ಎಡಿಟೋರಿಯಲ್

ಆಂದೋಲನ ಓದುಗರಪತ್ರ : 06 ಶನಿವಾರ 2022

ಕುಲಪತಿ- ಕುಲಸಚಿವ ಮಾರಾಮಾರಿ ನಾಚಿಕೆಗೇಡು

ದೇಶದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕರಾವಿಮು)ಕ್ಕೆ ತನ್ನದೇ ಆದ ಗೌರವ ಇದೆ. ಆದರೆ ಆ.೨ ರಂದು ಕರಾಮುವಿ ಕುಲಪತಿ – ಕುಲಸಚಿವರ ನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗಿದೆ. ಇದು ಕರಾಮುವಿ ಶೋಚನೀಯ ಪರಿಸ್ಥಿತಿಯಾಗಿದೆ. ವಿದ್ಯಾರ್ಥಿಗಳಿಗೆ ದಾರಿ ದೀಪವಾಗಬೇಕಿದ್ದ, ಉನ್ನತ ಸ್ಥಾನಗಳಲ್ಲಿರುವ ವ್ಯಕ್ತಿಗಳೇ ಗೂಂಡಾಗಳ ರೀತಿ ಹೊಡೆದಾಡಿಕೊಂಡು ಪೋಲಿಸ್ ಠಾಣೆ ಮೆಟ್ಟಿಲೇರಿರುವುದು ರಾಜ್ಯ ಶಿಕ್ಷಣ ವ್ಯವಸ್ಥೆೆುೀಂ ನಾಚಿಕೆಪಡುವಂತಹ ಸಂಗತಿ. ರಾಜ್ಯಪಾಲರು ಈ ಕೃತ್ಯದ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು.
– ಮಣಿಕಂಠ ತ್ರಿಶಂಕರ್, ಪತ್ರಿಕೋದ್ಯಮ ವಿದ್ಯಾರ್ಥಿ, ಮೈಸೂರು.


ಪಾಲಿಸ್ಟರ್ ಧ್ವಜ ಪರಿಸರಕ್ಕೆ ಹಾನಿಕರ

ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ‘ಹರ್ ಘರ್ ತಿರಂಗ’ (ಪ್ರತಿ ಮನೆ ಮೇಲೆ ತ್ರಿವರ್ಣ ಧ್ವಜ) ಹೆಸರಿನಲ್ಲಿ ಮೂರು ದಿನಗಳು ರಾಷ್ಟ್ರಧ್ವಜ ಹಾರಿಸಿ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಕರೆ ನೀಡಿದ್ದಾರೆ. ಮೊದಲಿದ್ದ ಖಾದಿಯ ವಸ್ತ್ರದಿಂದ ತಯಾರಿಸಿದ್ದು ಮಾತ್ರವಲ್ಲದೆ, ಬದಲಿಗೆ ಪಾಲಿಸ್ಟರಿನ ಬಾವುಟಗಳಿಗೂ ಆಸ್ಪದವಿತ್ತಿದ್ದಾರೆ. ಪರಿಸರ ಕಾಳಜಿ ಇರಬೇಕಾದ ಈ ಕಾಲದಲ್ಲಿ ಇದು ಸರಿೆುಂ? ಆ.೧೩, ೧೪ ಮತ್ತು ೧೫ರಂದು ಧ್ವಜಗಳನ್ನು ಮನೆಗಳ ಮೇಲೆ/ಎದುರು ಹಾರಿಸುವುದಕ್ಕೆ ಅವಕಾಶ ನೀಡಿದ್ದಾರೆ.

ಮೂರು ದಿನಗಳು ಕಳೆದ ಮೇಲೆ ಧ್ವಜವನ್ನು ತೆರವುಗೊಳಿಸಿದ ನಂತರ ಜನರು ಅದನ್ನು ತ್ಯಾಜ್ಯವೆಂದು ಬಗೆದು ಬಿಸಾಡುವ ಸಾಧ್ಯತೆೆುೀಂ ಹೆಚ್ಚು. ಇದರಿಂದ ರಾಷ್ಟ್ರ ಧ್ವಜಕ್ಕೆ ಇನ್ನಷ್ಟು ಅಪಮಾನ ಮಾಡಿದಂತಾಗುತ್ತದೆ. ಅಲ್ಲದೆ, ಪರಿಸರಕ್ಕೆ ಹೊರೆ. ಯಾವುದಾದರೂ ಸಂಘ-ಸಂಸ್ಥೆಯು ಬಾವುಟಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ಹಂಚಿದರೆ, ಸ್ವಾತಂತ್ರ್ಯ ದಿವಸದ ಒಂದು ದಿನ ಮಾತ್ರ ಧ್ವಜ ಹಾರಿಸುವುದು ಉತ್ತಮ. ತರುವಾಯ ಅದೇ ಸಂಸ್ಥೆಗಳು ಬಾವುಟಗಳನ್ನು ಹಿಂಪಡೆಯುವಂತೆ ಸೂಚಿಸಬೇಕು. ಅದರಿಂದ ಪರಿಸರ ಹಾನಿಯನ್ನು ತಪ್ಪಿಸಬಹುದು.
-ಡಿ.ವಿ.ಮೋಹನ್ ಪ್ರಕಾಶ್, ಗೋಕುಲ ಮುಖ್ಯ ರಸ್ತೆ, ಮೈಸೂರು.


