ಜಿಲ್ಲೆಗಳು

ಮತದಾನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಕಾರ್ಯಗಾರ

ಮೈಸೂರು: ycc (ಯಂಗ್ ಕಮ್ಯೂನಿಕೆಟರ್ ಕ್ಲಬ್) ಹಾಗೂ ವಿ-ಲೀಡ್ ಆರ್ಗನೈಜೇಷನ್ ಇವರ ವತಿಯಿಂದ ನಗರದ ಶೇಷಾದ್ರಿಪುರಂ ಪದವಿ ಕಾಲೇಜ್ ರವರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ  ಮತದಾನದ ಮಹತ್ವವನ್ನು ತಿಳಿಸಲು ವಿಶೇಷ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.

ಕಾರ್ಯಗಾರದ ಮುಖ್ಯ ಭಾಷಣಕಾರರಾಗಿ ಡಾ ಸೀತಾರಾಮ್ ಹಾಗೂ ರಮೇಶ್ ವೆಂಕಟನಮ್ ರವರು ಭಾಗವಹಿಸಿ ವಿದ್ಯಾರ್ಥಿಗಳಿಗೊಂದಿಗೆ ಇಂಟರಾಕ್ಷನ್ ನಡೆಸುವ ಮೂಲಕ ಒಂದು ಮತದ ಮೌಲ್ಯವೆಷ್ಟು, ಎಷ್ಟು ಮುಖ್ಯವಾಗುತ್ತದೆ ಮತ್ತು ಒಂದು ಮತದಿಂದ ಸರ್ಕಾರವನ್ನು ಕಟ್ಟಲುಬಹುದು ಹಾಗೂ ಕೆಡವಲುಬಹುದು. ಪ್ರತಿಯೊಬ್ಬರೂ ಮತದಾನ ಮಾಡುವುದು ಅವರ ಹಕ್ಕು. 2004ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎ ಆರ್ ಕೃಷ್ಣಮೂರ್ತಿಯವರು ಸಂತೆಮಾರಹಳ್ಳಿ, ಚಾಮರಾಜನಗರದಿಂದ ಸ್ಪರ್ಧಿಸುವಾಗ ಅವರ ವಿರುದ್ಧ ನಿಂತಿದ್ದ ಅಭ್ಯರ್ಥಿಯಿಂದ ಒಂದು ಮತದಿಂದ ಸೋಲನ್ನು ಅನುಭವಿಸುತ್ತಾರೆ. ಆ ಒಂದು ಮತ ಬೇರೆ ಯಾರದ್ದು ಅಲ್ಲ ಅವರ ಕಾರ್ ಡ್ರೈವರ್ ನಾದು. ಡ್ರೈವರ್ ಬೆಳಗ್ಗೆಯಿಂದ ಸರ್ ಮತದಾನ ಮಾಡಲು ಹೋಗಬೇಕು ಎಂದು ಕೇಳಿದಾಗ ಮತದಾನ ಮಾಡುವಂತೆ ಬಿಡು ಎಂದು ಹೇಳಿದರು, ಆದರೆ ಕಾಲ ಮಿಂಚಿ ಹೋಯಿತು. ಈ ಒಂದೇ ಒಂದು ಕಾರಣದಿಂದಾಗಿ ಸೋಲನ್ನು ಎದುರಿಸಬೇಕಾಯಿತು. ಇದನ್ನು ಉದಾಹರಣೆಯಾಗಿ ಹೇಳುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಒಂದು ಮತದ ಬೆಲೆ ಎಷ್ಟರಮಟ್ಟಿಗೆ ಎಂಬುದನ್ನು ತಿಳಿಸಿದರು.

ಪ್ರತಿಯೊಬ್ಬರೂ 18 ವರ್ಷ ತುಂಬಿದ ನಂತರ ಮತದಾರರ ಚೀಟಿಯನ್ನು ಪಡೆದುಕೊಳ್ಳಬೇಕು ಮತ್ತು ತಪ್ಪದೇ ತಮ್ಮ ಕ್ಷೇತ್ರಕ್ಕೆ ಬರುವ ಪ್ರತಿಯೊಂದು ಚುನಾವಣೆಯಲ್ಲಿ ಕೂಡ ಮತದಾನ ಮಾಡಬೇಕು. ಸರ್ಕಾರವನ್ನು ತಪ್ಪು ಎಂದು ದೋಷಿಸುವುದು ಬಹಳ ಸುಲಭ ಆದರೆ ಆ ದೋಷದಲ್ಲಿ ನಮ್ಮ ಪಾಲು ಕೂಡ ಅಷ್ಟೇ ಇರುತ್ತದೆ. ನಾವು ಪ್ರಜಾಪ್ರಭುತ್ವದಲ್ಲಿ ಇರುವುದು, ನಮ್ಮ ನಾಯಕರನ್ನು ನಾವೇ ಆರಿಸಿಕೊಳ್ಳಲು ಅವಕಾಶ ಇರುವಾಗ ಅದನ್ನು ತಪ್ಪಿ ಹೋಗಲು ಬಿಡಬಾರದು.ವಿದ್ಯಾರ್ಥಿಗಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಹೇಳಲು ಅವರ ತರಗತಿಯ ಲೀಡರ್ಗಳನ್ನು ವೇದಿಕೆ ಮೇಲೆ ಕರೆಸಿ ಅವರು ಯಾವ ರೀತಿ ಚುನಾವಣೆಯನ್ನು ಎದುರಿಸಿದರು ಹಾಗೂ ಅವರು ಚುನಾವಣೆಯನ್ನು ಗೆದ್ದ ನಂತರ ಯಾವ ರೀತಿ ತರಗತಿಯ ಹಾಗೂ ಹೋಗುಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಕೇಳಿ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಭಾವ ಬೀರುವಂತೆ ಮಾಡಿದರು.

