ಜಿಲ್ಲೆಗಳು

ಅರಿಶಿನ ಸಂಸ್ಕರಣೆ ಘಟಕಕ್ಕೆ ಡಿಸೆಂಬರ್‌ನಲ್ಲಿ ಚಾಲನೆ

ಒಂದು ಬೆಳೆ-ಒಂದು ಉತ್ಪನ್ನದಡಿ ಅರಿಶಿನ ಬೆಳೆ ಆಯ್ಕೆ

ರಾಜೇಶ್ ಬೆಂಡರವಾಡಿ
ಚಾಮರಾಜನಗರ: ಒಂದು ಜಿಲ್ಲೆ-ಒಂದು ಉತ್ಪನ್ನದಡಿ(ಒಡಿಒಪಿ) ಜಿಲ್ಲೆಯಲ್ಲಿ ಅರಿಶಿನ ಬೆಳೆ ಆಯ್ಕೆಯಾಗಿದ್ದು ಇದರ ಸಂಸ್ಕರಣಾ ಘಟಕ ನಗರ ಹೊರವಲುಂದ ಕೆವಿಕೆಯಲ್ಲಿ ಮುಂದಿನ ತಿಂಗಳು ಆರಂಭ ಆಗಲಿದೆ.
ಅರಿಶಿನ ಕೊಯ್ಲು ಮಾಡಿ ಈ ಘಟಕಕ್ಕೆ ತಂದುಹಾಕಿದರೆ ಅದು ಕ್ಲೀನ್, ಪಾಲಿಷ್ ಹಾಗೂ ತುಂಡುವಾಡಿ ಒಣಗಿಸುತ್ತದೆ. ಪೌಡರ್ ಸಹ ಮಾಡುತ್ತದೆ.
ರೈತರು ಅರಿಶಿನವನ್ನು ೧೦ರಿಂದ ೧೨ತಿಂಗಳು ಕಷ್ಟಪಟ್ಟು ಬೆಳೆಯುವುದಕ್ಕಿಂತ ಅದನ್ನು ಕ್ಲೀನ್ ಮಾಡಿ ಬೇಯಿಸಿ- ಒಣಗಿಸಿ ಮಾರಾಟ ಮಾಡುವುದು ದೊಡ್ಡ ತಾಪತ್ರಯವಾಗಿತ್ತು. ಇದಕ್ಕೆ ಸಾಕಷ್ಟು ಶ್ರಮ, ಸಮಯ ಹಿಡಿಯುತ್ತಿತ್ತು. ಹೀಗಾಗಿ ನೂತನ ಈ ಘಟಕ ಪ್ರಾರಂಭದಿಂದ ಅರಿಶಿನ ಬೆಳೆಗಾರರಿಗೆ ಅತ್ಯಂತ ಅನುಕೂಲವಾಗಲಿದೆ.
ಅರಿಶಿನ ಈ ಭಾಗದ ಮುಖ್ಯ ಬೆಳೆಗಳಲ್ಲಿ ಒಂದಾಗಿದ್ದು ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆತ್ಮನಿರ್ಭರ ಯೋಜನೆಗೆ ಬಲ ತುಂಬಲು ಒಂದುಬೆಳೆ-ಒಂದು ಉತ್ಪನ್ನದಡಿ ಜಿಲ್ಲೆಯಿಂದ ಅರಿಶಿನ ಬೆಳೆುಂನ್ನು ಆಯ್ಕೆ ಮಾಡಿ ಸುಮಾರು ೭೫ಲಕ್ಷ ರೂ. ವೆಚ್ಚದಲ್ಲಿ ಸಂಸ್ಕರಣ ಘಟಕ ಆರಂಭಿಸಲಾಗುತ್ತಿದೆ.
