ಜಿಲ್ಲೆಗಳು

ಭಯೋತ್ಪಾದನೆ ಸಾರ್ವಜನಿಕರಿಗೆ ಮೈಸೂರು ಎಷ್ಟು ಸುರಕ್ಷಿತ?

-ಜೆ.ಬಿ.ರಂಗಸ್ವಾಮಿ, ನಿವೃತ್ತ ಹಿರಿy ಪೊಲೀಸ್ ಅಧಿಕಾರಿ

ದಶಕಗಳಿಂದ ಇಲ್ಲಿ ಕೆಲಸ ಮಾಡಿದ ಪೊಲೀಸ್ ಅಧಿಕಾರಿಗಳು ಮಾಫಿಯಾ ಚಟುವಟಿಕೆ ತಲೆ ಎತ್ತದಂತೆ ಮೈಸೂರನ್ನು ಸುರಕ್ಷಿತಗೊಳಿಸಿದ್ದಾರೆ. ಹಿಂದೆ ಇಲ್ಲಿ ಕೆಲಸ ಮಾಡಿದ ಎಲ್.ರೇವಣಸಿದ್ದಯ್ಯ, ಡಿ.ಎನ್.ಮುನಿಕೃಷ್ಣ, ಎಚ್.ಆರ್.ಕಸ್ತೂರಿ ರಂಗನ್, ಕೆಂಪಯ್ಯ ಮುಂತಾದ ಅಧಿಕಾರಿಗಳು ರೌಡಿ ಚಟುವಟಿಕೆಗಳು, ಅಕ್ರಮ ದಂಧೆಗಳ ಮೇಲೆ ನಿರಂತರ ದಾಳಿ ನಡೆಸಿ ನಿುಂಂತ್ರಿಸಿದ್ದರಿಂದ ಮೈಸೂರು ಇಂದು ಸುರಕ್ಷಿತ ನಗರವೆನಿಸಿಕೊಂಡಿದೆ.

೧೯೭೫ರ ವೇಳೆಗಾಗಲೇ ಮೈಸೂರು ನಗರದಲ್ಲಿ ನಾನಾ ಬಗೆಯ ಅಕ್ರಮ ದಂಧೆಗಳು ತಲೆ ಎತ್ತ ತೊಡಗಿದ್ದವು. ಕಳ್ಳಬಟ್ಟಿ ಮದ್ಯ , ಶ್ರೀಗಂಧ, ಅಮೂಲ್ಯ ವಿಗ್ರಹ, ಹರಳುಗಳು ಮುಂತಾದ ಕಳ್ಳಸಾಗಾಣಿಕೆ ಚಟುವಟಿಕೆಗಳು, ಲಾಟರಿ, ಮಟ್ಕಾ ದಂಧೆಗಳು ಎಗ್ಗಿಲ್ಲದೆ ನಡೆಯುತ್ತಿದ್ದವು. ಸ್ವಲ್ಪ ಸಡಿಲ ಬಿಟ್ಟರೆ ಸಾಕಿತ್ತು. ತೆರೆಮರೆಯುಲ್ಲಿ ನಡೆಯುತ್ತಿದ್ದ ಈ ದಂಧೆಗಳು ಹಾದಿ ಬೀದಿಗಿಳಿಯುವ ಸ್ಥಿತಿಗೆ ಮೈಸೂರು ಬಂದಿತ್ತು. ಆಗ ಬಂತು ನೋಡಿ ೧೯೭೫ರ ಎಮರ್ಜೆನ್ಸಿ.
ಪೊಲೀಸರಿಗೆ ಇನ್ನಿಲ್ಲದ ಬಲ ಬಂತು. ತಾನುಂಟೋ ಮೂಲೋಕವುಂಟೋ ಎಂದು ಮೆರೆಯುತ್ತಿದ್ದ ರೌಡಿಗಳನ್ನು, ಕಾಳ ದಂಧೆ ಕೋರರನ್ನು ಅಟ್ಟಾಡಿಸಿ ಮಟ್ಟ ಹಾಕಿದರು. ೧೯೮೦ರ ವೇಳೆಗೆ ಅಕ್ರಮ ದಂಧೆಗಳು, ರೌಡಿಗಳ ಅಟ್ಟಹಾಸ ತಗ್ಗಿತ್ತು. ಹಾಗಾಗಿ ೧೦- ೧೫ ಲಕ್ಷ ಜನಸಂಖ್ಯೆಯ ನಗರಗಳಿಗೆ ಹೋಲಿಸಿದರೆ ಮೈಸೂರು ಅತ್ಯಂತ ಸುರಕ್ಷಿತ ನಗರ.

