ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 24 ಬುಧವಾರ 2022

ಸಚಿವರು ಕೊಟ್ಟ ಮಾತು ಉಳಿಸಿಕೊಳ್ಳಿ


ಪೌರಕಾರ್ಮಿಕರ ಸೇವೆಯನ್ನು ಎರಡು ತಿಂಗಳಲ್ಲಿ ಖಾಯಂಗೊಳಿಸುವುದಾಗಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿರುವುದು ಸ್ವಾಗತಾರ್ಹ. ಪೌರಕಾರ್ಮಿಕರ ಸೇವೆ ಖಾಯಂಗೊಳಿಸ–ಬೇಕೆಂಬ ಬೇಡಿಕೆಗೆ ದಶಕಗಳ ಇತಿಹಾಸ ಇದೆ. ಎಲ್ಲ ರಾಜಕೀಯ ಪಕ್ಷಗಳೂ ಬರೀ ಭರವಸೆ ನೀಡುತ್ತಾ ಬಂದಿವೆ. ರಾಜ್ಯದಲ್ಲಿ ಎಂಟ್ಹತ್ತು ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಸಚಿವರು ಚುನಾವಣಾ ಲಾಭಕ್ಕಾಗಿ ಈ ಭರವಸೆ ನೀಡಿಲ್ಲ ಎಂದು ನಂಬೋಣ. ಒಂದು ವೇಳೆ  ಎರಡು ತಿಂಗಳೊಳಗೆ ಈ ಭರವಸೆ ಈಡೇರಿಸದೇ ಇದ್ದಲ್ಲಿ, ಪೌರಕಾರ್ಮಿಕರು ರಾಜ್ಯ ಸರ್ಕಾರದ ಎಲ್ಲಾ ಸಚಿವರು, ಮತ್ತು ಕಾರ್ಯದರ್ಶಿಗಳ ಮಟ್ಟದಲ್ಲಿರುವ ಹಿರಿಯ ಐಎಎಸ್ ಅಧಿಕಾರಿಗಳ ಮನೆಯ ಸುತ್ತಮುತ್ತ ಕಸ ತೆಗೆಯದೇ ಪ್ರತಿಭಟನೆ ಮಾಡಬೇಕು. ಆಗಲಾದರೂ ಕೊಟ್ಟ ಭರವಸೆ ಈಡೇರುತ್ತದೆ.
-ಚಂದ್ರೇಗೌಡ, ಕನ್ನೇಗೌಡನ ಕೊಪ್ಪಲು, ಮೈಸೂರು.


