ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 14 ಬುಧವಾರ 2022

ವೈದ್ಯರಿಗೆ ಅಭಿನಂದನೆಗಳು

ಬೆಂಗಳೂರು ಟ್ರಾಫಿಕ್ನಿಂದಾಗಿ ಮೂರು ಕಿಲೋಮೀಟರ್ ದೂರ ಓಡುತ್ತಾ ಹೋಗಿ ರೋಗಿಯೊಬ್ಬರಿಗೆ ಸಕಾಲದಲ್ಲಿ ಶಸ್ತ್ರಚಿಕಿತ್ಸೆ ಮಾಡಿದ ಗ್ಯಾಸ್ಟ್ರೋಎಂಟೆರಾಲಜಿ ತಜ್ಞ ವೈದ್ಯ ಡಾ. ಗೋವಿಂದ ನಂದಕುಮಾರ್ ಅವರಿಗೆ ಸಹಸ್ರ ಪ್ರಣಾಮಗಳು. ಅವರ ಕರ್ತವ್ಯ ಕ್ಷಮತೆ ಇಂದಿನ ದಿನಗಳಲ್ಲಿ ಅಪರೂಪದ್ದೇ ಸರಿ.

ಆಸ್ಪತ್ರೆಗಳೆಂದರೆ ಹಣ ಕೀಳುವ ರಾಕ್ಷಸ ಸಂಸ್ಥೆಗಳೆಂದು ಕುಖ್ಯಾತಿ ಹೊಂದಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ, ತಪ್ಪು ತಪ್ಪು ರಿಪೋರ್ಟ್ ನೀಡಿ ರೋಗಿಯ ಕಡೆಯವರನ್ನು ಮಾನಸಿಕವಾಗಿ ಬೆದರಿಸಿ, (ನನ್ನದೇ ಉದಾಹರಣೆ ಇದೆ) ಆಸ್ಪತ್ರೆಗಳ ಬಿಲ್ ಕಟ್ಟಿಸಿಕೊಳ್ಳುವ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳಿರುವಾಗ ಡಾ.ಗೋವಿಂದ ನಂದಕುಮಾರ್‌ರಂತಹ ವೈದ್ಯರ ಕರ್ತವ್ಯ ಪ್ರಜ್ಞೆ ಅತ್ಯಂತ ಶ್ಲಾಘನೀಯ, ಅನುಕರಣೀಯ. ಕೇವಲ ದುಡ್ಡು ಮಾಡುವುದೊಂದೇ ತಮ್ಮ ಗುರಿ ಎಂದು ತಿಳಿದಿರುವ ವೈದ್ಯಕೀಯ ಸಂಸ್ಥೆಗಳು ಇನ್ನಾದರೂ ಸ್ವಲ್ಪ ಮಾನವೀಯತೆ ಕಲಿಯಲಿ. ಡಾ. ಗೋವಿಂದ ನಂದಕುಮಾರ ಅಂತಹವರ ಸಂತತಿ ಸಾವಿರವಾಗಲಿ. ‘ವೈದ್ಯೋ ನಾರಾಯಣೋ ಹರಿಃ’ ಎಂಬುದಕ್ಕೆ ಇವರು ಅನ್ವರ್ಥರು.

-ಶಿವಮೊಗ್ಗ ನಾ. ದಿನೇಶ್ ಅಡಿಗ, ಮೈಸೂರು.


ಸಂಪತ್ತು ಯಾರ ಪಾಲಾಯ್ತು?