ಮೇಟಗಳ್ಳಿ ಬಡಾವಣೆಯಲ್ಲಿ ರಸ್ತೆಯಲ್ಲೇ ಕೆಸರು ಗದ್ದೆ!

ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿರುವ ಮೇಟಗಳ್ಳಿಯಲ್ಲಿ ಮನೆಗಳ ಮುಂದೆ ದಿಢೀರ್ ಕೆಸರು ಗದ್ದೆ ನಿರ್ಮಾಣವಾಗಿದೆ. ಇಲ್ಲಿ ಪೈರು ನೆಟ್ಟರೆ ಒಂದೆರಡು ದಿನಗಳಲ್ಲೇ ಹುಲುಸಾಗಿ ಬೆಳೆದೀತು. ಪ್ರತಿ ಸಲ ಮಳೆಗಾಲದಲ್ಲಿ ಇಲ್ಲಿನ ಪ್ರತಿೊಂಂದು ರಸ್ತೆಗೂ ಇಂತಹ ದುಸ್ಥಿತಿ ಬರುವುದು ನಿಯಮ ಎಂಬಂತಾಗಿಬಿಟ್ಟಿದೆ. ಈ ಬಡಾವಣೆಯಲ್ಲೇ ನಗರಪಾಲಿಕೆ ಸದಸ್ಯರೊಬ್ಬರ ಮನೆಯೂ ಇದೆ. ಆದರೆ ಈ ರಸ್ತೆಯಲ್ಲಿ ಗದ್ದೆ ನಿರ್ಮಾಣವಾಗುವ ಸಮಸ್ಯೆಯನ್ನು ನಿವಾರಿಸಲು ಕಿಂಚಿತ್ತೂ ಪ್ರಯತ್ನ ಮಾಡುತ್ತಿಲ್ಲ. ಈಗಲಾದರೂ ಸಂಬಂಧಪಟ್ಟವರು ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಗಮನಹರಿಸಬೇಕು.
-ಎಂ. ವಿಧು ವೀರೇಂದ್ರ, ಮಹಾರಾಜ ಕಾಲೇಜು, ಮೈಸೂರು.


ಕಾಲೇಜು ಮಟ್ಟದಲ್ಲಿ ತಾಯಿ ಹಾಲಿನ ಬಗ್ಗೆ ಜಾಗೃತಿ ಮೂಡಿಸಲಿ

ಆರೋಗ್ಯ ಮತ್ತು ಕುಟುಂಬ ಇಲಾಖೆಯ ನಿರ್ದೇಶಕರಾದ ಡಾ.ಬಿ.ಎಸ್.ಪುಷ್ಪಲತ ಅವರು ವನಿತೆ ಮಮತೆ (ಆಂ., ಆ.೨) ವಿಶೇಷ ಪುಟದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಬರೆದಿರುವ ಲೇಖನ ಮಹಿಳೆಯರಿಗೆಲ್ಲಾ ತುಂಬಾ ಉಪಯುಕ್ತವಾಗಿದೆ. ತಾಯಿಯ ಎದೆ ಹಾಲಿನ ಮಹತ್ವವನ್ನು ಗರ್ಭಿಣಿಯರಗಷ್ಟೇ ಅಲ್ಲದೇ ಕಾಲೇಜು ಮಟ್ಟದಲ್ಲಿ ಯುವತಿಯರಿಗೂ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಇದರಿಂದ ಸಮಾಜಕ್ಕೆ ಆರೋಗ್ಯವಂತ ಮಕ್ಕಳು ದೊರೆಯುತ್ತಾರೆ. ದೂರದರ್ಶನ ಚಂದನ ವಾಹಿನಿಯಲ್ಲಿ ಆ.೩ ರಂದು ಟಿ.ವಿ.ಡಾಕ್ಟರ್ ಕಾರ್ಯಕ್ರಮದಲ್ಲಿ ಡಾಕ್ಟರ್ ಪುಷ್ಪಲತಾ ಅವರು ನೇರ ಪ್ರಸಾರದಲ್ಲಿ ಭಾಗವಹಿಸಿ ತಾಯಿ ಎದೆ ಹಾಲಿನ ಮಹತ್ವವನ್ನು ಚೆನ್ನಾಗಿ ವಿವರಿಸಿದರು. ಅವರಿಗೆ ಅಭಿನಂದನೆಗಳು.
-ಎಂ.ಎಸ್.ಉಷಾ ಪ್ರಕಾಶ್, ಎಸ್. ಬಿ.ಎಂ.ಕಾಲೋನಿ, ಮೈಸೂರು.

