ಜಿಲ್ಲೆಗಳು

ತಾಲ್ಲೂಕಿನ ವಿಷಜಂತು ನಿವಾರಕನಿಗೆ ಬೇಕಿದೆ ಅಗತ್ಯ ನೆರವು

ವರದಿ: ಮಹಾದೇಶ್ ಎಂ ಗೌಡ

ಹನೂರು: ತಾಲ್ಲೂಕಿನ ವಿಷಜಂತು ನಿವಾರಕನಿಗೆ ಬೇಕಿದೆ ಅಗತ್ಯ ನೆರವು.

ಹಾವು, ಚೇಳು, ನಾಯಿ, ಇಲಿ, ಪೈಲ್ಸ್, ಕಾಮಾಲೆ ಯಾವುದೇ ರೋಗ ಬಂದರೂ ಉಚಿತ ಔಷಧಿ ಕೊಡುವ ನಾಟಿ ವೈದ್ಯನಿಗೆ ಬೇಕಿದೆ ನೆರವು. ಅದೂ, ಸ್ವಂತಕಲ್ಲ- ಸಮಾಜಸೇವೆಗೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿನ‌ ಸಾಲೂರು ಮಠದ ಸಮೀಪವಿರುವ ಕಾಡು ಹೊಲ ಗ್ರಾಮದ ನಿವಾಸಿ 40 ವರ್ಷಗಳಿಂದ ವಿಷಜಂತುಗಳ ಕಡಿತಕ್ಕೆ ಉಚಿತ ಔಷಧ- ರೋಗಿಗಳಿಗೆ ಹೊಟ್ಟೆತುಂಬಾ ಊಟ ಹಾಕಿ ಕಳುಹಿಸುತ್ತಿರುವ ಪುಟ್ಟತಮ್ಮಡಿ ಅವರು ಅಗತ್ಯ ನೆರವಿಗೆ ದಾನಿಗಳ ಮೊರೆ ಇಟ್ಟಿದ್ದಾರೆ.

ರೋಗಿಗಳು ಬಂದ ವೇಳೆ ಮಲಗಿಸಿ ಚಿಕಿತ್ಸೆ ಕೊಡಲು ಎರಡು ಕಬ್ಬಿಣದ ಮಂಚ, ದಿಂಬುಗಳನ್ನು ಕೊಟ್ಟರೇ ತನಗೆ ಎಷ್ಟೋ ಸಹಾಯಕವಾಗಲಿದೆ. ಬಂದವರಿಗೆ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ಕೊಡಲು ಕೆಲವೊಮ್ಮೆ ದುಸ್ತರ ಆಗಲಿದ್ದು ಆಸಕ್ತರು ತನಗೆ ಚಿಕ್ಕ ಕೊಡುಗೆಯನ್ನು ಕೊಟ್ಟರೇ ಮಲೆ ಮಹದೇಶ್ವರನ ಒಳಿತು ಮಾಡುತ್ತಾನೆ ಎಂದು ನಿಷ್ಕಲ್ಮಶ ಬೇಡಿಕೆಯನ್ನು “ಆಂದೋಲನ”ದೊಟ್ಟಿಗೆ ಹಂಚಿಕೊಂಡಿದ್ದಾರೆ.

260 ಮಂದಿಗೆ ಚಿಕಿತ್ಸೆ: ಪುಟ್ಟ ತಮ್ಮಡಿ ಅವರು ಇಲ್ಲಿಯವರೆಗೆ 260 ಮಂದಿಗೆ ಹಾವು, ಚೇಳಿನ ಕಡಿತಕ್ಕೆ ಉಚಿತ ಚಿಕಿತ್ಸೆ ಕೊಟ್ಟಿದ್ದು ಎಲ್ಲರೂ ಗುಣಮುಖರಾಗಿ ತೆರಳಿದ್ದಾರೆ. ತಮ್ಮ ಬಳಿ ಚಿಕಿತ್ಸೆ ಪಡೆದ ದಿನಾಂಕ, ವಿವರವನ್ನು ಬರೆದಿಟ್ಟುಕೊಂಡು ಕಾಪಿಟ್ಟಿರುವ ಈ ನಾಟಿ ವೈದ್ಯನಿಗೆ ಆಸಕ್ತರು ನೆರವು ನೀಡಬಹುದಾಗಿದೆ. ಅಂದಹಾಗೆ, ಇವರ ತಂದೆ ಜುಟ್ಟುಮಲ್ಲಪ್ಪ ಕೂಡ ನಾಟಿ ವೈದ್ಯರಾಗಿದ್ದು ತಂದೆಯಿಂದ ಕಲಿತ ಪಾರಂಪರಿಕ ಜ್ಞಾನವನ್ನು ಮುಂದುವರೆಸಿಕೊಂಡು ಇವರು ಹೋಗುತ್ತಿದ್ದಾರೆ.

