ಎಡಿಟೋರಿಯಲ್

ಅಭಿಜಾತ ವಿದ್ವಾಂಸ ಪ್ರೊ.ರಾಗೌ

ಪ್ರೊ.ಸಿ.ಪಿ.ಸಿದ್ಧಾಶ್ರಮ

‘ರಾಗೌ’ ಎಂಬ ಕಾವ್ಯ ನಾಮದಿಂದ ಪ್ರಸಿದ್ಧರಾಗಿ ರುವ ಪ್ರೊ.ರಾಮೇಗೌಡರು ಕಾವ್ಯ, ವಿಮರ್ಶೆ, ಸಂಶೋ ಧನೆ, ಗ್ರಂಥಸಂಪಾದನೆ, ಜಾನಪದ, ಮಕ್ಕಳ ಸಾಹಿತ್ಯ, ನಾಟಕ ಮುಂತಾದ ಪ್ರಕಾರಗಳಲ್ಲಿ ಆರು ದಶಕಗಳಿಂದ ನಿರಂತರ ಕೃಷಿ ಮಾಡಿ ಅರವತ್ತಕ್ಕಿಂತಲೂ ಹೆಚ್ಚಿನ ಮೌಲಿಕ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡುವುದರ ಮೂಲಕ ಸಾಹಿತ್ಯ ಕ್ಷೇತ್ರದ ಕ್ಷಿತಿಜವನ್ನು ವಿಸ್ತರಿಸಿದ್ದಾರೆನ್ನಬೇಕು.

ರಾಗೌ ಅವರು ಮದ್ದೂರು ತಾಲ್ಲೂಕಿನ ಈರೇ ಗೌಡನದೊಡ್ಡಿಯ ಮಾಸ್ತಿಗೌಡ ಮತ್ತು ನಿಂಗಮ್ಮ ದಂಪತಿಗಳ ಮಗನಾಗಿ 1942ರ ಏ.3ರಂದು ಜನಿಸಿದರು. ಬಡತನವಿದ್ದರೂ ಶಿಕ್ಷಣದಿಂದ ವಂಚಿತ ರಾಗದೆ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ಶ್ರದ್ಧೆ ನಿಷ್ಠೆಯಿಂದ ಓದಿ ಕನ್ನಡ ಎಂ.ಎ ಪದವಿಯನ್ನು ಚಿನ್ನದ ಪದಕದೊಂದಿಗೆ ಮೊದಲ ರ‍್ಯಾಂಕ್‌ನಲ್ಲಿ ತೇರ್ಗಡೆಯಾದರು.

‘ಕನ್ನಡ ಕಾವ್ಯಗಳಲ್ಲಿ ಐತಿಹಾಸಿಕ ವಿಚಾರಗಳು’ ಎಂಬ ವಿಷಯ ಕುರಿತು ಡಾ.ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿಯನ್ನು ಪಡೆಯುತ್ತಾರೆ. ಅನಂತರ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ 37 ವರ್ಷ ಪ್ರಾಧ್ಯಾಪಕರಾಗಿ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾದರು. ಇವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರಶಸ್ತಿ, ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಗೌರವ ಮುಂತಾದ ಇಪ್ಪತ್ತಕ್ಕೂ ಹೆಚ್ಚಿನ ಪ್ರಶಸ್ತಿ, ಗೌರವಗಳು ಸಂದಿವೆ. ಇವರ ಪುಸ್ತಕಗಳಿಗೆ ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಸಂದಿರುವುದು ದಾಖಲೆಯೇ ಸರಿ.

