ಮೈಸೂರು: ನಗರದ ಲಲಿತಮಹಲ್ ಅರಮನೆ ಬಳಿ ಇರುವ ಮೈದಾನದಲ್ಲಿ 5 ಲಕ್ಷಕ್ಕೂ ಅಧಿಕ ರುದ್ರಾಕ್ಷಿಗಳಿಂದ ನಿರ್ಮಿಸಿರುವ ತ್ರೀಡಿಯಿಂದ ಕಣ್ಮನ ಸೆಳೆಯುವ 21 ಅಡಿ ಎತ್ತರದ ಶಿವಲಿಂಗ ನಿರ್ಮಿಸಲಾಗಿದೆ.
ಮಹಾಶಿವರಾತ್ರಿ ಅಂಗವಾಗಿ ಫೆ.22ರವರೆಗೆ ಹರಿದ್ವಾರದಿಂದ ತಂದು ನಿರ್ಮಿಸಿರುವ ರುದ್ರಾಕ್ಷಿಯ ಬೃಹತ್ ಶಿವಲಿಂಗ ಸಾರ್ವಜನಿಕರ ಉಚಿತ ದರ್ಶನಕ್ಕೆ ನಿತ್ಯ ಬೆಳಿಗ್ಗೆ 8ರಿಂದ ರಾತ್ರಿ 9ರವರೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಆಲನಹಳ್ಳಿ ಸೇವಾ ಕೇಂದ್ರದಿಂದ ಹಿವಾಚ್ಛಾದಿತ ಕೈಲಾಸ ಪರ್ವತದೊಂದಿಗೆ ನಿರ್ಮಾಣಗೊಂಡಿರುವ ಶಿವಲಿಂಗ ತ್ರೀಡಿ ಎಫೆಕ್ಟ್ ಇರುವುದು ವಿಶೇಷ ಹಿಮಾಲಯದ ಪ್ರತಿಕೃತಿ ನಿರ್ಮಿಸಿ, ಅದರ ಮೇಲೆ 21 ಅಡಿ ಎತ್ತರ, 20 ಅಡಿ ಅಗಲದ ಶಿವಲಿಂಗವನ್ನು 5,16,108 ರುದ್ರಾಕ್ಷಿಗಳಿಂದ ನಿರ್ಮಿಸಲಾಗಿದ 100 100 ಅಡಿ ಪ್ರದೇಶದಲ್ಲಿ ಪಿಒಪಿ, ಮರದ ಕಟ್ಟಿಗೆ ಗೋಣಿಯನ್ನು ಬಳಸಿ ಹಿವಾಚ್ಛಾದಿತ ಕೈಲಾಸ ಪರ್ವತದ ಪ್ರತಿಕೃತಿ ಸಿದ್ಧವಾಗಿದೆ. 50 ಕ್ಕೂ ಅಧಿಕ ಮಂದಿ ವಾರಕ್ಕೂ ಹೆಚ್ಚು ಕಾಲ ಪ್ರತಿಕೃತಿ ನಿರ್ಮಾಣ ಕಾರ್ಯ ನಡೆಸಿದ್ದಾರೆ.
ದ್ವಾದಶ ಲಿಂಗದರ್ಶನ: ಬೃಹತ್ ರುದ್ರಾಕ್ಷಿ ಶಿವಲಿಂಗದ ಜತೆಗೆ ದ್ವಾದಶ ಲಿಂಗ ದರ್ಶನ ಮಾದರಿಯನ್ನು ಪ್ರತಿಷ್ಠಾಪಿಸಲಾಗಿದೆ. ಮಹಾಶಿವರಾತ್ರಿಯಂದು ಭಾರತದಾದ್ಯಂತ ಜನರು ಹಿಮಾಲಯ, ಕೇದಾರನಾಥ, ಕಾಶಿ ವಿಶ್ವನಾಥ ಸೇರಿದಂತೆ ಸ್ಥಳೀಯ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಅದರಂತೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಅಷ್ಟು ದೂರ ತೆರಳಲು ಸಾಧ್ಯವಾಗದ ಜನರಿಗೆ ಅಲ್ಲಿನ ಪ್ರತಿಕೃತಿಗಳನ್ನು ಮೈಸೂರಿನ ಕೆಲವೆಡೆ ವಿಭಿನ್ನವಾಗಿ ನಿರ್ಮಿಸಿ, ವಿಶೇಷ ಅನುಭವವನ್ನು ನೀಡುತ್ತಿದೆ. ಕಳೆದ ಬಾರಿ ಬೃಹತ್ ತೆಂಗಿನಕಾಯಿ ಶಿವಲಿಂಗ ನಿರ್ಮಾಣ ಮಾಡಿ ಎಲ್ಲರ ಗಮನ ಸೆಳೆದಿತ್ತು. ಕೈಲಾಸ ಪರ್ವತದ ಮಾದರಿಯ ಒಳ ಭಾಗದಲ್ಲಿ ಧ್ಯಾನ ಗುಹೆಯೂ ನಿರ್ಮಾಣಗೊಳ್ಳುತ್ತಿದ್ದು, ಅದರ ಸುತ್ತಲೂ ಜೋರ್ತಿಲಿಂಗ ಮತ್ತು ಆಧ್ಯಾತ್ಮಿಕ ಚಿಂತನೆ, ಶಿವ ಚರಿತ್ರೆಗಳು ಇವೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ.ರಂಗನಾಥ್ ತಿಳಿಸಿದ್ದಾರೆ.
ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…
ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…
ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…
ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…
ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್ವಾಶ್ ಮಾಡಲಾಗಿದೆ ಎಂಬ…
ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…