ಘಟಕದ ನಿರ್ವಹಣೆಯನ್ನು ನಿಯಮಾನುಸಾರ ಕಂಪನಿಯೊಂದಕ್ಕೆ ಟೆಂಡರ್ ನೀಡಲಾಗಿದ್ದು ಅವರು ಡಿಸೆಂಬರ್‌ನಲ್ಲಿ ಚಾಲನೆ ಕೊಡಲಿದ್ದಾರೆ. ಸಂಸ್ಕರಣೆಗೆ ಸಂಬಂಧಿಸಿದ  ಯಂತ್ರಗಳನ್ನು ತಂದಿರಿಸಲಾಗಿದ್ದು ಜೋಡಣೆ ಮತ್ತು ವಿದ್ಯುತ್ ಸಂಪರ್ಕ ನೀಡುವುದು ಬಾಕಿ ಇದೆ. ಬೆಂಗಳೂರು ಕೃಷಿವಿಶ್ವವಿದ್ಯಾಲಯ ಇದರ ಜವಾಬ್ದಾರಿ ಹೊತ್ತಿದೆ.
ಅರಿಶಿನ ಸಂಸ್ಕರಣೆಯ ನಿಗಧಿತ ವೆಚ್ಚ ಪಾವತಿಸಿ ರೈತರು ಅಲ್ಲಿಯೇ ವ್ಯಾಪಾರಿಗಳಿಗೆ ಮಾರಾಟ ಮಾಡಲೂಬಹುದು. ಅಥವಾ ಬೇಕಾದಕಡೆ ತೆಗೆದುಕೊಂಡು ಹೋಗಬಹುದಾಗಿದೆ. ಪ್ರತಿ ಜಿಲ್ಲೆಯಿಂದ ಒಂದು ಉತ್ಪನ್ನ ಆಯ್ಕೆ  ಮಾಡುವುದು, ಬ್ಯ್ರಾಂಡ್ ಮಾಡುವುದು ಮತ್ತು ಪ್ರಚಾರ ಮಾಡುವುದು ಆತ್ಮನಿರ್ಭರ ಯೋಜನೆಯ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಅರಿಶಿನವನ್ನು ಕೊಂಡೊಯ್ಯಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಸಾಮಾನ್ಯವಾಗಿ ಅರಿಶಿನ ಕೊಯ್ಲು ಆರಂಭವಾಗುವುದು ಡಿಸೆಂಬರ್‌ನಲ್ಲಿ. ಈ ಸಮಯಕ್ಕೆ ಸರಿಯಾಗಿ ಸಂಸ್ಕರಣ ಘಟಕ ಪ್ರಾರಂಭಿಸಲಾಗುತ್ತಿದೆ. ಮೈಸೂರು, ಬಾಗಲಕೋಟೆ, ಬೀದರ್ ಇನ್ನಿತರ ಕಡೆಯೂ ಅರಿಶಿನ ಬೆಳೆಯಲಾಗುತ್ತದೆ. ಚಾ.ನಗರ ಅರಿಶಿನದಲ್ಲಿ ಹೆಚ್ಚಿನ ಕರಿಕ್ಯುಲಮ್ ಅಂಶ ಇರುವುದರಿಂದ ಮೊದಲಿಂದಲೂ ಇಲ್ಲಿಯು ಅರಿಶಿನಕ್ಕೆ ತುಂಬಾ ಬೇಡಿಕೆ. ಇಲ್ಲಿ ಬೆಳೆದ ಬಹುಪಾಲು ಅರಿಶಿನ ತಮಿಳುನಾಡು ಇನ್ನಿತರ ಕಡೆಗೆ ಮಾರಾಟವಾಗುತ್ತದೆ.


ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಕೆವಿಕೆ) ಅರಿಶಿನ ಸಂಸ್ಕರಣೆ ಘಟಕ ಡಿಸೆಂಬರ್‌ನಲ್ಲಿ ಕಾರ್ಯಾರಂಭ ಆಗಲಿದ್ದು ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಸಾಗಿವೆ.
-ಮೋಹನ್‌ಕುಮಾರ್ ಎ.ಬಿ.
ತೋಟಗಾರಿಕಾ ತಜ್ಞ, ಕೆವಿಕೆ.


ಸಂಸ್ಕರಣೆ ಘಟಕದಲ್ಲಿ ದಿನವೊಂದಕ್ಕೆ ಕನಿಷ್ಠ ೮ರಿಂದ ೧೦ಟನ್ ಅರಿಶಿನ ಸಂಸ್ಕರಣೆ ಮಾಡಬಹುದು. ೨೪ಗಂಟೆಯೂ ಯಂತ್ರ ಮುನ್ನಡೆಸಿದರೆ ೨೫ಟನ್ ಸಂಸ್ಕರಣೆ ಮಾಡಬಹುದು ಎಂದು ತಜ್ಞರೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದರು.

andolanait

Recent Posts

ವೈಭವ್‌ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್‌ : ಸಿಎಸ್‌ಕೆ ವಿರುದ್ಧ ಆರ್‌ಆರ್‌ಗೆ ಗೆಲುವು

ಗುವಹಾಟಿ : ಆರಂಭದಲ್ಲಿ ಬೌಲರ್‌ಗಳ ಅಬ್ಬರ ನಂತರ ವೈಭವ್‌ ಸೂರ್ಯವಂಶಿ ಅವರ ಸ್ಫೋಟಕ ಅರ್ಧಶತಕದ ಆಟದಿಂದ ಚೆನ್ನೈ ಸೂಪರ್‌ ಕಿಂಗ್ಸ್‌…

2 hours ago

ಮೈಸೂರು ರೇಸ್ ಕ್ಲಬ್ ಚುನಾವಣೆ; ಸದಸ್ಯರಾಗಿ ಐವರ ಆಯ್ಕೆ

ಮೈಸೂರು: ನಗರದ ಪ್ರತಿಷ್ಠಿತ ಮೈಸೂರು ರೇಸ್ ಕ್ಲಬ್ ಸದಸ್ಯರಾಗಿ ಗೀತಿಕಾ ಬಸಪ್ಪ (152 ಮತ), ಡಾ.ಕೆ.ರವಿ (147), ಕಲೆಂಗಡ ಮಂದಣ್ಣ…

3 hours ago

ಫಾಸ್ಟ್‌ಟ್ಯಾಗ್ ಇಲ್ಲದಿದ್ದರೆ ಹೆದ್ದಾರಿಗಿಲ್ಲ ಪ್ರವೇಶ

ಬೆಂಗಳೂರು : ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಯಾಣವು ಡಿಜಿಟಲ್ ರೂಪಾಂತರದ ಹೊಸ್ತಿಲಲ್ಲಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು…

4 hours ago

ಅಮೆರಿಕದೊಂದಿಗೆ ಯಾವುದೇ ನೇರ ಮಾತುಕತೆ ನಡೆದಿಲ್ಲ : ಇರಾನ್‌ ಸ್ಪಷ್ಟನೆ

ಟೆಹ್ರಾನ್‌ : ಅಮೆರಿಕದೊಂದಿಗೆ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಯಾವುದೇ ನೇರ ಮಾತುಕತೆ ನಡೆದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಇರಾನ್ ವಿದೇಶಾಂಗ…

4 hours ago

ಹೊರ್ಮುಜ್‌ ಜಲಸಂಧಿ ಮುಕ್ತಗೊಳಿಸಿ ; ಇರಾನ್‌ಗೆ ಅಂತಿಮ ಎಚ್ಚರಿಕೆ ನೀಡಿದ ಟ್ರಂಪ್‌

ವಾಷಿಂಗ್ಟನ್‌ : ಹಾರ್ಮುಜ್ ಜಲಸಂಧಿಯನ್ನು ತಕ್ಷಣ ತೆರೆಯದಿದ್ದರೆ ಇರಾನ್‌ನ ಎಲ್ಲ ತೈಲ ಬಾವಿಗಳು ಮತ್ತು ಖಾರ್ಗ್‌ ದ್ವೀಪಗಳನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿ…

5 hours ago

ದೇಶದಲ್ಲೇ ಮೊದಲ ಮಕ್ಕಳ ಬೃಹತ್ ಆಸ್ಪತ್ರೆ ಬೆಂಗಳೂರಿನಲ್ಲಿ

ಬೆಂಗಳೂರು : ದೇಶದಲ್ಲಿ ಮೊದಲ ಬಾರಿಗೆ ಮಕ್ಕಳಿಗೆ ಮೀಸಲಾಗಿ 450 ಹಾಸಿಗೆಗಳ ಬೃಹತ್, ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಇಂದಿರಾ…

5 hours ago