ಜಿಲ್ಲೆಗಳು

ಎಕ್ಸ್‌ಪ್ರೆಸ್‌ ಹೆಸರಿಟ್ಟು ದರ 20ರೂ. ಹೆಚ್ಚಳ!

ಚಾ.ನಗರ-ಮೈಸೂರು ವಾರ್ಗದ ಪ್ರಾಂಣಿಕರಿಂದ ತೀವ್ರ ಅಸವಾಧಾನ
ಚಾಮರಾಜನಗರ: ಮೈಸೂರು-ಚಾಮರಾಜನಗರ ವಾರ್ಗವಾಗಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲುಗಾಡಿ ಹೆಸರಿನಲ್ಲಿ ಪ್ರಯಾಣದರವನ್ನು ೨೦ರೂ. ಹೆಚ್ಚಳ ವಾಡಲಾಗಿದೆ!
ಈ ವಾರ್ಗದ ಉದ್ದಕ್ಕೂ ಬರುವ ಸ್ಟೇಷನ್‌ಗಳಲ್ಲಿ ನಿಲುಗಡೆಾಂಗುವ ಈ ಗಾಡಿಗೆ ಎಕ್ಸ್‌ಪ್ರೆಸ್ ಹೆಸರಿಟ್ಟಿರುವುದು ಹಾಸ್ಯಾಸ್ಪದ ಎಂದು ಪ್ರಾಂಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಿಂದ ಮಧ್ಯಾಹ್ನ ೧೨.೧೫ಕ್ಕೆ ಮತ್ತು ೩.೪೫ಕ್ಕೆ ಹೊರಡುವ ಹಾಗೆೆಯೇ ಚಾಮರಾಜನಗರದಿಂದ ಸಂಜೆ ೬.೩೫ಕ್ಕೆ ಮತ್ತು ರಾತ್ರಿ ೮.೪೫ಕ್ಕೆ ಸಂಚರಿಸುವ ರೈಲುಗಾಡಿಗಳಲ್ಲಿ ವಾತ್ರ ಇತ್ತೀಚೆಗೆ ೨೦ ರೂ. ಏರಿಸಲಾಗಿದೆ. ಹೀಗಾಗಿ ಮೈಸೂರು-ಚಾ.ನಗರ ವಾರ್ಗವಾಗಿ ಹೋಗಿಬರುವ ಪ್ರಯಾಣಿಕರು ೪೦ ರೂ. ಟಿಕೆಟ್ ಪಡೆಯುವಂತಾಗಿದೆ.
ಮೈಸೂರಿನಿಂದ ಬೆಳಿಗ್ಗೆ ೭.೨೦ಕ್ಕೆ ಮತ್ತು ಚಾ.ನಗರದಿಂದ ಮಧ್ಯಾಹ್ನ ೩.೩೦ಕ್ಕೆ ಬಿಡುವ ತಿರುಪತಿ ಎಕ್ಸ್‌ಪ್ರೆಸ್ ರೈಲುಗಾಡಿುಂಲ್ಲಿ ಮೈಸೂರು-ಚಾ.ನಗರ ನಡುವೆ ಮೊದಲಿಂದಲೂ ಟಿಕೆಟ್ ದರ ೪೦ ರೂ. ಇದೆ. ಮೈಸೂರು-ಚಾ.ನಗರ-ನಂಜನಗೂಡು ಈ ಮೂರು ಕಡೆಗಳಲ್ಲಷ್ಟೇ ನಿಲ್ಲುವುದರಿಂದ ಮತ್ತು ವೇಗವಾಗಿ ಸಂಚರಿಸುವುದರಿಂದ ತಿರುಪತಿ ಎಕ್ಸ್‌ಪ್ರೆಸ್ ಎಂದು ಕರೆುುಂವುದರಲ್ಲಿ ಹಾಗೂ ಟಿಕೆಟ್‌ಗೆ ೪೦ರೂ. ಪಡೆಯುವುದರಲ್ಲಿ ಅರ್ಥವಿದೆ ಎಂಬುದು ಸಾರ್ವಜನಿಕರ ಅನಿಸಿಕೆ.
