ಜಿಲ್ಲೆಗಳು

ಬೇಕೆಂದಾಗ ಕಟ್ಟಲು, ಬೇಡ ಎಂದಾಗ ಒಡೆಯಲು ಬಸ್ ತಂಗುದಾಣ ಖಾಸಗಿ ಸ್ವತ್ತಲ್ಲ : ಕೆ.ವಿ.ಮಲ್ಲೇಶ್ ಆಕ್ರೋಶ

ಮೈಸೂರು: ಸ್ವಪಕ್ಷೀಯರಾದ ಶಾಸಕರು ಹಾಗೂ ಸಂಸದರು ಸ್ವಪ್ರತಿಷ್ಠೆ, ಧರ್ಮ ರಾಜಕಾರಣ ಬಿಟ್ಟು ಅಭಿವೃದ್ಧಿ ರಾಜಕಾರಣ ಮಾಡಲಿ. ಬಸ್ ತಂಗುದಾಣವನ್ನು ಬೇಕೆಂದಾಗ ಕಟ್ಟಲು, ಬೇಡ ಎಂದಾಗ ಒಡೆಯಲು ಇದು ಅವರ ಖಾಸಗಿ ಸ್ವತ್ತಲ್ಲ ಎಂದು ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಟ್ಟಲು, ಒಡೆಯಲು ಹಣ ವ್ಯಯವಾಗುವುದು ಸಾರ್ವಜನಿಕರದ್ದು ಎಂಬ ಅರಿವು ಇಲ್ಲದಂತೆ ವರ್ತಿಸುತ್ತಿದಾರೆ. ಪ್ಲಾನ್ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಕಟ್ಟಿರುವ ಗುಂಬಜ್ ಮಾದರಿ ಬಸ್ ತಂಗುದಾಣವನ್ನು ಏಕಾಏಕಿ ಈಗ ಒಡೆಯುತ್ತೇವೆ ಎಂದು ಗಡುವು ನೀಡಿರುವ ಸಂಸದರು ಒಂದೆಡೆಂದರೆ ಅದು ತಪ್ಪಿದ್ದರೆ ತೆರವಿಗೆ ಸಿದ್ಧ ಎಂದು ಶಾಸಕರು ಹೇಳುವ ಮೂಲಕ ಕಟ್ಟೋದಕ್ಕೆ ಒಬ್ಬರು, ಕೆಡವೋದಕ್ಕೆ ಮತ್ತೊಬ್ಬರು ಎಂದು ಸಾರ್ವಜನಿಕರ ಆಸ್ತಿಂನ್ನು ತಮ್ಮ ಮತ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಕ್ಷೇತ್ರದ ಮತದಾರರಿಗೆ ಮಾಡುತ್ತಿರುವ ವಂಚನೆಂಗಿದೆ ಎಂದು ಹೇಳಿದ್ದಾರೆ.

ಕೆ.ಆರ್.ಕ್ಷೇತ್ರ ಸೇರಿದಂತೆ ನಗರದ ಪ್ರಮುಖ ಬಸ್ ತಂಗುದಾಣಗಳಲ್ಲಿ ಸಂಸದರ ಹಾಗೂ ಶಾಸಕರ ದೊಡ್ಡ ದೊಡ್ಡ ಭಾವಚಿತ್ರ ಇರುವ ವಿನ್ಯಾಸ ಮಾಡಲಾಗಿದೆ. ಸಾರ್ವಜನಿಕರ ಹಣದಲ್ಲಿ ಇರುವ ಪ್ರಚಾರ ತೆಗೆದುಕೊಳ್ಳುವುದು ಎಷ್ಟು ಸರಿ? ತಮ್ಮ ಸ್ವಂತ ಹಣದಲ್ಲಿ ಬಸ್ ತಂಗುದಾಣ ಕಟ್ಟಿಸಿದ ಎಷ್ಟೋ ಮಹನೀಯರು, ಸಂಘ ಸಂಸ್ಥೆಗಳು ತಮ್ಮ ಹೆಸರನ್ನೂ ಹಾಕಿಸಲು ಸಂಕೋಚ ಪಡುತ್ತಾರೆ. ಆದರೆ, ಒಂದು ರೂಪಾಯಿಯನ್ನೂ ಬಸ್ ತಂಗುದಾಣಕ್ಕೆ ಕಾಣಿಕೆ ನೀಡದೇ ಇರುವ ಇವರು ಬಸ್ ನಿಲ್ದಾಣದ ತುಂಬ ತಮ್ಮ ಹಾಗೂ ಪಕ್ಷದ ನಾಂಕರ ದೊಡ್ಡ ದೊಡ್ಡ ಭಾವಚಿತ್ರ ಹಾಕಿ ಪ್ರಚಾರ ಪಡೆಂತ್ತಾರೆ ಎಂದರೆ, ಇವರಿಗೆ ಯಾವ ನೈತಿಕತೆ ಇದೆ ಎಂದಿದ್ದಾರೆ.

