ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 29 ಶುಕ್ರವಾರ 2022

ಕಾರ್ಯಕರ್ತರೇ ನಿಮ್ಮ ಜೀವ ಕಾಪಾಡಿಕೊಳ್ಳಿ!

ಯಾವ ಧರ್ಮ ಆದರೇನು? ಯಾವ ಜಾತಿ ಆದರೇನು ಎಲ್ಲರೂ ಭಾರತೀಯರಾಗಬೇಕಲ್ಲವೆ? ಜಾತಿ ಜಾತಿ ಅಂತ ಬೆಂಕಿ ಹಚ್ಚಿ ಕುಟುಂಬಗಳ ಆಧಾರಸ್ತಂಭಗಳ ಕೊಲೆಗಳಿಗೆ ಕಾರಣ ಆಗುತ್ತಿರುವುದು ಪಕ್ಷಗಳ ನಾಯಕರೇ ಹೊರತು ಕಾರ್ಯಕರ್ತರಲ್ಲ. ನಾಯಕರು ಧರ್ಮಗಳ ನಡುವೆ ವೈಷಮ್ಯದ ಭಾಷಣ ಬಿಡಿ. ಇನ್ನಾದರು ಸಂವಿಧಾನದಲ್ಲಿ ಎಲ್ಲರೂ ಒಂದೇ ಎಂಬುದರಲ್ಲಿ ನಂಬಿಕೆ ಇಡಿ. ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿರುವುದೇಕೆ? ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ಎಷ್ಟು ಕೊಲೆಗಳು ಆಯಿತು, ಬಿಜೆಪಿ ಸರ್ಕಾರ ಬಂದಾಗಲು ಸಹ ಕೊಲೆಗಳು ನಿಂತಿಲ್ಲ. ಇದಕ್ಕೆ ಯಾರು ಹೊಣೆ? ಅಂದು ಏನ್ ಹೋರಾಟ? ನಾವು ಅಧಿಕಾರಕ್ಕೆ ಬಂದ್ರೆ ನಾವು ಹಂಗೆ ಮಾಡ್ತೀವಿ, ಇಂಗ್ ಮಾಡ್ತೀವಿ, ಅಂತೆಲ್ಲ ಭರವಸೆ ಕೊಟ್ಟು, ಈಗ ಸ್ವಾರ್ಥ ರಾಜಕೀಯ ಮಾಡುತ್ತಿರುವ ನಿಮಗೆ ಏನನ್ನಬೇಕು ನಾಯಕರುಗಳೇ? ಈ ದೇಶದಲ್ಲಿ ಕಾನೂನು ಎತ್ತ ಸಾಗುತ್ತಿದೆ ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಿ, ಅಧಿಕಾರದ ಹುಚ್ಚು ಬಿಟ್ಟು ದೇಶದ ಜನರ ಚಿಂತನೆ ಮಾಡುವಿರಾ? ಈ ದೇಶದಲ್ಲಿ ಜಾತಿಗಳು ಮುಖ್ಯ ಅಲ್ಲ ಮಾನವೀಯತೆ ಮುಖ್ಯ! -ನಂಜುಂಡಸ್ವಾಮಿ, ಮೈಸೂರು.


‘ಘರ್ ವಾಪ್ಸಿ’ಯ ಮೂಲಭೂತ ಪ್ರಶ್ನೆಗಳು!

ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಸಾಧ್ಯವೇ? ಕಾರಣಾಂತರಗಳಿಂದ ಹಿಂದೂಧರ್ಮವನ್ನು ಬಿಟ್ಟು ಅನ್ಯಧರ್ಮಕ್ಕೆ ಹೋದವರನ್ನು ‘ ಘರ್ ವಾಪ್ಸಿ’ – ಮತ್ತೆ ಹಿಂತಿರಬಹುದೇ? ಹಿಂದೂಗಳು ಚತುರ್ವರ್ಣ ಪದ್ಧತಿಯಲ್ಲಿ ವಿಶ್ವಾಸವುಳ್ಳವರು. ಹೊರಗಿನಿಂದ ಈ ಧರ್ಮ/ಮತಕ್ಕೆ ಬರಲು ವ್ಯಕ್ತಿಯೊಬ್ಬ(ಳು) ಬಯಸಿದಲ್ಲಿ, ಅಂತಹವರು ಯಾವ ಜಾತಿಗೆ ಸೇರುತ್ತಾರೆ? ಮತಾಂತರಗೊಂಡು ಬರುವವರಿಗೆ ಆಯ್ಕೆಯ ಅವಕಾಶವಿರಬೇಕು. ವರ್ಣಗಳಾದ : ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ…ಇವುಗಳಲ್ಲಿ ತನಗೆ ಇಚ್ಛೆ ಬಂದುದನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವಿರಬೇಕು. ಬರಿದೆ ಶಾಸ್ತ್ರೋಕ್ತವಾಗಿ (್ಟಜಿಠ್ಠಿಚ್ಝ) ಪರಿವರ್ತನೆ ಆದರೆ ಸಾಲದು. ಸಾಮಾಜಿಕವಾಗಿಯೂ ಆಗುವುದುಚಿತ. ಅಂದರೆ, ಉದಾಹರಣೆಗೆ, ಒಬ್ಬರು ವೈಶ್ಯರಾಗಲು ಆಯ್ಕೆ ಮಾಡಿಕೊಂಡಲ್ಲಿ, ಆತನೊಂದಿಗೆ (ಆಕೆಯೊಂದಿಗೆ) ವೈಶ್ಯಪಂಗಡದವರು ರಕ್ತದ ಸಂಬಂಧ ಬೆಳೆಸಲು ಅವಕಾಶವಿರಬೇಕು. ಅತನು ಇನ್ನೂ ಅವಿವಾಹಿತನಿದ್ದರೆ ಅವನಿಗೆ ವೈಶ್ಯಜಾತಿಯ ಕನ್ಯೆಯನ್ನು ನೀಡಲು ಸಮಾಜ ಸಿದ್ಧವಿರಬೇಕು. ಅಥವಾ ಆತನಿಗೆ ಮಕ್ಕಳಿದ್ದರೆ, ಆ ಮಕ್ಕಳಿಗೆ ವೈಶ್ಯಪಂಗಡದ ವಧು/ವರರು ದೊರಕುವಂತಿರಬೇಕು. ಬರಿಯ ರಿಚುಯಲ್ ಮಾಡಿ ಘರ್-ವಾಪ್ಸಿ ಆಗಿದೆ ಎಂದು ಹೇಳುವುದಲ್ಲಾ; ಸಾಮಾಜಿಕ ವಾಗಿಯೂ ಪರಿವರ್ತನಾಕ್ರಿಯೆಗೆ ಅರ್ಥವಿರಬೇಕು. (ಇಲ್ಲಿ ‘ವೈಶ್ಯ’ವರ್ಣವನ್ನು ಉದಾಹರಣಾರ್ಥವಾಗಿ ಮಾತ್ರ ತೆಗೆದುಕೊಂಡಿರುವುದು) -ಡಿ. ವಿ. ಮೋಹನ ಪ್ರಕಾಶ್, ಗೋಕುಲಂ ರಸ್ತೆ, ಮೈಸೂರು.


ಕೊಲೆಯನ್ನು ಧರ್ಮದಿಂದ ಬಿಂಬಿಸುವುದು ತಪ್ಪಬೇಕು!

ಮನುಷ್ಯನೊಬ್ಬ ಕೊಲೆಯಾದರೆ ಅದರಲ್ಲಿ ಜಾತಿ ಧರ್ಮ ಹುಡುಕುವ ನೀಚತನ ಯಾರಿಗೂ ಇರಬಾರದು. ಏಕೆಂದರೆ ಧರ್ಮ ಹಾಗೂ ಜಾತಿಯ ಹೆಸರಿನಲ್ಲಿ ಕೊಲೆಗಳು ಆಗುತ್ತಿವೆಂದು ಬಿಂಬಿಸಿದರೆ ಸಮಾಜದ ಸಾಮರಸ್ಯ ಹದಗೆಡುವುದರ ಜೊತೆಗೆ ಮತೀಯ ಗಲಭೆಗಳು ಇನ್ನಷ್ಟು ಹೆಚ್ಚಾಗುತ್ತವೆ. ಇಂತಹ ಜಾತಿ ಹಾಗೂ ಧರ್ಮದವನು ಕೊಲೆಯಾಗಿದ್ದಾನೆ ಅಂತ ಬಿಂಬಿಸಿದರೆ, ಯಾವ ಜಾತಿಯವನು ಕೊಲೆ ಆಗೋಕೆ ಅರ್ಹ ಅಂತ ಬಿಂಬಿಸಿದವರೇ ಹೇಳಬೇಕು!? ದಲಿತ ವ್ಯಕ್ತಿಯೊಬ್ಬ ಕೊಲೆಯಾದರೆ ನಮ್ಮ ಸಮಾಜ ನೋಡುವುದೇ ಬೇರೆ. ಕೊಲೆಯಾದವನು ಹಿಂದೂ ಆದರೆ ಅದಕ್ಕೆ ಮತ್ತೊಂದು ಪ್ರತಿಕ್ರಿಯೆ. ಮುಸ್ಲಿಮನೊಬ್ಬ ಹಿಂದೂವಿನಿಂದ ಕೊಲೆಯಾದರೆ ಒಂದು ಥರದ ಪ್ರತಿಕ್ರಿಯೆ. ಅದೇ ಹಿಂದೂವೊಬ್ಬ ಮುಸ್ಲಿಮನಿಂದ ಕೊಲೆಯಾದರೆ ಜಾಣಮೌನ!? ದಲಿತನಿಂದ ಬ್ರಾಹ್ಮಣ ಕೊಲೆಯಾದರೆ ಅದಕ್ಕೊಂದು ಬಣ್ಣ. ದಲಿತರಿಬ್ಬರೇ ತಮ್ಮಷ್ಟಕ್ಕೆ ತಾವೇ ಹೊಡೆದುಕೊಂಡು ಸತ್ತೋದರೆ ಅದಕ್ಕೊಂದು ವ್ಯಾಖ್ಯಾನ. ಹೀಗೆ ಪ್ರತಿ ಸಾವಿಗೂ ಜಾತಿಧರ್ಮದ ಅನ್ವಯ, ವ್ಯಾಖ್ಯಾನ ಕೊಡುತ್ತಾ ಹೋದರೆ ಸಮಾಜದ ಸಾಮರಸ್ಯ ಹದಗೇಡದೆ ಇನ್ನೇನಾದೀತು? ಸಮಾಜದ ಯಾವುದೇ ವ್ಯಕ್ತಿ ಕೊಲೆಯಾದರೂ, ಆ ವ್ಯಕ್ತಿಯ ಕೊಲೆಗೆ ಕಾರಣ ತಿಳಿಸಬೇಕೆ ವಿನಹ, ಕೊಲೆಯಾದ ವ್ಯಕ್ತಿ ಯಾವ ಜಾತಿ ಹಾಗೂ ಧರ್ಮದವನು ಅಂತ ಬಿಂಬಿಸಬಾರದು. ಇದರಿಂದ ಸಮಾಜದ ನೆಮ್ಮದಿಯೂ ಹಾಳು. ಜೊತೆಗೆ ಕೋಮು ಸಂಘರ್ಷಕ್ಕೆ ನಾವೇ ಆಹ್ವಾನ ಕೊಟ್ಟಂತೆ ಆಗುತ್ತದೆ. ಇದು ತಪ್ಪಬೇಕು. -ಹರಳಹಳ್ಳಿಪುಟ್ಟರಾಜು, ಪಾಂಡವಪುರ.

