬ ದೇವಾಲಯದಲ್ಲಿ ಹಚ್ಚಿದ ದೀಪ ವರ್ಷವಿಡೀ ಆರದೆ ಉರಿಯುತ್ತಿರುತ್ತದೆ ಎಂದು ಭಕ್ತರನ್ನು ನಂಬಿಸಲಾಗಿದೆ. ವಿಪರ್ಯಾಸವೆಂದರೆ ಇದನ್ನು ನಮ್ಮ ಬಹಳಷ್ಟು ವಿದ್ಯಾವಂತ ಭಕ್ತರೇ ನಂಬುತ್ತಾರೆ! ಅಲ್ಲಿ ವರ್ಷವಿಡೀ ದೀಪ ಉರಿಯುತ್ತದೆ ಎನ್ನುವುದನ್ನು ಕಳೆದ ವರ್ಷ ಅಲ್ಲಿನ ಆಡಳಿತ ಮಂಡಳಿಯೇ ನಿರಾಕರಿಸಿತ್ತು. ದೇವಾಲಯದ ಬಾಗಿಲು ತೆರೆದ ದಿನದಿಂದ ದೇವಾಲಯದ ಬಾಗಿಲು ಮುಚ್ಚುವವರೆಗಿನ ದಿನಗಳವರೆಗೆ ಹಗಲು -ರಾತ್ರಿ ದೀಪ ಆರದಂತೆ ನೋಡಿ ಕೊಳ್ಳ ಲಾಗು ತ್ತದೆ ಎನ್ನುವುದು ಮಾತ್ರ ವಾಸ್ತವ.

-ಮುಳ್ಳೂರು ಪ್ರಕಾಶ್, ಕನಕ ದಾಸ ನಗರ, ಮೈಸೂರು

andolanait

Recent Posts

ಹನೂರು: ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ಬಸ್‌ ಸೌಲಭ್ಯ ಕಲ್ಪಿಸಲು ಡಿಪೋ ನಿರ್ಮಾಣ: ಶಾಸಕ ಎಂ.ಆರ್.‌ಮಂಜುನಾಥ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ಕೆಎಸ್‌ಆರ್‌ಟಿಸಿ ಸೌಲಭ್ಯ ಕಲ್ಪಿಸಲು ತಾಲೂಕು ಕೇಂದ್ರದಲ್ಲಿ…

8 hours ago

ಶ್ರೀರಂಗಪಟ್ಟಣ: ವಿದ್ಯುತ್ ಸ್ಪರ್ಶದಿಂದ ಕರ್ತವ್ಯ ನಿರತ ಲೈನ್‌ಮ್ಯಾನ್ ಸಾವು

‌ಶ್ರೀರಂಗಪಟ್ಟಣ: ವಿದ್ಯುತ್‌ ಸ್ಪರ್ಶದಿಂದ ಕರ್ತವ್ಯ ನಿರತ ಲೈನ್‌ಮ್ಯಾನ್‌ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿ ಗ್ರಾಮದಲ್ಲಿ ನಡೆದಿದೆ.…

8 hours ago

ರಾಜ್ಯದ ಹಲವೆಡೆ ಭಾರೀ ಗಾಳಿ ಮಳೆ: ಜನಜೀವನ ಅಸ್ತವ್ಯಸ್ತ

ಬೆಂಗಳೂರು: ರಾಜ್ಯದ ಹಲವೆಡೆ ಇಂದು ಧಾರಾಕಾರ ಮಳೆಯಾಗಿದ್ದು, ಭಾರೀ ಅವಾಂತರ ಸೃಷ್ಟಿ ಮಾಡಿದೆ. ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ…

9 hours ago

ಹನೂರು: 153 ದಿನಗಳಿಂದ ರೈತರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಅಂತ್ಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಾರ್ಟಳ್ಳಿ, ಕೌದಳ್ಳಿ, ಶೆಟ್ಟಳ್ಳಿ, ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ…

9 hours ago

ಮೈಸೂರಿನಲ್ಲಿ ಅವೈಜ್ಞಾನಿಕ ಟ್ರಾಫಿಕ್‌ ಸಿಗ್ನಲ್‌ ಆರೋಪ: ಸಚಿವ ಮಹದೇವಪ್ಪ ಪ್ರತಿಕ್ರಿಯೆ

ಮೈಸೂರು: ಅರಮನೆಗಳ ನಗರಿ ಮೈಸೂರಿನಲ್ಲಿ ಅವೈಜ್ಞಾನಿಕವಾಗಿ ಟ್ರಾಫಿಕ್‌ ಸಿಗ್ನಲ್‌ ಅಳವಡಿಸಲಾಗಿದೆ ಎಂದು ಸಾರ್ವಜನಿಕರು ಕಿಡಿಕಾರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಮಹದೇವಪ್ಪ…

9 hours ago

ದೀದಿ ಸರ್ಕಾರದ ವಿರುದ್ಧ ಅಮಿತ್‌ ಶಾ ಚಾರ್ಜ್‌ಶೀಟ್‌ ರಿಲೀಸ್‌

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕೇಂದ್ರ ಗೃಹ ಸಚಿವ…

9 hours ago