ಮಲೆಮಹದೇಶ್ವರ ಬೆಟ್ಟ ಹಾಗೂ ಸುತ್ತಮುತ್ತಲಿನ ಹತ್ತಾರು ಊರುಗಳ ಜನರು ಈಗಲೂ ಪುಟ್ಟತಮ್ಮಡಿ ಅವರ ಬಳಿ ಬರಲಿದ್ದಾರೆ.

ಮಲೆ ಮಹಾದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡು ಹೊಲ ಗ್ರಾಮದ ಪುಟ್ಟ ತಮ್ಮಡಿ ರವರ ಸೇವೆಯನ್ನು ಗುರುತಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚಾಮರಾಜನಗರ ಇವರೂ ಸಹ 2019ರಲ್ಲಿ ಸನ್ಮಾನ ಪತ್ರ ವಿತರಿಸಿದ್ದಾರೆ.

 

andolanait

Recent Posts

ನಾಳೆ ಸಿಎಂ ಡಿ.ಕೆ.ಶಿವಕುಮಾರ್‌ರಿಂದ ಮೈಸೂರು ಜಿಲ್ಲಾ ಪ್ರವಾಸ

ಮೈಸೂರು: ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆದ ಬಳಿಕ ಮೊದಲ ಬಾರಿಗೆ ನಾಳೆ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ನಾಳೆ ಪ್ರಧಾನಿ…

9 hours ago

ದಯವಿಟ್ಟು ಕರ್ನಾಟಕ ಬಂದ್‌ ಕೈಬಿಡಿ: ಸಿಎಂ ಡಿಕೆಶಿ ನಮ್ರತೆಯ ಮನವಿ

ಬೆಂಗಳೂರು: ರಾಜ್ಯದ ಹಿತ ಕಾಪಾಡೋಕೆ ನಾವಿದ್ದೀವಿ. ದಯವಿಟ್ಟು ಬಂದ್‌ ಕೈಬಿಡಬೇಕು ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಸರ್ಕಾರದ ಪರವಾಗಿ ನಮ್ರತೆಯ ಮನವಿ…

10 hours ago

ಮುಂದುವರಿದ ಕಾವೇರಿ ಕಿಚ್ಚು: ಆಗಸ್ಟ್.‌13ರಂದು ಕರ್ನಾಟಕ ಬಂದ್‌

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ CWRC, CWMA ಆದೇಶ ವಿರೋಧಿಸಿ ರಾಜ್ಯದಲ್ಲಿ ರೈತರ ಹೋರಾಟ ಭುಗಿಲೆದ್ದಿದೆ. ರೈತರ…

10 hours ago

ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರೀ…

10 hours ago

ಮೂರನೇ ಆಷಾಢ ಶುಕ್ರವಾರದ ಸಂಭ್ರಮ: ನಾಡದೇವಿಗೆ ಗಜಲಕ್ಷ್ಮೀ ಅಲಂಕಾರ

ಮೈಸೂರು: ಇಂದು ಆಷಾಢ ಮಾಸದ ಮೂರನೇ ಶುಕ್ರವಾರದ ಸಂಭ್ರಮ ಮನೆಮಾಡಿದ್ದು, ನಾಡದೇವತೆ ಚಾಮುಂಡೇಶ್ವರಿಗೆ ಗಜಲಕ್ಷ್ಮೀ ಅಲಂಕಾರ ಮಾಡಲಾಗಿದೆ. ಆಷಾಢ ಮಾಸದ…

10 hours ago

ಓದುಗರ ಪತ್ರ: ಕಾವೇ..ರಿ

ಕಾವೇ..ರಿ ಕನ್ನಡ ನಾಡಿನ ಜೀವನದಿ, ಸದಾ ಹರಿಯುವಳು ಜುಳು ಜುಳು ಕಾವೇರಿ ತಮಿಳು ನಾಡಿನ ತಗಾದೆಯಿಂದಾಗಿ ಆಗಾಗ ಆಗುವಳು ಕಾವೇ..ರಿ…

19 hours ago