andolana

Recent Posts

ಮೈಸೂರಲ್ಲಿ ಮತ್ತೊಂದು ಡ್ರಗ್ಸ್‌ ಫ್ಯಾಕ್ಟರಿ ಪತ್ತೆ : ಎನ್‌ಸಿಬಿ ಅಧಿಕೃತ ಮಾಹಿತಿ

ಮೈಸೂರು : ಮೈಸೂರಿನಲ್ಲಿ ವ್ಯಾಪಕ ಕಾರ್ಯಾಚರಣೆ ನಡೆಸಿರುವ ನಾರ್ಕೋಟಿಕ್ಸ್‌ ಕಂಟ್ರೋಲ್‌ ಬ್ಯೂರೋ (ಎನ್‌ಸಿಬಿ) ಸುಮಾರು 10 ಕೋಟಿ ರೂ. ಮೌಲ್ಯದ…

9 mins ago

ಸ್ವತಃ ಎದೆಗೆ ಗುಂಡಿಟ್ಟುಕೊಂಡ ಸಿ.ಜೆ.ರಾಯ್ :‌ ಮರಣೋತ್ತರ ಪರೀಕ್ಷೆಯಲ್ಲಿ ಧೃಢ

ಬೆಂಗಳೂರು: ಕಾನ್ಫಿಡೆಂಟ್‌ ಗ್ರೂಪ್‌ ಮುಖ್ಯಸ್ಥ, ಉದ್ಯಮಿ ಡಾ.ಸಿ.ಜೆ.ರಾಯ್‌ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಬೆಚ್ಚಿಬೀಳಿಸುವ ಮಾಹಿತಿ ಹೊರಬಂದಿದೆ. ಮರಣೋತ್ತರ…

1 hour ago

ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಕೆ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಸಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಇಂದು ವಿಧಾನಪರಿಷತ್ತಿನ ಅಧಿವೇಶನದ…

1 hour ago

ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಬಳಿಕ…

2 hours ago

ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಚಿರತೆ ಅಟ್ಯಾಕ್: ಮಗು ಸೇರಿ ಮೂವರಿಗೆ ಗಂಭೀರ ಗಾಯ

ನಂಜನಗೂಡು: ಜಮೀನಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ರೈತ ದಂಪತಿಗಳ ಮೇಲೆ ಚಿರತೆ ದಾಳಿ ನಡೆಸಿದ್ದು, ಮಗು ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿರುವ…

2 hours ago

ತಗಡೂರು ಖಾದಿ ಕೇಂದ್ರ ಪುನಶ್ಚೇತನಕ್ಕೆ ಪಣ

ನಂಜನಗೂಡು: ಮಹಾತ್ಮ ಗಾಂಧೀಯವರ ಸರ್ವೋದಯದ ದಿನದ ಅಂಗವಾಗಿ ಸ್ವಾತಂತ್ರ್ಯಹೋರಾಟಗಾರ ತಗಡೂರು ಗಾಂಧಿ ಎಂದೇ ಖ್ಯಾತರಾಗಿದ್ದ ರಾಮಚಂದ್ರರಾಯರಿಂದ ಸ್ಥಾಪಿತವಾದ ತಗಡೂರು ಖಾದಿ ಕೇಂದ್ರದಲ್ಲಿ…

2 hours ago