ಮೈಸೂರು : ಎಸ್ ಬಿ ಐ ಮುಖ್ಯ ಶಾಖೆಯಲ್ಲಿ ಮೂವರು ಸಿಬ್ಬಂದಿಗಳು 45,48,052/- ರೂಗಳನ್ನ ದುರುಪಯೋಗಪಡಿಸಿಕೊಂಡು ಬ್ಯಾಂಕಿಗೆ ಮೋಸ ಮಾಡಿದ್ದಾರೆಂದು ಮುಖ್ಯ ವ್ಯವಸ್ಥಾಪಕರು ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬ್ಯಾಂಕಿನ ಸಿಬ್ಬಂದಿಗಳಾದ ರಾಕೇಶ್,ಪ್ರವೀಣ್ ಹಾಗೂ ಭಾಮಿನಿ ಕಂಚಿಗಾರ ಎಂಬ ಮೂವರು ಸಿಬ್ಬಂದಿಗಳ ವಿರುದ್ದ ವ್ಯವಸ್ಥಾಪಕರಾದ ಆರ್.ಡಿ.ಸುಂದರೇಶ್ ಪ್ರಕರಣ ದಾಖಲಿಸಿದ್ದಾರೆ.
ಬ್ಯಾಂಕ್ ನ ಸ್ವಾಧೀನದಲ್ಲಿದ್ದ 45,48,052/- ರೂಗಳ ನಾಲ್ಕು ಡಿಡಿ ಗಳನ್ನ ರದ್ದುಪಡಿಸಿ ಬ್ಯಾಂಕ್ ನ ಪಾರ್ಕಿಂಗ್ ಖಾತೆಗೆ ವರ್ಗಾವಣೆ ಮಾಡಿ ನಂತದ ಸದರಿ ಹಣವನ್ನ ಗ್ರಾಹಕರಾದ ಕಾವ್ಯ,ಸಾನಿಯಾರಾವ್ ಹಾಗೂ ಪ್ರಭುದೇವ್ ಎಂಬುವರ ಎಸ್.ಬಿ.ಖಾತೆಗೆ ವರ್ಗಾವಣೆ ಮಾಡಿದ್ದಾರೆ.
ನಂತರ ಅವರ ಅನುಮತಿ ಇಲ್ಲದೆ ಮೂವರ ಖಾತೆಯಿಂದ 30-03-2022 ರಂದು SBI ಮ್ಯೂಚುಯಲ್ ಫಂಡ್ ಗೆ ಟ್ರಾನ್ಫರ್ ಮಾಡಿದ್ದಾರೆ.ನಂತರ ಇದೇ ಹಣವನ್ನ 07-04-2022 ರಂದು ಮ್ಯೂಚುವೆಲ್ ಫಂಡ್ ನಿಂದ ಹಿಂಪಡೆದು ಗ್ರಾಹಕರ ಖಾತೆಗೆ ವರ್ಗಾವಣೆ ಮಾಡಿ ಮತ್ತೆ ಬ್ಯಾಂಕಿನ ಹೆಸರಿಗೆ ನಾಲ್ಕು ಡಿಡಿಗಳನ್ನ ಮಾಡಿ ಜಮಾ ಮಾಡಿದ್ದಾರೆ.
30-03-2022 ರಿಂದ 07-04-2022 ರವರೆಗೆ 45,48,052/- ರೂ ಹಣವನ್ನ ತಾತ್ಕಾಲಿಕವಾಗಿ ದುರುಪಯೋಗಪಡಿಸಿಕೊಂಡು ಬ್ಯಾಂಕಿಗೆ ವಂಚಿಸಿ ಗ್ರಾಹಕರ ಅನುಮತಿ ಇಲ್ಲದೆ ಮ್ಯೂಚುಯಲ್ ಫಂಡ್ ಗೆ ಇನ್ವೆಸ್ಟ್ ಮಾಡಿ ಪ್ರಾದೇಶಿಕ ಕಚೇರಿಗೆ ತಪ್ಪುಮಾಹಿತಿ ನೀಡಿರುವ ಮೂವರು ಸಿಬ್ಬಂದಿಗಳ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸುವಂತೆ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಮುಖ್ಯ ವ್ಯವಸ್ಥಾಪಕರು ಪ್ರಕರಣ ದಾಖಲಿಸಿದ್ದಾರ.
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…