andolana

Recent Posts

ಐತಿಹಾಸಿಕ ಮಳವಳ್ಳಿ ಸಿಡಿ ಜಾತ್ರಾ ಮಹೋತ್ಸವ ಸಂಪನ್ನ

ಮಳವಳ್ಳಿ : ಪಟ್ಟಣದ ಗ್ರಾಮ ದೇವತೆಗಳಾದ ಶ್ರೀ ಪಟ್ಟಲದಮ್ಮ-ದಂಡಿನ ಮಾರಮ್ಮ ಶಕ್ತಿ ದೇವತೆಗಳ ಸಿಡಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಜ.27ರಿಂದ…

18 mins ago

ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ : ತನಿಖೆಗೆ ಎಸ್‌ಐಟಿ ರಚನೆ

ಬೆಂಗಳೂರು : ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಛಿಡೆಂಟ್ ಗ್ರೂಪ್ ಅಧ್ಯಕ್ಷ ಮತ್ತು ಸಂಸ್ಥಾಪಕ ಸಿ.ಜೆ.ರಾಯ್ ಅವರು ಶುಕ್ರವಾರ ತಮ್ಮ…

36 mins ago

ಕುಸಿದ ಚಿನ್ನ, ಬೆಳ್ಳಿ ಬೆಲೆ

ಬೆಂಗಳೂರು : ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮಹಾಕುಸಿತ ಮುಂದುವರಿದಿದೆ. ಶುಕ್ರವಾರ ಗ್ರಾಮ್‌ಗೆ 800 ರೂನಷ್ಟು ಕಡಿಮೆಗೊಂಡಿದ್ದ ಚಿನ್ನದ ಬೆಲೆ…

48 mins ago

ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ : ಡೈರಿಯಲ್ಲಿ ಪ್ರಭಾವಿ ಶಾಸಕರು, ಚಿತ್ರರಂಗದವರ ಹೆಸರು

ಬೆಂಗಳೂರು : ಖ್ಯಾತ ಉದ್ಯಮಿ ಮತ್ತು ಕಾನ್ಛಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ.ರಾಯ್ ಅವರ ಆತ್ಮಹತ್ಯೆ ಪ್ರಕರಣ ಕ್ಷಣ ಕ್ಷಣಕ್ಕೂ ಹೊಸ…

2 hours ago

ಮೈಸೂರಲ್ಲಿ ಡ್ರಗ್ಸ್‌ ಪತ್ತೆ | ಸರ್ಕಾರ, ಪೊಲೀಸ್‌ ಮತ್ತೇ ವಿಫಲ ; ಯದುವೀರ್‌ ಅಸಮಾಧಾನ

ಮೈಸೂರು : ನಗರದಲ್ಲಿ ಕೋಟ್ಯಾಂತರ ರೂ. ಮೊತ್ತದ ಡ್ರಗ್ಸ್ ತಯಾರಿಕೆ ನಡೆಯುತ್ತಿದ್ದರೂ ಪತ್ತೆ ಹಚ್ಚುವಲ್ಲಿ ನಗರದ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ…

2 hours ago

ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿ ಸುನೇತ್ರಾ ಪ್ರಮಾಣ ವಚನ

ಮುಂಬೈ : ಮಹಾರಾಷ್ಟ್ರದ ರಾಜಕೀಯದಲ್ಲಿ ಒಂದು ಐತಿಹಾಸಿಕ ಕ್ಷಣ. ಎನ್‌ಸಿಪಿ ನಾಯಕಿ ದಿ.ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್…

2 hours ago