ಆದರೆ, ಇತ್ತೀಚೆಗೆ ಹೆಚ್ಚಾಗಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಮೈಸೂರು ನಿಧಾನಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತಿದೆ. ಪಾಕಿಸ್ತಾನದಿಂದ ಬಂದಿದ್ದ ಅಕ್ರಮ ವಲಸಿಗರು, ಮುಂಬಯಿ ಮಾಫಿಯಾ ಗ್ಯಾಂಗಿನವರು ಗುಟ್ಟಾಗಿ ಅಡಗಿದ್ದಕ್ಕೆ ಲೆಕ್ಕವಿಲ್ಲ. ಹೆಚ್ಚುವರಿಾಂಗಿ ಭಾರತದಲ್ಲೇ ಉಳಿದಿದ್ದಕ್ಕೆ NOLI (no Objection To Leave India) ಪಡೆದು ಮೈಸೂರಿನ ಮೂಲಕ ಹೋದದ್ದಕ್ಕೂ ಲೆಕ್ಕವಿಲ್ಲ. ಅದಕ್ಕೆ ಕುಮ್ಮಕ್ಕು ನೀಡುತ್ತಿದ್ದವರನ್ನು ಮಟ್ಟ ಹಾಕಿದ್ದರಿಂದ ಅದೂ ನಿಂತಿತು.
೨೦೦೬ರಲ್ಲಿ ಎ.ಕೆ.- ೪೭ ಮಾರಕಾಸ್ತ್ರ ಹೊಂದಿದ್ದ ಮೂವರು ಉಗ್ರಗಾಮಿಗಳು ಸೆರೆಯಾದರು. ಅವರ ಲ್ಯಾಪ್‌ಟಾಪ್ ಸಂಪರ್ಕ ಸಾಧನಗಳೆಲ್ಲವೂ ಸೀಜ್ ಆದವು. ಅವರಲ್ಲಿ ಸಿಕ್ಕ ವಸ್ತುಗಳಾದರೂ ಏನು? ಬೇರೆ ದೇಶಗಳ ಪಾಸ್‌ಪೋರ್ಟ್‌ಗಳು, ಸ್ಛೋಟಕಗಳು, ಅಪಾರ ಹಣ, ವಿದೇಶೀ ಕರೆನ್ಸಿಗಳು ಇತ್ಯಾದಿ ಸಿಕ್ಕವು. ಹೊರಬಂದ ಸತ್ಯ ಸಂಗತಿ ಕೇಳಿ ಇಡೀ ದೇಶವೇ ದಂಗುಬಡಿಯಿತು.

ಇವರು ಸಿಕ್ಕಿಬಿದ್ದ ಪ್ರಸಂಗ ಕೂಡ ರೋಚಕ. ಉದಯಗಿರಿ ಪೊಲೀಸ್ ಠಾಣೆಗೆ ಇಬ್ಬರು ವಿದ್ಯಾರ್ಥಿಗಳ ಪಾಸ್‌ಪೋರ್ಟ್ ವೆರಿಫಿಕೇಷನ್ ಬಂದಿತ್ತು. ಪೊಲೀಸ್ ಇನ್‌ಸ್ಪೆಕ್ಟರ್ ಟೇಬಲ್ ಮೇಲೆ ಆ ಹುಡುಗರ ವೋಟರ್ ಐ.ಡಿ., ವಿಳಾಸ ಇತ್ಯಾದಿ ಇತ್ಯೋಪರಿಗಳೂ ಇದ್ದವು. ಫೋಟೊ ಐಡೆಂಟಿಫಿಕೇಷನ್ ಆಗಬೇಕಿತ್ತು. ಹುಡುಗರನ್ನು ಒಳ ಕರೆದರು ಇನ್‌ಸ್ಪೆಕ್ಟರ್. ಅವರಿಬ್ಬರೂ ಕೆಂಪಗೆ ಆರು ಅಡಿ ಎತ್ತರವಿದ್ದರು. ನೋಡಿದೊಡನೆ ನೆನಪಿಟ್ಟುಕೊಳ್ಳುವ ಆಕಾರ, ಕಳೆ.