ಕಾವ್ಯ: ರಾಗೌ ಅವರ ಮೊದಲ ಕವನಸಂಕಲನ ‘ಯಾತ್ರೆ’ 1966ರಲ್ಲಿ ಪ್ರಕಟವಾಯಿತು. ಅಲ್ಲಿಂದ ಆರಂಭವಾದ ರಾಗೌ ಕಾವ್ಯಪಯಣ ತೆಪ್ಪ, ಮೋಡ ಮುಸುಕಿದ ಆಕಾಶ, ನೆಲದ ಮರೆಯ ನಿಧಾನ, ಮಾತು ಮೌನಗಳ ನಡುವೆ, ಅನಾಗತ, ಕೋಗಿಲೆ ಗೊಂದು ಕೋರಿಕೆ, ನೀರತಾವರೆ, ಕಾಲಾತೀತ, ನಿರಾವರಣ ಮುಂತಾಗಿ 17 ಕವನ ಸಂಕಲನಗಳವರೆಗೆ ಬೆಳೆದುನಿಂತಿದೆ. ಸಾವಿರ ಪುಟಗಳ ಅವರ ಸಮಗ್ರ ಕಾವ್ಯವೂ ಪ್ರಕಟವಾಗಿದೆ. ರಾಗೌ ಅವರ ಬದುಕಿನಂತೆ ಅವರ ಕಾವ್ಯವೂ ಪ್ರಾಮಾಣಿಕ ಮತ್ತು ಮಾನವೀಯ ಮೌಲ್ಯವುಳ್ಳದ್ದು.

ವಿಮರ್ಶೆ: ಕನ್ನಡದ ಶ್ರೇಷ್ಠ ವಿಮರ್ಶಕರಾದ ರಾಗೌ ಅವರು ರಾಘವಾಂಕ, ಕಾವ್ಯಾನುಶೀಲನ, ಅವಗಾ ಹನ, ಕುವೆಂಪು ಸಾಹಿತ್ಯ ವಿಮರ್ಶನ, ಪ್ರಾಸ್ತಾವಿಕ, ದುರ್ಗಸಿಂಹ, ಪ್ರಾಚೀನ ಕಾವ್ಯ ಚಿಂತನ, ಬಿ.ಎಂ.ಶ್ರೀಕಂಠಯ್ಯ, ಟಿ.ಎಸ್.ವೆಂಕಣ್ಣಯ್ಯ ಮುಂತಾದ ಹದಿನೈದಕ್ಕೂ ಹೆಚ್ಚಿನ ವಿಮರ್ಶಾ ಕೃತಿಗಳನ್ನು ಪ್ರಕಟಿಸಿದ್ದಾರೆ.

ಸಂಶೋಧನೆ: ಯಾವುದೇ ವಿಷಯ ಕುರಿತು ಬಡಪಟ್ಟಿಗೆ ನಿರ್ಣಯಕ್ಕೆ ಬರದ ರಾಗೌ ಅವರು ವಿಷಯಕ್ಕೆ ಸಂಬಂಧಿಸಿದ ಎಲ್ಲ ಮೂಲಚೂಲಗಳನ್ನು ಆಕರಸಾಮಗ್ರಿಯನ್ನು ಸಮಗ್ರವಾಗಿ ಹೆಕ್ಕಿತೆಗೆದು ತಳಮಟ್ಟದಿಂದ ಶೋಧಿಸಿ ಸತ್ಯವನ್ನು ಕಾಣಿಸುವ ಗಂಭೀರ ಶಿಸ್ತಿನ ನಿಷ್ಠಾವಂತ ಶುದ್ಧ ಸಂಶೋಧಕರು. ಈ ಮಾತಿಗೆ ನಿದರ್ಶನವಾಗಿ ಅವರ ‘ಕನ್ನಡ ಕಾವ್ಯ ಗಳಲ್ಲಿ ಐತಿಹಾಸಿಕ ವಿಚಾರಗಳುೞ ಎಂಬ ಸಂಶೋಧನಾ ಕೃತಿ ಕನ್ನಡಿಗರ ಮುಂದಿದೆ. ಅವರ ಸಂಶೋಧನೆ ಕೇವಲ ಪದವಿಗೋಸ್ಕರ ನಡೆದದ್ದಲ್ಲ. ನೈಜ ಸಂಶೋಧಕನೊಬ್ಬನ ದೀರ್ಘಕಾಲದ ಶ್ರಮಪೂರ್ಣವಾದ ಸತ್ಯಾನ್ವೇಷಣೆಯ ಫಲವಾಗಿ ಮೂಡಿಬಂದ ಕನ್ನಡದ ಶ್ರೇಷ್ಠ ಸಂಶೋಧನಾ ಕೃತಿಯಿದು. ‘ಕವಿರಾಜಮಾರ್ಗ’ ದಿಂದ ಹಿಡಿದು ‘ಕೆಳದಿನೃಪವಿಜಯ’ದವರೆಗಿನ ಸುಮಾರು ಒಂದುಸಾವಿರ ವರ್ಷ ವ್ಯಾಪ್ತಿಯ ಕನ್ನಡ ಕಾವ್ಯಗಳನ್ನು ಕೂಲಂಕಷವಾಗಿ ಅಭ್ಯಾಸಿಸಿ ಅಲ್ಲಿನ ಐತಿಹಾಸಿಕ ವಿಚಾರಗಳನ್ನು ಶಾಸನಗಳೊಂದಿಗೆ ಹೋಲಿಸಿ ಸತ್ಯಾಂಶವನ್ನು ಶೋಧಿಸಿ ನೈಜ ಇತಿಹಾ ವನ್ನು ಪುನಾರಚಿಸುವ ಬಹುದೊಡ್ಡ ಕೆಲಸವಿದು.

