ಎಡಿಟೋರಿಯಲ್

ಆಂದೋಲನ ಓದುಗರ ಪತ್ರ: 15 ಶನಿವಾರ 2022

ಓದುಗರಪತ್ರ

ಸುಳ್ಳು ಹೇಳಿದ ಸರಕಾರ !

ದಸರೆಗೆ ಮಾಡಿದ ದೀಪಾಲಂಕಾರವನ್ನು ಅಕ್ಟೋಬರ್ ೧೦ ರವರೆಗೆ ವಿಸ್ತರಣೆ ಮಾಡಲಾಗಿದೆಯೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಚೆಸ್ಕಾಂ ಎಂ.ಡಿ. ಜಯವಿಭವ ಸ್ವಾಮಿಯವರು ಹೇಳಿದ ಹೇಳಿಕೆಗಳು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದನ್ನು ಕಂಡು ನಾವು ದಿನಾಂಕ ೭ರ ಶುಕ್ರವಾರ ರಾತ್ರಿ ಎಂಟರ ನಂತರ ಮೈಸೂರು ನಗರದ ದೀಪಾಲಂಕಾರ ನೋಡಲು ಕೃಷ್ಣರಾಜ ಬೂಲ್‌ವಾರ್ಡ್ ರಸ್ತೆಯಿಂದ ಹೊರಟು

ಹುಣಸೂರು ರಸ್ತೆಗೆ ಸೇರಿದೆವು. ಅಲ್ಲಿಂದಲೇ ಉರಿಯದ ದೀಪಸಾಲುಗಳು ನಮ್ಮನ್ನು ಸ್ವಾಗತಿಸಿದವು. ಹಾಗೇ ಮುಂದೆ ಸಾಗಿ ಬಿ.ಎಂ. ಆಸ್ಪತ್ರೆಯ ಬಳಿ ತಿರಗಿಕೊಂಡು ಕೆ.ಆರ್.ಎಸ್. ರಸ್ತೆಯ ಕಡೆ ಸಾಗಿದೆವು. ಅಲ್ಲಿಂದ ಝಾನ್ಸಿ ಲಕ್ಷ್ಮೀಬಾಯಿ ರಸ್ತೆಗೆ ತಿರುಗಿ ರೈಲ್ವೇ ಸ್ಟೇಶನ್ ದಾಟಿ ಆರ್.ಎಂ.ಸಿ. ಕಡೆಯಿಂದ ಮಿಲೇನಿಯಂ ಸರ್ಕಲ್ ಕಡೆ ಹೋದೆವು.ಅಲ್ಲಿಂದ ಗ್ರಾಮಾಂತರ ಬಸ್ ನಿಲ್ದಾಣದ ಕಡೆ ಹೋದೆವು. ಮುಖ್ಯ ರಸ್ತೆಗಳಲ್ಲಿ ದೀಪಾಲಂಕಾರವಿತ್ತಾದರೂ ಬಹಳಷ್ಟು ರಸ್ತೆಯಲ್ಲಿ ಹಾಕಿದ್ದ ಸಾಲು ದೀಪಗಳು ಉರಿಯುತ್ತಿರಲಿಲ್ಲ. ಶೇ.೮೫ ರಷ್ಟು ಉರಿಯದ ಸಾಲು ದೀಪಗಳನ್ನು ನೋಡಿ ಬೇಸರವಾಯಿತು. ಎರಡು ದಿವಸ ದೀಪಾಲಂಕಾರ ಮುಂದುವರೆಸಲಾಗುತ್ತದೆಯೆಂಬ ಉಸ್ತುವಾರಿ ಸಚಿವರ ಮಾತನ್ನು ನಂಬಿ ನಾವು ಮೂರ್ಖರಾದೆವು. ದೀಪಾಲಂಕಾರವನ್ನು ಪೂರ್ಣಪ್ರಮಾಣದಲ್ಲಿ ಮುಂದುವರೆಸಲಾಗದಿದ್ದರೆ ಸಚಿವರು ಹಾಗೂ ಚೆಸ್ಕಾಂ ಎಂ.ಡಿ .ಸುಮ್ಮನಿರಬೇಕಿತ್ತು.
ಸುಳ್ಳು ಹೇಳಿ ಜನರಿಗೆ ಮೋಸಮಾಡಬಾರದಾಗಿತ್ತು !
ಕೊ.ಸು.ನರಸಿಂಹ ಮೂರ್ತಿ, ಹಿರಿಯ ನಾಗರಿಕ, ಚಾಮರಾಜಪುರಂ, ಮೈಸೂರು. .


ಅವರೂ ಮನುಷ್ಯರಲ್ಲವೇ?

ಇತ್ತೀಚೆಗೆ ಕೆಲವು ರಾಜಕೀಯ ವ್ಯಕ್ತಿಗಳು ಹರಿಜನರ ಮನೆಯಲ್ಲಿ ಊಟ ಮಾಡುವುದು ಮಾಧ್ಯಮಗಳಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗುತ್ತಿರುವುದು ದುರಂತದ ವಿಷಯ. ಹರಿಜನರು ಮನುಷ್ಯರಲ್ಲವೇ ? ಅವರ ಮನೆಯಲ್ಲಿ ಊಟ ಮಾಡುವುದನ್ನೇಕೆ ವೈಭಿಕರಿಸಬೇಕು? ಇದರಿಂದ ಮುಂದಿನ ಪೀಳಿಗೆಗೆ ಕೊಡುವ ಸಂದೇಶವೇನು?

-ಬೂಕನಕೆರೆ ವಿಜೇಂದ್ರ, ಮೈಸೂರು 


ಪರಿಣತಿಮತಿಗಳ್?!

ಆ ಕವಿರಾಜಮಾರ್ಗಕಾರ

ಈಗೇನಾದರೂ ಇದ್ದಿದ್ದರೆ

ಹೇಳುತ್ತಿದ್ದರೇನೊ!

(ಕ್ಷಮಿಸಿ)

ಕನ್ನಡಿಗರ್

ನುಡಿ ಸಮ್ಮೇಳನವಂ

ಮತ್ತೆ ಮತ್ತೆ
ಮುಂದೂಡಬಲ್ಲ

ಪರಿಣತಿಮತಿಗಳ್ ?!

-ಮ ಗು ಬಸವಣ್ಣ, ಜೆಎಸ್‌ಎಸ್ ಸಂಸ್ಥೆ, ಸುತ್ತೂರು.


ದೇವರ ದುಬಾರಿ ದರ್ಶನ

ಹಾಸನಾಂಬ ದೇವಾಲಯದ ಬಾಗಿಲು ೧೪ ದಿನಗಳವರೆಗೆ ತೆರೆದಿದೆ. ಆದರೆ ದೇವರ ದರ್ಶನಕ್ಕೆ ಸಾವಿರ, ಮುನ್ನೂರು ರೂ. ವಿಶೇಷ ದರ್ಶನ ಶುಲ್ಕ ವಿಧಿಸಿರುವುದು ದೇವಾಲಯಗಳ ಮಾರುಕಟ್ಟೆ ಮುಖವನ್ನು ತೆರೆದಿಡುತ್ತವೆ!
ಅಲ್ಲದೆ ದೇವರ ದರ್ಶನವನ್ನು ಕೆಲವೇ ದಿನಗಳಿಗೆ ಸೀಮಿತಗೊಳಿಸಲಾಗಿದೆ. ಆದರೆ ಬರುವ ಭಕ್ತರಿಗೆ ಸರದಿ ಸಾಲಿನಲ್ಲಿ ನಿಲ್ಲುವಂತೆ ಮಾಡಿ ಮದ್ಯಹ್ನ ೨ ಗಂಟೆ ದೇವಸ್ಥಾನದ ಬಾಗಿಲು ಮುಚ್ಚಿ ಭಕ್ತರನ್ನು ಕಾಯಿಸುವುದು ಏಕೆ? ದೇವಸ್ಥಾನಕ್ಕೆ ಬರುವ ಸಾವಿರಾರು ಭಕ್ತರಿಗೆ ಅಲ್ಲಿ ಊಟ, ಶೌಚಾಲಯದ ವ್ಯವಸ್ಥೆ ಯನ್ನು ಜಿಲ್ಲಾಡಳಿತ ಮಾಡಿದೆಯೇ?
ಇನ್ನು ಹಾಸನಾಂಬ ದೇವಾಲಯದಲ್ಲಿ ಹಚ್ಚಿದ ದೀಪ ವರ್ಷವಿಡೀ ಆರದೆ ಉರಿಯುತ್ತಿರುತ್ತದೆ ಎಂದು ಭಕ್ತರನ್ನು ನಂಬಿಸಲಾಗಿದೆ. ವಿಪರ್ಯಾಸವೆಂದರೆ ಇದನ್ನು ನಮ್ಮ ಬಹಳಷ್ಟು ವಿದ್ಯಾವಂತ ಭಕ್ತರೇ ನಂಬುತ್ತಾರೆ! ಅಲ್ಲಿ ವರ್ಷವಿಡೀ ದೀಪ ಉರಿಯುತ್ತದೆ ಎನ್ನುವುದನ್ನು ಕಳೆದ ವರ್ಷ ಅಲ್ಲಿನ ಆಡಳಿತ ಮಂಡಳಿಯೇ ನಿರಾಕರಿಸಿತ್ತು. ದೇವಾಲಯದ ಬಾಗಿಲು ತೆರೆದ ದಿನದಿಂದ ದೇವಾಲಯದ ಬಾಗಿಲು ಮುಚ್ಚುವವರೆಗಿನ ದಿನಗಳವರೆಗೆ ಹಗಲು -ರಾತ್ರಿ ದೀಪ ಆರದಂತೆ ನೋಡಿ ಕೊಳ್ಳ ಲಾಗು ತ್ತದೆ ಎನ್ನುವುದು ಮಾತ್ರ ವಾಸ್ತವ.

-ಮುಳ್ಳೂರು ಪ್ರಕಾಶ್, ಕನಕ ದಾಸ ನಗರ, ಮೈಸೂರು

andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

4 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

6 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

6 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

7 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

8 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

8 hours ago