ಮೈಸೂರೇ ಸ್ವರ್ಗ
ಮೈಸೂರು ನನ್ನ ನೆಚ್ಚಿನ ಜಾಗ. ನನ್ನ ವಿದ್ಯಾಭಾಸ್ಯ ಇಲ್ಲಿಯೇ ಆಗಿದ್ದು, ಇಲ್ಲಿ ನೆನಪು, ಭಾವನೆಗಳು ಸಾಕಷ್ಟಿವೆ. ಹಾಗಾಗಿ, ಪ್ರತಿ ವರ್ಷ ದಸರಾ ಸಮಯಕ್ಕೆ ಇಲ್ಲಿಗೆ ಬಂದು ಒಂದಷ್ಟು ಮೈಸೂರು ಸುತ್ತಲಿನ ತಾಣಗಳಿಗೆ ಭೇಟಿ ನೀಡುವುದು, ದಸರಾ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡುವುದು ಎಂದರೆ ನನಗೆ ಬಲುಪ್ರಿಯ. ದಸರಾ ಎಂದರೇ ಕೇವಲ ಜಂಬೂ ಸವಾರಿ ಎಂಬ ಬಗ್ಗೆ ಅನೇಕರು ಮಾತನಾಡುತ್ತಾರೆ. ನನಗೆ ಇಲ್ಲಿನ ಬಣ್ಣ ಬಣ್ಣದ ದೀಪಾಲಾಂಕಾರದ ನಡುವೆ ಸಂಚಾರ ಮಾಡುವುದೆಂದರೆ ಎಲ್ಲಿಲ್ಲದ ಆಸೆ. ಮೈಸೂರೇ ಸ್ವರ್ಗ.
–ಜಯಪ್ರಧ, ಖಾಸಗಿ ಕಂಪೆನಿ ಉದ್ಯೋಗಿ, ಬೆಂಗಳೂರು
————————
ಜಂಬೂ ಸವಾರಿ ನೋಡುವುದೇ ಧನ್ಯತೆ
ಮೈಸೂರು ದಸರಾ, ಜಂಬೂ ಸವಾರಿ ಇಲ್ಲಿನ ಇತಿಹಾಸ, ವೈಭವದ ಬಗ್ಗೆ ಸಾಕಷ್ಟು ಕೇಳಿದ್ದೆ. ಆದರೆ, ಪ್ರತ್ಯಕ್ಷವಾಗಿ ನೋಡುವ, ಸುತ್ತಾಡುವ ಅವಕಾಶಗಳು ಸಿಕ್ಕಿದ್ದು ಕಡಿಮೆಯೇ, ನಾನು ಮೈಸೂರಿನ ಹುಡುಗಿಯನ್ನು ಮದುವೆಯಾದ ನಂತರ ಪ್ರತಿ ವರ್ಷ ದಸರಾ ದಿನಗಳನ್ನು ಇಲ್ಲಿ ಕಳೆಯುತ್ತಾ ಆನಂದಿಸುತ್ತೇನೆ. ಸಾಧ್ಯವಾದಷ್ಟು ಎಲ್ಲ ಕಾರ್ಯಕ್ರಮಗಳನ್ನು ಮತ್ತು ಸ್ಥಳಗಳನ್ನು ನೋಡಲು ಸಮಯ ಮಾಡಿಕೊಳ್ಳುತ್ತೇನೆ. ಆನೆಗಳು ಚಾಮುಂಡೇಶ್ವರಿಯ ವಿಗ್ರಹವನ್ನು ಹೊತ್ತು ಸಾಗುವುದನ್ನು ನೋಡುವುದೇ ಧನ್ಯತೆ.
–ಪ್ರಭ್ಜೋತ್ ಸಿಂಗ್, ಖಾಸಗಿ ಕಂಪೆನಿ ನೌಕರ, ಅಮೃತಸರ್, ಪಂಜಾಬ್
ಹೊಸದಿಲ್ಲಿ : ಕೃತಕ ಬುದ್ಧಿಮತ್ತೆಗೆ ಗುಲಾಮರಾಗಬೇಡಿ ಬದಲಿಗೆ ಅದನ್ನು ಸಾಮರ್ಥ್ಯವೃದ್ಧಿಗೆ ಬಳಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿ…
ನಾಪೋಕ್ಲು: ಸಮೀಪದ ಮದನಾಡು ಗ್ರಾಮದಲ್ಲಿ ಕಾಡಾನೆ ಹಿಂಡು ದಾಳಿ ಮಾಡಿದ ಪರಿಣಾಮ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.…
ಹುಬ್ಬಳ್ಳಿ: ಖ್ಯಾತ ಗಾಯಕ ಸೋನು ನಿಗಮ್ ಅವರಿಂದು ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಮಾಟಳ್ಳಿ ಗ್ರಾಮ ಪಂಚಾಯಿತಿ…
ಟೊರೆಂಟೊ: ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಮೂಲದ ವ್ಯಕ್ತಿಯೊಬ್ಬನನ್ನು ಹತ್ಯೆಗೈದಿರುವ ಘಟನೆ ಕೆನಡಾದಲ್ಲಿ ನಡೆದಿದೆ. ಚಂದನ್ಕುಮಾರ್(37) ಹತ್ಯೆಯಾದ ವ್ಯಕ್ತಿ. ಕಳೆದ ಆರು…
ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿಗೆ ಅನುಮತಿ ನೀಡುವ ಸಂಬಂಧ ಪಟ್ಟಂತೆ ಬುಧವಾರ ಹಿರಿಯ ಅಧಿಕಾರಿಗಳು ಹಾಗೂ ಕಾನೂನು…