ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಹಾಲು, ಬೆಣ್ಣೆ ಮಾತ್ರವಲ್ಲದೇ ಕೋಳಿ ರಕ್ತವನ್ನೂ ಹುತ್ತಕ್ಕೆ ಎರೆದು ಷಷ್ಠಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಮಂಗಳವಾರ ಆಚರಿಸಲಾಯಿತು.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮನೆಮಂದಿಯಲ್ಲಾ ಒಟ್ಟಾಗಿ ತೆರಳಿ ಹಾಲು, ಬೆಣ್ಣೆ ಮಿಶ್ರಿತ ಬಾಳೆಹಣ್ಣನ್ನು ಹುತ್ತದ ಕೋವಿಗೆ ಹಾಕಿ ಪೂಜೆ ಸಲ್ಲಿಸುತ್ತಿದ್ದುದು ಕಂಡುಬಂದಿತು.ಇದೇ ರೀತಿ ನಗರದ ಉಪ್ಪಾರ ಬಡಾವಣೆ, ಉತ್ತುವಳ್ಳಿ, ಮಲ್ಲಯ್ಯನಪುರ, ಯಡಪುರ, ಕೆ.ಕೆ.ಹುಂಡಿ, ಯಳಂದೂರಿನ ಗುಂಬಳ್ಳಿ ಮೊದಲಾದಕಡೆ ಪೂಜೆ ನಂತರ ಕೋಳಿಕೊಂದು ಅದರ ರಕ್ತವನ್ನು ಹುತ್ತದ ಬಾಯಿಗೆ ಹರಿಸಲಾಯಿತು. ಕೋಳಿಮೊಟ್ಟೆಯನ್ನೂ ಹುತ್ತದೊಳಕ್ಕೆ ಬಿಡಲಾಯಿತು.
ಬೆಳಗಿನ ಜಾವದಿಂದ ಮಧ್ಯಾಹ್ನದವರೆಗೂ ಈ ಆಚರಣೆ ನಡೆಯಿತು. ಗುಂಡ್ಲುಪೇಟೆಯ ಕೆಲವೆಡೆ ಸಪ್ಪೆವಡೆ, ತಂಬಿಟ್ಟು, ಪಂಚಾಮೃತ ಇತ್ಯಾದಿಯನ್ನು ಹುತ್ತದ ಮುಂದಿಟ್ಟು ನೈವೇದ್ಯ ,ಮಾಡಿರುವುದು ಗೋಚರಿಸಿತು.
ಮೈಸೂರು : ಮೈಸೂರು ಮಹಾನಗರಪಾಲಿಕೆ 2026-27ನೇ ಹಣಕಾಸು ವರ್ಷಕ್ಕೆ ಜಾರಿಗೊಳಿಸಲು ಘೋಷಿಸಿದ್ದ ಮೋಟಾರ್ ವಾಹನ ಸೆಸ್ ಅನ್ನು ರದ್ದುಗೊಳಿಸಿದೆ. ಇತ್ತೀಚಿಗೆ…
ಬೆಂಗಳೂರು : ಕರ್ನಾಟಕದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರೆ ಉಂಟಾಗಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ…
ಮೈಸೂರು : ಬಟ್ಟೆ ಬ್ಯಾಗ್ ಖರೀದಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ…
ಬೆಂಗಳೂರು : ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದ್ದಾರೆ. ಸ್ನಾಯು ಸೆಳೆತದಿಂದ…
ಟೆಹ್ರಾನ್ : ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಳೆದ 24 ಗಂಟೆಗಳಲ್ಲಿ ಅಮೆರಿಕದ ಎರಡು F-35 ಸ್ಟೆಲ್ತ್…
ಬಾಗಲಕೋಟೆ : ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದಿರುವ ಮಂತ್ರಿ. ಅವರಿಗೆ ಯಾವ ಕಡತವೂ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.…