ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 15 ಶುಕ್ರವಾರ 2022

ಬೃಹತ್ ಗಾತ್ರದಲ್ಲಿ ಸೊಗಸಾಗಿ ಮೂಡಿಬಂದ ೫೦ ರ ಹರೆಯದ ‘ಆಂದೋಲನ’

ಐವತ್ತೇನೇ ವರ್ಷದ ಸಂಭ್ರಮಾಚರಣೆ ಕಂಡ ಆಂದೋಲನ ಅಂದು ೧೧೪ ಪುಟಗಳ ಬೃಹತ್ ಗಾತ್ರದಲ್ಲಿ ತುಂಬಾ ಅಚ್ಚು ಕಟ್ಟಾಗಿ ಸೊಗಸಾಗಿ ಮೂಡಿ ಬಂದಿದೆ. ನಿರ್ಮಲಾ ಕೋಟಿಯವರ ‘ ಕೋಟಿ ನೆನಪುಗಳ ಸಿಹಿ ಪಾಕ’ ಕೆ ವೆಂಕಟರಾಜು ಅವರ ‘ತಿಟ್ಹತ್ತಿ ತಿರುಗಿ ನೋಡಿದಾಗ’ ‘ಆಂದೋಲನದ ಹೆಜ್ಜೆ ಗುರುತು’ ‘ಜನಾಂದೋಲನಗಳೇ ಆಂದೋಲನವಾದಾಗ’ ‘ ತಾಯಿ ಮಮತೆಯ ಕೋಟಿ ಹೃದಯ’ ‘ ಕಾಡುಗಳ್ಳ ವೀರಪ್ಪನ್ ಅಟ್ಟಹಾಸಕ್ಕೆ ನಡುಗಿದ ಏಳುಮಲೆ’ ಡಾ.ಶಿವಾನಂದ ಗವಿಮಠರವರ ‘ ಮೆಸೂರು ಪ್ರಾಂತ್ಯದಲ್ಲಿ ಆಯುರ್ವೇದ ಹೆಜ್ಜೆ ಗುರುತು’ ಬಿ.ಆರ್. ಜೋಯಪ್ಪರವರ ‘ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ದಿನಗಳು’ ಮಹಾರಾಣಿ ತ್ರಿಷಿಕಾ ಕುಮಾರಿಯವರ ‘ಬದುಕು ಬದಲಾಗಿಲ್ಲ ಜವಾಬ್ದಾರಿ ಬಂದಿದೆಯಷ್ಟೆ ’ ಲೇಖನಗಳು ಮನಸೊರೆಗೊಂಡವು.

ಹೆಚ್.ಎಸ್ . ಉಮೇಶ್, ಈಚನೂರು ಕುಮಾರ್, ಎ.ಎನ್ ಮಣಿಕಂಠ, ಆರ್.ಎಲ್.ಮಂಜುನಾಥ, ಸಿ.ಮರಿ ಜೋಸೆಫ್, ಜಿ. ಹೇಮಂತ್ ಕುಮಾರ್, ಬಿ.ಟಿ. ಮೋಹನ್ ಕುಮಾರ್, ಪ್ರಸಾದ್ ಲಕ್ಕೂರು, ಹೆಚ್.ಟಿ. ಅನಿಲ್, ಕೆ.ಬಿ. ರಮೇಶ್ ನಾಯಕ, ಆರ್.ವೀರೆಂದ್ರ ಪ್ರಸಾದ್, ಸುರೇಶ್ .ಆರ್. ಕಂದೇಗಾಲ, ಹಾರೋಹಳ್ಳಿ ರವೀಂದ್ರ, ಉತ್ತನ ಹಳ್ಳಿ ಮಹದೇವ, ಹೆಚ್.ಎಸ್ .ದಿನೇಶ್ ಕುಮಾರ್, ಬಾ.ನಾ.ಸುಬ್ರಹ್ಮಣ್ಯ , ಪ. ಮಲ್ಲೇಶ್, ಜನಾರ್ಧನ್ ಜನ್ನಿ, ಸುಮನಾ, ಬೆಟ್ಟಯ್ಯ ಕೋಟೆ, ರತಿರಾವ್, ನವೀನ್ ಡಿಸೋಜ. ಡಾ.ಕೆ.ರಾಘವೇಂದ್ರ ಪೈ, ಪರಮಶಿವ ನಡುಬೆಟ್ಟ, ಸ.ರಾ.ಸುದರ್ಶನ, ಸುಜಾತ ರೋಹಿತ್ , ಬಿ.ಎಸ್. ಹರೀಶ್ ಬಂದಗದ್ದೆ, ಆಲಕಾ ಕಟ್ಟೆಮನೆ, ಭವ್ಯ ತಿಮ್ಮಯ್ಯ, ಶೆಲಜಾ ವೇಣುಗೋಪಾಲ್, ವಿ.ಶ್ರೀನಿವಾಸ್ ಪ್ರಸಾದ್, ಅಂಶಿ ಪ್ರಸನ್ನ ಕುಮಾರ್, ಶ್ರೀಧರ್ .ಆರ್.ಭಟ್- ಇವರೆಲ್ಲರ ಲೇಖನಗಳು ನಮ್ಮನ್ನು ಆಸಕ್ತಿಯಿಂದ ಓದುವಂತೆ ಮಾಡಿದವು. ನಮಗೆ ಇಂದಿಗೂ ಗೊತ್ತಾಗದಿರುವ ಹಲವು ವಿಷಯಗಳು ಈ ವಿಶೇಷ ಸಂಚಿಕೆಯಿಂದ ಗೊತ್ತಾಯಿತು ಎಂದು ತಿಳಿಸಲು ಹರ್ಷಿಸುತ್ತೇನೆ. ಪ್ರತಿಯೊಬ್ಬರು ಈ ವಿಶೇಷ ಸಂಚಿಕೆಯನ್ನು ಜೋಪಾನವಾಗಿ ಇಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ವಿಶೇಷ ಸಂಚಿಕೆಯನ್ನು ಹೊರತರಲು ಹಗಲಿರುಳು ಶ್ರಮಿಸಿದ ‘ಆಂದೋಲನ’ದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಲಕ್ಷಾಂತರ ಓದುಗರ ಪರವಾಗಿ ಧನ್ಯವಾದಗಳು!

ಅಹಲ್ಯ ಸಿ.ನಾ. ಚಂದ್ರ, ಜನತಾನಗರ, ಮೆಸೂರು.


ಶ್ರೀಲಂಕಾ ಸ್ಥಿತಿ ನೆರೆಹೊರೆಗೆ ಎಚ್ಚರಿಕೆಯ ಗಂಟೆ

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದ್ವೀಪ ರಾಷ್ಟ್ರ ಶ್ರೀಲಂಕಾ ಹೊತ್ತಿ ಉರಿಯುವ ಸ್ಥಿತಿಗೆ ತಲುಪಿದೆ. ಬೊಕ್ಕಸ ಬರಿದಾಗಿದೆ, ದೇಶದ ಆಡಳಿತದ ಚುಕ್ಕಾಣಿ ಹಿಡಿದ ಸ್ವತ: ಅಧ್ಯಕ್ಷ ಗೋಟಬಾಯಿ ರಾಜಪಕ್ಷ ಅವರು ಪರಾರಿಯಾಗಿ ಅಜ್ಞಾತ ಸ್ಥಳದಲ್ಲಿ ಅವಿತುಕೊಳ್ಳುವಂತ ಸ್ಥಿತಿ ನಿಜಕ್ಕೂ ಆ ದೇಶದ ಮಟ್ಟಿಗೆ ಆತಂಕಕಾರಿ. ಇತ್ತ ಆಹಾರ ,ಇಂಧನ ,ಅಗತ್ಯ ವಸ್ತುಗಳಿಗೆ ಪರಿತಪಿಸುತ್ತಿರುವ ಪ್ರಜೆಗಳು ಬೀದಿಗಿಳಿದು ನಾಯಕರು ಮನೆಗಳಿಗೆ ಬೆಂಕಿ ಹಚ್ಚುವ ಕೃತ್ಯಕ್ಕೆ ಇಳಿದಿದ್ದಾರೆ ಇದನ್ನು ಗಮನಿಸಿದರೆ ಅಲ್ಲಿಯ ಜನರ ಪರಿಸ್ಥಿತಿ ಹೇಗಿರಬಹುದು ಎಂಬುದು ಊಹಿಸಲು ಅಸಾಧ್ಯ. ಇದು ನಮ್ಮ ದೇಶಕ್ಕೂ ಎಚ್ಚರಿಕೆಯ ಗಂಟೆಯಾಗಿದೆ. ಮಿತಿಮೀರಿದ ಭ್ರಷ್ಟಾಚಾರ, ನಮ್ಮನ್ನು ಆಳುವವರು ,ಅಧಿಕಾರಿ ಶಾಹಿಯ ಸರ್ಕಾರದ ಹಣವನ್ನು ಸಾಧ್ಯವಾದಷ್ಟು ಮಟ್ಟಿಗೆ ಕೊಳ್ಳೆ ಹೊಡೆಯಬೇಕೆಂಬ ಮನ:ಸ್ಥಿತಿಗೆ ತಲುಪಿರುವುದು ಆರ್ಥಿಕ ಶಿಸ್ತು ಮರೆತು ಕೇವಲ ಪಕ್ಷಗಳ ಜನಪ್ರಿಯತೆಗಾಗಿ ಬೊಕ್ಕಸ ಹಣವನ್ನುಅನುತ್ಪಾದಕ ಯೋಜನೆಗಳಿಗೆ ತೊಡಗಿಸುವುದು, ದುಡಿದು ತಿನ್ನುವ ಮನೋಭಾವ ಕಡಿಮೆಯಾಗಿ ಸರ್ಕಾರದ ಸೌಲಭ್ಯಕ್ಕೆ ಕೈಯೊಡ್ಡಿ ನಿಲ್ಲುವ ಸ್ಥಿತಿಗೆ ಜನ ತಲುಪಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಶ್ರೀಲಂಕಾದ ಸ್ಥಿತಿ ಎಲ್ಲಾ ದೇಶಗಳಿಗೂ ಎಚ್ಚರಿಕೆಯ ಗಂಟೆ.