ಇನ್‌ಸ್ಪೆಕ್ಟರ್ ಎಚ್.ಎಲ್.ನಾಗರಾಜ್ ಅವರ ಹೆಸರು ವಿಳಾಸ ಇತ್ಯಾದಿಗಳನ್ನು ಕನ್ನಡದಲ್ಲೇ ಕೇಳಲು ಶುರು ಮಾಡಿದರು. ಅವರಿಬ್ಬರೂ ಏನೇನೂ ಅರ್ಥವೇ ಅಗಲಿಲ್ಲವೆಂಬಂತೆ ವರ್ತಿಸಿದರು. ಹುಟ್ಟಿದ್ದು ಬೆಳೆದಿದ್ದು ಓದಿದ್ದು ಎಲ್ಲವೂ ಮೈಸೂರೇ. ಅದರೂ ಕನ್ನಡವೇ ಗೊತ್ತಿಲ್ಲವೆಂದರೆ?

‘‘ಇವರಿಬ್ಬರೂ ಇಂಗ್ಲಿಷ್ ಮತ್ತು ಉರ್ದು ಓದಿರೋದು ಸಾರ್. ಗುಜರಾತಿನಲ್ಲಿ ಬಹಳ ವರ್ಷ ಇದ್ದರು. ಮನೇಲೂ ಕನ್ನಡ ಮಾತಾಡೋದಿಲ್ಲ’’ ಎಂದು ಜೊತೆ ಬಂದಿದ್ದ ಪಾಸ್‌ಪೋರ್ಟ್ ಏಜೆಂಟ್, ಆ ಹುಡುಗರ ಪರ ಸಮಜಾಯಿಷಿ ನೀಡಿದ. ಇನ್‌ಸ್ಪೆಕ್ಟರ್ ಮುಲಾಜಿಲ್ಲದೆ ತಿರಸ್ಕರಿಸಿ ಕಳಿಸಿದರು. ಇದಾದ ನಂತರ ಅನೇಕ ಪುಡಾರಿಗಳು ಅಲಿಗೇಷನ್ ವಾಡಿದರು. ಜಾತಿಯ ಕಾರಣಕ್ಕೆ ತಾರತಮ್ಯ ಮಾಡಿದರೆಂದು ದೂರಿದರು.

ಇದಾಗಿ ನಾಲ್ಕಾರು ತಿಂಗಳು ಕಳೆದಿತ್ತು. ಎ.ಕೆ.-೪೭ ನೊಂದಿಗೆ ಸಿಕ್ಕಿ ಬಿದ್ದ ಮೂವರು ಉಗ್ರರಲ್ಲಿ ಇದೇ ಹುಡುಗರಿದ್ದರು. ಅಮಾಯಕ ಮುಗ್ಧರಾದ ಈ ವಿದ್ಯಾರ್ಥಿಗಳನ್ನು ಬಿಡಿಸಿಕೊಳ್ಳಲು ಅನೇಕ ದೇಶಭಕ್ತರ ಮತ್ತು ಸ್ಲೀಪರ್ ಸೆಲ್ ಬುದ್ಧಿಜೀವಿಗಳ ದಂಡೇ ಶ್ರಮಿಸಿತು. ಆರೋಪ ಸ್ಥಿರಪಟ್ಟಿದ್ದರಿಂದ ಮೈಸೂರು ನ್ಯಾಯಾಲಯ ಫಹಾದ್‌ಗೆ ೨೫ ವರ್ಷ ಮತ್ತು ಮತ್ತಿಬ್ಬರಿಗೆ ೧೦ ವರ್ಷಗಳ ಶಿಕ್ಷೆ ವಿಧಿಸಿದೆ.

ಸಮಾಜ ಘಾತುಕ ಕೃತ್ಯವೆಸಗುವ ರೌಡಿಗಳಿಗೂ, ಉಗ್ರರಿಗೂ ಇರುವ ಪ್ರಮುಖ ವ್ಯತ್ಯಾಸವೆಂದರೆ. ಉಗ್ರರ ಚಟುವಟಿಕೆ ಸಾರ್ವಜನಿಕರಿಗೆ ಗೊತ್ತಾಗುವುದೇ ಇಲ್ಲ. ವಿದ್ಯಾರ್ಥಿಗಳಂತೆ, ಬೇರೇನೋ ಉದ್ಯೋಗ ಮಾಡುವವರಂತೆ ಅವರ ಪಾಡಿಗೆ ಅವರು ಮಿಣ್ಣಗಿರುತ್ತಾರೆ. ಯಾರ ತಂಟೆಗೂ ಹೋಗದ ಸಾಧು ಸತ್ಪುರುಷರಂತೆ ಇರುತ್ತಾರೆ. ಅವರಿರುವ ವಠಾರದವರಿಗೇ ಅವರ ಜಾಡು ತಿಳಿುುಂವುದಿಲ್ಲ.

