ಜಿಲ್ಲೆಗಳು

ಸುತ್ತೂರು ಜಾತ್ರೆಯಲ್ಲಿ ಸೈಬರ್ ಅಪರಾಧ ಕುರಿತು ಜನ ಜಾಗೃತಿ

-ಶ್ರೀಧರ್ ಆರ್.ಭಟ್

ನಂಜನಗೂಡು: ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ವಂಚಕರು, ಅಮಾಯಕರನ್ನು ವಂಚಿಸುವ ವಿವಿಧ ಬಗೆಯ ಸೈಬರ್ ಅಪರಾಧ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸುತ್ತೂರು ಶ್ರೀಗಳ ಪ್ರಯತ್ನ ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ಜನಾಕರ್ಷಣೆಯ ಕೇಂದ್ರವಾಗಿದೆ.
ಇಂದಿನ ಸಮಾಜದಲ್ಲಿ ಅಮಾಯಕರು ಸೈಬರ್ ತಂತ್ರಜ್ಞಾನದ ಮೋಸದ ಜಾಲಕ್ಕೆ ಸಿಲುಕಿ ಹಣ ಮಾತ್ರವಲ್ಲದೇ, ಗೌರವಕ್ಕೆ ದಕ್ಕೆ ತಂದುಕೊಳ್ಳುತ್ತಿರುವುದನ್ನು ಅರಿತ ಶ್ರೀಗಳು, ಈ ಅಪರಾಧ ಕುರಿತಂತೆ ಜನ ಜಾಗೃತಿ ಮೂಡಿಸಲು ಈ ವರ್ಷದ ಜಾತ್ರಾ ಮಹೋತ್ಸವದಲ್ಲಿ ಸೈಬರ್ ಜಾಗೃತಿ ಮಳಿಗೆ ತೆರೆಯಲು ಸೂಚಿಸಿದ ಹಿನ್ನೆಲೆಯಲ್ಲಿ ವಸ್ತು ಪ್ರದರ್ಶನದಲ್ಲಿ ಮಳಿಗೆ ತೆರೆಯಲಾಗಿದೆ.
ಜೆಎಸ್‌ಎಸ್ ವಿಜ್ಞಾನ ತಾಂತ್ರಿಕ ಕಾಲೇಜು, ಜಿಲ್ಲಾ ಸೈಬರ್ ಪೊಲೀಸ್ ಹಾಗೂ ನಂಜನಗೂಡು ಪೊಲೀಸ್ ವಿಭಾಗದ ನೇತೃತ್ವದಲ್ಲಿ ಜಾತ್ರೋತ್ಸವದ ವಸ್ತು ಪ್ರದರ್ಶನದಲ್ಲಿ ಮಳಿಗೆಯನ್ನು ತೆರೆಯಲಾಗಿದ್ದು, ಆಧುನಿಕ ತಂತ್ರಜ್ಞಾನ ಹಾಗೂ ಸಮಾಜದ ಅವಿಭಾಜ್ಯ ಅಂಗಗಳಾದ ಮೊಬೈಲ್, ಲ್ಯಾಪ್‌ಟಾಪ್, ಫೇಸ್‌ಬುಕ್, ವಾಟ್ಸ್ ಆ್ಯಪ್‌ಗಳನ್ನು ಬಳಸಿಕೊಂಡು ಡಿಜಿಟಲ್‌ನಲ್ಲಿ ಜನರನ್ನು ಹೇಗೆ ವಂಚಿಸಲಾಗುತ್ತಿದೆ ಎಂಬ ಕುರಿತು ಇಲ್ಲಿ ಪ್ರಾತ್ಯಕ್ಷಿಕೆಯನ್ನು ತೋರಿಸಿ ಸೈಬರ್ ವಂಚನೆಯಿಂದ ಜನರನ್ನು ಪಾರುಮಾಡುವಯತ್ನ ಇಲ್ಲಿ ನಡೆಯುತ್ತಿದೆ.

ವಿವಿಧ ಆ್ಯಪ್‌ಗಳನ್ನು ಬಳಸಿಕೊಂಡು ಜನತೆಯ ವೈಯೋಕ್ತಿಕ ಮಾಹಿತಿಯನ್ನು ಕದ್ದು ಅದನ್ನು ಬೇರೆಯವರಿಗೆ ಮಾರಾಟ ಮಾಡುವ ಬಗೆಯನ್ನು ಇಲ್ಲಿ ವಿವರಿಸಲಾಗುತ್ತಿದೆ
ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಪ್ರಮುಖರಾದ ಡಾ.ಅನಿಲ್‌ಕುಮಾರ್, ವಿದ್ಯಾರ್ಥಿಗಳಾದ ಕಾರ್ತಿಕ, ತಾನಿಯಾ, ಚಂದನ್ ಎಂಬುವರು ಜಾತ್ರೆಗೆ ಬರುವ ಜನತೆಗೆ ಸೈಬರ್ ಮೋಸದ ಕುರಿತು ಪ್ರಾತ್ಯಕ್ಷಿಕೆ ಸಹಿತ ವಿವರಗಳನ್ನು ನೀಡುತ್ತಿದ್ದರೆ, ಜಿಲ್ಲಾ ಸೈಬರ್ ಠಾಣಾಧಿಕಾರಿ ಶಬೀರ್ ಹುಸೇನ್, ಸಿಂಧು ಹಾಗೂ ನಂಜನಗೂಡು ಪೊಲೀಸ್ ಠಾಣೆಯ ಲೋಕೇಶ ಎಂಬವರು ಸೈಬರ್ ಅಪರಾಧಗಳು, ಶಿಕ್ಷೆ ಪ್ರಮಾಣ ಹಾಗೂ ಅದರ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜನತೆಗೆ ಅರಿವಿನ ಪಾಠ ಮಾಡುತ್ತ ಆನ್‌ಲೈನ್‌ನಲ್ಲಿ ಹಣದ ವಹಿವಾಟುದಾರರೇ ನೀವೆಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು ಎಂಬ ತಿಳಿವಳಿಕೆಯನ್ನು ಮೂಡಿಸುತ್ತಿದ್ದಾರೆ.

ಸೈಬರ್ ಕ್ರೈಂ ಜಾಲಕ್ಕೆ ಸಿಲುಕಿದವರೇ ಇಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿ ತಾವೂ ಮೋಸಕ್ಕೊಳಗಾದ ಬಗೆಯನ್ನು ವಿವರಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ. ವಿಧ ವಿಧವಾದ ಉಡುಗೊರೆಗಳ ಆಮಿಷಕ್ಕೆ ಬಲಿಯಾಗಿ ನಿಮ್ಮ ಮಾಹಿತಿಯನ್ನು ನೀಡಬೇಡಿ ಎಂಬ ಎಚ್ಚರಿಕೆಯ ಪಾಠ ಇಲ್ಲಿ ಬಂದವರಿಗೆಲ್ಲ ಹೇಳುತ್ತಿದ್ದಾರೆ.


ಇಲಾಖೆ ಒಳಗಿನವರು ಹೊರಗಿನವರ ಜೊತೆ ಕೈಜೋಡಿಸಿದರೆ ಮಾತ್ರ ಸೈಬರ್ ಅಪರಾಧ ಎಡೆ ಮಾಡಿಕೊಡಲು ಸಾಧ್ಯ

-ಡಾ ಅನಿಲ್ ಕುಮಾರ್.


ನಾನು ಯಾರಿಗೂ ಮಾಹಿತಿಯನ್ನೇ ನೀಡಿಲ್ಲ. ಆದರೂ ನನ್ನ ಖಾತೆಯಿಂದ 30 ಸಾವಿರ ರೂ. ದೋಚಲಾಗಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.

– ನಂಜುಂಡಸ್ವಾಮಿ, ಕೊಳ್ಳೇಗಾಲ.


ಸೈಬರ್ ಠಾಣೆಯಲ್ಲಿ ಸಾವಿರಾರು ರೂ.ಗಳಿಗೆ ಮಾನ್ಯತೆೆಯೇ ಇಲ್ಲ. ಲಕ್ಷದ ಮೇಲೆ ಹಣ ಕಳೆದುಕೊಂಡರೆ ಮಾತ್ರ ದೂರು ನೀಡಿ, ಕಡಿಮೆ ಹಣದ ವಂಚನೆಗೆ ಒಳಗಾಗಿದ್ದರೆ ಹಣ ಸಿಗಲಾರದು, ಅಲೆದಾಟ ತಪ್ಪದು.

– ಗೋಪಾಲ, ಪಿರಿಯಾಪಟ್ಟಣ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago