ಎಡಿಟೋರಿಯಲ್

ಆಂದೋಲನ ಓದುಗರ ಪತ್ರ: 25 ಶುಕ್ರವಾರ 2022

ಸಾತಗಳ್ಳಿ ಕೆರೆಯನ್ನೂ ಉಳಿಸಿ!

ಅವಸಾನದ ಅಂಚಿಗೆ ತಲುಪಿದ್ದ ದೇವನೂರು ಕೆರೆಯನ್ನು ಸಮಗ್ರ ಅಭಿವೃದ್ಧಿ ಪಡಿಸಲು ಸರ್ಕಾರದ ಪ್ರತಿನಿಧಿಗಳು ಕಾರ್ಯಪ್ರವೃತ್ತ ರಾಗಿರುವುದು ತುಂಬಾ ಸಂತೋಷದಾಯಕ ಸಂಗತಿ. ಅದೇ ರೀತಿ ಸಾತಗಳ್ಳಿ ಕೆರೆಯನ್ನು ಅಭಿವೃದ್ಧಿ ಪಡಿಸದೆ ಅದನ್ನು ಮುಚ್ಚಿ ಕ್ರಿಕೆಟ್ ಸ್ಟೇಡಿಯಂ ಮಾಡುತ್ತಿರುವುದು ಎಷ್ಟು ನ್ಯಾಯ? ಸಾತಗಳ್ಳಿ ಕೆರೆಗೆ ಬರುವ ನೀರಿನ ಸೆಲೆ ಬತ್ತಿದೆ ಎಂದು ಹೇಳಿ ಕೆರೆಯನ್ನು ಮುಚ್ಚುವ ಬದಲು ಮಳೆ ನೀರನ್ನು ಸಂಗ್ರಹ ಮಾಡುವ ಮೂಲಕ ಗಮನ ಹರಿಸಿ ಕೆರೆಯನ್ನು ಅಭಿವೃದ್ಧಿ ಪಡಿಸುವುದು ಉತ್ತಮ. ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಮಾಡದೆ ಬೇರೆ ಕಡೆ ಸರ್ಕಾರದವರು ಭೂಮಿಯನ್ನು ಗುರುತಿಸಿ ಕೊಡುವುದು ಸೂಕ್ತ. ಸಂಬಂಧ ಪಟ್ಟವರು ಇತ್ತಾ ಕಡೆ ಗಮನ ಹರಿಸಬೇಕು.
-ಬೆಸಗರಹಳ್ಳಿ ರವಿ ಪ್ರಸಾದ್ , ಮೈಸೂರು.


ಜನಮಾನಸದಲ್ಲಿ ಮಾಸದ ‘ಕೆಂಪಗಿ ದೊರೆ’

ದಮನಿತರ ದನಿಯಾಗಿ, ಕಾರ್ಮಿಕರ ನೇತಾರರಾಗಿ ಜನಮಾನಸದಲ್ಲಿ ಸದಾ ಹಚ್ಚ ಹಸಿರಾಗಿ ಉಳಿದು, ತಳ ಸಮುದಾಯಕ್ಕೆ ಆಶಾಕಿರಣದ ಬೆಳಕಾದವರು ‘ಆಂದೋಲನ’ ದಿನಪತ್ರಿಕೆ ಸಂಸ್ಥಾಪಕ ಸಂಪಾದಕರ ರಾಜಶೇಖರ ಕೋಟಿಯವರು. ಅವರು ಕೇವಲ ನೆನಪಲ್ಲ. ನಮ್ಮೊಂದಿಗೆ ಇದ್ದಾರೆ. ಅವರ ಆಶೋತ್ತರಗಳು ಸದಾ ನಮ್ಮನ್ನೂ ಬಡಿದೆಬ್ಬಿಸಿ ನಾವು ಸಾಮಾಜಿಕ ನ್ಯಾಯದ ಕೆಲಸಗಳು ಮಾಡಲು ಪ್ರೇರೇಪಿಸುತ್ತಿವೆ. ಅವರ ಅಕಾಲಿಕ ನಿಧನದ ಬಳಿಕವೂ ‘ಆಂದೋಲನ’ ಸಂಪಾದಕರು ಅದೇ ಹಾದಿಯಲ್ಲಿ ಸಾಗುವ ಮೂಲಕ ಕೋಟಿಯವರ ದಾರ್ಶನಿಕ ಹೆಜ್ಜೆ ಗುರುತು ಉಳಿಸುತ್ತಿರುವುದು ಮಾತ್ರವಲ್ಲದೆ, ದಮನಿತರಾದ ನಮ್ಮಂತಹ ಅನೇಕರಿಗೆ ವೇದಿಕೆ ನೀಡುತ್ತಿದ್ದಾರೆ. ಕೋಟಿಯವರ ಹೆಸರನ್ನು ಮೈಸೂರು ನಗರದ ವೃತ್ತವೊಂದಕ್ಕೆ ಇಡಬೇಕೆಂಬುದು ನನ್ನ ಮನವಿಯಾಗಿದೆ. ಆ ಮೂಲಕ ಜನಮಾನಸದಲ್ಲಿ ‘ಕೆಂಪಂಗಿ ದೊರೆ’ ಕೋಟಿಯವರು ಸದಾ ಜೀವಂತವಾಗಿ ಇರುತ್ತಾರೆ.

