ಎಡಿಟೋರಿಯಲ್

ಓದುಗರ ಪತ್ರ : 28 ಬುಧವಾರ 2022

ಯುವ ಸಾಧಕರೇ ಉದ್ಘಾಟಿಸಲಿ

ಯುವ ದಸರಾಗೆ ಆಹ್ವಾನಿಸಿದ್ದ ನಟ ಬರಲಿಲ್ಲವೆಂದು ಪರ್ಯಾಯ ವ್ಯಕ್ತಿಯನ್ನು ಹುಡುಕಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಯುವ ದಸರೆಗೆ ಕೇವಲ ಸಿನಿಮಾ ನಟರನ್ನು ಆಹ್ವಾನಿಸಿ ಯುವಕರಿಗೆ ಸಿನಿಮಾ ನಟರನ್ನು ಮಾದರಿಯೆಂದು ತೋರಿಸುವ ಕ್ರಮ ನಿಜಕ್ಕೂ ಖಂಡನೀಯ. ಯುವ ದಸರಾ ಉದ್ಘಾಟನೆಗೆ ಸಾಧಕ ಯುವ ರೈತರನ್ನು, ಯುವ ವಿಜ್ಞಾನಿಯನ್ನು ಅಥವಾ ಯುವ ಸೈನಿಕರನ್ನು ಕರೆಯುವ ಪರಿಪಾಟ ಬೆಳೆಯಲಿ. ಅದರ ಮೂಲಕ ಯುವಕರಿಗೆ ತಮ್ಮ ಜೀವನದ ಮಾದರಿ ಯಾರಾಗಬೇಕು? ಎಂದು ತಿಳಿಯುತ್ತದೆ. ಹಾಗೆಯೇ ಸಾಧಿಸಿದ ಯುವಕರನ್ನು ಸಮಾಜ ಗುರುತಿಸುವುದರಿಂದ ಅಂತಹವರು ಹೆಚ್ಚಿನ ಕೆಲಸದಲ್ಲಿ ತೊಡಗಿಸಿಕೊಂಡು ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡುತ್ತಾರೆ. ಮನರಂಜನಾ ಕಾರ್ಯಕ್ರಮಗಳಿಗೆ ಸಿನಿಮಾ ನಟರನ್ನು ಕರೆಸಿ ಕಾರ್ಯಕ್ರಮದ ಆಕರ್ಷಣೆ ಹೆಚ್ಚಿಸಿಕೊಳ್ಳಿ. ಆದರೆ ಯುವ ದಸರಾ ಉದ್ಘಾಟನೆ ಗೆ ಸಾಧಕರೇ ಬರಲಿ.
-ಎಸ್.ರವಿ,   ಮೈಸೂರು.


