ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 14 ಗುರುವಾರ 2022

ಮೌನ ಮತ್ತು ಘರ್ಜನೆ!?

ಸಂಸತ್ ಭವನ ದ ಮೇಲೆ ಇದೀಗ ನಿರ್ಮಿಸಿರುವ ರಾಷ್ಟ್ರ ಲಾಂಛನ ದ ಸಿಂಹದ ರೂಪ ನೋಡಿದರೆ ನಿಜವಾಗಲೂ ಭಯ ಮೂಡುತ್ತದೆ. ಈ ಬಗ್ಗೆ ಈಗಾಗಲೇ ವ್ಯಾಪಾಕ ವಿರೋಧ ವ್ಯಕ್ತ ವಾಗಿದೆ. ಅದಕ್ಕೆ ಸಮರ್ಥನೆ ನೀಡಿರುವ ಕೇಂದ್ರ ಸಚಿವ ಹರ್ದಿಪ್ ಪುರಿಯವರು ಮೂಲ ಲಾಂಛನದ ಯಥಾವತ್ ಪ್ರತಿಕೃತಿಯನ್ನು ಅಷ್ಟು ಎತ್ತರದಲ್ಲಿ ಇರಿಸಿದರೆ ಅದು ಕಾಣುವುದೇ ಇಲ್ಲಾ. ಹಾಗಾಗಿ ಅದರ ಗಾತ್ರ ವನ್ನು ಹೆಚ್ಚಿಸಲಾಗಿದೆ. ಎಂದಿದ್ದಾರೆ. ಆದರೆ ಗಾತ್ರ ಹೆಚ್ಚುವುದಕ್ಕೂ ಮುಖದ ವಿನ್ಯಾಸಕ್ಕೂ ಸಂಬಂಧವಿಲ್ಲ. ಬಹುಶಃ ಶಿಲ್ಪಗಳು ಎಡವಿರ ಬಹುದು. ಅಥವಾ ಅವರಿಗೆ ಹಾಗೆ ನಿರ್ದೇಶನ ನೀಡಿರಬಹುದು. ಏಕೆಂದರೆ ಈಗ ಜಾಲ ತಾಣ ಗಳ ಲ್ಲಿ ಹರಿದಾಡುತ್ತಿರುವ ಸುದ್ದಿಯಲ್ಲಿ ಇಷ್ಟು ದಿನಮೌನ ವಾಗಿರುವ ಸಿಂಹಗಳು ನಮ್ಮ ರಾಷ್ಟ್ರ ಲಾಂಛನದಲ್ಲಿದ್ದವು ಇದೀಗ ಘರ್ಜಿಸುತ್ತಿರುವ ಸಿಂಹ ನಮ್ಮ ಸಂಸತ್ತಿನ ಮೇಲೆ ರಾರಾಜಿಸಲಿದೆ. ಜಗತ್ತಿನ್ನೆದುರು ಮೌನವಾಗಿರುವ ಕಾಲ ಸರಿದು ಹೋಗಿದೆ ಘರ್ಜಿಸುವ ಕಾಲ ಬಂದಿದೆ’ ಎಂದು ಬರೆಯಲಾಗಿದೆ. ನಾವು ತಿಳಿಯಬೇಕಾದ ಸಂಗತಿ ಎಂದರೆ ಈಗಿನ ಸರ್ಕಾರವು ಸೇರಿದಂತೆ ಮುಂದೆ ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಇನ್ನೂ ಮುಂದೆ ಜನರ ದನಿ ಆಲಿಸದೇ ಘರ್ಜಿಸುತ್ತವೆ ಎನ್ನುವುದಾಗಿದೆ. ಶಿಲ್ಪಿಯಿಂದ ಆಚಾತುರ್ಯವಾಗಿದ್ದರೂ ಇದನ್ನು ಭವಿಷ್ಯದ ಮುನ್ಸೂಚನೆಯ ದಿಕ್ಸುಚಿ ಎಂದರೆ ತಪ್ಪಾಗಲಾರದು!

