ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಹಾಲು, ಬೆಣ್ಣೆ ಮಾತ್ರವಲ್ಲದೇ ಕೋಳಿ ರಕ್ತವನ್ನೂ ಹುತ್ತಕ್ಕೆ ಎರೆದು ಷಷ್ಠಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಮಂಗಳವಾರ ಆಚರಿಸಲಾಯಿತು.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮನೆಮಂದಿಯಲ್ಲಾ ಒಟ್ಟಾಗಿ ತೆರಳಿ ಹಾಲು, ಬೆಣ್ಣೆ ಮಿಶ್ರಿತ ಬಾಳೆಹಣ್ಣನ್ನು ಹುತ್ತದ ಕೋವಿಗೆ ಹಾಕಿ ಪೂಜೆ ಸಲ್ಲಿಸುತ್ತಿದ್ದುದು ಕಂಡುಬಂದಿತು.ಇದೇ ರೀತಿ ನಗರದ ಉಪ್ಪಾರ ಬಡಾವಣೆ, ಉತ್ತುವಳ್ಳಿ, ಮಲ್ಲಯ್ಯನಪುರ, ಯಡಪುರ, ಕೆ.ಕೆ.ಹುಂಡಿ, ಯಳಂದೂರಿನ ಗುಂಬಳ್ಳಿ ಮೊದಲಾದಕಡೆ ಪೂಜೆ ನಂತರ ಕೋಳಿಕೊಂದು ಅದರ ರಕ್ತವನ್ನು ಹುತ್ತದ ಬಾಯಿಗೆ ಹರಿಸಲಾಯಿತು. ಕೋಳಿಮೊಟ್ಟೆಯನ್ನೂ ಹುತ್ತದೊಳಕ್ಕೆ ಬಿಡಲಾಯಿತು.
ಬೆಳಗಿನ ಜಾವದಿಂದ ಮಧ್ಯಾಹ್ನದವರೆಗೂ ಈ ಆಚರಣೆ ನಡೆಯಿತು. ಗುಂಡ್ಲುಪೇಟೆಯ ಕೆಲವೆಡೆ ಸಪ್ಪೆವಡೆ, ತಂಬಿಟ್ಟು, ಪಂಚಾಮೃತ ಇತ್ಯಾದಿಯನ್ನು ಹುತ್ತದ ಮುಂದಿಟ್ಟು ನೈವೇದ್ಯ ,ಮಾಡಿರುವುದು ಗೋಚರಿಸಿತು.
ಕೊಡಗು: ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 37 ಮಿ.ಮೀ. ಮಳೆಯಾಗಿದೆ. ಕಳೆದ…
ಮಡಿಕೇರಿ: ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಗರಿಷ್ಠ ಮಟ್ಟಕ್ಕೆ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಇಂದು 2,858.45…
ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯ, ಅಂದರೆ CWRCಯ ಶಿಫಾರಸನ್ನು ಕಾವೇರಿ ನೀರು…
ಭವಿಷ್ಯದ ಬೆಳಕಾಗಲಿ! ಎಲ್ಲರ ಒಳಗೊಳ್ಳುವ ಎಲ್ಲರ ಹಿತ ಅಭ್ಯುದಯದ ಹೊಸ ದೇಶ ಕಟ್ಟುವುದಾಗಿ ಗುಡುಗುತಿದೆ ಜೆನ್ ಝೀ ಪಡೆ! ಈ…
ತಿರುಪತಿಯ ಮಾದರಿಯಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೂ ನೋ -ಫ್ಲೈಝೋನ್ ಘೋಷಣೆಗೆ ಗಂಭೀರವಾಗಿ ಪರಿಶೀಲಿಸುವಂತೆ ಸಂಸದ ಯದುವೀರ್ ಅವರು ಕೇಂದ್ರ ನಾಗರಿಕ ವಿಮಾನಯಾನ…