ಗ್ರಂಥಸಂಪಾದನೆ : ಗ್ರಂಥಸಂಪಾದನ ಕ್ಷೇತ್ರದಲ್ಲೂ ರಾಗೌ ಉತ್ತಮ ಕೆಲಸವನ್ನೇ ಮಾಡಿದ್ದಾರೆ. ರನ್ನನ ‘ಸಾಹಸಭೀಮವಿಜಯಂ’, ‘ಅಜಿತತೀರ್ಥಂಕರ ಪುರಾಣ’, ಲಕ್ಷಿ ಶನ ‘ಜೈಮಿನಿ ಭಾರತ’ ಮತ್ತು ಪಂಪಕವಿಯ ‘ಆದಿಪುರಾಣ’ ಕೃತಿಗಳನ್ನು ಬಿ.ಎಸ್.ಸಣ್ಣಯ್ಯ ಅವರೊಂದಿಗೆ ಜಂಟಿಯಾಗಿ ಸಂಪಾದಿಸಿದ್ದರೆ, ‘ಸರ್ವಜ್ಞನ ವಚನಗಳು’, ದೇವಚಂದ್ರನ ‘ರಾಜಾವಳಿ ಕಥೆ’ ಕೃತಿಗಳನ್ನು ಸ್ವತಂತ್ರವಾಗಿ ಸಂಪಾದಿಸಿದ್ದಾರೆ.

ಜಾನಪದ: ಜಾನಪದ ಕ್ಷೇತ್ರದ ದೊಡ್ಡ ವಿದ್ವಾಂಸರಾದ ರಾಗೌ ಜನಪದ ಕಥೆ, ಒಗಟು, ಗಾದೆ, ಕಥನಕವನ, ಶಿಶುಪ್ರಾಸ ಮುಂತಾದ ಜನಪದ ಪ್ರಕಾರಗಳ ಆರೆಂಟು ಸಂಗ್ರಹವನ್ನು ಪ್ರಕಟಿಸಿದ್ದಲ್ಲದೆ, ಈ ಪ್ರಕಾರಗಳಿಗೆ ಸಂಬಂಧಿಸಿದ ತಾತ್ವಿಕ ಚಿಂತನೆಯನ್ನು ಅಂತರ್‌ಶಿಸ್ತೀಯ ನೆಲೆಯಲ್ಲಿ ಕೈಗೊಂಡು ‘ಜಾನಪದ ತತ್ವಾರ್ಥ ಪ್ರವೇಶ’ದಂಥ ಮೌಲಿಕ ಕೃತಿಯನ್ನು, ‘ಜನಪದ ಮಹಾಭಾರತ ಸಮಾಲೋಚನೆೞಯಂಥ ಮಹತ್ವದ ಕೃತಿಯನ್ನು ಪ್ರಕಟಿಸಿರುವುದು ಅವರನ್ನು ಬಹು ಎತ್ತರಕ್ಕೆ ನಿಲ್ಲಿಸಿದೆ. ಉತ್ತಮ ಮಕ್ಕಳ ಸಾಹಿತಿಯಾಗಿರುವ ರಾಗೌ ಒಳ್ಳೆಯ ನಾಟಕಕಾರರಾಗಿದ್ದು, ಅವರ ‘ದೊರೆ ದುರ್ಯೋಧನ’ ಸಮಕಾಲೀನ ಆಶಯದ ಉತ್ತಮ ಐತಿಹಾಸಿಕ ನಾಟಕವಾಗಿದೆ.