ಮುಳ್ಳೂರು ಪ್ರಕಾಶ್, ಕನಕದಾಸ ನಗರ, ಮೈಸೂರು.


ರಾಮಬಾಣ ವಿಷಪೂರಿತವೇ?

‘ಆಂದೋಲನ’ದಲ್ಲಿ ‘ಮಧುಮೇಹ ನಿಯಂತ್ರಣಕ್ಕೆ ಕಡಲಿನ ವಿಷಪೂರಿತ ಶಂಭೂಕ ರಾಮಬಾಣ?’ ಎಂಬ ಹೆಸರಿನ ಲೇಖನವನ್ನು ಕಾರ್ತಿಕ್ ಕೃಷ್ಣ ಅವರು ಬರೆದಿದ್ದಾರೆ. ಅವರು ವೈದ್ಯರೇ ಸಂಶೋಧಕರೇ? ಎಂಬ ಬಗ್ಗೆ ಮಾಹಿತಿ ಇಲ್ಲ. ಲೇಖನದ ಹೆಸರಿನ ಅರ್ಥ ಸಂದಿಗ್ಧವಾಗಿದೆ. ರಾಮಬಾಣ ವಿಷಪೂರಿತವೆ? ಶಂಬೂಕ ಪದದ ಅರ್ಥವೇನು? ಮಾಹಿತಿ ಇಲ್ಲ.
ರಾಮಾಯಣದಲ್ಲಿ ಶಂಬೂಕನೆಂಬ ಶೂದ್ರನೊಬ್ಬ ತಪಸ್ಸು ಮಾಡಿದ್ದರಿಂದ ಒಬ್ಬ ಬ್ರಾಹ್ಮಣ ವಟು ಸಾಯುತ್ತಾನೆ. ಅವನ ತಂದೆ ಶೂದ್ರರಿಗೆ ನಿಷಿದ್ಧವಾದ ತಪಸ್ಸನ್ನು ಶಂಬೂಕ ಮಾಡಿದ್ದರಿಂದ ತನ್ನ ಮಗ ಸತ್ತನೆಂದೂ ತಪ್ಪಿತಸ್ಥ ಶೂದ್ರನನ್ನು ದಂಡಿಸಬೇಕೆಂದೂ ರಾಮನಿಗೆ ಮೊರೆ ಇಡುತ್ತಾನೆ. ರಾಮ ಶೂದ್ರ ತಪಸ್ವಿ ಶಂಬೂಕನನ್ನು ವಧಿಸಿದಾಗ ಸತ್ತ ಬ್ರಾಹ್ಮಣ ವಟು ಜೀವಂತವಾಗುತ್ತಾನೆ. ಇದರ ಪ್ರಕಾರ ಶೂದ್ರನ ತಪಸ್ಸು ವಿಷವಾದ್ದರಿಂದ ಬ್ರಾಹ್ಮಣ ವಟು ಸತ್ತ. ರಾಮಬಾಣ ವಿಷಪೂರಿತ ಶಂಬೂಕನನ್ನು ವಧಿಸಿದ್ದರಿಂದ ಬ್ರಾಹ್ಮಣ ಬದುಕಿದ ಎಂದು ಹೇಳಿ, ಚಾತುರ್ವರ್ಣ ವ್ಯವಸ್ಥೆ ರಕ್ಷಣೆ ರಾಮಬಾಣದ ಕರ್ತವ್ಯ ಎಂದು ಪರಂಪರೆಯಮೌಢ್ಯವನ್ನು ಸಮರ್ಥಿಸುತ್ತದೆ. ಈ ಲೇಖನದ ಲೇಖಕರೂ ಇದನ್ನು ಸಮರ್ಥಿಸುತ್ತಾರೆಯೆ? ಕುವೆಂಪು ಅವರು ಇದೇ ವಸ್ತುವನ್ನು ಕುರಿತು ‘ಶೂದ್ರತಪಸ್ವಿ’ ಎಂಬ ನಾಟಕ ಬರೆದಿದ್ದಾರೆ. ರಾಮ ಬಾಣವನ್ನು ಪ್ರಯೋಗಿಸಿ ಅದಕ್ಕೆ, ‘ಅರಸಿಕೊಲ್ ಅರಗುಲಿಯಂ ’(ಧರ್ಮವನ್ನು ಕೊಲ್ಲುವವನನ್ನು ಹುಡುಕಿ ಕೊಲ್ಲು) ಎಂದು ಆದೇಶಿಸುತ್ತಾನೆ. ಶುದ್ರನ ತಪಸ್ಸಿನ ವಿರುದ್ಧ ದೂರಿತ್ತ ಬ್ರಾಹ್ಮಣನೇ ಧರ್ಮವನ್ನು ಕೊಂದವನು ಎಂದು ರಾಮಬಾಣವು ದೂರಿತ್ತವನನ್ನೇ ಹುಡುಕಿಕೊಂಡು ಕೊಲ್ಲಲು ಬರುತ್ತದೆ! ಬ್ರಾಹ್ಮಣನಿಗೆ ತನ್ನ ತಪ್ಪಿನ ಅರಿವಾಗಿ ರಾಮನಿಗೆ ಮೊರೆಹೋಗಿ ಕ್ಷಮೆ ಬೇಡುತ್ತಾನೆ. ತಪಸ್ಸು ಮಾಡುವ ಶೂದ್ರನನ್ನು ಗೌರವಿಸುತ್ತಾನೆ. ರಾಮ ಬಾಣವನ್ನು ಹಿಂದೆಗೆದುಕೊಳ್ಳುತ್ತಾನೆ. ಈ ಕಾಲದಲ್ಲಿ ‘ಆಂದೋಲನ’ದಂಥ ಪತ್ರಿಕೆಯಲ್ಲಿ ಇಂಥ ತಿರೋಗಾಮಿ ವಿಷಯ ಬರೆಯುವುದೇ ವಿಷಪೂರಿತ ಚಿಂತನೆ. ಇದನ್ನು ಸಂಪಾದಕರು ಪ್ರಕಟಿಸದೆ ಕತ್ತರಿಸಿ ಎಸೆಯಬೇಕಿತ್ತು.

