ಜಿಲ್ಲೆಗಳು

‘ಕನ್ನಡ ನರ್ಸರಿ ಶಾಲೆ ಮರು ನಿರ್ಮಾಣಕ್ಕೆ 25 ತಿಂಗಳಾದ್ರೂ ಅನುಮತಿ ಇಲ್ಲ’

ಲೈಸೆನ್ಸ್ ಮತ್ತು ಪ್ಲಾನ್ ನೀಡುವಂತೆ ಕೇಳಿ ೨೫ ತಿಂಗಳಾಯಿತು: ರಾಮಕೃಷ್ಣ ಅಳಲು

ಮೈಸೂರು: ‘ಕುಸಿದಿರುವ ಕನ್ನಡ ಶಾಲೆಯೊಂದನ್ನು ಮರು ನಿರ್ಮಾಣ ಮಾಡಲು ಲೈಸೆನ್ಸ್ ಮತ್ತು ಪ್ಲಾನ್ ನೀಡುವಂತೆ ಕೋರಿ ೨೫ ತಿಂಗಳಾದ್ರೂ ನಗರಪಾಲಿಕೆ ವತಿಯಿಂದ ಇನ್ನು ಅನುಮತಿ ನೀಡಿಲ್ಲ’ ಎಂದು ಶ್ರೀ ವಿದ್ಯಾಶಂಕರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರಾಮಕೃಷ್ಣ ಅಳಲು ತೋಡಿಕೊಂಡರು.
ನಗರದ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ಬುಧವಾರ ಮೈಸೂರು ನಗರಪಾಲಿಕೆಯ ಶ್ರೀ ಜಯಚಾಮರಾಜ ಒಡೆಯರ್ ಸಭಾಂಗಣದಲ್ಲಿ ‘ಅಂತಿಮ ಪಾಲಿಕೆ ಅದಾಲತ್’ನಲ್ಲಿ ಸಮಸ್ಯೆಗಳನ್ನು ತಿಳಿಸಿದರು.

೧೯೭೫ರಿಂದ ಉದಯಗಿರಿ ಮತ್ತು ಸಿದ್ಧಾರ್ಥನಗರದಲ್ಲಿ ಶ್ರೀವಿದ್ಯಾಶಂಕರ ಶಿಕ್ಷಣ ಸಂಸ್ಥೆಯು ಸಂಪೂರ್ಣ ಉಚಿತವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದೆ. ಸಿದ್ದಾರ್ಥನಗರದಲ್ಲಿನ ಮೈಸೂರ್ ಒನ್ ಬಳಿ ಇರುವ ಸಂಸ್ಥೆಯ ಕನ್ನಡ ನರ್ಸರಿ ಶಾಲೆಯ ಕಟ್ಟಡ ೨೦೧೬-೧೭ರಲ್ಲಿ ಕುಸಿದಿತ್ತು. ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲು ೨೦೨೦ರಲ್ಲಿಯೇ ಲೈಸೆನ್ಸ್ ಮತ್ತು ಪ್ಲಾನ್ ನೀಡುವಂತೆ ಅರ್ಜಿ ಹಾಕಿದ್ದೆ. ಶಿಲ್ಪನಾಗ್ ಅವರು ಮತ್ತು ಇಂದಿನ ಪಾಲಿಕೆ ಆಯುಕ್ತರಾದ ಲಕ್ಷೀಕಾಂತ್ ರೆಡ್ಡಿ ಅವರು ತಲಾ ಎರಡು ಬಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ನಾನಾ ಕಾರಣಗಳನ್ನು ಹೇಳಿ ಇನ್ನೂ ಲೈಸೆನ್ಸ್ ಮತ್ತು ಪ್ಲಾನ್ ಅನ್ನು ನೀಡಿಲ್ಲ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಶಿವಕುಮಾರ್ ಮತ್ತು ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಅವರು ‘ ಡಿ.೮ರಂದು ನಡೆಯುವ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ನೀಡಲಾಗುವುದು’ ಎಂದು ಭರವಸೆ ನೀಡಲಾಗುವುದು ಎಂದರು.

