ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 23 ಶುಕ್ರವಾರ 2022

ಅಮಾನವೀಯತೆಗೆ ಕೊನೆಯೇ ಇಲ್ಲವೇ?

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಉಳ್ಮೆರಹಳ್ಳಿಯಲ್ಲಿ ಗ್ರಾಮ ದೇವತೆ ಮೆರವಣಿಗೆ ವೇಳೆ ದೇವರ ವಿಗ್ರಹಕ್ಕೆ ಅಡಿಪಾಯವಾಗಿರುವ ಗುಜ್ಜುಕೋಲು ಕೆಳಗೆ ಬಿದ್ದದನ್ನು ದಲಿತ ಬಾಲಕ ಎತ್ತು ಕೊಟ್ಟಿದ್ದಕ್ಕೆ ದೇವರಿಗೆ ಮೈಲಿಗೆ ಆಯಿತು ಎಂದು ಅನಾಗರಿಕ ರೀತಿಯಲ್ಲಿ ಆ ಹುಡುಗನಿಗೆ ಹಿಗ್ಗಾಮುಗ್ಗಾ ಥಳಿಸಿ, ೬೦ ಸಾವಿರ ರೂ. ದಂಡ ವಿಧಿಸಿರುವ ಘಟನೆ ನೋವು ತರಿಸುತ್ತಿದೆ. ಜಾತಿಯೇ ಶ್ರೇಷ್ಠ ಎಂಬ ಕ್ಷುಲ್ಲಕ ಮನಸ್ಸಿನ ಕಿಡಿಗೇಡಿಗಳ ನೀಚ ಕೃತ್ಯದ ಕೆಲಸದಿಂದಾಗಿ ಆಗಾಗ ಇಂತಹ ಪ್ರಕರಣಗಳು ನಡೆಯುತ್ತಲೇ ಇವೆ. ದೇಶಾದ್ಯಂತ ಒಂದಲ್ಲ ಒಂದು ಕಡೆ ಈ ರೀತಿ ದೌರ್ಜನ್ಯಗಳು ದಿನ ನಿತ್ಯ ನಡೆಯುತ್ತಿವೆ. ದಲಿತ ಜನಾಂಗಕ್ಕೆ ದೇಶದಲ್ಲಿ ವಾಸ ಸ್ಥಳವೇ ಇಲ್ಲವೇ? ಅಥವಾ ಇವರು ವಾಸಿಸಲು ಯೋಗ್ಯರಲ್ಲವೇ? ದಲಿತರ ಜಾತಿ ಪ್ರಮಾಣ ಪತ್ರಗಳಲ್ಲಿ ಆದಿ ಎಂಬ ಮೊದಲ ಪದವನ್ನಾದರೂ ಸರ್ಕಾರವು ಸೇರಿಸಿರುವ ಉದ್ದೇಶವೇನು? ಇತಿಹಾಸವನ್ನು ಅವಲೋಕಿಸಿದರೆ ದೇಶದ ಮೂಲ ನಿವಾಸಿಗಳು ಎಂದು ಇವರನ್ನೇಕೆ ಕರೆಯುತ್ತಾರೆ. ಆಡಳಿತ ನಡೆಸುವ ಯಾವುದೇ ಸರ್ಕಾರವೂ ಇಂತಹ ಪ್ರಕರಣಗಳು ನಡೆದರೆ ತಕ್ಷಣವೇ ಎಸ್ಸಿ, ಎಸ್‌ಟಿ ದೌರ್ಜನ್ಯಗಳ ತಡೆಗಟ್ಟುವಿಕೆ ಕಾನೂನಿನನ್ವಯ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಇನ್ನೂ ಸಾಕಷ್ಟು ಶತಮಾನಗಳು ಕಳೆದರೂ ಇಂತಹ ಅಮಾನವೀಯತೆಗೆ ಅಂತ್ಯವೇ ಇಲ್ಲದಂತಾಗುತ್ತದೆ.

– ಅನಿಲ್ ಕುಮಾರ್, ನಂಜನಗೂಡು.


ಪೌರಕಾರ್ಮಿಕರಿಗೂ ಅವಕಾಶ ನೀಡಬಹುದಾಗಿತ್ತು!