– ಕೆ.ಮಹೇಶ್, ವಕ್ತಾರರು, ಜಿಲ್ಲಾ ಕಾಂಗ್ರೆಸ್ ಸಮಿತಿ.


ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೃತ್ಯ

ಹೆಗ್ಗೋಠಾರದಲ್ಲಿ ದಲಿತ ಮಹಿಳೆಯೊಬ್ಬರು ಸಾರ್ವಜನಿಕ ಟ್ಯಾಂಕ್‌ನ ನಲ್ಲಿಯಲ್ಲಿ ನೀರು ಕುಡಿದರೆಂಬ ಕ್ಷುಲ್ಲಕ ಕಾರಣಕ್ಕೆ ಸವರ್ಣಿಯರು ಆ ಟ್ಯಾಂಕ್‌ನಲ್ಲಿ ಸಂಗ್ರಹವಾಗಿದ್ದ ನೀರನ್ನ ಖಾಲಿ ಮಾಡಿ ಅದನ್ನು ಗೋಮೂತ್ರದಿಂದ ಶುದ್ಧೀಕರಣ ಮಾಡುವ ಮೂಲಕ ಬಹಿರಂಗವಾಗಿಯೇ ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ. ಇದು ನಾಗರಿಕ ಸಮಾಜ ಅನಾಗರಿಕರಂತೆ ನಡೆದುಕೊಂಡಿರುವಂತಹ ಒಂದು ಅಮಾನವೀಯವಾದ ಕೃತ್ಯ. ಈ ಘಟನೆಯಿಂದ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ಜನಜಾಗೃತಿ ಮೂಡಿಸಬೇಕು.

-ಅಪುರಾ, ಅಗತಗೌಡನಹಳ್ಳಿ, ಗುಂಡ್ಲುಪೇಟೆ ತಾಲ್ಲೂಕು.


ವಸ್ತ್ರ ಸಂಹಿತೆ ಮತ್ತು ವಿಶ್ವಕಪ್ ಫುಟಬಾಲ್

ಕತಾರ್ ದೇಶದಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್‌ಬಾಲ್ ಪಂದ್ಯವನ್ನು ವೀಕ್ಷಿಸುವರ ಮೇಲೆ ಅಲ್ಲಿ ಸರ್ಕಾರ ಹಲವಾರು ಸಂಹಿತೆಗಳನ್ನು ವಿಧಿಸಿದೆ. ಬಿಯರ್, ಮದ್ಯ ಸೇವಿಸುವಂತಿಲ್ಲ. ಮಹಿಳೆಯರು ಮೈ ಕಾಣುವ ಉಡುಪು ಧರಿಸುವಂತಿಲ್ಲ. ಯುವಪ್ರೇಮಿಗಳಿಗೆ ಅವಕಾಶವಿಲ್ಲ. ಹಂದಿ ಮಾಂಸ ಸೇವನೆ ನಿಷಿದ್ಧ. ಹೀಗೆ ತನ್ನ ದೇಶದ ಸಾಂಸ್ಕೃತಿಕ, ಧಾರ್ಮಿಕ ಮತ್ತು ಪರಂಪರೆಗೆ ಅನುಗುಣವಾಗಿ ಕಟ್ಟು ಪಾಡುಗಳನ್ನು ವಿಧಿಸಿದೆ. ಇದನ್ನು ತಪ್ಪು ಎನ್ನಲಾಗದು. ಈ ಸಂಹಿತೆಗಳನ್ನು ಯಾರೂ ಪ್ರಶ್ನಿಸಿಲ್ಲ ಮತ್ತು ಅದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಅಕಸ್ಮಾತ್ ನಮ್ಮ ದೇಶದಲ್ಲೂ , ದೇಶದ ಸಂಸ್ಕ್ರತಿ, ಧಾರ್ಮಿಕತೆ, ಸಂಸ್ಕಾರ ಮತ್ತು ಪರಂಪರೆಗಳಿಗೆ ಅನುಗುಣವಾಗಿ ಇಂತಹ ಸಂಹಿತೆಗಳನ್ನು ವಿದಿಸಿದ್ದರೆ , ಇವುಗಳನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿತ್ತು.