ಚಾಮರಾಜನಗರ, ಗಂಗವಾಡಿ, ಬದನಗುಪ್ಪೆ, ಕವಲಂದೆ, ಬದನವಾಳು, ಚಿನ್ನದಗುಡಿಹುಂಡಿ, ನಂಜನಗೂಡು, ಸುಜಾತಪುರಂ, ತಾಂಡವಪುರ, ಕಡಕೊಳ ಸೇರಿದಂತೆ ಚಾ.ನಗರದಿಂದ ಮೈಸೂರು ಮುಖ್ಯ ನಿಲ್ದಾಣದವರೆಗೆ ಸಂಚರಿಸುವ ಶಟಲ್ ಗಾಡಿಗಳಲ್ಲಿ ಈಗಲೂ ಟಿಕೆಟ್ ದರ ಎಂದಿನಂತೆ ೨೦ರೂ. ಇದೆ.
ಮೈಸೂರಿನಿಂದ ಬೆಳಿಗ್ಗೆ ೫ಕ್ಕೆ, ೯.೧೫ಕ್ಕೆ, ಸಂಜೆ ೬.೪೫ಕ್ಕೆ ಹಾಗೆೆುೀಂ ಚಾ.ನಗರದಿಂದ ಬೆಳಿಗ್ಗೆ ೭.೧೫ಕ್ಕೆ, ಸಂಜೆ ೫.೨೫ಕ್ಕೆ, ರಾತ್ರಿ ೯.೩೦ಕ್ಕೆ ಮೈಸೂರು -ಚಾ.ನಗರ ವಾರ್ಗ ಹೋಗಿಬರುವ ರೈಲುಗಳಲ್ಲಿ ೨೦ರೂ. ಪಡೆುಂಲಾಗುತ್ತಿದ್ದು ಕನಿಷ್ಠ ದರ ೧೦ರೂ. ಚಾಲ್ತಿುಂಲ್ಲಿದೆ. ಶಟಲ್ ಗಾಡಿಗಳ ವಾದರಿುಂಲ್ಲೇ ಎಲ್ಲಾ ನಿಲ್ದಾಣಗಳಲ್ಲಿ ನಿಲ್ಲುವ ರೈಲುಗಾಡಿಗಳಿಗೆ ಎಕ್ಸ್‌ಪ್ರೆಸ್ ಹೆಸರು ನೀಡಿ ಮೈಸೂರಿನಿಂದ ಚಾ.ನಗರಕ್ಕೆ ೪೦ರೂ. ಪಡೆುಂಲಾಗುತ್ತಿದೆ. ಕನಿಷ್ಠ ದರವನ್ನೂ ೩೦ರೂ.ಗೆ ನಿಗಧಿಪಡಿಸಲಾಗಿದ್ದು ಇದು ತೀರಾ ಅವೈಜ್ಞಾನಿಕವಾಗಿದೆ. ಹತ್ತಿರದ ಕವಲಂದೆಯಿಂದ ಬದನವಾಳಿಗೆ ಅಥವಾ ಕೋಣನೂರಿನಿಂದ ಕವಲಂದೆಗೆ ಎಕ್ಸ್‌ಪ್ರೆಸ್ ಹೆಸರಿನ ಈ ಗಾಡಿಗಳಲ್ಲಿ ೩೦ ರೂ. ಪ್ರಯಾಣದರ ತೆರಬೇಕಾಗಿದೆ. ಇನ್ನಾದರೂ ಈ ದರ ಪರಿಷ್ಕರಣೆ ವಾಡಬೇಕೆಂದು ಪ್ರಾಂಣಿಕ ಚಾ.ನಗರದ ಸಂಪತ್ತು ರೈಲ್ವೆ ಅಧಿಕಾರಿಗಳಲ್ಲಿ ಮನವಿ ವಾಡಿದ್ದಾರೆ.

