ಜಿಲ್ಲೆಗಳು

ಟಿಪ್ಪು ನಿಜ ಕನಸುಗಳು ನಾಟಕದ ಮೂಲಕ ಚಾರಿತ್ರ್ಯ ಹರಣವಾಗಲಿದೆ : ಸಿ.ಬಸವಲಿಂಗಯ್ಯ ಆಕ್ರೋಶ

ಮೈಸೂರು: ನಾನು ರಂಗಾಯಣದ ನಿರ್ದೇಶಕನಾಗಿದ್ದ ಸಂದರ್ಭದಲ್ಲಿ ಗಿರೀಶ್ ಕಾರ್ನಾಡ್ ಅವರ ಟಿಪ್ಪು ಕಂಡ ಕನಸುಗಳು ನಾಟಕ ಪ್ರದರ್ಶನಕ್ಕೆ ಆರು ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಆದರೆ, ಈಗೀನ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ೧೫ ಲಕ್ಷ ರೂ.ಅನುದಾನ ಬಿಡುಗಡೆಯಾಗಿತ್ತು ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮಗಳ ಪ್ರಶ್ನೆಗೆ ಪತ್ರಿಕ್ರಿಯಿಸಿದ ಅವರು, ಟಿಪ್ಪು ಕಂಡ ನಿಜ ಕನಸುಗಳು ನಾಟಕದ ಮೂಲಕ ಚಾರಿತ್ರ್ಯ ಹರಣವಾಗಲಿದೆ. ಟಿಪ್ಪು ಕಂಡ ಕನಸುಗಳೆಂದು ಗಿರೀಶ್ ಕಾರ್ನಾಡ್ ಹತ್ತಾರು ವರ್ಷಗಳಿಂದೆಯೇ ಕೃತಿಯೊಂದನ್ನು ಹೊರ ರಚಿಸಿದ್ದಾರೆ. ಆದರೆ ಇವರು ಟಿಪ್ತ್ಯ್ಪು ಕಂಡ ನಿಜ ಕನಸುಗಳು ಎಂದು ಮಾಡಿಕೊಂಡಿದ್ದಾರೆ. ನಾಟಕದ ಹೆಸರನ್ನು ಕೂಡ ಸರಿಯಾಗಿ ಬದಲಾಯಿಸುವ ತಾಕತ್ತು ಸಹ ಇಲ್ಲ ಎಂದು ಲೇವಡಿ ಮಾಡಿದರು.

ನಾಟಕದಲ್ಲಿ ಸತ್ಯ ಇರಬೇಕು ಹೊರತು ರಾಜಕೀಯ ಅಜೆಂಡಗಳಲ್ಲ. ಜನರಿಗೆ ದ್ವೇಷ ಬಿತ್ತುವುದು ನಾಟಕದ ಉದ್ದೇಶವಲ್ಲ ನಾಟಕ ಮಾಡಿ ಸತ್ಯ ಹೇಳಿಲಿ ಆಗ ಯಾರು ವಿರೋಧಿಸುವುದಿಲ್ಲ. ಎಸ್.ಎಲ್.ಭೈರಪ್ಪ ಅವರ ಪರ್ವ ಮಾಡಿದಾಗ ಯಾರೊಬ್ಬರು ವಿರೋಧಿಸಲಿಲ್ಲ. ನಾನು ಮೊದಲು ಪ್ರದರ್ಶನಕ್ಕೆ ಬಂದು ನಾಟಕ ನೋಡಿದೆ. ಆದರೆ, ಟಿಪ್ಪು ನಿಜ ಕನಸುಗಳು ಎಂಬ ನಾಟಕದ ಸುಳ್ಳನ್ನು ಕೇಳಿ ಗಾಬರಿ ಆಂ. ಸಾವರ್ಕರ್ ಕುರಿತು ನಾಟಕ ಮಾಡುವುದಿದ್ದರೇ ಮಾಡಿ, ಆದ್ರೆ ಸತ್ಯ ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟಿಪ್ತ್ಯ್ಪು ಮತಾಂತರ ಮಾಡಿದ, ಕೊಂದ ಎಂದು ಹೇಳುತ್ತಾರೆ ಅದೆಲ್ಲ ಸುಳ್ಳು. ಸತ್ಯ ಹೇಳಬೇಕು. ಟಿಪ್ಪು ಕೊಡಗಿನಲ್ಲಿ ಮತಾಂತರ ಮಾಡಿದ ಎಂದು ಬಿಂಬಿಸುತ್ತಿದ್ದಾರೆ. ಒಂದು ಟಿಪ್ಪು ಮತಾಂತರ ಮಾಡಿz ಆದರೇ ಕೊಡಗಿನಲ್ಲಿ ಎಲ್ಲರು ಮುಸ್ಲಿಂರೇ ಆಗಬೇಕಿತ್ತಲ್ಲ? ಎಂದು ಪ್ರಶ್ನಿಸಿದರು.

