ವೈದ್ಯರಿಗೆ ಅಭಿನಂದನೆಗಳು
ಬೆಂಗಳೂರು ಟ್ರಾಫಿಕ್ನಿಂದಾಗಿ ಮೂರು ಕಿಲೋಮೀಟರ್ ದೂರ ಓಡುತ್ತಾ ಹೋಗಿ ರೋಗಿಯೊಬ್ಬರಿಗೆ ಸಕಾಲದಲ್ಲಿ ಶಸ್ತ್ರಚಿಕಿತ್ಸೆ ಮಾಡಿದ ಗ್ಯಾಸ್ಟ್ರೋಎಂಟೆರಾಲಜಿ ತಜ್ಞ ವೈದ್ಯ ಡಾ. ಗೋವಿಂದ ನಂದಕುಮಾರ್ ಅವರಿಗೆ ಸಹಸ್ರ ಪ್ರಣಾಮಗಳು. ಅವರ ಕರ್ತವ್ಯ ಕ್ಷಮತೆ ಇಂದಿನ ದಿನಗಳಲ್ಲಿ ಅಪರೂಪದ್ದೇ ಸರಿ.
ಆಸ್ಪತ್ರೆಗಳೆಂದರೆ ಹಣ ಕೀಳುವ ರಾಕ್ಷಸ ಸಂಸ್ಥೆಗಳೆಂದು ಕುಖ್ಯಾತಿ ಹೊಂದಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ, ತಪ್ಪು ತಪ್ಪು ರಿಪೋರ್ಟ್ ನೀಡಿ ರೋಗಿಯ ಕಡೆಯವರನ್ನು ಮಾನಸಿಕವಾಗಿ ಬೆದರಿಸಿ, (ನನ್ನದೇ ಉದಾಹರಣೆ ಇದೆ) ಆಸ್ಪತ್ರೆಗಳ ಬಿಲ್ ಕಟ್ಟಿಸಿಕೊಳ್ಳುವ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳಿರುವಾಗ ಡಾ.ಗೋವಿಂದ ನಂದಕುಮಾರ್ರಂತಹ ವೈದ್ಯರ ಕರ್ತವ್ಯ ಪ್ರಜ್ಞೆ ಅತ್ಯಂತ ಶ್ಲಾಘನೀಯ, ಅನುಕರಣೀಯ. ಕೇವಲ ದುಡ್ಡು ಮಾಡುವುದೊಂದೇ ತಮ್ಮ ಗುರಿ ಎಂದು ತಿಳಿದಿರುವ ವೈದ್ಯಕೀಯ ಸಂಸ್ಥೆಗಳು ಇನ್ನಾದರೂ ಸ್ವಲ್ಪ ಮಾನವೀಯತೆ ಕಲಿಯಲಿ. ಡಾ. ಗೋವಿಂದ ನಂದಕುಮಾರ ಅಂತಹವರ ಸಂತತಿ ಸಾವಿರವಾಗಲಿ. ‘ವೈದ್ಯೋ ನಾರಾಯಣೋ ಹರಿಃ’ ಎಂಬುದಕ್ಕೆ ಇವರು ಅನ್ವರ್ಥರು.
-ಶಿವಮೊಗ್ಗ ನಾ. ದಿನೇಶ್ ಅಡಿಗ, ಮೈಸೂರು.
ಸಂಪತ್ತು ಯಾರ ಪಾಲಾಯ್ತು?
ದೇಶ ಸ್ವಾತಂತ್ರ್ಯಗಳಿಸಿದ ೭೫ನೇ ವರ್ಷಗಳಲ್ಲಿ ನಾವು ಏನು ಸಾಧಿಸಿದ್ದೇವೆ ಎಂದು ಹಿಂತಿರುಗಿ ನೋಡಿದರೆ ನಿರಾಶೆಯೇ ಆಗುತ್ತದೆ. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ವಿಶ್ವದ ಪ್ರಸಿದ್ಧ ಕಂಪೆನಿಗಳ ಪಟ್ಟಿಯಲ್ಲಿ ಭಾರತದ ಕೆಲವು ಕಂಪೆನಿಗಳು ಸ್ಥಾನ ಪಡೆದಿವೆ. ನಿಜ, ಆದರೆ ಭಾರತ ಅದ್ಭುತ ಪ್ರಗತಿ ಸಾಧಿಸಿದೆ ಎನ್ನುವುದು ಮಾತ್ರ ಅರ್ಧ ಸತ್ಯ. ವಾಸ್ತವವಾಗಿ ದೇಶದ ಬಹುಭಾಗ ಹಿಂದುಳಿದ ಜನರು ಅಕ್ಷರದ ಬೆಳಕಿನಲ್ಲಿದ್ದೇ ಅಂಧರಾಗಿಯೇ ಇದ್ದಾರೆ. ಬಡತನದಲ್ಲಿಯೇ ಜೀವನ ಸಾಗಿಸುತ್ತಿದ್ದರೆ, ಒಂದು ಹೊತ್ತಿನ ಕೂಲಿಗೂ ಗತಿ ಇಲ್ಲದಂತಹ ಸ್ಥಿತಿಯಲ್ಲಿ ಕೋಟ್ಯಂತರ ಭಾರತೀಯರು ದಿನ ನೂಕುತ್ತಿದ್ದಾರೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದರೆ, ಬಡವರು ಮತ್ತಷ್ಟು ಬಡವರಾಗುತ್ತಿದ್ದರೆ, ಅಭಿವೃದ್ಧಿಯ ಹೆಸರಿನಲ್ಲಿ ಕೆಲವೇ ಕೆಲವರು ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ನಿಜವಾಗಿ ಸ್ವಾತಂತ್ರ್ಯ ಬಂದಿದ್ದು ಯಾರಿಗೆ? ಎಲ್ಲ ಜನರಿಗೋ ಅಥವಾ ಕೆಲವೇ ಕೆಲವೇ ಪ್ರತಿಷ್ಠಿತ ಪ್ರಭಾವಿಗಳಿಗೋ?