ಬಸವ ಎಕ್ಸ್‌ಪ್ರೆಸ್ ನಂಜನಗೂಡಿನಿಂದ ನಗರಕ್ಕೂ ಬರಲಿ
ಬಸವ ಎಕ್ಸ್‌ಪ್ರೆಸ್ ರೈಲುಗಾಡಿ ಮೈಸೂರಿನಿಂದ ನಂಜನಗೂಡಿಗೆ ಬೆಳಿಗ್ಗೆ ೯ಗಂಟೆಗೆ ಬರಲಿದ್ದು, ಇದನ್ನು ಚಾಮರಾಜನಗರದವರೆಗೂ ವಿಸ್ತರಿಸಬೇಕೆಂಬ ಕೂಗುಪ್ರಾಂಣಿಕರಿಂದ ಕೇಳಬರತೊಡಗಿದೆ. ಬೆಳಿಗ್ಗೆ ೮.೨೦ಕ್ಕೆ ಮೈಸೂರಿನಿಂದ ಹೊರಡುವ ಈ ರೈಲುಗಾಡಿ ನಂಜನಗೂಡಿನಲ್ಲಿ ೧ಗಂಟೆಗೂ ಹೆಚ್ಚುಕಾಲ ನಿಲ್ಲಲ್ಪಡುತ್ತಿದೆ. ದೀರ್ಘ ಸಮಯ ವ್ಯರ್ಥವಾಗಿ ನಿಲ್ಲುವ ಈ ಅವಧಿಯಲ್ಲಿ ಚಾ.ನಗರಕ್ಕೆ ಬಂದು ಹೋಗುವ ವ್ಯವಸ್ಥೆ ವಾಡಬೇಕೆಂಬುದು ಸಾರ್ವಜನಿಕರ ಒತ್ತಾಯ.


ನಾಮಕಾವಸ್ತೆಗೆ ಶಟಲ್ ರೈಲು ಗಾಡಿಗಳಿಗೆ ಎಕ್ಸ್‌ಪ್ರೆಸ್ ಎಂದು ಹೆಸರಿಟ್ಟು ದುಪ್ಪಟ್ಟು ಪ್ರಾಂಣ ಶುಲ್ಕವನ್ನು ಕಳೆದ ೧ ವಾರದಿಂದ ಪಡೆಯಲಾಗುತ್ತಿದೆ. ಚಾ.ನಗರಕ್ಕೆ ೬ರೈಲುಗಳಿದ್ದರೂ ಎಲ್ಲಾ ಹಂತದ ಪ್ರಯಾಣಿಕರಿಗೂ ಅನುಕೂಲವಾಗುವ ಸಮುಂದಲ್ಲಿ ಇಲ್ಲಿಂದ ಗಾಡಿಗಳು ಹೊರಡುತ್ತಿಲ್ಲ. ಬೆಳಿಗ್ಗೆ ೭.೧೫, ಮಧ್ಯಾಹ್ನ ೩.೩೦, ಸಂಜೆ ೫.೨೫, ೬.೩೫, ರಾತ್ರಿ ೮.೪೫ ಮತ್ತು ೯.೩೦ಕ್ಕೆ ರೈಲು ಹೊರಡಲಿದ್ದು ಗಾಡಿಯಿಂದ ಗಾಡಿಗೆ ದೀರ್ಘ ವಿರಾಮ ಇಲ್ಲದಂತೆ ಓಡಿಸಬೇಕು.

ಸಿ.ಎಂ.ಕೃಷ್ಣಮೂರ್ತಿ, ಪ್ರಗತಿಪರ ಸಂಘಟನೆಗಳ ಮುಖಂಡ


ಪ್ಯಾಸೆಂಜರ್ ರೈಲುಗಳನ್ನು ಎಕ್ಸ್ ಪ್ರೆಸ್ ಗಾಡಿಗಳಾಗಿ ದೇಶಾದ್ಯಂತ ಪರಿವರ್ತಿಸಲಾಗುತ್ತಿದ್ದು ಅದೇ ರೀತಿ ಇಲ್ಲೂ ವಾಡಲಾಗಿದೆ. ಇದು ರೈಲ್ವೆ ಬೋರ್ಡ್ ಪಾಲಿಸಿ. ಪ್ರಾಂಣ ದರ-ಸೇವೆ ವಿಚಾರವಾಗಿ ಬೋರ್ಡ್ ಏನು ಸೂಚಿಸುತ್ತದೆಯೋ ಹಾಗೆ ವಾಡಲಾಗುತ್ತದೆ. ಅ.೭ರಿಂದ ಎಕ್ಸ್ ಪ್ರೆಸ್ ರೈಲುಗಾಡಿಗಳ ಪ್ರಯಾಣ ಶುಲ್ಕ ಏರಿಕೆಯಾಗಿದೆ.
ಮಂಜುನಾಥ್ ಕನಮಡಿ, ರೈಲ್ವೆ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು.

 

andolanait

Recent Posts

ಚಾಮರಾಜನಗರ| ಗೂಡ್ಸ್‌ ಆಟೋ ಪಲ್ಟಿ: 13 ಮಂದಿಗೆ ಗಾಯ

ಚಾಮರಾಜನಗರ: ಗೂಡ್ಸ್‌ ಆಟೋ ಪಲ್ಟಿಯಾಗಿ 13 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದ ಬೈಪಾಸ್‌ ರಸ್ತೆಯಲ್ಲಿ ನಡೆದಿದೆ. ಮಲೆ ಮಹದೇಶ್ವರ…

14 mins ago

ಸಿಲಿಂಡರ್‌ ಪೂರೈಕೆಯಲ್ಲಿ ಕೇಂದ್ರದಿಂದ ಮಲತಾಯಿ ಧೋರಣೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.…

35 mins ago

ಹಾಸನ: ಪಟ್ಲ ಬೆಟ್ಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು: ಸ್ಥಳೀಯರಲ್ಲಿ ಮನೆಮಾಡಿದ ಆತಂಕ

ಹಾಸನ: ಕಳೆದ ಎರಡು ದಿನಗಳಿಂದ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕಡ್ರಳ್ಳಿ ಗ್ರಾಮದಲ್ಲಿರುವ ಪಟ್ಲ ಬೆಟ್ಟದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿರುವುದರಿಂದ ಮುಂಜಾಗ್ರತಾ…

2 hours ago

ಕರೂರು ಕಾಲ್ತುಳಿತ ಪ್ರಕರಣ: ಸಿಬಿಐ ವಿಚಾರಣೆಗೆ ಹಾಜರಾದ ದಳಪತಿ ವಿಜಯ್‌

ನವದೆಹಲಿ: ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿಕೆ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್‌ ಮೂರನೇ ಬಾರಿಗೆ ಸಿಬಿಐ ಕಚೇರಿಗೆ ಇಂದು…

3 hours ago

ಇರಾನ್‌-ಇಸ್ರೇಲ್‌ ಯುದ್ಧದ ಎಫೆಕ್ಟ್:‌ ಬಿಕೋ ಎನ್ನುತ್ತಿರುವ ದುಬೈ

ದುಬೈ: ಈ ಅವಧಿಯಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ದುಬೈನ್‌ ಮಾರುಕಟ್ಟೆಗಳು, ಸಮುದ್ರ ತೀರಗಳು ಹಾಗೂ ಐಷಾರಾಮಿ ಹೋಟೆಲ್‌ಗಳು ಈಗ ಜನರಿಲ್ಲದೇ…

3 hours ago

ಬೆಂಜಮಿನ್‌ ನೆತನ್ಯಾಹು ಕ್ಷೇಮವಾಗಿದ್ದಾರೆ: ಇಸ್ರೇಲ್‌ ಪ್ರಧಾನಿ ಕಚೇರಿ ಸ್ಪಷ್ಟನೆ

ಜೆರುಸೇಲಂ: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಕ್ಷೇಮವಾಗಿದ್ದಾರೆ. ಅವರು ಸಾವನ್ನಪ್ಪಿದ್ದಾರೆ ಎಂಬ ವರದಿ ಸುಳ್ಳು ಎಂದು ಪ್ರಧಾನಿ ಕಚೇರಿ ಸ್ಪಷ್ಟನೆ…

3 hours ago