ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 14 ಬುಧವಾರ 2022

ವೈದ್ಯರಿಗೆ ಅಭಿನಂದನೆಗಳು

ಬೆಂಗಳೂರು ಟ್ರಾಫಿಕ್ನಿಂದಾಗಿ ಮೂರು ಕಿಲೋಮೀಟರ್ ದೂರ ಓಡುತ್ತಾ ಹೋಗಿ ರೋಗಿಯೊಬ್ಬರಿಗೆ ಸಕಾಲದಲ್ಲಿ ಶಸ್ತ್ರಚಿಕಿತ್ಸೆ ಮಾಡಿದ ಗ್ಯಾಸ್ಟ್ರೋಎಂಟೆರಾಲಜಿ ತಜ್ಞ ವೈದ್ಯ ಡಾ. ಗೋವಿಂದ ನಂದಕುಮಾರ್ ಅವರಿಗೆ ಸಹಸ್ರ ಪ್ರಣಾಮಗಳು. ಅವರ ಕರ್ತವ್ಯ ಕ್ಷಮತೆ ಇಂದಿನ ದಿನಗಳಲ್ಲಿ ಅಪರೂಪದ್ದೇ ಸರಿ.

ಆಸ್ಪತ್ರೆಗಳೆಂದರೆ ಹಣ ಕೀಳುವ ರಾಕ್ಷಸ ಸಂಸ್ಥೆಗಳೆಂದು ಕುಖ್ಯಾತಿ ಹೊಂದಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ, ತಪ್ಪು ತಪ್ಪು ರಿಪೋರ್ಟ್ ನೀಡಿ ರೋಗಿಯ ಕಡೆಯವರನ್ನು ಮಾನಸಿಕವಾಗಿ ಬೆದರಿಸಿ, (ನನ್ನದೇ ಉದಾಹರಣೆ ಇದೆ) ಆಸ್ಪತ್ರೆಗಳ ಬಿಲ್ ಕಟ್ಟಿಸಿಕೊಳ್ಳುವ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳಿರುವಾಗ ಡಾ.ಗೋವಿಂದ ನಂದಕುಮಾರ್‌ರಂತಹ ವೈದ್ಯರ ಕರ್ತವ್ಯ ಪ್ರಜ್ಞೆ ಅತ್ಯಂತ ಶ್ಲಾಘನೀಯ, ಅನುಕರಣೀಯ. ಕೇವಲ ದುಡ್ಡು ಮಾಡುವುದೊಂದೇ ತಮ್ಮ ಗುರಿ ಎಂದು ತಿಳಿದಿರುವ ವೈದ್ಯಕೀಯ ಸಂಸ್ಥೆಗಳು ಇನ್ನಾದರೂ ಸ್ವಲ್ಪ ಮಾನವೀಯತೆ ಕಲಿಯಲಿ. ಡಾ. ಗೋವಿಂದ ನಂದಕುಮಾರ ಅಂತಹವರ ಸಂತತಿ ಸಾವಿರವಾಗಲಿ. ‘ವೈದ್ಯೋ ನಾರಾಯಣೋ ಹರಿಃ’ ಎಂಬುದಕ್ಕೆ ಇವರು ಅನ್ವರ್ಥರು.

-ಶಿವಮೊಗ್ಗ ನಾ. ದಿನೇಶ್ ಅಡಿಗ, ಮೈಸೂರು.


ಸಂಪತ್ತು ಯಾರ ಪಾಲಾಯ್ತು?