-ಪಂಡಿತಾರಾಧ್ಯ, ಬಸವೇಶ್ವರ ರಸ್ತೆ, ಮೈಸೂರು.


ಲೇಖಕರ ಸ್ಪಷ್ಟನೆ

ಸರಿಯಾದ ಪದ ಶಂಬುಕ. ಅಂದರೆ ಬಸವನ ಹುಳ ಎಂದರ್ಥ. cone snail  ಎಂಬುದಕ್ಕೆ ಕಡಲಿನ ಶಂಬುಕ ಎಂಬ ಪದ ಬಳಕೆ ಮಾಡಿದ್ದೇನೆ. ಹಾಗೆಯೇ ಲೇಖನದಲ್ಲಿ cone snail  ಎಂದೂ ಬಳಸಿದ್ದೇನೆ. ಬಹುಶಃ ಲೇಖನವನ್ನು ಓದದೇ ಶೀರ್ಷಿಕೆಗೆ ಹೆಚ್ಚು ಒತ್ತು ನೀಡಿದ್ದಾರೆ. ನಾನು ಗಮಸಿನಿದ ಇನ್ನೊಂದು ಅಂಶವೇನೆಂದರೆ, ಕಣ್ತಪ್ಪಿನಿಂದ ಶೀರ್ಷಿಕೆಯಲ್ಲಿ ‘ಶಂಬುಕ’ ಪದದ ಬದಲು ‘ಶಂಭೂಕ ’ ಎಂದಾಗಿದೆ. ನಾನು ಕಳುಹಿಸುವಾಗ ‘ಶಂಬುಕ’ ಪದ ಬಳಸಿದ್ದೆ. ಏನೇ ಇರಲಿ, ಈ ತಪ್ಪುಒಪ್ಪುಗಳ ನಡುವೆ ಪುರಾಣದ ಕಥೆಯೊಂದನ್ನು ತಿಳಿದಂತಾಯಿತು! ಅದಕ್ಕಾಗಿ ಪಂಡಿತಾರಾಧ್ಯ ಅವರಿಗೆ ಧನ್ಯವಾದಗಳು.