ದೇಶ ಸ್ವಾತಂತ್ರ್ಯಗಳಿಸಿದ ೭೫ನೇ ವರ್ಷಗಳಲ್ಲಿ ನಾವು ಏನು ಸಾಧಿಸಿದ್ದೇವೆ ಎಂದು ಹಿಂತಿರುಗಿ ನೋಡಿದರೆ ನಿರಾಶೆಯೇ ಆಗುತ್ತದೆ. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ವಿಶ್ವದ ಪ್ರಸಿದ್ಧ ಕಂಪೆನಿಗಳ ಪಟ್ಟಿಯಲ್ಲಿ ಭಾರತದ ಕೆಲವು ಕಂಪೆನಿಗಳು ಸ್ಥಾನ ಪಡೆದಿವೆ. ನಿಜ, ಆದರೆ ಭಾರತ ಅದ್ಭುತ ಪ್ರಗತಿ ಸಾಧಿಸಿದೆ ಎನ್ನುವುದು ಮಾತ್ರ ಅರ್ಧ ಸತ್ಯ. ವಾಸ್ತವವಾಗಿ ದೇಶದ ಬಹುಭಾಗ ಹಿಂದುಳಿದ ಜನರು ಅಕ್ಷರದ ಬೆಳಕಿನಲ್ಲಿದ್ದೇ ಅಂಧರಾಗಿಯೇ ಇದ್ದಾರೆ. ಬಡತನದಲ್ಲಿಯೇ ಜೀವನ ಸಾಗಿಸುತ್ತಿದ್ದರೆ, ಒಂದು ಹೊತ್ತಿನ ಕೂಲಿಗೂ ಗತಿ ಇಲ್ಲದಂತಹ ಸ್ಥಿತಿಯಲ್ಲಿ ಕೋಟ್ಯಂತರ ಭಾರತೀಯರು ದಿನ ನೂಕುತ್ತಿದ್ದಾರೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದರೆ, ಬಡವರು ಮತ್ತಷ್ಟು ಬಡವರಾಗುತ್ತಿದ್ದರೆ, ಅಭಿವೃದ್ಧಿಯ ಹೆಸರಿನಲ್ಲಿ ಕೆಲವೇ ಕೆಲವರು ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ನಿಜವಾಗಿ ಸ್ವಾತಂತ್ರ್ಯ ಬಂದಿದ್ದು ಯಾರಿಗೆ? ಎಲ್ಲ ಜನರಿಗೋ ಅಥವಾ ಕೆಲವೇ ಕೆಲವೇ ಪ್ರತಿಷ್ಠಿತ ಪ್ರಭಾವಿಗಳಿಗೋ?

-ಕೀರ್ತಿ, ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು.


‘ಸಾಹೇಬರು’ ಪದ ತೆಗೆದು ಹಾಕಿ

ಭಾರತದ ಪ್ರಧಾನಿ ನರೇಂದ್ರ ಮೋದಿ ರಾಜಪಥದಲ್ಲಿನ ರಾಜಪದವು ಬ್ರಿಟಿಷ್ ವಸಾಹತು ಪದವಾಗಿರುವ ಕಾರಣ ಕೊಟ್ಟು ಅದನ್ನು ತೆಗೆದು ರಸ್ತೆಯ ಹೆಸರನ್ನು ‘ಕರ್ತವ್ಯಪಥ’ ಎಂದು ವಿಧ್ಯುಕ್ತವಾಗಿ ಬದಲಾಯಿಸಿದ್ದಾರೆ. ಅವರ ವಸಾಹತು ವಿರೋಧಿ ದೃಷ್ಟಿಯು ಮೆಚ್ಚುವಂಥದ್ದು. ಭಾರತಾಂದ್ಯತ ಕಚೇರಿಗಳಲ್ಲಿ, ಅಧಿಕಾರ ಕೇಂದ್ರಗಳಲ್ಲಿ ಮೇಲಧಿಕಾರಿಗಳು ಮತ್ತು ಜನ ಪ್ರತಿನಿಧಿಗಳನ್ನು ಅವರ ನೌಕರರು ಮತ್ತು ಹಿಂಬಾಲಕರು ಸಂಬೋಧಿಸುವಾಗ ಮತ್ತು ಇತರರೊಂದಿಗೆ ಪ್ರಸ್ತಾಪಿಸುವಾಗ ‘ಸಾಹೇಬರು’ ಎಂದು ಹೇಳುವುದು ರೂಢಿಯಲ್ಲಿದೆ. ಪ್ರಧಾನಿಗಳು ಈ ಪದದ ಬಳಕೆಯನ್ನು ಕೂಡಲೇ ನಿಷೇಧಿಸಬೇಕೆಂದು ಕೋರುತ್ತೇನೆ. ‘ಸಾಹೇಬರು’ ಎಂಬ ಪದ ಬ್ರಿಟಿಷ್ ವಸಾಹತುಶಾಹಿ ಮಾತ್ರವಲ್ಲ ಮೊಗಲರ ಆಳ್ವಿಕೆಯ ಪದ. ಹಾಗೆಯೇ ರಾಜಭವನ, ರಾಜಕಾಲುವೆ, ಮುಂತಾದ ನೂರಾರು ಪದಗಳನ್ನು ತೆಗೆದು ಬದಲಿ ಪದಗಳನ್ನು ಜಾರಿಗೆ ತರುವ ಕೆಲಸವನ್ನೂ ಪ್ರಧಾನಿಗಳು ಅವರಿಗೆ ಬಿಡುವಾದಾಗ ಮಾಡಬಹುದು.

