ಎಡಿಟೋರಿಯಲ್

ಆಂದೋಲನ ಓದುಗರಪತ್ರ : 06 ಶನಿವಾರ 2022

ಕುಲಪತಿ- ಕುಲಸಚಿವ ಮಾರಾಮಾರಿ ನಾಚಿಕೆಗೇಡು

ದೇಶದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕರಾವಿಮು)ಕ್ಕೆ ತನ್ನದೇ ಆದ ಗೌರವ ಇದೆ. ಆದರೆ ಆ.೨ ರಂದು ಕರಾಮುವಿ ಕುಲಪತಿ – ಕುಲಸಚಿವರ ನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗಿದೆ. ಇದು ಕರಾಮುವಿ ಶೋಚನೀಯ ಪರಿಸ್ಥಿತಿಯಾಗಿದೆ. ವಿದ್ಯಾರ್ಥಿಗಳಿಗೆ ದಾರಿ ದೀಪವಾಗಬೇಕಿದ್ದ, ಉನ್ನತ ಸ್ಥಾನಗಳಲ್ಲಿರುವ ವ್ಯಕ್ತಿಗಳೇ ಗೂಂಡಾಗಳ ರೀತಿ ಹೊಡೆದಾಡಿಕೊಂಡು ಪೋಲಿಸ್ ಠಾಣೆ ಮೆಟ್ಟಿಲೇರಿರುವುದು ರಾಜ್ಯ ಶಿಕ್ಷಣ ವ್ಯವಸ್ಥೆೆುೀಂ ನಾಚಿಕೆಪಡುವಂತಹ ಸಂಗತಿ. ರಾಜ್ಯಪಾಲರು ಈ ಕೃತ್ಯದ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು.
– ಮಣಿಕಂಠ ತ್ರಿಶಂಕರ್, ಪತ್ರಿಕೋದ್ಯಮ ವಿದ್ಯಾರ್ಥಿ, ಮೈಸೂರು.


ಪಾಲಿಸ್ಟರ್ ಧ್ವಜ ಪರಿಸರಕ್ಕೆ ಹಾನಿಕರ

ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ‘ಹರ್ ಘರ್ ತಿರಂಗ’ (ಪ್ರತಿ ಮನೆ ಮೇಲೆ ತ್ರಿವರ್ಣ ಧ್ವಜ) ಹೆಸರಿನಲ್ಲಿ ಮೂರು ದಿನಗಳು ರಾಷ್ಟ್ರಧ್ವಜ ಹಾರಿಸಿ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಕರೆ ನೀಡಿದ್ದಾರೆ. ಮೊದಲಿದ್ದ ಖಾದಿಯ ವಸ್ತ್ರದಿಂದ ತಯಾರಿಸಿದ್ದು ಮಾತ್ರವಲ್ಲದೆ, ಬದಲಿಗೆ ಪಾಲಿಸ್ಟರಿನ ಬಾವುಟಗಳಿಗೂ ಆಸ್ಪದವಿತ್ತಿದ್ದಾರೆ. ಪರಿಸರ ಕಾಳಜಿ ಇರಬೇಕಾದ ಈ ಕಾಲದಲ್ಲಿ ಇದು ಸರಿೆುಂ? ಆ.೧೩, ೧೪ ಮತ್ತು ೧೫ರಂದು ಧ್ವಜಗಳನ್ನು ಮನೆಗಳ ಮೇಲೆ/ಎದುರು ಹಾರಿಸುವುದಕ್ಕೆ ಅವಕಾಶ ನೀಡಿದ್ದಾರೆ.

ಮೂರು ದಿನಗಳು ಕಳೆದ ಮೇಲೆ ಧ್ವಜವನ್ನು ತೆರವುಗೊಳಿಸಿದ ನಂತರ ಜನರು ಅದನ್ನು ತ್ಯಾಜ್ಯವೆಂದು ಬಗೆದು ಬಿಸಾಡುವ ಸಾಧ್ಯತೆೆುೀಂ ಹೆಚ್ಚು. ಇದರಿಂದ ರಾಷ್ಟ್ರ ಧ್ವಜಕ್ಕೆ ಇನ್ನಷ್ಟು ಅಪಮಾನ ಮಾಡಿದಂತಾಗುತ್ತದೆ. ಅಲ್ಲದೆ, ಪರಿಸರಕ್ಕೆ ಹೊರೆ. ಯಾವುದಾದರೂ ಸಂಘ-ಸಂಸ್ಥೆಯು ಬಾವುಟಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ಹಂಚಿದರೆ, ಸ್ವಾತಂತ್ರ್ಯ ದಿವಸದ ಒಂದು ದಿನ ಮಾತ್ರ ಧ್ವಜ ಹಾರಿಸುವುದು ಉತ್ತಮ. ತರುವಾಯ ಅದೇ ಸಂಸ್ಥೆಗಳು ಬಾವುಟಗಳನ್ನು ಹಿಂಪಡೆಯುವಂತೆ ಸೂಚಿಸಬೇಕು. ಅದರಿಂದ ಪರಿಸರ ಹಾನಿಯನ್ನು ತಪ್ಪಿಸಬಹುದು.
-ಡಿ.ವಿ.ಮೋಹನ್ ಪ್ರಕಾಶ್, ಗೋಕುಲ ಮುಖ್ಯ ರಸ್ತೆ, ಮೈಸೂರು.