ವಿಶ್ವ ವಿಖ್ಯಾತ ದಸರೆಯನ್ನು ಉದ್ಘಾಟಿಸಲು ರಾಷ್ಟ್ರಪತಿಯವರೇ ಬರುತ್ತಿರುವುದು ಮೈಸೂರಿನ ಹೆಮ್ಮೆಯ ಸಂಗತಿ. ಒಂದು ರಾಷ್ಟ್ರದ ಅಧ್ಯಕ್ಷರಾಗಿ ದಲಿತ ಮಹಿಳೆ ಆಯ್ಕೆಯಾಗಿರುವುದೂ ನಮ್ಮ ಪ್ರಜಾಪ್ರಭುತ್ವದ ಭಾಗ್ಯ. ನಾಡಿನ ಉತ್ಸವವನ್ನು ಉದ್ಘಾಟಿಸುವ ಸಂದರ್ಭದಲ್ಲಿ ಪೌರಕಾರ್ಮಿಕರೊಬ್ಬರು ಅತಿಥಿಯಾಗಿ ಉತ್ಸವದಲ್ಲಿರಬಹುದಾಗಿತ್ತಲ್ಲವೇ? ಇಂತಹ ಆಲೋಚನೆ ಸರಕಾರವನ್ನು ನಡೆಸುವ ಯಾರೊಬ್ಬರಿಗೂ ಹೊಳೆಯದಿರುವುದು ಶೋಚನೀಯ ಸಂಗತಿ. ಈಗಲೂ ಕಾಲ ಮಿಂಚಿಲ್ಲ. ಉದ್ಘಾಟನೆಯ ವೇಳೆ ಆಯ್ದ ವಿಚಾರವಂತ ಕಾರ್ಮಿಕರೊಬ್ಬರನ್ನೂ ಜೊತೆಗೆ ಸೇರಿಸಿಕೊಳ್ಳುವ ದೊಡ್ಡ ಮನಸ್ಸು ಮಾಡಬೇಕು ಜಿಲ್ಲಾಡಳಿತ.

-ಕೊ.ಸು.ನರಸಿಂಹಮೂರ್ತಿ, ಹಿರಿಯ ನಾಗರಿಕ, ಚಾಮರಾಜಪುರಂ, ಮೈಸೂರು.


ಇದು ಗುಲಾಮಗಿರಿಯ ಪುಷ್ಟೀಕರಣವಲ್ಲವೇ?

ಬ್ರಿಟನ್ ರಾಣಿ ಎಲಿಜಬೆತ್‌ರವರ ಅಂತ್ಯ ಸಂಸ್ಕಾರದಲ್ಲಿ ನಮ್ಮ ದೇಶದದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮ ಭಾಗವಹಿಸಿದ್ದುದು ಸರಿಯಷ್ಟೇ. ಆದರೆ ಇದೇ ಮಹಾರಾಣಿಯವರು ಭಾರತದ ಭೇಟಿ ವೇಳೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಕುರಿತು ಕನಿಷ್ಠ ವಿಷಾದ ವ್ಯಕ್ತಪಡಿಸಲೂ ನಿರಾಕರಿಸಿದ್ದರು .ಇದೊಂದು ಭಾರತೀಯರು ಖಂಡಿಸಬೇಕಾದ ಸಂಗತಿ. ಬ್ರಿಟಿಷರ ಕಾಲದ ಗುಲಾಮಗಿರಿಯ ಸಂಕೇತ ಎಂದು ಹಲವು ಬ್ರಿಟಿಷರ ಪ್ರತಿಮೆ/ಹೆಸರುಗಳನ್ನು ಬದಲಾಯಿಸಿ ಮರು ನಾಮಕರಣ ಮಾಡಲಾಗಿದೆ. ಭಾರತ ನೂರಾರು ಸ್ಥಳೀಯ ಭಾಷೆಗಳ ಸಂಗಮವಾಗಿದ್ದರೂ ರಾಜ್ಯಗಳ ಸ್ಥಳೀಯ ಭಾಷೆಗಳಿಗೆ ಆದ್ಯತೆ ಕೊಡದೆ ಇಂಗ್ಲೀಷ್ ಒಂದು ಗುಲಾಮಿ ಭಾಷೆ ಎಂದು ಹೇಳಿ ಹಿಂದಿಯನ್ನು ದೇಶಾದ್ಯಂತ ಅದರಲ್ಲೂ ಮುಖ್ಯವಾಗಿ ದಕ್ಷಿಣದ ರಾಜ್ಯಗಳ ಮೇಲೆ ಹೇರಲು ಅವಿರತವಾಗಿ ಒತ್ತಡ ಹೇರಲಾಗುತ್ತಿದೆ. ಬ್ರಿಟಿಷರ ಹೆಸರು, ಪ್ರತಿಮೆ ಗುಲಾಮಗಿರಿ ಎಂದು ಖಂಡಿಸುವವರು ಜಲಿಯನ್ ವಾಲಾಬಾಗ್ ಹತ್ಯಾ ಕಾಂಡಕ್ಕೆ ವಿಷಾದ ವ್ಯಕ್ತ ಪಡಿಸದ ರಾಣಿಯ ಅಂತ್ಯ ಸಂಸ್ಕಾರಕ್ಕೆ ರಾಷ್ಟ್ರಪತಿಗಳನ್ನೇ ಏಕೆ ಕಳುಹಿಸಿದರು? ಇದು ಗುಲಾಮಗಿರಿಯ ಪುಷ್ಟೀಕರಣವಾಗಲಿಲ್ಲವೇ? ಕೇವಲ ಪ್ರತಿನಿಧಿಯಾಗಿ ಯಾರಾದರೂ ಮಂತ್ರಿಗಳನ್ನು ಕಳುಹಿಸಿದ್ದರೆ ಆಗುತ್ತಿತ್ತಲ್ಲವೇ? ಹಾಗಾದರೆ ನಮಗೂ ಇಂಗ್ಲೀಷ್ ಗುಲಾಮಿ ಭಾಷೆಯಾದರೂ ದೇಶದ ಆಡಳಿತ ಭಾಷೆಯಾಗಿ ಇಂಗ್ಲೀಷ್ ಅನ್ನೇ ಉಪಯೋಗಿಸಲಿ. ಅದಾಗದಿದ್ದರೆ, ರಾಜ್ಯ ಗಳು ತಮ್ಮ ಪ್ರಾದೇಶಿಕ ಭಾಷೆಗಳಲ್ಲೇ ಕೇಂದ್ರದ ಜೊತೆ ವ್ಯವಹರಿಸುವಂತಾಗಲಿ.

