ನಾಗರಹೊಳೆ ಕಬಿನಿ ಹಿನ್ನೀರು ಪ್ರದೇಶದಲ್ಲಿ ಅಪರೂಪದ ದೃಶ್ಯ ಕಣ್ತುಂಬಿಕೊಂಡ ಸಫಾರಿ ಪ್ರವಾಸಿಗರು
ಮೈಸೂರು: ನಾಗರ ಹೊಳೆ ಅಭಯಾರಣ್ಯದ ಕಬಿನಿ ಹಿನ್ನೀರು ಪ್ರದೇಶದಲ್ಲಿ ಸೀಳು ನಾಯಿಗಳು (Wild Dogs) ಬೇಟೆಯಾಡಿದ ಕಡವೆ ಮರಿಯನ್ನು ಹುಲಿರಾಯ ಎಗರಿಸಿದ ಅಪರೂಪದ ದೃಶ್ಯವನ್ನು ಸಫಾರಿ ಪ್ರವಾಸಿಗರು ಗುರುವಾರ ಕಣ್ತುಂಬಿಕೊಂಡಿದ್ದಾರೆ.
ಡಿ.ಬಿ.ಕುಪ್ಪೆ ಮತ್ತು ಅಂತರಸಂತೆ ವಲಯ ವ್ಯಾಪ್ತಿಗೆ ಸೇರಿದ ಕೈಮರದಿಂದ ಬಿಸಿಲವಾಡಿಗೆ ಹೋಗುವ ಸಫಾರಿ ಹಾದಿಯಲ್ಲಿ ಕಂಡು ಬಂದ ಸುಮಾರು ಮೂರ್ನಾಲ್ಕು ನಿಮಿಷಗಳ ಈ ದೃಶ್ಯ ಸಫಾರಿ ಪ್ರವಾಸಿಗರು ಮಾತ್ರವಲ್ಲ ವನ್ಯಪ್ರೇಮಿಗಳ ಗಮನಸೆಳೆದಿದೆ.
ಸೀಳುನಾಯಿಗಳು ಹುಲಿ, ಚಿರತೆ ಮುಂತಾದ ಪ್ರಾಣಿಗಳ ಬೇಟೆಯನ್ನು ಎಗರಿಸಿ ತಾವು ಭಕ್ಷಿಸುವ ಘಟನೆಗಳು ಸಾಮಾನ್ಯ. ಗುಂಪಿನಲ್ಲಿ ಸಾಗುವ ಸೀಳು ನಾಯಿಗಳು ತಮಗಿಂತ ಬಲಿಷ್ಠವಾದ ಮೃಗಗಳು ಬೇಟೆಯಾಡಿದ ಮಾಂಸವನ್ನು ಉಪಾಯದಿಂದ ಕಬಳಿಸಿ ಹೊತ್ತೊಯ್ಯುತ್ತವೆ. ಆದರೆ ಈ ಕಬಿನಿ ಹಿನ್ನೀರು ಪ್ರದೇಶದಲ್ಲಿ ದಾಖಲಾದ ಘಟನೆಯಲ್ಲಿ ಸೀಳು ನಾಯಿಗಳು ಬೇಟೆಯಾಡಿದ ಕಡವೆ ಮರಿಯನ್ನು ಗಂಡು ಹುಲಿ ಬಂದು ಹೊತ್ತೊಯ್ದು ಭಕ್ಷಿಸಿದೆ.
ಈ ನಡುವೆ ಮರಿಯನ್ನು ಕಳೆದುಕೊಂಡ ಕಡವೆ, ಸೀಳು ನಾಯಿಗಳನ್ನು ಓಡಿಸುವ ಪ್ರಯತ್ನ ಮಾಡಿದರೂ ಸಫಲವಾಗುವುದಿಲ್ಲ. ಒಂದು ನಾಯಿಯನ್ನು ಓಡಿಸುವಷ್ಟರಲ್ಲಿ ಮತ್ತೊಂದು ಕಡೆಯಿಂದ ಸೀಳು ನಾಯಿಗಳು ಮರಿಯ ಮಾಂಸವನ್ನು ಭಕ್ಷಿಸಲಾರಂಭಿಸಿವೆ. ಅಂತಿಮವಾಗಿ ಸ್ಥಳಕ್ಕೆ ಹಾಜರಾದ ಹುಲಿರಾಯ ಕಡವೆ ಮಾಂಸವನ್ನು ಎತ್ತಿಕೊಂಡು ಹೋಗಿದೆ. ಸೀಳು ನಾಯಿಗಳ ಪೆಚ್ಚು ಮೋರೆ ಹಾಕಿಕೊಂಡು ಹುಲಿಯನ್ನು ನೋಡುತ್ತಾ ನಿಂತಿವೆ. ತಾಯಿ ಕಡವೆಯ ರೋದನ ಮುಂದುವರಿದಿದೆ.
ಜಂಗಲ್ ರೆಸಾರ್ಟ್ಸ್ ಬಸ್ಸಿನ ಚಾಲಕ ಸಿ. ಆರ್ . ನಾಗೇಶ್ ಅವರು ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್ ಮೂಲಕ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ರಾಯಚೂರು: ರಾಯಚೂರು ಪ್ರವಾಸದಲ್ಲಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಡಾ.ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿಗೆ ಲಘು ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.…
ಚಾಮರಾಜನಗರ: ಕಳೆದ ಮೂರು ತಿಂಗಳಿನಿಂದಲೂ ಬಂದ್ ಆಗಿದ್ದ ನಾಗರಹೊಳೆ ಹಾಗೂ ಬಂಡೀಪುರ ಸಫಾರಿ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.…
ಹಾಸನ: ಫ್ಯಾಕ್ಟರಿ ಕೆಲಸಕ್ಕೆ ಹೋಗಿದ್ದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಹೊರವಲಯದ ಹನುಮಂತಪುರ ಬಳಿ ನಡೆದಿದೆ. 27 ವರ್ಷ…
ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ತಾಪಮಾನ ಹೆಚ್ಚಾಗಿದ್ದು, ಬಿಸಿಲ ಝಳ ಆರಂಭವಾಗಿದೆ. ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಏರಿಕೆಯಾಗುವ ಸಾಧ್ಯತೆಯಿದೆ. ಕರಾವಳಿ…
ಬೆಂಗಳೂರು: ಕರ್ನಾಟಕದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜಕೀಯ ಜೀವನಕ್ಕೆ 50 ವರ್ಷಗಳು ತುಂಬಿದೆ. ಇಂದು ನಡೆಯುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ…
ರಾಜ್ಯದಲ್ಲಿ ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳಲ್ಲಿ ಐದು ವರ್ಷಗಳಿಗೊಮ್ಮೆ ಆಸ್ತಿ ತೆರಿಗೆಯನ್ನು ಪರಿಷ್ಕರಣೆ ಮಾಡಬೇಕು ಎಂಬ ನಿಯಮವಿದ್ದರೂ ವರ್ಷಕ್ಕೊಮ್ಮೆ ಆಸ್ತಿ…