ಆದರೆ, ಸಾರ್ವಜನಿಕರು ತಮ್ಮ ಆಜೂಬಾಜಿನಲ್ಲಿರುವ ವ್ಯಕ್ತಿಗಳ ಚಟುವಟಿಕೆy ಮೇಲೆ ನಿಗಾ ಇಡುವುದು ಅಗತ್ಯ. ಕೆಲವರ ಸಂಶಾಂಸ್ಪದ ನಡವಳಿಕೆ, ಅಪರಾತ್ರಿಯಲ್ಲಿ ತಿರುಗಾಟ, ಅಪರಿಚಿತರು ಆ ಮನೆಗೆ ಬಂದು ಹೋಗುವುದು ಇತ್ಯಾದಿ ವಿಲಕ್ಷಣ ಸಂಗತಿಗಳನ್ನು ಕಂಡಾಗ ಪೊಲೀಸ್ ಕಮಿಷನರಿಗೆ ತಕ್ಷಣ ಸುದ್ದಿ ಮುಟ್ಟಿಸುವುದು ಅತ್ಯಗತ್ಯ. ನಿಮ್ಮ ಗೋಪ್ಯತೆಯನ್ನು ಪೊಲೀಸರು ಕಾಪಾಡುತ್ತಾರೆ. ಅನುವಾನ ಬೇಡ.

andolana

Recent Posts

ಮಹದೇಶ್ವರ ಬೆಟ್ಟ : ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ತೆರೆ

ಹನೂರು : ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಬುಧವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ…

7 mins ago

ಭಾರತೀಯ ಸೇನೆ ಬಗ್ಗೆ ರಾಹುಲ್‌ ಗಾಂಧಿ ಆಕ್ಷೇಪಾರ್ಹ ಹೇಳಿಕೆ

ನವದೆಹಲಿ: ಭಾರತ್‌ ಜೋಡೋ ಯಾತ್ರೆಯ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಭಾರತೀಯ ಸೇನೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ…

9 mins ago

ದೊಡ್ಡಕೆರೆ, ಲಿಂಗಾಂಬುಧಿ ಕೆರೆ ಪುನರುಜ್ಜೀವನಗೊಳಿಸಿ : ಪರಿಸರ ಸಂರಕ್ಷಣಾ ವೇದಿಕೆ ಒತ್ತಾಯ

ಮೈಸೂರು : ನಗರದಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ(ಎಂಡಿಎ) ರಚಿಸಿರುವ ನಿವೇಶನಗಳನ್ನು ತೆರವುಗೊಳಿಸಿ ದೊಡ್ಡಕೆರೆ ಮತ್ತು ಲಿಂಗಾಂಬುಧಿ ಕೆರೆಯನ್ನು ಪುನರುಜ್ಜೀವನಗೊಳಿಸಬೇಕು ಎಂದು…

20 mins ago

ನಾಳೆ ಸಾರಿಗೆ ಮುಷ್ಕರ : ಕೆಎಸ್‌ಆರ್‌ಟಿಸಿ ಬಸ್‌ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ

ಬೆಂಗಳೂರು : 38 ತಿಂಗಳ ವೇತನ ಬಾಕಿ ಹಣ ನೀಡಬೇಕು ಎನ್ನುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆಎಸ್‌ಆರ್‌ಟಿಸಿಯ…

59 mins ago

ವಿಧಾನಸೌಧದಲ್ಲಿ ಮಾಧ್ಯಮಕ್ಕೆ ಇನ್ನಷ್ಟು ನಿರ್ಬಂಧ

ಬೆಂಗಳೂರು : ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಕಾರ್ಯವ್ಯಾಪ್ತಿಯನ್ನು ನಿರ್ಬಂಧಿಸುವ ಕುರಿತು ವಾರ್ತಾ ಇಲಾಖೆಗೆ ಸರ್ಕಾರ ಪತ್ರ ಬರೆದಿದೆ. ಪತ್ರದಲ್ಲಿ, ಮಾಧ್ಯಮಗಳು…

1 hour ago

ನಾಳೆಯಿಂದಲೇ ನಾಗರಹೊಳೆ, ಬಂಡೀಪುರ ಸಫಾರಿ ಪುನರಾರಂಭ

ಮೈಸೂರು : ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನಗಳಲ್ಲಿ ಫೆಬ್ರವರಿ 19ರಿಂದ ಸಫಾರಿ ಪುನರಾರಂಭವಾಗಲಿದೆ ಎಂದು ಅರಣ್ಯ ಸಚಿವ ಈಶ್ವರ…

2 hours ago