ಕಾರ್ತಿಕ್ ಕೃಷ್ಣ, ಮೈಸೂರು.

 

 

 

andolanait

Recent Posts

ಆಕಸ್ಮಿಕ ಬೆಂಕಿ : ಒಕ್ಕಣೆ ಕಣದ ರಾಗಿ ಫಸಲು ನಾಸ

ಹನೂರು : ತಾಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಒಕ್ಕಣೆ ಕಣದಲ್ಲಿ ಹಾಕಲಾಗಿದ್ದ ರಾಗಿ ಫಸಲಿಗೆ ಬೆಂಕಿ ಬಿದ್ದು ಸುಮಾರು 30 ಕ್ವಿಂಟಾಲ್…

1 hour ago

ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರು-ಪೇರು ; ಸದನ ಕಲಾಪಗಳಿಂದ ದೂರ ಉಳಿದ ಸಿಎಂ

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರು ಆದ ಕಾರಣ, ಇಂದು (ಡಿಸೆಂಬರ್ 17) ವಿಧಾನಸಭೆ ಅಧಿವೇಶನದಲ್ಲಿ…

2 hours ago

ಶ್ರೀಕಂಠೇಶ್ವರ ದೇವಾಲಯದಲ್ಲಿ ಅಕ್ರಮ?; ತನಿಖೆ ಆರಂಭಿಸಿದ ಎಸಿ ತಂಡ

ನಂಜನಗೂಡು : ದಕ್ಷಿಣ ಕಾಶಿ ಎಂದೇ ಹೆಸರಾಗಿರುವ, ಆದಾಯದಲ್ಲಿ ರಾಜ್ಯದಲ್ಲಿ ಐದನೇ ಸ್ಥಾನದಲ್ಲಿರುವ ನಂಜನಗೂಡು ಶ್ರೀಕಂಠೇಶ್ವರ ದೇವಾಯದಲ್ಲಿ ಲಕ್ಷಾಂತರ ರೂ.…

2 hours ago

ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ ‘ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’…

2 hours ago

ಧರ್ಮಸ್ಥಳ ಪ್ರಕರಣ : ಚಿನ್ನಯ್ಯಗೆ ಕೊನೆಗೂ ಬಿಡುಗಡೆ ಭಾಗ್ಯ

ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದಿಂದ ಬಂಧನಕ್ಕೆ ಒಳಗಾದ ಚಿನ್ನಯ್ಯ ಕೊನೆಗೂ…

2 hours ago

ಕೈಗಾರಿಕೆ ಸ್ಥಾಪನೆಗೆ 500 ಎಕರೆ ಜಾಗ ಕೊಡುತ್ತೇನೆ : ಎಚ್‌ಡಿಕೆ ಯಾವ ಕೈಗಾರಿಕೆ ತರುತ್ತಾರೋ ತರಲಿ : ಶಾಸಕ ನರೇಂದ್ರಸ್ವಾಮಿ ಸವಾಲು

ಮಂಡ್ಯ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಯಾವ ಕೈಗಾರಿಕೆಯನ್ನು ತರುವರೋ ತರಲಿ. ಮಳವಳ್ಳಿ ಕ್ಷೇತ್ರದಲ್ಲಿ 400ರಿಂದ 500 ಎಕರೆ…

2 hours ago