ಜನಪ್ರತಿನಿಧಿಗಳ ಕೆಲಸ ಸಾರ್ವಜನಿಕ ಸೇವೆ ಎಂಬುದನ್ನು ಮರೆತಿರುವ ಇವರು ಪ್ರತಿಷ್ಠೆ, ಧರ್ಮದ ಅಫೀಮನ್ನು ಯಾವ ಸಮೂಹದ ತಲೆಗೇರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕೆ.ಆರ್.ಕ್ಷೇತದಲ್ಲಿನ ಕಸ ವಿಲೇವಾರಿ ಘಟಕದಿಂದ ಸುತ್ತಲಿನ ನಿವಾಸಿಗಳಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ ಎಂದು ಮಾಜಿ ಆಗಿದ್ದ ಇದೇ ಶಾಸಕರು ಟೆಂಟ್‌ಹಾಕಿ ಹಗಲು ರಾತ್ರಿ ಪ್ರತಿಭಟನೆ ನಡೆಸಿದ್ದರು. ಶಾಸಕರಾಗಿ ಗೆದ್ದ ಬಳಿಕ ತಮ್ಮದೇ ಸರ್ಕಾರ ಕೇಂದ್ರ ಹಾಗೂ ರಾಜ್ಯದಲ್ಲಿ ಇರುವಾಗ ಏನು ಮಾಡುತ್ತಿದ್ದಾರೆ. ಇನ್ನೆಷ್ಟು ವರ್ಷ ಬೇಕು ಇವರಿಗೆ? ಇನ್ನಾದರೂ ಮಾತು ನಿಲ್ಲಿಸಿ ಕೆಲಸ ಮಾಡಿ ಎಂದು ಕೆ.ವಿ.ಮಲ್ಲೇಶ್ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

andolanait

Recent Posts

ಗ್ಯಾರಂಟಿ ಕುರಿತು ಸರ್ವೇ ನಡೆಸಲಿ : ಎಚ್.ವಿಶ್ವನಾಥ್‌ ಒತ್ತಾಯ

ಮೈಸೂರು : ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿರುವ ಗ್ಯಾರಂಟಿ ಯೋಜನೆಗಳ ಕುರಿತು ಸರ್ವೇ ನಡೆಸಬೇಕು. ಕಳೆದ…

10 mins ago

ಹನೂರು | ವಿವಿಧ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಹನೂರು : ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ…

30 mins ago

ಜಮೀನುಗಳಲ್ಲಿ ಕಾಡಾನೆ ಓಡಾಟ : ಗ್ರಾಮಸ್ಥರಲ್ಲಿ ಆತಂಕ

ಹನೂರು : ಬೆಳ್ಳಂಬೆಳಗ್ಗೆ ಎರಡು ಕಾಡಾನೆಗಳು ಜಮೀನುಗಳಲ್ಲಿ ಓಡಾಡಿ ಆತಂಕ ಸೃಷ್ಟಿಸಿದ ಘಟನೆ ಹನೂರು ತಾಲೂಕಿನ ಗುಂಡಾಪುರ ಗ್ರಾಮದಲ್ಲಿ ಶನಿವಾರ…

51 mins ago

ವಿದ್ಯಾರ್ಥಿಗಳು ಕಲೆ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಿ : ರಂಗೇಗೌಡ ಸಲಹೆ

ಮೈಸೂರು : ಕಲೆ ಎಲ್ಲರಿಗೂ ಒಲಿದು ಬರೋದಿಲ್ಲ ಕೆಲವರಿಗೆ ಮಾತ್ರ ಒಲಿದು ಬರುತ್ತದೆ. ಕಲೆ ಮತ್ತು ಸಂಸ್ಕೃತಿ ಮೈಗೂಡಿಸಿಕೊಂಡರೆ ತಮ್ಮ…

1 hour ago

ಲಂಚ | ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ಶಾಸಕ

ಗದಗ : ಗುತ್ತಿಗೆದಾರನಿಂದ ಕಮಿಷನ್‌ ರೂಪದಲ್ಲಿ ಐದು ಲಕ್ಷ ಹಣ ಪಡೆಯುತ್ತಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ…

1 hour ago

ರಣರಂಗವನ್ನು ಬಿಟ್ಟು ಓಡಿ ಹೋಗುವ ಹೇಡಿ ನಾನಾಗಲಾರೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನನ್ನನ್ನು ರಾಜಕೀಯವಾಗಿ ಮುಗಿಸಲು ಹಲವಾರು ದೊಡ್ಡ ದೊಡ್ಡ ನಾಯಕರು ಹಲವಾರು ಬಗೆಯ ಕುಟಿಲ ಕಾರಸ್ತಾನಗಳನ್ನು ಮಾಡಿದ್ದಾರೆ. ರಣರಂಗವನ್ನು ಬಿಟ್ಟು…

4 hours ago