andolanait

Recent Posts

ಅಮಾನತಾದ ಬಳಿಕ ಅಬ್ದುಲ್‌ ಜಬ್ಬಾರ್‌ ಮೊದಲ ಪ್ರತಿಕ್ರಿಯೆ

ಬೆಂಗಳೂರು: ನಾವು ಮುಂಚೂಣಿ ನಾಯಕರಾಗಿದ್ದೆವು. ಈಗ ಬೇರೆ ಕುದುರೆಗಳು ಬಂದಿವೆ. ಇದೊಂದು ರೇಸ್.‌ ಈಗ ಅವರ ಕುದುರೆಗಳು ಮುಂದೆ ಇವೆ…

6 hours ago

ಸೋಮವಾರಪೇಟೆ: ಹಿರಿಕರ ಗ್ರಾಮದಲ್ಲಿ ಮಳೆಗಾಗಿ ದೇವರ ಮೊರೆ

ಸೋಮವಾರಪೇಟೆ: ವಿಪರೀತ ಬಿಸಿಲಿನಿಂದ ಕಂಗೆಟ್ಟಿರುವ ತಾಲ್ಲೂಕಿನ ಗ್ರಾಮೀಣ ಜನರು ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಹಿರಿಕರ ಗ್ರಾಮದ ಕೃಷಿಕರು, ಗ್ರಾಮದ…

6 hours ago

ರಾಜ್ಯದಲ್ಲೇ ಕಲಬುರ್ಗಿಯಲ್ಲಿ ಗರಿಷ್ಠ ತಾಪಮಾನ ದಾಖಲು

ಕಲಬುರ್ಗಿ: ಇಂದು(ಏಪ್ರಿಲ್.‌15, 2026) ರಾಜ್ಯದಲ್ಲಿಯೇ ಅತೀ ಹೆಚ್ಚು ಉಷ್ಣಾಂಶ ಕಲಬುರ್ಗಿ ಜಿಲ್ಲೆಯಲ್ಲಿ ದಾಖಲಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಲಬುರ್ಗಿ ಜಿಲ್ಲೆಯ ನಾಲ್ಕು…

6 hours ago

ಅಯೋಧ್ಯೆ ಶ್ರೀರಾಮನ ದರ್ಶನ ಪಡೆದ ರಾಜ್ಯದ ಕಾಂಗ್ರೆಸ್‌ ಶಾಸಕರು

ಲಕ್ನೋ: ಕರ್ನಾಟಕ ಕಾಂಗ್ರೆಸ್‌ನ ಹಿರಿಯ ಶಾಸಕರು ಅಯೋಧ್ಯೆ ರಾಮಮಂದಿರಕ್ಕೆ ತೆರಳಿ ರಾಮಲಲ್ಲಾನ ದರ್ಶನ ಪಡೆದರು. 12 ಮಂದಿ ಶಾಸಕರು ಇಂದು…

6 hours ago

ಯೋಗೇಶ್‌ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್‌ ಕುಲಕರ್ಣಿ ಅಪರಾಧಿ ಎಂದು ತೀರ್ಪು

ಯೋಗೇಶ್‌ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್‌ ಕುಲಕರ್ಣಿ ಅಪರಾಧಿ ಎಂದು ತೀರ್ಪು ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್‌ ಮಾಜಿ…

6 hours ago

ಪ್ರಧಾನಿ ನರೇಂದ್ರ ಮೋದಿಗೆ ಮನವಿ ಪತ್ರ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮಂಡ್ಯಕ್ಕೆ ಆಗಮಿಸಲು ಬೆಂಗಳೂರಿಗೆ ಬಂದಿಳಿದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಮನವಿ ಪತ್ರ ಸಲ್ಲಿಸಿದ್ದಾರೆ. ಇಂದು…

7 hours ago