ಗಾಯಿತ್ರಿಪುರಂನ ಕೃಷ್ಣ ಎಂಬವರು ಓರಿಯಂಟಲ್ ವಿಮೆ ಕಾನೂನು ಅನ್ವಯ ಹಣಕಟ್ಟಿ ರಸ್ತೆಯೊಂದನ್ನು ನಿರ್ವಹಣೆ ಮಾಡಲು ಎನ್‌ಒಸಿ ನೀಡುವಂತೆ ಕೇಳಿದರು. ಇದಕ್ಕೆ ಆಯುಕ್ತ ಲಕ್ಷೀಕಾಂತ್ ರೆಡ್ಡಿ, ಹಾಗೆ ನೀಡಲು ಅವಕಾಶವಿಲ್ಲ ಎಂದು ಪ್ರತಿಕ್ರಿಯಿಸಿದರು. ೨೦೧೮ರಲ್ಲಿ ಬೋಗಾದಿಯ ಸಿಎಫ್‌ಟಿಆರ್‌ಐ ಲೇಔಟ್‌ನಲ್ಲಿ ರಸ್ತೆ ನಿರ್ವಹಣೆ ಮಾಡಲು ವಾಸು ಎಂಬವರಿಗೆ ಎನ್‌ಒಸಿ ನೀಡಿ ಅವಕಾಶ ನೀಡಲಾಗಿದೆ. ನಮಗೆ ಯಾಕೆ ನೀಡುವುದಿಲ್ಲ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮೀಕಾಂತ್ ರೆಡ್ಡಿ, ಈಗ ಹೀಗೆ ನೀಡಬಹುದಾದ ಯಾವುದೇ ನಿಯಮವಿಲ್ಲ. ಹಾಗಾಗಿ, ಕೊಡಲಾಗುವುದಿಲ್ಲ ಎಂದರು.

 

 

 

andolana

Recent Posts

‘ವಿದ್ಯಾರ್ಥಿ ಸ್ನೇಹಿ ಸಾರಿಗೆʼ

ಮಕ್ಕಳ ಸುರಕ್ಷತೆ ಮತ್ತು ಶಾಲಾ ಪ್ರಯಾಣ ಸುಗಮಗೊಳಿಸುವ ಉದ್ದೇಶ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸು ೧೨…

3 mins ago

ಫುಟ್‌ಪಾತ್ ಏರಿದ ವಾಹನಗಳು; ಜನರಿಗೆ ಗೋಳು

ಪ್ರಶಾಂತ್ ಎಸ್. ಮೈಸೂರು: ವಾಹನಗಳು ರಸ್ತೆಯಲ್ಲಿ ಸಂಚರಿಸಿದರೆ, ಪಾದಚಾರಿಗಳು ಫುಟ್‌ಪಾತ್‌ನಲ್ಲಿ ಓಡಾಡ ಬೇಕು ಎನ್ನುವುದು ಸಾಮಾನ್ಯ ಸಂಗತಿ. ಆದರೆ, ಕುವೆಂಪುನಗರದ…

9 mins ago

ಶತಕದ ಗಡಿ ದಾಟಿದ ಬನ್ನಂಗಾಡಿ ಶಾಲೆ

ಎಸ್.ನಾಗಸುಂದರ್ ಪಾಂಡವಪುರ ಪಾಂಡವಪುರ: ದಾನಿಗಳ ನೆರವು, ಸ್ಥಳೀಯರ ಸಹಕಾರದಿಂದ ಆರಂಭಗೊಂಡ ಶಾಲೆಯು ನೂರು ವರ್ಷಗಳ ಗಡಿ ದಾಟಿ ಹೆಜ್ಜೆ ಮುಂದಿರಿಸಿದೆ.…

17 mins ago

ಕಾಡಿನಲ್ಲಿ ಶರಣ್ಯಳನ್ನು ಹುಡುಕಿದ್ದು ಯಾರು?

ಅಬ್ದುಲ್ ರಶೀದ್ ಕೊಡಗಿನ ಪರಿಶಿಷ್ಟ ಅಡಿಯ ಜನಾಂಗದ ಕೂಲಿ ಕಾರ್ಮಿಕ ಯುವಕರಾದ ಸುಬ್ರಮಣಿ, ರಾಜು, ಅಯ್ಯಪ್ಪ, ಮಣಿಕಂಠ, ಮಣಿ ಸಾಹಸಗಾಥೆ…

21 mins ago

ಡೇವಿಡ್‌ ಬ್ಯಾಟಿಂಗ್‌ ಅಬ್ಬರ ; ಆರ್‌ಸಿಬಿಗೆ ವಿಕ್ಟರಿ, ಚೆನ್ನೈಗೆ ಸೋಲು

ಬೆಂಗಳೂರು : ನಾಯಕ ರಜತ್‌ ಪಾಟೀದಾರ್‌, ಟಿಮ್ ಡೇವಿಡ್, ದೇವ್‌ದತ್ ಪಡಿಕ್ಕಲ್ ಅವರ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌…

7 hours ago