-ರಮಾನಂದ ಶರ್ಮ, ಬೆಂಗಳೂರು.

andolana

Recent Posts

ಜಿಲ್ಲಾಸ್ಪತ್ರೆಗಳ ಮೇಲ್ದರ್ಜೆಗೆ ಚಿಂತನೆ : ಸಚಿವ ದಿನೇಶ್‌ ಗುಂಡೂರಾವ್‌

ಬೆಂಗಳೂರು : ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸಲು…

5 mins ago

India-New Zealand | ಮುಕ್ತ ವ್ಯಾಪಾರ ಒಪ್ಪಂದ : ಭಾರಿ ಪ್ರಮಾಣದ ಸುಂಕ ಕಡಿತ

ವೆಲ್ಲಿಂಗ್ಟನ್ : ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಅಂತಿಮವಾಗಿದೆ ಎಂದು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲುಕ್ಸನ್ ಸೋಮವಾರ ಹೇಳಿದ್ದಾರೆ.…

10 mins ago

ಪ್ರಾಚ್ಯವಿದ್ಯಾ ಸಂಶೋಧನಾಲಯ ಉತ್ಕೃಷ್ಠ ಜ್ಞಾನ ಗ್ರಂಥಗಳನ್ನು ಪ್ರಕಟಿಸಲಿ : ಭಾರತೀ ಸ್ವಾಮೀಜಿ ಆಶಯ

ಮೈಸೂರು : ಸಂಸ್ಕೃತ ಗ್ರಂಥ, ಶಾಸ್ತ್ರ ಗ್ರಂಥ, ವೇದಾಂತ ವಿಚಾರದ ಗ್ರಂಥಗಳನ್ನು ಅಧ್ಯಯನ ಮಾಡಿದರೆ ಜೀವನ ಸಾರ್ಥಕಗೊಳ್ಳಲಿದೆ ಎಂದು ಶೃಂಗೇರಿ…

20 mins ago

ಮೈಸೂರು | ಸೆಸ್ಕ್ ಕಚೇರಿಯಲ್ಲಿ ಮೇಲ್ದರ್ಜೆಗೇರಿಸಿದ ಇವಿ ಫಾಸ್ಟ್ ಚಾರ್ಜಿಂಗ್ ಘಟಕ ಉದ್ಘಾಟನೆ

ಮೈಸೂರು : ನವೀಕರಿಸಬಹುದಾದ ಇಂಧನ ಬಳಕೆಯನ್ನು ಉತ್ತೇಜಿಸುವ ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಬೆಳೆಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್…

47 mins ago

ಗರ್ಭಿಣ ಹತ್ಯೆ | ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು

ಹುಬ್ಬಳ್ಳಿ : ಕ್ರೂರಿ ತಂದೆಯೊಬ್ಬ ತನ್ನ 7 ತಿಂಗಳ ಗರ್ಭಿಣಿ ಮಗಳನ್ನು ಕೊಚ್ಚಿ ಕೊಂದಿರುವ ಘಟನೆಯೊಂದು ನಡೆದಿದೆ. ಹುಬ್ಬಳ್ಳಿಯಲ್ಲಿ ನಡೆದಿರುವ…

49 mins ago

ಇತರೆ ರಾಜ್ಯಕ್ಕೆ ʼಗ್ಯಾರಂಟಿʼ ಪ್ರೇರಣೆ : ಸಚಿವ ಚಲುವರಾಯಸ್ವಾಮಿ

ನಾಗಮಂಗಲ : ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾ ಪಂಚ ಗ್ಯಾರಂಟಿ ಯೋಜನೆಯಡಿ ಈವರೆಗೆ 1 ಲಕ್ಷದ 25 ಸಾವಿರ ಕೋಟಿ…

57 mins ago