ಜಿಲ್ಲೆಗಳು

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ : ಪ್ರಕರಣ ದಾಖಲು

ಹನೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿರುವ 8 ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಕಣ್ಣೂರು ಗ್ರಾಮದ ಬಸವರಾಜಪ್ಪ, ಜಯಶೇಖರ್ , ಯೋಗೇಶ್ವರ್, ನಾಗೇಂದ್ರ, ವೃಷಭೇಂದ್ರ, ರಾಜಶೇಖರ್, ಅನಿಲ್, ಮಲ್ಲಿಕಾರ್ಜುನ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ .

ಘಟನೆ ವಿವರ : ಕಳೆದ ವರ್ಷ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ದೂರುದಾರ ವೃಷಭೇಂದ್ರ ಹಾಗೂ ಬಸವರಾಜಪ್ಪನವರ ಮಗ ಜಯಶೇಖರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಬಸವರಾಜಪ್ಪನವರ ಮಗ ಜಯಶೇಖರ್ ಪರಾಭವ ಗೊಂಡಿದ್ದರು. ಚುನಾವಣೆಯಲ್ಲಿ ಸೋತ ಹಿನ್ನೆಲೆ ಬಸವರಾಜಪ್ಪ ನನ್ನ ಮಗ ಗೆದ್ದಿದ್ದರೆ ಅಧ್ಯಕ್ಷ ಆಗುತ್ತಿದ್ದ ನಿನ್ನಿಂದಲೇ ಸೋತ ಎಂದು ನನ್ನ ಮೇಲೆ ವೈಮನಸ್ಸು ಇಟ್ಟುಕೊಂಡಿದ್ದನು. ಅ. 25 ರಂದು ನಾನು ನಮ್ಮ ಮನೆಯಲ್ಲಿದ್ದಾಗ ಗುರುಮಲ್ಲೇಶ್ವರ ಮಠದ ಬಳಿ ಬಸವರಾಜಪ್ಪ ಈತನ ಮಕ್ಕಳಾದ ಜಯಶೇಖರ್’ ಮಲ್ಲಿಕಾರ್ಜುನ್, ಈತನ ಮೊಮ್ಮಗ ಯೋಗೇಶ್ವರ್ ಆಲಿಯಾಸ್ ಚರಿತ ಮತ್ತು ಬಸವರಾಜಪ್ಪ ನ ಕಡೆಯವರಾದ ಮಹದೇವಸ್ವಾಮಿ ನಾಗೇಂದ್ರ, ವೃಷಭೇಂದ್ರಸ್ವಾಮಿ ರಾಜಶೇಖರ್ ಮೂರ್ತಿ ಅನಿಲ್ ರವರ ಗಳ ಗುಂಪು ಕಟ್ಟಿಕೊಂಡು ಬಂದು ದೊಡ್ಡ ದೊಡ್ಡ ಪಟಾಕಿಯನ್ನು ಮಠದ ಮುಂಭಾಗ ರಸ್ತೆಯಲ್ಲಿ ಹೊಡೆಯುತ್ತಿದ್ದರು. ಇದನ್ನು ಕೇಳಲು ಹೋದ ನನ್ನ ಮೇಲೆ ಬಸವರಾಜಪ್ಪ ಹಾಗೂ ಈತನ ಸಂಬಂಧಿ ಗಳು ದೊಣ್ಣೆಯಿಂದ ಹಾಗೂ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

andolanait

Recent Posts

ಭಾರತದ ಯೂರಿಯಾ ಘಟಕಗಳು ಅರ್ಧದಷ್ಟು ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ: ಮೂಲಗಳಿಂದ ಮಾಹಿತಿ

ಹೊಸದಿಲ್ಲಿ: ಭಾರತದ ಯೂರಿಯಾ ಘಟಕಗಳು ಅರ್ಧದಷ್ಟು ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಮೂಲಗಳು ಹೇಳಿವೆ. ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಹೊರ್ಮುಜ್‌…

12 mins ago

ಇಂಧನ ಸೌಲಭ್ಯಗಳ ಮೇಲೆ ದಾಳಿ ಮಾಡಿದರೆ, ಹೊರ್ಮುಜ್‌ ಸಂಪೂರ್ಣ ಮುಚ್ಚುತ್ತೇವೆ : ಅಮೆರಿಕಗೆ ಇರಾನ್‌ ಎಚ್ಚರಿಕೆ

ಟೆಹ್ರಾನ್ : ಪಶ್ಚಿಮ ಏಷ್ಯಾದಲ್ಲಿನ ಯುದ್ಧಕ್ಕೆ ಶೀಘ್ರವೇ ಅಂತ್ಯ ಹಾಡುವುದಾಗಿ ಶನಿವಾರವಷ್ಟೆ ಹೇಳಿದ್ದ ಟ್ರಂಪ್‌, ಈಗ ಇರಾನ್‌ ಮೇಲಿನ ದಾಳಿಗಳನ್ನು…

37 mins ago

ಇರಾನ್‌ ಕ್ಷಿಪಣಿಗಳನ್ನು ಹೊಡೆದುರುಳಿಸಿದ ಸೌದಿ ಅರೇಬಿಯಾ

ಸೌದಿ ಅರೇಬಿಯಾ : ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಗಲ್ಫ್ ದೇಶಗಳ ಮೇಲಿನ ದಾಳಿಗಳು ಹೆಚ್ಚಾಗುತ್ತಿದ್ದು, ಇರಾನ್‌ನ ಎರಡು ಕ್ಷೀಪಣಿಗಳನ್ನು ಹೊಡೆದುರುಳಿಸಿರುವುದಾಗಿ…

2 hours ago

ಬಾಗಲಕೋಟೆ ಉಪಚುನಾವಣೆ : ನಾಮಪತ್ರ ಸಲ್ಲಿಸಿದ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್‌ ಮೇಟಿ

ಬಾಗಲಕೋಟೆ : ಬಾಗಲಕೋಟೆ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ ಅಭ್ಯರ್ಥಿ ಉಮೇಶ್ ಮೇಟಿ ಅವರು ಇಂದು (ಮಾ.23)…

2 hours ago

ಆಕ್ರಮಣ ತಡೆಯಲು ಸಿದ್ದ : ಅಮೆರಿಕಗೆ ಕ್ಯೂಬಾ ಎಚ್ಚರಿಕೆ

ಹವಾನಾ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಗೊಡ್ಡು ಬೆದರಿಕೆಗಳಿಗೆ ನಾವು ಜಗ್ಗುವುದಿಲ್ಲ ಎಂದು ಕ್ಯೂಬಾ ದೇಶದ ವಿದೇಶಾಂಗ…

2 hours ago

ಹನೂರು | ಇಂದಿರಾ ಕ್ಯಾಂಟೀನ್‌ಗೆ ದಿಢೀರ್‌ ಭೇಟಿ ನೀಡಿದ ಶಾಸಕ ಮಂಜುನಾಥ್‌

ಹನೂರು : ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಶಾಸಕ ಎಂ.ಆರ್ ಮಂಜುನಾಥ್ ದಿಢೀರ್ ಭೇಟಿ ನೀಡಿ ಗ್ರಾಹಕರಿಗೆ ತಯಾರಿಸಿದ್ದ ಅನ್ನ ಸಾಂಬಾರ್…

2 hours ago