ಮೇಟಗಳ್ಳಿ ಬಡಾವಣೆಯಲ್ಲಿ ರಸ್ತೆಯಲ್ಲೇ ಕೆಸರು ಗದ್ದೆ!

ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿರುವ ಮೇಟಗಳ್ಳಿಯಲ್ಲಿ ಮನೆಗಳ ಮುಂದೆ ದಿಢೀರ್ ಕೆಸರು ಗದ್ದೆ ನಿರ್ಮಾಣವಾಗಿದೆ. ಇಲ್ಲಿ ಪೈರು ನೆಟ್ಟರೆ ಒಂದೆರಡು ದಿನಗಳಲ್ಲೇ ಹುಲುಸಾಗಿ ಬೆಳೆದೀತು. ಪ್ರತಿ ಸಲ ಮಳೆಗಾಲದಲ್ಲಿ ಇಲ್ಲಿನ ಪ್ರತಿೊಂಂದು ರಸ್ತೆಗೂ ಇಂತಹ ದುಸ್ಥಿತಿ ಬರುವುದು ನಿಯಮ ಎಂಬಂತಾಗಿಬಿಟ್ಟಿದೆ. ಈ ಬಡಾವಣೆಯಲ್ಲೇ ನಗರಪಾಲಿಕೆ ಸದಸ್ಯರೊಬ್ಬರ ಮನೆಯೂ ಇದೆ. ಆದರೆ ಈ ರಸ್ತೆಯಲ್ಲಿ ಗದ್ದೆ ನಿರ್ಮಾಣವಾಗುವ ಸಮಸ್ಯೆಯನ್ನು ನಿವಾರಿಸಲು ಕಿಂಚಿತ್ತೂ ಪ್ರಯತ್ನ ಮಾಡುತ್ತಿಲ್ಲ. ಈಗಲಾದರೂ ಸಂಬಂಧಪಟ್ಟವರು ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಗಮನಹರಿಸಬೇಕು.
-ಎಂ. ವಿಧು ವೀರೇಂದ್ರ, ಮಹಾರಾಜ ಕಾಲೇಜು, ಮೈಸೂರು.


ಕಾಲೇಜು ಮಟ್ಟದಲ್ಲಿ ತಾಯಿ ಹಾಲಿನ ಬಗ್ಗೆ ಜಾಗೃತಿ ಮೂಡಿಸಲಿ

ಆರೋಗ್ಯ ಮತ್ತು ಕುಟುಂಬ ಇಲಾಖೆಯ ನಿರ್ದೇಶಕರಾದ ಡಾ.ಬಿ.ಎಸ್.ಪುಷ್ಪಲತ ಅವರು ವನಿತೆ ಮಮತೆ (ಆಂ., ಆ.೨) ವಿಶೇಷ ಪುಟದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಬರೆದಿರುವ ಲೇಖನ ಮಹಿಳೆಯರಿಗೆಲ್ಲಾ ತುಂಬಾ ಉಪಯುಕ್ತವಾಗಿದೆ. ತಾಯಿಯ ಎದೆ ಹಾಲಿನ ಮಹತ್ವವನ್ನು ಗರ್ಭಿಣಿಯರಗಷ್ಟೇ ಅಲ್ಲದೇ ಕಾಲೇಜು ಮಟ್ಟದಲ್ಲಿ ಯುವತಿಯರಿಗೂ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಇದರಿಂದ ಸಮಾಜಕ್ಕೆ ಆರೋಗ್ಯವಂತ ಮಕ್ಕಳು ದೊರೆಯುತ್ತಾರೆ. ದೂರದರ್ಶನ ಚಂದನ ವಾಹಿನಿಯಲ್ಲಿ ಆ.೩ ರಂದು ಟಿ.ವಿ.ಡಾಕ್ಟರ್ ಕಾರ್ಯಕ್ರಮದಲ್ಲಿ ಡಾಕ್ಟರ್ ಪುಷ್ಪಲತಾ ಅವರು ನೇರ ಪ್ರಸಾರದಲ್ಲಿ ಭಾಗವಹಿಸಿ ತಾಯಿ ಎದೆ ಹಾಲಿನ ಮಹತ್ವವನ್ನು ಚೆನ್ನಾಗಿ ವಿವರಿಸಿದರು. ಅವರಿಗೆ ಅಭಿನಂದನೆಗಳು.
-ಎಂ.ಎಸ್.ಉಷಾ ಪ್ರಕಾಶ್, ಎಸ್. ಬಿ.ಎಂ.ಕಾಲೋನಿ, ಮೈಸೂರು.