-ಮುಳ್ಳೂರು ಪ್ರಕಾಶ್, ಕನಕದಾಸ ನಗರ, ಮೈಸೂರು.

andolana

Recent Posts

ನಾನು ಹೈಕಮಾಂಡ್‌ ಹೇಳಿದಂತೆ ನಡೆದುಕೊಳ್ಳುತ್ತೇನೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿದ್ದರಾಮಯ್ಯ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂಬ ಮಾಜಿ ಸಂಸದ ಡಿ.ಕೆ.ಸುರೇಶ್‌ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಟಾಂಗ್‌ ಕೊಟ್ಟಿದ್ದಾರೆ. ಸಿಎಂ…

2 hours ago

ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ: ಡಿ.ಕೆ.ಸುರೇಶ್‌ ಪುನರುಚ್ಛಾರ

ಬೆಂಗಳೂರು: ನನಗೆ ಈಗಲೂ ಭರವಸೆಯಿದೆ. ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಹೇಳಿದರು. ಈ…

2 hours ago

ಸಚಿವ ಎಂ.ಬಿ.ಪಾಟೀಲ್‌ ನಡೆ ಸ್ವಾಗತಿಸಿದ ಸಚಿವ ಚಲುವರಾಯಸ್ವಾಮಿ: ಕಾರಣ ಇಷ್ಟೇ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 500 ಕೋಟಿ ವೆಚ್ಚದಲ್ಲಿ ಆಟೋ ಮೋಟಿವ್ ರಿಸರ್ಚ್ ಆಸೋಸಿಯೇಷನ್ ಆಪ್ ಇಂಡಿಯಾ ಸಂಶೋಧನಾ ಕೇಂದ್ರ…

2 hours ago

ಮಹಾಶಿವರಾತ್ರಿ ಜಾತ್ರೆಯ ಸಂಭ್ರಮ: ಮಲೆ ಮಹದೇಶ್ವರ ಬೆಟ್ಟಕ್ಕೆ ದ್ವಿಚಕ್ರ, ತ್ರಿಚಕ್ರ ವಾಹನಗಳ ಪ್ರವೇಶಕ್ಕೆ ಬ್ರೇಕ್‌

ಹನೂರು: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಮಹಾಶಿವರಾತ್ರಿ ಜಾತ್ರೆಯ ಹಿನ್ನೆಲೆಯಲ್ಲಿ ದ್ವಿಚಕ್ರ ಹಾಗೂ…

2 hours ago

ಭಕ್ತರ ಸುರಕ್ಷತೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ: ಶಾಸಕ ಮಂಜುನಾಥ್ ಸೂಚನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಫೆಬ್ರವರಿ.14ರಿಂದ ಆರಂಭಗೊಳ್ಳಲಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸಕ್ಕೆ ಲಕ್ಷಾಂತರ ಮಂದಿ ಭಕ್ತರು…

3 hours ago

ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಾಗೃತಿ ಜಾಥಾ

ಮೈಸೂರು: ಮೈಸೂರು ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಮಾದರಿ ಜಿಲ್ಲೆಯನ್ನಾಗಿಸುವ ಗುರಿಯೊಂದಿಗೆ ಇಂದು ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು…

3 hours ago