ನಾಗರಹೊಳೆ ಕಬಿನಿ ಹಿನ್ನೀರು ಪ್ರದೇಶದಲ್ಲಿ ಅಪರೂಪದ ದೃಶ್ಯ ಕಣ್ತುಂಬಿಕೊಂಡ ಸಫಾರಿ ಪ್ರವಾಸಿಗರು
ಮೈಸೂರು: ನಾಗರ ಹೊಳೆ ಅಭಯಾರಣ್ಯದ ಕಬಿನಿ ಹಿನ್ನೀರು ಪ್ರದೇಶದಲ್ಲಿ ಸೀಳು ನಾಯಿಗಳು (Wild Dogs) ಬೇಟೆಯಾಡಿದ ಕಡವೆ ಮರಿಯನ್ನು ಹುಲಿರಾಯ ಎಗರಿಸಿದ ಅಪರೂಪದ ದೃಶ್ಯವನ್ನು ಸಫಾರಿ ಪ್ರವಾಸಿಗರು ಗುರುವಾರ ಕಣ್ತುಂಬಿಕೊಂಡಿದ್ದಾರೆ.
ಡಿ.ಬಿ.ಕುಪ್ಪೆ ಮತ್ತು ಅಂತರಸಂತೆ ವಲಯ ವ್ಯಾಪ್ತಿಗೆ ಸೇರಿದ ಕೈಮರದಿಂದ ಬಿಸಿಲವಾಡಿಗೆ ಹೋಗುವ ಸಫಾರಿ ಹಾದಿಯಲ್ಲಿ ಕಂಡು ಬಂದ ಸುಮಾರು ಮೂರ್ನಾಲ್ಕು ನಿಮಿಷಗಳ ಈ ದೃಶ್ಯ ಸಫಾರಿ ಪ್ರವಾಸಿಗರು ಮಾತ್ರವಲ್ಲ ವನ್ಯಪ್ರೇಮಿಗಳ ಗಮನಸೆಳೆದಿದೆ.
ಸೀಳುನಾಯಿಗಳು ಹುಲಿ, ಚಿರತೆ ಮುಂತಾದ ಪ್ರಾಣಿಗಳ ಬೇಟೆಯನ್ನು ಎಗರಿಸಿ ತಾವು ಭಕ್ಷಿಸುವ ಘಟನೆಗಳು ಸಾಮಾನ್ಯ. ಗುಂಪಿನಲ್ಲಿ ಸಾಗುವ ಸೀಳು ನಾಯಿಗಳು ತಮಗಿಂತ ಬಲಿಷ್ಠವಾದ ಮೃಗಗಳು ಬೇಟೆಯಾಡಿದ ಮಾಂಸವನ್ನು ಉಪಾಯದಿಂದ ಕಬಳಿಸಿ ಹೊತ್ತೊಯ್ಯುತ್ತವೆ. ಆದರೆ ಈ ಕಬಿನಿ ಹಿನ್ನೀರು ಪ್ರದೇಶದಲ್ಲಿ ದಾಖಲಾದ ಘಟನೆಯಲ್ಲಿ ಸೀಳು ನಾಯಿಗಳು ಬೇಟೆಯಾಡಿದ ಕಡವೆ ಮರಿಯನ್ನು ಗಂಡು ಹುಲಿ ಬಂದು ಹೊತ್ತೊಯ್ದು ಭಕ್ಷಿಸಿದೆ.
ಈ ನಡುವೆ ಮರಿಯನ್ನು ಕಳೆದುಕೊಂಡ ಕಡವೆ, ಸೀಳು ನಾಯಿಗಳನ್ನು ಓಡಿಸುವ ಪ್ರಯತ್ನ ಮಾಡಿದರೂ ಸಫಲವಾಗುವುದಿಲ್ಲ. ಒಂದು ನಾಯಿಯನ್ನು ಓಡಿಸುವಷ್ಟರಲ್ಲಿ ಮತ್ತೊಂದು ಕಡೆಯಿಂದ ಸೀಳು ನಾಯಿಗಳು ಮರಿಯ ಮಾಂಸವನ್ನು ಭಕ್ಷಿಸಲಾರಂಭಿಸಿವೆ. ಅಂತಿಮವಾಗಿ ಸ್ಥಳಕ್ಕೆ ಹಾಜರಾದ ಹುಲಿರಾಯ ಕಡವೆ ಮಾಂಸವನ್ನು ಎತ್ತಿಕೊಂಡು ಹೋಗಿದೆ. ಸೀಳು ನಾಯಿಗಳ ಪೆಚ್ಚು ಮೋರೆ ಹಾಕಿಕೊಂಡು ಹುಲಿಯನ್ನು ನೋಡುತ್ತಾ ನಿಂತಿವೆ. ತಾಯಿ ಕಡವೆಯ ರೋದನ ಮುಂದುವರಿದಿದೆ.
ಜಂಗಲ್ ರೆಸಾರ್ಟ್ಸ್ ಬಸ್ಸಿನ ಚಾಲಕ ಸಿ. ಆರ್ . ನಾಗೇಶ್ ಅವರು ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್ ಮೂಲಕ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ವೈಡ್ ಆಂಗಲ್ ಬಾ.ನಾ.ಸುಬ್ರಹ್ಮಣ್ಯ ವರ್ಷದ ಕೊನೆಯ ವಾರ ತೆರೆಗೆ ಬಂದಿರುವ ಚಿತ್ರಗಳಲ್ಲಿ ಒಂದು ‘ಮಾರ್ಕ್’. ಚಿತ್ರದ ಮುಖ್ಯ ಪಾತ್ರ ಮಾರ್ಕಾಂಡೇಯ…
2025ರಲ್ಲಿ ವಿಧಿವಶರಾದ ಗಣ್ಯರ ಮಾಹಿತಿ ಜನವರಿ... ನಾ.ಡಿಸೋ’ಜಾ: ಕನ್ನಡದ ಪ್ರಸಿದ್ಧ ಬರಹಗಾರ ಮತ್ತು ಕಾದಂಬರಿಕಾರ ನಾ ಡಿ’ಸೋಜಾ ಅವರು ಜನವರಿ…
ಎಚ್.ಎಸ್.ದಿನೇಶ್ಕುಮಾರ್ ಮೈಸೂರು: ಸರ್ಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವವರು ಎಚ್ಚರಿಕೆ ವಹಿಸಿದಲ್ಲಿ ನಡೆಯ ಬಹುದಾದ ವಂಚನೆಗಳನ್ನು ಹೇಗೆ ತಪ್ಪಿಸಬಹುದು ಎಂಬುದಕ್ಕೆ ವಿಧಾನಪರಿಷತ್…
ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್ಗಾಗಿ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…
ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…
ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…