-ಕೀರ್ತಿ, ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು.
‘ಸಾಹೇಬರು’ ಪದ ತೆಗೆದು ಹಾಕಿ
ಭಾರತದ ಪ್ರಧಾನಿ ನರೇಂದ್ರ ಮೋದಿ ರಾಜಪಥದಲ್ಲಿನ ರಾಜಪದವು ಬ್ರಿಟಿಷ್ ವಸಾಹತು ಪದವಾಗಿರುವ ಕಾರಣ ಕೊಟ್ಟು ಅದನ್ನು ತೆಗೆದು ರಸ್ತೆಯ ಹೆಸರನ್ನು ‘ಕರ್ತವ್ಯಪಥ’ ಎಂದು ವಿಧ್ಯುಕ್ತವಾಗಿ ಬದಲಾಯಿಸಿದ್ದಾರೆ. ಅವರ ವಸಾಹತು ವಿರೋಧಿ ದೃಷ್ಟಿಯು ಮೆಚ್ಚುವಂಥದ್ದು. ಭಾರತಾಂದ್ಯತ ಕಚೇರಿಗಳಲ್ಲಿ, ಅಧಿಕಾರ ಕೇಂದ್ರಗಳಲ್ಲಿ ಮೇಲಧಿಕಾರಿಗಳು ಮತ್ತು ಜನ ಪ್ರತಿನಿಧಿಗಳನ್ನು ಅವರ ನೌಕರರು ಮತ್ತು ಹಿಂಬಾಲಕರು ಸಂಬೋಧಿಸುವಾಗ ಮತ್ತು ಇತರರೊಂದಿಗೆ ಪ್ರಸ್ತಾಪಿಸುವಾಗ ‘ಸಾಹೇಬರು’ ಎಂದು ಹೇಳುವುದು ರೂಢಿಯಲ್ಲಿದೆ. ಪ್ರಧಾನಿಗಳು ಈ ಪದದ ಬಳಕೆಯನ್ನು ಕೂಡಲೇ ನಿಷೇಧಿಸಬೇಕೆಂದು ಕೋರುತ್ತೇನೆ. ‘ಸಾಹೇಬರು’ ಎಂಬ ಪದ ಬ್ರಿಟಿಷ್ ವಸಾಹತುಶಾಹಿ ಮಾತ್ರವಲ್ಲ ಮೊಗಲರ ಆಳ್ವಿಕೆಯ ಪದ. ಹಾಗೆಯೇ ರಾಜಭವನ, ರಾಜಕಾಲುವೆ, ಮುಂತಾದ ನೂರಾರು ಪದಗಳನ್ನು ತೆಗೆದು ಬದಲಿ ಪದಗಳನ್ನು ಜಾರಿಗೆ ತರುವ ಕೆಲಸವನ್ನೂ ಪ್ರಧಾನಿಗಳು ಅವರಿಗೆ ಬಿಡುವಾದಾಗ ಮಾಡಬಹುದು.
-ವಿ. ಎನ್. ಲಕ್ಷ್ಮೀನಾರಾಯಣ, ಮೈಸೂರು.
ಮೈಸೂರಿನ ಕುವೆಂಪು ನಗರದ ಅಪೋಲೋ ಆಸ್ಪತ್ರೆಯ ಹಿಂಭಾಗ ದಲ್ಲಿರುವ ಬಿಜಿಎಸ್ ಪದವಿಪೂರ್ವ ಕಾಲೇಜಿನ ಎದುರಿನ ದೊಡ್ಡಮೋರಿ ಯಿಂದ ತೆಗೆದ ಕಸವನ್ನು…
ಕಳೆದ ಮೂರು ವರ್ಷಗಳ ಅವಧಿಯಲ್ಲಿ, ರಾಜ್ಯದಲ್ಲಿ ೨,೮೪೭ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್ಸಿಆರ್ಬಿ)…
ಭಾರತದ ಶಿಕ್ಷಣ ನೀತಿ ಮಕ್ಕಳ ಆರೋಗ್ಯದ ಕುರಿತು ಸ್ಪಷ್ಟ ಮಾರ್ಗಸೂಚಿ ನೀಡಿದ್ದರೂ, ಬಹುತೇಕ ಶಾಲೆಗಳು ಇದನ್ನು ಪಾಲಿಸುತ್ತಿಲ್ಲ ಎಂಬುದು ವಿಷಾದಕರ…
ಕೇಂದ್ರ ಸರ್ಕಾರದಲ್ಲಿ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು ಡಿಸೆಂಬರ್ ೧೬ರಂದು…
ಪರಿಸರಕ್ಕೆ ಪೂರಕವಾದ ವಸ್ತುಗಳನ್ನು ನೀಡಲು ಸಲಹೆ; ಸ್ಮರಣಿಕೆ, ಟ್ರೋಫಿ ಬದಲು ಸಸಿ, ಪುಸ್ತಕ ವಿತರಿಸಲು ಸುತ್ತೋಲೆ ಮೈಸೂರು: ರಾಜ್ಯ ಸರ್ಕಾರ…
ಪುನೀತ್ ಕೊಡವ ಹಾಕಿ ಅಕಾಡೆಮಿ ಆಶ್ರಯದಲ್ಲಿ ಆಯೋಜನೆ; ವಿಜೇತ ತಂಡಕ್ಕೆ ೨ ಲಕ್ಷ ರೂ. ಬಹುಮಾನ ಮಡಿಕೇರಿ: ಕೊಡವ ಹಾಕಿ…