ಆಹಾರ ಸಂಸ್ಕೃತಿ ಅವಹೇಳನ ಸಲ್ಲದು


ಪ್ರಕೃತಿಯಲ್ಲಿರುವ ಪ್ರತಿಯೊಂದು ಮೂಕ  ಪ್ರಾಣಿಗಳು ಮತ್ತು ಸಸ್ಯಗಳಿಗೂ ಮನುಷ್ಯನಂತೆಯೇ ಬದುಕುವ ಹಕ್ಕಿದ್ದರೂ ತನ್ನ ಸ್ವಾರ್ಥಕ್ಕಾಗಿ ಎಲ್ಲವನ್ನೂ ತಿಂದು ತೇಗುವ ಮನುಷ್ಯ ಸಸ್ಯಾಹಾರ- ಮಾಂಸಾಹಾರದ ಹೆಸರಲ್ಲಿ ಮೇಲು ಕೀಳೆಂಬ ಭೇದಭಾವ, ತಾರತಮ್ಯ ಮಾಡುವುದು ಸರಿಯೇ? ರಾಜಕೀಯ ಪಕ್ಷದ ನಾಯಕರೊಬ್ಬರು ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶಿಸಿರುವುದು ಮಹಾಪಾಪವೆಂಬಂತೆ ವಾದ ಮಾಡುವವರಿಗೆ ಇದು ತಿಳಿದಿಲ್ಲವೇ? ಮನುಷ್ಯ ದೇಹವೇ ಮೂಳೆ, ಮಾಂಸ, ರಕ್ತದ ರಚನೆಯೆಂಬುದು? ಮಾಂಸ ತಿಂದವರು ದೇವಸ್ಥಾನಕ್ಕೆ ಪ್ರವೇಶಿಸಬಾರದೆನ್ನುವವರಿಗೆ ತಿಳಿದಿಲ್ಲವೇ? ದೇವಸ್ಥಾನಗಳನ್ನು ನಿರ್ಮಿಸಲು ಕಲ್ಲು, ಮಣ್ಣನ್ನು ತಲೆ ಮೇಲೆ ಹೊತ್ತವರು ಮಾಂಸಾಹಾರಿಗಳೆಂಬುದು ಗೊತ್ತಿಲ್ಲವೆ? ದೇವರು ಧರ್ಮದ ಹೆಸರಿನಲ್ಲಿ ಪ್ರಪಂಚದ ಬಹುತೇಕ ಜನರ ಆಹಾರವಾಗಿರುವ ಮಾಂಸಾಹಾರದ ಹೆಸರಲ್ಲಿ ನಿಂದನೆ ಮಾಡುವುದು ದೇವರಿಗೇ ಮಾಡುವ ಅಪಮಾನವಲ್ಲದೆ ಮತ್ತೇನೂ ಅಲ್ಲ. ಸ್ವಾಮಿ ವಿವೇಕಾನಂದರೇ ಹೇಳಿರುವ ಹಾಗೆ ಭಾರತದಲ್ಲಿ ಮಾಂಸಾಹಾರದ ಸೇವನೆ ಮಾಡದವರೇ ಇರಲಿಲ್ಲ, ಯಜ್ಞ ಯಾಗಾದಿಗಳಲ್ಲಿ ಹವಿಸ್ಸೆಂಬ ಹೆಸರಲ್ಲಿ ಪ್ರಾಣಿಗಳ ರಕ್ತ, ಮಾಂಸವನ್ನು ಅರ್ಪಿಸುತ್ತಿದ್ದದ್ದು ಈಗಲೂ ಅರ್ಪಿಸುತ್ತಿರುವುದು ಸುಳ್ಳೇ?  ಜಗತ್ತಿಗೇ ಶಾಂತಿ, ಕರುಣೆ, ಪ್ರೀತಿಯ ಮಹತ್ವವನ್ನು ಬೋಧಿಸಿದ ಬುದ್ಧ ಮತ್ತು ಏಸುಕ್ರಿಸ್ತರಿಬ್ಬರೂ ಮಾಂಸಾಹಾರವನ್ನು  ವಿರೋಧಿಸದಿರುವಾಗ ಸಸ್ಯಾಹಾರಿಗಳೆಂದುಕೊಂಡು ಸಮಾಜ, ದೇಶವನ್ನು ಒಡೆಯುವ, ದೇವರ ಹೆಸರಲ್ಲಿ ದುಡಿಯದೇ ಬದುಕುವವರಿಗೆ ಆಹಾರ ಸಂಸ್ಕೃತಿಯನ್ನು ಅವಹೇಳನ ಮಾಡುವ ನೈತಿಕತೆ ಇದೆಯೇ?
– ಮಲ್ಲಿಕಾರ್ಜುನಪ್ಪ ಪಿ., ಮಹಾರಾಜ ಕಾಲೇಜು, ಮೈಸೂರು.