ಈಗ ರಂಗಾಯಣದ ರಾಜಕೀಯ ಅಡ್ಡವಾಗಿದೆ. ಗಿರೀಶ್ ಕಾರ್ನಾಡ್ ಅವರನ್ನು ಅರ್ಬನ್ ನಕ್ಸಲ್ ಎಂದು ಟೀಕೆ ಮಾಡುತ್ತಾರೆ. ಅವರು ಅರ್ಬನ್ ನಕ್ಸಲ್ ಆಗಿದ್ದರೆ ಪದ್ಮಭೂಷಣ ಪ್ರಶಸ್ತಿ ಯಾಕೇ ನೀಡುತ್ತಿದ್ದರು?. ಗಾಂಧೀ ಕೊಂದವರೀಗ ದೇಶ ಪ್ರೇಮಿಗಳಾಗಿದ್ದಾರೆ. ದೇಶಕ್ಕಾಗಿ ಹುತಾತ್ಮರಾದವರನ್ನು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ. ಇವರು ದೇಶ ಪ್ರೇಮವನ್ನು ಗುತ್ತಿಗೆ ಪಡೆದುಕೊಂಡಿದ್ದಾರ? ಪ್ರಸ್ತುತ ರಾಜಕಾರಣವನ್ನು ಧರ್ಮಕ್ಕೆ ಬೆರಸಲಾಗಿ ಈ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಹೇಳಿದರು.

andolanait

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಸತ್ಯದ ಆರಾಧಕ ಮೌನವನ್ನು ಅವಲಂಬಿಸುವುದು ಅವಶ್ಯಕ

ನಾನು ಶಾಕಾಹಾರಿ ಮಂಡಲಿಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಆರಿಸಲ್ಪಟ್ಟೆನು. ಆದರ ಪ್ರತಿ ಯೊಂದು ಸಭೆಗೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಆದರೆ…

8 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 22 ಶನಿವಾರ  

8 hours ago

ಧಾವಂತ ಬದುಕಿಗೆ ಹೊಸ ಚೈತನ್ಯ ನೀಡುವ ಅರವಟ್ಟಿಗೆ

ಸಾಮಾಜಿಕ ಕಳವಳಿಯ ನೆಲೆಯಲ್ಲಿ ಮೂಡಿರುವ ಕಥಾ ಸಂಕಲನ ಹೆಚ್.ಎಸ್.ಸಿದ್ದಮಲ್ಲಿಕಾರ್ಜುನಸ್ವಾಮಿ, ಹುಂಡೀಪುರ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರ ಹೊಸ ಕೃತಿ ‘ಅರವಟ್ಟಿಗೆ’…

9 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧೀಜಿ ಆತ್ಮಕತೆಯ ಶತಮಾನೋತ್ಸವಕ್ಕೆ ಆಂದೋಲನ ಕೈಜೋಡಿಸಿರುವುದು ಐತಿಹಾಸಿಕ

ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦…

10 hours ago

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ,ಎಸ್‌ಟಿ ಕಾಯ್ದೆ ಅನ್ವಯ ; ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…

1 day ago

ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ : ಸಚಿವ ನಾಗೇಂದ್ರ ವಿಶ್ವಾಸ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…

1 day ago