ಜನಪ್ರತಿನಿಧಿಗಳಿಗೆ ಅವಮಾನ?
ನಾಡ ಹಬ್ಬ ‘ಮೈಸೂರು ದಸರಾ’ ಉದ್ಘಾಟನಾ ಸಮಾರಂಭವು ‘ಮೈಸೂರಿನ ಜನಪ್ರಧಿನಿಧಿಗಳನ್ನು  ಅವಮಾನ ಮಾಡಿದಂತಿತ್ತು. ಮೈಸೂರಿನ ಪ್ರಥಮ ಪ್ರಜೆ ಮೇಯರ್ ಆಗಲಿ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಿಗಾಗಲಿ, ವೇದಿಕೆ ಮೇಲೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸದೇ ಮೈಸೂರಿನ ಜನರಿಗೇ ಜಿಲ್ಲಾಡಳಿತ ಅವಮಾನ ಮಾಡಿದೆ. ವೇದಿಕೆಯ ಮೇಲೆ ಮೈಸೂರಿನ ಪ್ರಥಮ ಪ್ರಜೆ ಇರಬೇಕೆಂಬ ಕನಿಷ್ಠ ಜ್ಞಾನವೂ ಜಿಲ್ಲಾಡಳಿತಕ್ಕೆ ಇರಲಿಲ್ಲವೇ, ಅಧ್ಯಕ್ಷತೆ ವಹಿಸಬೇಕಾಗಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರನ್ನು ಕೈಬಿಟ್ಟಿದ್ದೇಕೆ? ಇನ್ನು ರಾಷ್ಟ್ರಪತಿಯವರಿಗೆ, ಮೈಸೂರಿನ ಮಲ್ಲಿಗೆ ಹಾರ ಹಾಕಿ, ಮೈಸೂರು ಸಿಲ್ಕ್ ಶಾಲು ಹೊದಿಸಿ ಗೌರವಿಸಬೇಕಾಗಿತ್ತು, ಸಚಿವೆ ಶೋಭಾ ಕರಂದ್ಲಾಜೆ ಪ್ಲ್ಯಾಸ್ಟಿಕ್‌ನಿಂದ ತಯಾರಿಸಿದ ಹಾರ ಹಾಕಿದರೆ, ರಾಜ್ಯಪಾಲರು ಶಾಲನ್ನು ರಾಷ್ಟ್ರಪತಿಯವರ ಕೈಗೆ ನೀಡಿ, ಮೈಸೂರಿನ ಜನತೆಯನ್ನು ಒಂದು ರೀತಿಯಲ್ಲಿ ಅವಮಾನಿಸಿದರು. ಮುಂದಿನ ವರ್ಷಗಳಲ್ಲಿ ಇಂತಹ ಅವ್ಯವಸ್ಥೆ ಆಗದಂತೆ ಜಿಲ್ಲಾಡಳಿತ ಗಮನ ಹರಿಸಲಿ.
-ಬೂಕನಕೆರೆ ವಿಜೇಂದ್ರ, ಮೈಸೂರು.

ನಿಗದಿತ ಸ್ಥಳದಲ್ಲಿ ನಿಲ್ಲದ ಬಸ್

ಮೈಸೂರು ನಗರ ಬಸ್ ನಿಲ್ದಾಣದಿಂದ ಬೋಗಾದಿಗೆ ಸಂಚರಿಸುವ ರೂಟ್ ನಂ.೫೧ಬಿ ಕಡೇ ಸ್ಟಾಪ್‌ನಿಂದ  ಮುಂದಿನ ಸ್ಟಾಪ್ ಇರುವ ಜಾಗದಲ್ಲಿ ನಿಲುಗಡೆಗೊಳಿಸುತ್ತಿಲ್ಲ. ಯಾರಾದರೂ ಒಬ್ಬ ಪ್ರಯಾಣಿಕ ಅಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರೆ ಬಸ್ ನಿಲ್ಲಸದೇ ವೇಗವಾಗಿ ಹೋಗುತ್ತಾರೆ. ಒಂದು ವೇಳೆ ನಿಲ್ಲಿಸಿದರೆ ಆ ಪ್ರಯಾಣಿಕರನ್ನು ಚಾಲಕ ದುರುಗುಟ್ಟಿ ನೋಡುವುದು ಸರ್ವೇಸಾಮಾನ್ಯವಾಗಿದೆ. ಅಲ್ಲಿ ಬಸ್ ನಿಲ್ದಾಣ ಇರುವುದರಿಂದ ಒಬ್ಬರೋ ಅಥವಾ ಇಬ್ಬರೋ ಬಸ್ಸಿಗಾಗಿ ಕಾಯುತ್ತಿರುತ್ತಾರೆ. ದಯವಿಟ್ಟು ಇನ್ನು ಮುಂದಾದರೂ ಬಸ್ಸಿನ ಚಾಲಕರು ನಿಲುಗಡೆಯ ಸ್ಥಳದಲ್ಲಿ ಬಸ್ಸನ್ನು ನಿಲ್ಲಿಸಲಿ.
-ರಾಘವೇಂದ್ರ, ಬೋಗಾದಿ ೨ನೇ ಹಂತ, ಮೈಸೂರು.

ಧೂಳು?