andolana

Recent Posts

ಮನೆಯ ಚಾವಣಿ ಕುಸಿದು ನಾಲ್ವರು ಸಾವು ; ತಲಾ 5 ಲಕ್ಷ ಪರಿಹಾರ ಘೋಷಣೆ

ವಿಜಯಪುರ : ಭಾರೀ ಗಾಳಿ ಮತ್ತು ಮಳೆಯಿಂದಾಗಿ ಹಳೆಯ ಮನೆಯ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ದುರ್ಮರಣವನ್ನಪ್ಪಿದ ಘಟನೆ…

2 hours ago

ಡಿ.ಕೆ.ಶಿವಕುಮಾರ್‌ ಜನ್ಮದಿನಾಚರಣೆ : ರಾರಾಜಿಸಿದ ಮುಂದಿನ ಮುಖ್ಯಮಂತ್ರಿ ಡಿಕೆಶಿ ಬ್ಯಾನರ್‌ಗಳು

ಬೆಂಗಳೂರು : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ 64ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಶುಭ ಹಾರೈಸಲು ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳ ದಂಡೇ…

3 hours ago

ದರ್ಶನ್‌ಗೆ ಇನ್ನೂ ಒಂದು ವರ್ಷ ಜಾಮೀನು ಇಲ್ಲ : ಅರ್ಜಿ ವಜಾಗೊಳಿಸಿದ ಸುಪೀಂ

ನವದೆಹಲಿ : ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರೀ ಹಿನ್ನಡೆಯಾಗಿದ್ದು, ಇನ್ನು ಒಂದು…

3 hours ago

ಜೂನ್‌ 21ರಂದು ನೀಟ್-ಯುಜಿ 2026ರ ಮರು ಪರೀಕ್ಷೆ

ನವದೆಹಲಿ : ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರದ್ದುಗೊಂಡಿದ್ದ ‘ನೀಟ್-ಯುಜಿ 2026’ ವೈದ್ಯಕೀಯ ಪ್ರವೇಶ ಪರೀಕ್ಷೆಯ ಮರು ಪರೀಕ್ಷೆ ಜೂನ್…

5 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ; ಪ್ರತಿಷ್ಠಿತ ಕಾನ್‌ ಚಿತ್ರೋತ್ಸವದಲ್ಲಿ ಭಾರತ ಚಿತ್ರೋದ್ಯಮ

ಉತ್ಸವಗಳ ಉತ್ಸವ ಎಂದೇ ಪ್ರತೀತಿ ಪಡೆದಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವ ಫ್ರಾನ್ಸ್‌ನ ಕಾನ್‌ನದು. ಇದೀಗ ಮೊನ್ನೆ ಅದರ ೭೯ನೇ ಆವೃತ್ತಿಗೆ ಚಾಲನೆ…

9 hours ago

ಗಗನಮುಖಿಯಾಗಿದ್ದ ತೆಂಗಿನ ಕಾಯಿ ದರ ಕುಸಿತ

ಎಚ್‌.ಎಸ್.ದಿನೇಶ್‌ ಕುಮಾರ್‌ ಮೈಸೂರು : ಕಳೆದ ವರ್ಷ ಗಗನಕ್ಕೇರಿದ್ದ ತೆಂಗಿನಕಾಯಿ ಬೆಲೆ ಇದೀಗ ಶೇ. ೫೦ರಷ್ಟು ದರ ಇಳಿದಿದೆ. ಇದರಿಂದಾಗಿ…

9 hours ago