ಕಾಲಮಿತಿಯೊಳಗೆ ದಂಡ ವಸೂಲಿ ಮಾಡಿ


ಸಂಚಾರ ನಿಯಮಗಳ ಉಲ್ಲಂಘನೆಯ ಪ್ರಕರಣಗಳಲ್ಲಿ ದಂಡ ವಸೂಲಾತಿಗಾಗಿ ಲೋಕ ಅದಾಲತ್‌ನಿಂದ  ತಿಳಿವಳಿಕೆ ಪತ್ರವನ್ನು ಹೊರಡಿಸಲಾಗುತ್ತಿದೆ. ನಿಯಮ ಉಲ್ಲಂಘಿಸಿದ ವಾಹನಗಳ ಮಾಲೀಕರುಗಳ ನೋಂದಾಯಿತ ಫೋನ್ ನಂಬರ್‌ಗಳಿಗೆ ಸಂದೇಶವನ್ನು ಕಳುಹಿಸಿ ದಂಡ ಪಾವತಿಸಲು ತಿಳಿವಳಿಕೆ ನೀಡಲಾಗುತ್ತಿದೆ. ಇಷ್ಟರಮಟ್ಟಿಗೆ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಸರ್ಕಾರದ ಬೊಕ್ಕಸ ತುಂಬಿಸುವ ಕೆಲಸದಲ್ಲಿ ನಿರತರಾಗಿರುವ ಪೊಲೀಸ್ ಇಲಾಖೆ ಮತ್ತು ಲೋಕ ಅದಾಲತ್ ಅಧಿಕಾರಿಗಳನ್ನು ಶ್ಲಾಘಿಸಬೇಕು. ಆದರೆ ಇದಕ್ಕೆ ಸಂಬಂಧಿಸಿದಂತೆ ಒಂದು ಸಣ್ಣ ಲೋಪ ಉಂಟಾಗುತ್ತಿದೆ. ಕೇವಲ ದಂಡ ಪಾವತಿಯ ಶಿಕ್ಷೆ ಇರುವ  ಪ್ರಕರಣಗಳಿಗೆ ಸಂಬಂಧಿಸಿದಂತೆ ಆರು ತಿಂಗಳ ಕಾಲಾವಧಿ ಮೀರಿದರೆ ದಂಡಪ್ರಕ್ರಿಯಾ ಸಂಹಿತೆ ಕಲಂ ೪೬೮(೨)(ಎ)ರಂತೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಆದ ಕಾರಣ ಉಲ್ಲಂಘನೆಯಾದ ೬ ತಿಂಗಳ ಒಳಗೆ ಸೂಕ್ತ ಕ್ರಮ ಕೈಗೊಂಡು ತಮ್ಮ ದಕ್ಷತೆಯನ್ನು ಮೆರೆಯಬೇಕಾಗಿ ವಿನಂತಿ.
 -ಎಸ್.ರವಿ, ವಕೀಲ, ಮೈಸೂರು.


ನಾಡಿನ ಹಿರಿಮೆ ಕಾಪಾಡೋಣ


ನಮ್ಮ ನಾಡಿನಲ್ಲಿ ಹಿಂಸೆಯ ವಾತಾವರಣ ಸೃಷ್ಟಿಯಾಗುತ್ತಿರುವುದು ಆತಂಕ ತಂದಿದೆ. ಈ ಹಿಂದೆ ವಚನಕಾರ ಬಸವಣ್ಣ ‘ದಯವೇ ಧರ್ಮದ ಮೂಲವಯ್ಯಾ’ ಎಂಬ ಸಂದೇಶ ಸಾರಿದ್ದರು. ವರಕವಿ ದ.ರಾ.ಬೇಂದ್ರೆ ‘ಜಗದೇಳಿಗೆ ಯಾಗುವುದಿದೆ ಕರ್ನಾಟಕದಿಂದೆ…’ ಎಂದು ಜಗತ್ತಿನ ಏಳಿಗೆಗೆ ಕನ್ನಡನಾಡು ಮುನ್ನುಡಿ ಬರೆಯುತ್ತದೆ ಎಂದಿದ್ದರು. ಇದೀಗ ನಾಡಿನಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಈ ಮಹನೀಯರ ಸಂದೇಶಗಳಿಗೆ ಧಕ್ಕೆ ತರುವಂಥ ಸ್ಥಿತಿ ನಿರ್ಮಾಣವಾಗಿದೆ ಎಂಬುದು ಮನದಟ್ಟಾಗುತ್ತದೆ. ಇದು ನಿಜಕ್ಕೂ ಕನ್ನಡಿಗರು ತಲೆತಗ್ಗಿಸುವಂತಹ ಸಂಗತಿ. ಇಂತಹ ಕೃತ್ಯಗಳಿಗೆ ಎಲ್ಲರೂ ಸೇರಿ ಕಡಿವಾಣ ಹಾಕಿ, ನಮ್ಮ ನಾಡಿನ ಹಿರಿಮೆಯನ್ನು ಕಾಪಾಡಬೇಕಿದೆ.
   -ಪವನ್ ಕಲ್ಯಾಣ್, ಮಹಾರಾಜ ಕಾಲೇಜು, ಮೈಸೂರು

andolana

Recent Posts

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

3 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

7 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

7 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

7 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

10 hours ago

ಸುಮ್ಮನಿದ್ದರೂ ಪರಿಣಮಿಸುವ ರಂಗಭೂಮಿಯ ಝೆನ್ ಗುರು – ಜಂಬೆ ಮೇಷ್ಟ್ರು

ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…

10 hours ago