ದೇಶ ಸ್ವಾತಂತ್ರ್ಯಗಳಿಸಿದ ೭೫ನೇ ವರ್ಷಗಳಲ್ಲಿ ನಾವು ಏನು ಸಾಧಿಸಿದ್ದೇವೆ ಎಂದು ಹಿಂತಿರುಗಿ ನೋಡಿದರೆ ನಿರಾಶೆಯೇ ಆಗುತ್ತದೆ. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ವಿಶ್ವದ ಪ್ರಸಿದ್ಧ ಕಂಪೆನಿಗಳ ಪಟ್ಟಿಯಲ್ಲಿ ಭಾರತದ ಕೆಲವು ಕಂಪೆನಿಗಳು ಸ್ಥಾನ ಪಡೆದಿವೆ. ನಿಜ, ಆದರೆ ಭಾರತ ಅದ್ಭುತ ಪ್ರಗತಿ ಸಾಧಿಸಿದೆ ಎನ್ನುವುದು ಮಾತ್ರ ಅರ್ಧ ಸತ್ಯ. ವಾಸ್ತವವಾಗಿ ದೇಶದ ಬಹುಭಾಗ ಹಿಂದುಳಿದ ಜನರು ಅಕ್ಷರದ ಬೆಳಕಿನಲ್ಲಿದ್ದೇ ಅಂಧರಾಗಿಯೇ ಇದ್ದಾರೆ. ಬಡತನದಲ್ಲಿಯೇ ಜೀವನ ಸಾಗಿಸುತ್ತಿದ್ದರೆ, ಒಂದು ಹೊತ್ತಿನ ಕೂಲಿಗೂ ಗತಿ ಇಲ್ಲದಂತಹ ಸ್ಥಿತಿಯಲ್ಲಿ ಕೋಟ್ಯಂತರ ಭಾರತೀಯರು ದಿನ ನೂಕುತ್ತಿದ್ದಾರೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದರೆ, ಬಡವರು ಮತ್ತಷ್ಟು ಬಡವರಾಗುತ್ತಿದ್ದರೆ, ಅಭಿವೃದ್ಧಿಯ ಹೆಸರಿನಲ್ಲಿ ಕೆಲವೇ ಕೆಲವರು ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ನಿಜವಾಗಿ ಸ್ವಾತಂತ್ರ್ಯ ಬಂದಿದ್ದು ಯಾರಿಗೆ? ಎಲ್ಲ ಜನರಿಗೋ ಅಥವಾ ಕೆಲವೇ ಕೆಲವೇ ಪ್ರತಿಷ್ಠಿತ ಪ್ರಭಾವಿಗಳಿಗೋ?

-ಕೀರ್ತಿ, ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು.


‘ಸಾಹೇಬರು’ ಪದ ತೆಗೆದು ಹಾಕಿ

ಭಾರತದ ಪ್ರಧಾನಿ ನರೇಂದ್ರ ಮೋದಿ ರಾಜಪಥದಲ್ಲಿನ ರಾಜಪದವು ಬ್ರಿಟಿಷ್ ವಸಾಹತು ಪದವಾಗಿರುವ ಕಾರಣ ಕೊಟ್ಟು ಅದನ್ನು ತೆಗೆದು ರಸ್ತೆಯ ಹೆಸರನ್ನು ‘ಕರ್ತವ್ಯಪಥ’ ಎಂದು ವಿಧ್ಯುಕ್ತವಾಗಿ ಬದಲಾಯಿಸಿದ್ದಾರೆ. ಅವರ ವಸಾಹತು ವಿರೋಧಿ ದೃಷ್ಟಿಯು ಮೆಚ್ಚುವಂಥದ್ದು. ಭಾರತಾಂದ್ಯತ ಕಚೇರಿಗಳಲ್ಲಿ, ಅಧಿಕಾರ ಕೇಂದ್ರಗಳಲ್ಲಿ ಮೇಲಧಿಕಾರಿಗಳು ಮತ್ತು ಜನ ಪ್ರತಿನಿಧಿಗಳನ್ನು ಅವರ ನೌಕರರು ಮತ್ತು ಹಿಂಬಾಲಕರು ಸಂಬೋಧಿಸುವಾಗ ಮತ್ತು ಇತರರೊಂದಿಗೆ ಪ್ರಸ್ತಾಪಿಸುವಾಗ ‘ಸಾಹೇಬರು’ ಎಂದು ಹೇಳುವುದು ರೂಢಿಯಲ್ಲಿದೆ. ಪ್ರಧಾನಿಗಳು ಈ ಪದದ ಬಳಕೆಯನ್ನು ಕೂಡಲೇ ನಿಷೇಧಿಸಬೇಕೆಂದು ಕೋರುತ್ತೇನೆ. ‘ಸಾಹೇಬರು’ ಎಂಬ ಪದ ಬ್ರಿಟಿಷ್ ವಸಾಹತುಶಾಹಿ ಮಾತ್ರವಲ್ಲ ಮೊಗಲರ ಆಳ್ವಿಕೆಯ ಪದ. ಹಾಗೆಯೇ ರಾಜಭವನ, ರಾಜಕಾಲುವೆ, ಮುಂತಾದ ನೂರಾರು ಪದಗಳನ್ನು ತೆಗೆದು ಬದಲಿ ಪದಗಳನ್ನು ಜಾರಿಗೆ ತರುವ ಕೆಲಸವನ್ನೂ ಪ್ರಧಾನಿಗಳು ಅವರಿಗೆ ಬಿಡುವಾದಾಗ ಮಾಡಬಹುದು.