ಶುಭ ಎಸ್, ಮಹಾರಾಜ ಕಾಲೇಜ್, ಮೈಸೂರು.

 

andolanait

Recent Posts

ಮದ್ದೂರು: ಕೆರೆಯಲ್ಲಿ ಈಜಲು ತೆರಳಿದ್ದ ಯುವಕ ಸಾವು

ಮದ್ದೂರು: ತಾಲ್ಲೂಕಿನ ಭಾರತೀನಗರ ಸಮೀಪದ ಚಿಕ್ಕರಸಿನಕೆರೆ ಗ್ರಾಮದಲ್ಲಿ ಈಜಲು ತೆರಳಿದ್ದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಳವಳ್ಳಿ ತಾಲ್ಲೂಕಿನ ಬಾಣಸಮುದ್ರ…

23 mins ago

ಉಪಚುನಾವಣೆ ಸಿಎಂಗೆ ಕಬ್ಬಿಣದ ಕಡಲೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

ದಾವಣಗೆರೆ: ಈ ಉಪಚುನಾವಣೆಗಳು ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿಗಳಿಗೆ ಕಬ್ಬಿಣದ ಕಡಲೆ ಆಗಿ ಪರಿವರ್ತನೆ ಆಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು…

38 mins ago

ಇಟಲಿ ಬಳಿ ಘೋರ ದುರಂತ: ಸಮುದ್ರದಲ್ಲಿ ದೋಣಿ ಮುಳುಗಿ 71 ಜನ ನಾಪತ್ತೆ

ರೋಮ್:‌ ಇಟಲಿ ಕರಾವಳಿಯಲ್ಲಿ ಭೀಕರ ಬೋಟ್‌ ದುರಂತ ಸಂಭವಿಸಿದ್ದು, ಮೆಡಿಟೇರಿಯನ್‌ ಸಮುದ್ರದಲ್ಲಿ ಬೋಟ್‌ ಮುಳುಗಿ 71 ಜನರು ನಾಪತ್ತೆಯಾಗಿದ್ದಾರೆ. ಈಸ್ಟರ್‌…

60 mins ago

ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ವಿಚಾರ: ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ

ಮೈಸೂರು: ಕಾಳಸಂತೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಮಾರಾಟವಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದಾರೆ. ಇರಾನ್‌ ಮೇಲೆ ಇಸ್ರೇಲ್‌…

1 hour ago

ಇನ್ನೂ ಎರಡು ವರ್ಷ ಸಿದ್ದರಾಮಯ್ಯನವರೇ ಸಿಎಂ: ಗೃಹ ಸಚಿವ ಪರಮೇಶ್ವರ್‌

ಮೈಸೂರು: ಇನ್ನೂ ಎರಡು ವರ್ಷಗಳ ಕಾಲ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್‌ ಅವರು ಸಿಎಂ…

1 hour ago

ಡೊನಾಲ್ಡ್‌ ಟ್ರಂಪ್‌ ಡೆಡ್‌ಲೈನ್‌ಗೆ ಇರಾನ್‌ ಕೌಂಟರ್‌: ಏನದು ಗೊತ್ತಾ.?

ಟೆಹರಾನ್:‌ ನಷ್ಟ ಪರಿಹಾರವಿಲ್ಲದೇ ಹಾರ್ಮುಜ್‌ ಜಲಸಂಧಿ ಓಪನ್‌ ಮಾಡಲ್ಲ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಇರಾನ್‌ ಕೌಂಟರ್‌ ಕೊಟ್ಟಿದೆ.…

2 hours ago