ರಷ್ಯಾ-ಉಕ್ರೇನ್ ಯುದ್ಧದಲ್ಲಿ
ಉಕ್ರೇನ್ ಮೇಲುಗೈಯಂತೆ!
ಆಗಬಾರದೇಕೆ?
ಬಡವಂ ಬಲ್ಲಿದನಾಗನೇ
ಹರಹರಾ…?’
ಸಂಸ್ಕೃತದ ಒಂದು ಸುಭಾಷಿತ:
ಕೇವಲ ಧೂಳು ಎಂದು ಕಾಲಿನಿಂದೊದೆದರೆ,
ಅದು ಹಾರಿ, ತಲೆಯ ಮೇಲೆ
ಕುಳಿತುಕೊಳ್ಳುತ್ತದೆ!
– ಸಿಪಿಕೆ, ಮೈಸೂರು.
andolana

Recent Posts

ಮೈಸೂರು | ಬೆಳ್ಳಂಬೆಳಗ್ಗೆ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಹತ್ಯೆ!

ಮೈಸೂರು : ಜಿಲ್ಲೆಯ ಟಿ.ನರಸೀಪುರ ಪಟ್ಟಣದಲ್ಲಿ ಬೆಳ್ಳಂಬೆಳಿಗ್ಗೆಯೇ ಮಚ್ಚು ಲಾಂಗುಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿರುವ ಘಟನೆ…

2 hours ago

ಕೊಲ್ಕತ್ತಾದಲ್ಲಿ ಮೆಸ್ಸಿ ಮೇನಿಯಾ : ಫುಟ್‌ಬಾಲ್‌ ದಂತಕಥೆಗೆ ಭರ್ಜರಿ ಸ್ವಾಗತ

ಕೋಲ್ಕತ್ತಾ : ಇಲ್ಲಿನ ವಿಮಾನ ನಿಲ್ದಾಣದಲ್ಲಿ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಅವರನ್ನು ನೋಡಲು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.…

3 hours ago

ಟ್ರಂಪ್‌ ಸುಂಕ ಹೇರಿದ್ದ ರದ್ದಿಗೆ ಅಮೆರಿಕ ಸಂಸತ್ತು ನಿಲುವಳಿ

ನ್ಯೂಯಾರ್ಕ್‌ : ಭಾರತದ ಮೇಲೆ ಡೊನಾಲ್ಡ್‌ ಟ್ರಂಪ್‌ ಹೇರಿರುವ ಶೇ.50 ಪ್ರತಿಸುಂಕವನ್ನು ಅಂತ್ಯಗೊಳಿಸಲು ಅಮೆರಿಕದ ಮೂವರು ಸಂಸದರು ನಿಲುವಳಿ ಮಂಡಿಸಿದ್ದಾರೆ.…

4 hours ago

ಘೋರ ದುರಂತ | ಕರ್ತವ್ಯ ನಿರತ KSRTC ಮೇಲೆ ಹರಿದ ಲಾರಿ ; ಸ್ಥಳದಲ್ಲೇ ಸಾವು

ಹಾಸನ : ಕರ್ತವ್ಯದ ವೇಳೆ ಲಾರಿ ಡಿಕ್ಕಿಯಾಗಿ KSRTC ಬಸ್‌ನ ಚೆಕ್ಕಿಂಗ್ ಇನ್ಸ್ಪೆಕ್ಟರ್ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಆಲೂರು…

5 hours ago

ಹವಾಮಾನ ಏರುಪೇರಿನಿಂದಾಗಿ ಕಾಳುಮೆಣಸಿಗೂ ಕಂಟಕ

ಶೇ.30ರಷ್ಟು ಉತ್ಪಾದನೆ ಕುಸಿತ ; ಉತ್ತರ ಕೊಡಗಿನ ಭಾಗದಲ್ಲಿ ಹೆಚ್ಚಿನ ಬೆಳೆ ನಷ್ಟ ನವೀನ್‌ ಡಿಸೋಜ ಮಡಿಕೇರಿ: ಈ ಬಾರಿಯ…

6 hours ago

ಅವಳಿ ತಾಲ್ಲೂಕುಗಳಲ್ಲಿ ಭತ್ತದ ಕಟಾವು ಜೋರು

ಭೇರ್ಯ ಮಹೇಶ್‌ ಕೆ.ಆರ್.ನಗರ : ಭತ್ತದ ನಾಡು ಎಂದೇ ಪ್ರಖ್ಯಾತಿ ಹೊಂದಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಇದೀಗ ಭತ್ತದ…

7 hours ago