-ವಿ. ಎನ್. ಲಕ್ಷ್ಮೀನಾರಾಯಣ, ಮೈಸೂರು.

andolana

Recent Posts

ಎಚ್‌.ಡಿ.ಕೋಟೆ: ಗುಜರಿ ಗೋಡೌನ್‌ಗೆ ಬೆಂಕಿ: ಲಕ್ಷಾಂತರ ರೂ ಬೆಲೆಬಾಳುವ ಸಾಮಗ್ರಿ ನಾಶ

ಎಚ್.ಡಿ.ಕೋಟೆ: ತಾಲೂಕಿನ ಹ್ಯಾಂಡ್‌ಪೋಸ್ಟ್ ಜಕ್ಕಳ್ಳಿ ಸಮೀಪವಿರುವ ಜಫ್ರುಲ್ಲಾ ಎಂಬುವರಿಗೆ ಸೇರಿದ ಗುಜರಿ ಗೋಡೌನ್‌ಗೆ ಬೆಂಕಿ ತಗುಲಿ, ಲಕ್ಷಾಂತರ ರೂಪಾಯಿ ವೆಚ್ಚದ…

37 mins ago

ವಂದೇ ಭಾರತ್‌ ರೈಲಿನಲ್ಲಿ ಕೊಟ್ಟ ಮೊಸರಿನಲ್ಲಿ ಹುಳು ಪತ್ತೆ: IRCTCಗೆ 10 ಲಕ್ಷ ರೂ ದಂಡ

ಪಾಟ್ನಾ: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಕರಿಗೆ ನೀಡಿದ ಮೊಸರಿನಲ್ಲಿ ಹುಳುಗಳು ಪತ್ತೆಯಾದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಐಆರ್‌ಸಿಟಿಸಿಗೆ 10…

47 mins ago

ಹನೂರು: ಬಿಆರ್‌ಟಿ ವನ್ಯಜೀವಿ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು: 80 ಎಕರೆಗೂ ಹೆಚ್ಚು ಅರಣ್ಯ ನಾಶ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಬೈಲೂರು ವಲಯ ವ್ಯಾಪ್ತಿಯ…

57 mins ago

ಪಾಲಿಕೆ ಬಜೆಟ್‌ ಸತ್ವ ಇಲ್ಲದ ಬಜೆಟ್‌: ಮಾಜಿ ಮೇಯರ್‌ ಶಿವಕುಮಾರ್‌ ಆಕ್ರೋಶ

ಮೈಸೂರು: ಜನಸ್ನೇಹಿ ಪಾದಾಚಾರಿ ಮಾರ್ಗಗಳ ಅಭಿವೃದ್ಧಿಗೆ 10 ಕೋಟಿ ರೂ ಮೀಸಲಿಟ್ಟಿರುವ ಪಾಲಿಕೆಯು ಪಾರಂಪರಿಕ ಕಟ್ಟಡಗಳ ಅಭಿವೃದ್ಧಿಗೆ ನಯಾಪೈಸೆ ಅನುದಾನ…

1 hour ago

ಗುಂಡ್ಲುಪೇಟೆ| ಮದ್ದೂರು ವಲಯದಲ್ಲಿ ಮತ್ತೆರಡು ಹುಲಿ ಪ್ರತ್ಯಕ್ಷ

ಗುಂಡ್ಲುಪೇಟೆ: ತಾಲ್ಲೂಕಿನ ಮದ್ದೂರು ವಲಯದಲ್ಲಿ ಮತ್ತೆರಡು ಹುಲಿಗಳು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಹುಲಿಗಳ ಚಲನವಲನದ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ…

2 hours ago

ಬಜೆಟ್‌ ಮೂಲಕ ಜನರನ್ನು ಸಾಲದ ಕೂಪಕ್ಕೆ ತಳ್ಳಿದ ಸರ್ಕಾರ: ಆರ್‌.ಅಶೋಕ್‌ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಬಜೆಟ್‌ ಮೂಲಕ ಜನರನ್ನು ಸಾಲದ ಕೂಪಕ್ಕೆ ತಳ್ಳಿರುವುದನ್ನು ಅಧಿವೇಶನದಲ್ಲಿ ಮನವರಿಕೆ ಮಾಡಿಕೊಟ್ಟಿದ್ದೇವೆ. ಹಾಗೆಯೇ ಅನೇಕ ಸಮಸ್ಯೆಗಳನ್ನು…

2 hours ago