-ವಿ. ಎನ್. ಲಕ್ಷ್ಮೀನಾರಾಯಣ, ಮೈಸೂರು.

andolana

Recent Posts

ಸದನದ ಘನತೆಗೆ ಧಕ್ಕೆ ಆರೋಪ : ಶಾಸಕ ಶಿವಲಿಂಗೇಗೌಡ ವಜಾಕ್ಕೆ ಆಗ್ರಹ

ಹಾಸನ : ವಿಧಾನಸಭಾ ಸದನದಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ಬಳಸಿದ ಅವಹೇಳನಕಾರಿ ಹಾಗೂ ಅಶ್ಲೀಲ ಪದಗಳು ರಾಜ್ಯ ವಿಧಾನಸಭೆಯ…

55 mins ago

ಹುಲಿ ಸಂರಕ್ಷಣೆಗೆ ಅಂತಾರಾಷ್ಟ್ರೀಯ ಶೃಂಗಸಭೆ : ಬಂಡೀಪುರ, ನಾಗರಹೊಳೆಯಲ್ಲಿ ಆಯೋಜನೆ

ಮೈಸೂರು : ಭಾರತದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ಶೃಂಗಸಭೆಯನ್ನು ಕರ್ನಾಟಕದ ಬಂಡೀಪುರ, ನಾಗರಹೊಳೆಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.…

2 hours ago

ಟಿ20 ವಿಶ್ವಕಪ್ | ಭಾರತ ಪಂದ್ಯ ಬಹಿಷ್ಕಾರ ನಿರ್ಧಾರ ಅಚಲ ; ಪಾಕ್‌ ಪುನರುಚ್ಚಾನ

ಇಸ್ಲಾಮಾಬಾದ್ : ಭಾರತದ ವಿರುದ್ಧದ ಟಿ-20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರವನ್ನು ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಪುನರುಚ್ಚರಿಸಿದ್ದಾರೆ. ಇಸ್ಲಾಮಾಬಾದ್‌ನಲ್ಲಿ…

2 hours ago

ಯುಪಿಎಸ್‌ಸಿ ಪರೀಕ್ಷೆಗೆ ಅಧಿಸೂಚನೆ : ಈಗಾಗಲೇ ಪಾಸಾಗಿ ನೇಮಕಗೊಂಡವರಿಗಿಲ್ಲ ಮರು ಪರೀಕ್ಷೆ ಅವಕಾಶ

ಬೆಂಗಳೂರು : ದೇಶದ ಅತ್ಯುನ್ನತ ಹುದ್ದೆಗಳಿಗೆ ನಡೆಯುವ ನಾಗರಿಕ ಸೇವಾ ಪರೀಕ್ಷೆಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಅಧಿಸೂಚನೆ ಪ್ರಕಟಿಸಿದೆ.…

2 hours ago

ಹಸುಗಳಿಗೆ ಮಾರಕ ರೋಗ : ರೈತರಲ್ಲಿ ತೀವ್ರ ಆತಂಕ

ನಾಪೋಕ್ಲು : ನಾಪೋಕ್ಲು ಭಾಗದ ಪಾಲೂರು ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಆರೋಗ್ಯವಂತ ಹಸುಗಳ ಕಾಲುಗಳು ಕ್ರಮೇಣ ಕೃಶಗೊಂಡು ದುರ್ಬಲಗೊಳ್ಳುತ್ತಿದ್ದು,…

3 hours ago

ನಾಳೆ,ನಾಡಿದ್ದು ಮೈಸೂರಿನ ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

ಮೈಸೂರು : ವಿ.ವಿ ಮೊಹಲ್ಲಾ ಉಪವಿಭಾಗ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಅಳವಡಿಸುವ ಕೆಲಸದ ನಿಮಿತ್ತ ಫೆ.6 ಮತ್ತು 7 ರಂದು…

4 hours ago