ವರದಿ: ಮಹಾದೇಶ್ ಎಂ ಗೌಡ
ಹನೂರು: ತಾಲ್ಲೂಕಿನ ವಿಷಜಂತು ನಿವಾರಕನಿಗೆ ಬೇಕಿದೆ ಅಗತ್ಯ ನೆರವು.
ಹಾವು, ಚೇಳು, ನಾಯಿ, ಇಲಿ, ಪೈಲ್ಸ್, ಕಾಮಾಲೆ ಯಾವುದೇ ರೋಗ ಬಂದರೂ ಉಚಿತ ಔಷಧಿ ಕೊಡುವ ನಾಟಿ ವೈದ್ಯನಿಗೆ ಬೇಕಿದೆ ನೆರವು. ಅದೂ, ಸ್ವಂತಕಲ್ಲ- ಸಮಾಜಸೇವೆಗೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿನ ಸಾಲೂರು ಮಠದ ಸಮೀಪವಿರುವ ಕಾಡು ಹೊಲ ಗ್ರಾಮದ ನಿವಾಸಿ 40 ವರ್ಷಗಳಿಂದ ವಿಷಜಂತುಗಳ ಕಡಿತಕ್ಕೆ ಉಚಿತ ಔಷಧ- ರೋಗಿಗಳಿಗೆ ಹೊಟ್ಟೆತುಂಬಾ ಊಟ ಹಾಕಿ ಕಳುಹಿಸುತ್ತಿರುವ ಪುಟ್ಟತಮ್ಮಡಿ ಅವರು ಅಗತ್ಯ ನೆರವಿಗೆ ದಾನಿಗಳ ಮೊರೆ ಇಟ್ಟಿದ್ದಾರೆ.
ರೋಗಿಗಳು ಬಂದ ವೇಳೆ ಮಲಗಿಸಿ ಚಿಕಿತ್ಸೆ ಕೊಡಲು ಎರಡು ಕಬ್ಬಿಣದ ಮಂಚ, ದಿಂಬುಗಳನ್ನು ಕೊಟ್ಟರೇ ತನಗೆ ಎಷ್ಟೋ ಸಹಾಯಕವಾಗಲಿದೆ. ಬಂದವರಿಗೆ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ಕೊಡಲು ಕೆಲವೊಮ್ಮೆ ದುಸ್ತರ ಆಗಲಿದ್ದು ಆಸಕ್ತರು ತನಗೆ ಚಿಕ್ಕ ಕೊಡುಗೆಯನ್ನು ಕೊಟ್ಟರೇ ಮಲೆ ಮಹದೇಶ್ವರನ ಒಳಿತು ಮಾಡುತ್ತಾನೆ ಎಂದು ನಿಷ್ಕಲ್ಮಶ ಬೇಡಿಕೆಯನ್ನು “ಆಂದೋಲನ”ದೊಟ್ಟಿಗೆ ಹಂಚಿಕೊಂಡಿದ್ದಾರೆ.
260 ಮಂದಿಗೆ ಚಿಕಿತ್ಸೆ: ಪುಟ್ಟ ತಮ್ಮಡಿ ಅವರು ಇಲ್ಲಿಯವರೆಗೆ 260 ಮಂದಿಗೆ ಹಾವು, ಚೇಳಿನ ಕಡಿತಕ್ಕೆ ಉಚಿತ ಚಿಕಿತ್ಸೆ ಕೊಟ್ಟಿದ್ದು ಎಲ್ಲರೂ ಗುಣಮುಖರಾಗಿ ತೆರಳಿದ್ದಾರೆ. ತಮ್ಮ ಬಳಿ ಚಿಕಿತ್ಸೆ ಪಡೆದ ದಿನಾಂಕ, ವಿವರವನ್ನು ಬರೆದಿಟ್ಟುಕೊಂಡು ಕಾಪಿಟ್ಟಿರುವ ಈ ನಾಟಿ ವೈದ್ಯನಿಗೆ ಆಸಕ್ತರು ನೆರವು ನೀಡಬಹುದಾಗಿದೆ. ಅಂದಹಾಗೆ, ಇವರ ತಂದೆ ಜುಟ್ಟುಮಲ್ಲಪ್ಪ ಕೂಡ ನಾಟಿ ವೈದ್ಯರಾಗಿದ್ದು ತಂದೆಯಿಂದ ಕಲಿತ ಪಾರಂಪರಿಕ ಜ್ಞಾನವನ್ನು ಮುಂದುವರೆಸಿಕೊಂಡು ಇವರು ಹೋಗುತ್ತಿದ್ದಾರೆ.
ಮಲೆಮಹದೇಶ್ವರ ಬೆಟ್ಟ ಹಾಗೂ ಸುತ್ತಮುತ್ತಲಿನ ಹತ್ತಾರು ಊರುಗಳ ಜನರು ಈಗಲೂ ಪುಟ್ಟತಮ್ಮಡಿ ಅವರ ಬಳಿ ಬರಲಿದ್ದಾರೆ.
ಮಲೆ ಮಹಾದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡು ಹೊಲ ಗ್ರಾಮದ ಪುಟ್ಟ ತಮ್ಮಡಿ ರವರ ಸೇವೆಯನ್ನು ಗುರುತಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚಾಮರಾಜನಗರ ಇವರೂ ಸಹ 2019ರಲ್ಲಿ ಸನ್ಮಾನ ಪತ್ರ ವಿತರಿಸಿದ್ದಾರೆ.
ಮಂಡ್ಯ: ಮನೆಯ ಮುಂದಿನ ನೀರಿನ ಸಂಪ್ಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಪಾಂಡವಪುರ ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ. ಗ್ರಾಮದ…
ಗುಂಡ್ಲುಪೇಟೆ: ರಾಷ್ಟ್ರೀಯ ಹೆದ್ದಾರಿ ಮೈಸೂರು-ಊಟಿ ರಸ್ತೆಯ ಗುಂಡ್ಲುಪೇಟೆ ತಾಲ್ಲೂಕಿನ ಮಳವಳ್ಳಿ ಗೇಟ್ ಬಳಿ ಗೂಡ್ಸ್ ಲಾರಿ ಹಾಗೂ ಕೆಎಸ್ಆರ್ಟಿಸಿ ಬಸ್…
ಬೆಟ್ಟದಪುರ: ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟಿರುವ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಸಂಗರಶೆಟ್ಟಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಎಸ್.ಟಿ.ಆನಂದ್ (೬೦)…
ಗುಂಡ್ಲುಪೇಟೆ: ಟಾಟಾ ಏಸ್ ಹಾಗೂ ಬೈಕ್ ನಡುವೆ ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಚಾಮರಾಜನಗರ-ಗುಂಡ್ಲುಪೇಟೆ ರಸ್ತೆಯ…
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಫ್ರಾನ್ಸ್ ಮತ್ತು ಸ್ಲೊವಾಕಿಯಾಕ್ಕೆ ಒಂದು ವಾರದ ಭೇಟಿಗಾಗಿ ತೆರಳಿದ್ದಾರೆ. ಈ ಸಂದರ್ಭದಲ್ಲಿ…
ಉಡುಪಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ…