ಜಿಲ್ಲೆಗಳು

ವೃದ್ಧೆಗೆ ವಂಚಿಸಿ ಚಿನ್ನಾಭರಣ ಕಳವು

ಕುಶಾಲನಗರ :  ಅಪರಿಚಿತ ವ್ಯಕ್ತಿಯೋರ್ವ ವೃದ್ಧೆಯನ್ನು ವಶೀಕರಣ ಮಾಡಿ ವೃದ್ಧೆಯ ಚಿನ್ನಾಭರಣ ಅಪಹರಿಸಿದ ಘಟನೆ ಕುಶಾಲನಗರದ ಜನತಾ ಕಾಲನಿಯಲ್ಲಿ ನಡೆದಿದೆ. ಜನತಾ ಕಾಲನಿ 1ನೇ ಕ್ರಾಸ್ ನಿವಾಸಿಯಾದ ಅಬಕಾರಿ
ಇಲಾಖೆಯ ನಿವೃತ್ತ ನೌಕರ ಐತಪ್ಪನವರವ ಪತ್ನಿ ದೇವಮ್ಮನವರ ಚಿನ್ನಾಭರಣ ಕಳವು‌‌ ಮಾಡಲಾಗಿದೆ. ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿ, ದೇವಮ್ಮ‌ನವರನ್ನು ವಶೀಕರಿಸಿ ಚಿನ್ನಾಭರಣ ಕಳವು‌ ಮಾಡಲಾಗಿದೆ. ಮನೆ ಸಮೀಪದ ಗೌರಿ ಗಣೇಶ
ದೇವಾಲಯಕ್ಕೆ ಕಾಣಿಕೆ ನೀಡುವ ನೆಪದಲ್ಲಿ ಮನೆಯಂಗಳಕ್ಕೆ ಬಂದ ಅಪರಿಚಿತ ವ್ಯಕ್ತಿ, ಗಂಧದ ಕಡ್ಡಿ, ಬಿಸ್ಕತ್ ಪ್ಯಾಕ್, ಫೈವ್ ಸ್ಟಾರ್ ತುಂಬಿದ್ದ ಪ್ಲಾಸ್ಟಿಕ್ ಕವ ರ್ ಅನ್ನು ವೃದ್ಧೆಗೆ ನೀಡಿದ್ದಾನೆ. 100 ರೂಗಳ ಐದು ನೋಟು ಕೈಗೆ ನೀಡಿ ದೇವಾಲಯಕ್ಕೆ ಕಾಣಿಕೆ ಅರ್ಪಿಸಿ ಎಂದ ಬಳಿಕ, 100 ರೂ ನ ಒಂದು ನೋಟನ್ನು ಮಹಿಳೆಯ ಕೈಗೆ ಸುತ್ತುತ್ತಿದ್ದಂತೆ ಮಹಿಳೆ ಬಳೆ ಬಿಚ್ಚಿ ಕೊಟ್ಟಿದ್ದಾರೆ.
ಇವರ ಜೊತೆಯಲ್ಲಿ ಪತಿ ಐತಪ್ಪ ಕೂಡ ಇದ್ದರು ಒಂದು ಹಂತದಲ್ಲಿ ಬಳೆ ಬಿಚ್ಚಿಕೊಟ್ಟ ಬಳಿಕ ಕುತ್ತಿಗೆಗೆ ಕೈ ಹಾಕುತ್ತಿದ್ದಂತೆ ಪತಿ ಐತಪ್ಪ ಅವರಿಗೆ‌ ಮೋಸದ ವಾಸನೆ‌ ಬಂದಿದೆ. ನಂತರ ಸರವನ್ನು ಕೊಡಬೇಡ ಎನ್ನುತ್ತಿದ್ದಂತೆ ಅಪರಿಚಿತ ಸ್ಥಳದಿಂದ
ಕಾಲ್ಕಿತ್ತಿದ್ದು, ಸುಧಾರಿಸಿಕೊಂಡು ನೋಡುವಷ್ಟರಲ್ಲಿ ಬಳೆಯೊಂದಿಗೆ ಅಪರಿಚಿತ ಮಾಯವಾಗಿದ್ದಾನೆ. ಬೈಕ್ಅನ್ನು ಮುಖ್ಯ ರಸ್ತೆಯಲ್ಲಿ ನಿಲ್ಲಿಸಿ ಬಂದಿದ್ದ ಅಪರಿಚಿತನೊಂದಿಗೆ ಮತ್ತೊಬ್ಬ ಇದ್ದ ಎನ್ನಲಾಗಿದ್ದು,
ಸ್ಥಳಕ್ಕೆ ಭೇಟಿ ನೀಡಿದ ಕುಶಾಲನಗರ ಪಟ್ಟಣ ಪೊಲೀಸರು ಪರಿಶೀಲನೆ ನಡೆಸಿ, ಖದೀಮರ ಬೆನ್ನಟ್ಟಿದ್ದಾರೆ.
ಪಟ್ಟಣದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಲಿದ್ದು, ಪೊಲೀಸರು ಇದರ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

andolanait

Recent Posts

ಸಂಸದ ಯದುವೀರ್‌ ಪ್ರಯತ್ನದ ಫಲಶ್ರುತಿ : ತಂಬಾಕು ಮಾರಾಟಕ್ಕೆ ಅನುಮತಿ

ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…

2 hours ago

ಅರಮನೆ ಫಲಪುಷ್ಪ ಪ್ರದರ್ಶನ | ಸಂಗೀತ ಸಂಜೆಯಲ್ಲಿ ಪ್ರೇಕ್ಷಕರು ತಲ್ಲೀನ

ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’…

4 hours ago

ಎತ್ತಿನ ಗಾಡಿಗೆ ಸಾರಿಗೆ ಬಸ್‌ ಡಿಕ್ಕಿ : ಎತ್ತು ಸಾವು

ಹಲಗೂರು : ಎತ್ತಿನ ಗಾಡಿ ತೆರಳುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ…

4 hours ago

ಮುತ್ತತ್ತಿ : ಕಾವೇರಿ ನದಿ ಸೆಳೆತಕ್ಕೆ ಸಿಲುಕಿ ಯುವಕ ಸಾವು

ಹಲಗೂರು : ಇಲ್ಲಿಗೆ ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ…

4 hours ago

ಪೊಲೀಸ್‌ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದ ದಲಿತ ಮಹಿಳೆಯರು : ಶಾಂತಿ ಸಭೆಯಲ್ಲಿ ಪಂಚ ಬೇಡಿಕೆ

ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.…

4 hours ago

ಅಕ್ರಮ ವಿದ್ಯುತ್‌ ಸಂಪರ್ಕ: 31 ಪ್ರಕರಣ ದಾಖಲು, 2.17 ಲಕ್ಷ ರೂ. ದಂಡ

ಮೈಸೂರು : ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…

4 hours ago