ಅಭ್ಯರ್ಥಿಗಳು ಯಾರು ನಮಗೆ ಇಷ್ಟ ಇಲ್ಲ ಎಂದಾಗ ಅದನ್ನು ಕೂಡ ತೋರಿಸಲು ನಮ್ಮ ಸಂವಿಧಾನದಲ್ಲಿ ಅವಕಾಶವಿದೆ. ಅದೇನೆಂದರೆ ನೋಟ, ನೋಟವನ್ನು ಹಾಕುವುದರ ಮೂಲಕ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು. ಆದರೆ ಮತ ಹಾಕದೆ ಇರಬಾರದು ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ಕಾರ್ಯಕ್ರಮದಲ್ಲಿ ವೈ ಸಿ ಸಿ ಮೈಸೂರು ವಿಭಾಗದ ಅಧ್ಯಕ್ಷರು ಹಾಗೂ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮೈಸೂರು ವಿಶ್ವವಿದ್ಯಾನಿಯ ಡಾ ಎಂ ಎಸ್ ಸಪ್ನ, ಪ್ರೊ ಸೌಮ್ಯ ಇರಪ್ಪ ಪ್ರಾಂಶುಪಾಲರು, ಶೇಷಾದ್ರಿಪುರಂ ಕಾಲೇಜ್, ಅಧ್ಯಾಪಕರು, ಆಡಳಿತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

andolanait

Recent Posts

ನಂಜನಗೂಡು | ಲೋಕಾ ಬಲೆಗೆ ಬಿದ್ದ ಸರ್ವೆಯರ್‌

ನಂಜನಗೂಡು : ಜಮೀನಿನ ಪೋಡಿ ಹಾಗೂ ದುರಸ್ತಿಪಡಿಸಲು ಲಂಚ ಪಡೆಯುತ್ತಿದ್ದ ಸರ್ವೆಯರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ವರದಿಯಾಗಿದೆ. ತಾಲ್ಲೂಕಿನ…

6 hours ago

ಅನೈತಿಕ ಸಂಬಂಧದ ಶಂಕೆ : ರಾಡ್‌ನಿಂದ ಹೊಡೆದು ಪತ್ನಿ ಕೊಂದ ಪತಿ

ಶ್ರೀರಂಗಪಟ್ಟಣ : ಅನೈತಿಕ ಸಂಬಂಧದ ಶಂಕೆಯಿಂದ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಆಲಗೂಡು ಗ್ರಾಮದಲ್ಲಿ ನಡೆದಿದೆ. ಗ್ರಾಮದ…

7 hours ago

ರಾಮನಗರ: ಕಲ್ಲು ಕ್ವಾರಿಯಲ್ಲಿ ದುರಂತ: ಬಂಡೆ ಕುಸಿದು 7 ಮಂದಿ ಕಾರ್ಮಿಕರು ಸಾವು

ರಾಮನಗರ: ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಮಾದಾಪಟ್ಟಣ ಬಳಿ…

14 hours ago

ಕೊಡಗಿನಲ್ಲಿ ಸಾಧಾರಣ ಮಳೆ: ಹಾರಂಗಿ ಜಲಾಶಯದ ಒಳಹರಿವು ಹೆಚ್ಚಳ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಸಾಧಾರಣ ಮಳೆಯಾಗುತ್ತಿರುವ ಪರಿಣಾಮ ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಜಲಾಶಯಕ್ಕೆ…

14 hours ago

ಓದುಗರ ಪತ್ರ: ಮುತ್ತತ್ತಿ ನದಿ ಬಳಿ ಪೊಲೀಸರನ್ನು ನಿಯೋಜಿಸಿ

ಮಂಡ್ಯ ಜಿಲ್ಲೆಯ ಮುತ್ತತ್ತಿಯಲ್ಲಿ ಕಾವೇರಿ ನದಿ ನೀರಿಗೆ ಇಳಿದು ಸೆಲ್ಛಿ ತೆಗೆದುಕೊಳ್ಳಲು ಹೋದ ಒಂದೇ ಕುಟುಂಬದ ನಾಲ್ವರು ಹಾಗೂ ಕಾರು…

19 hours ago

ಓದುಗರ ಪತ್ರ: ಚಪ್ಪಲಿ ಎಸೆತ ಪ್ರಕರಣ ಎಳೆದಾಡುವುದು ಬೇಡ

ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರ ಮೇಲೆ ಜಾ.ದಳ ಕಾರ್ಯಕರ್ತರೊಬ್ಬರು ಚಪ್ಪಲಿಯನ್ನು ಎಸೆದಿದ್ದು, ಈಗಾಗಲೇ ಆ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.…

19 hours ago