ಜಿಲ್ಲೆಗಳು

‘ಯಾವ ತಾಯಿಗೂ ಇಂತಹ ಸ್ಥಿತಿ ಬರಬಾರದು…’

ಮುರುಘಾ ಶ್ರೀ ಲೈಂಗಿಕ ದೌರ್ಜನ್ಯ ಎಸಗಿರುವ ಬಾಲಕಿಯರ ತಾಯಿಯ ನೋವಿನ ನುಡಿ

ಮೈಸೂರು: ಅದೊಂದು ಮನಕಲಕುವ ಸನ್ನಿವೇಶ… ಮುಗ್ಧವಾಗಿ, ಆಟ- ಪಾಠಗಳಲ್ಲಿ ತಲ್ಲೀನವಾಗಿದ್ದ ನನ್ನ ಅಪ್ರಾಪ್ತ ಮಗಳನ್ನು ಸ್ವಾಮೀಜಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ವಿಚಾರ ಗೊತ್ತಾದರೂ ಕೂಡ ಅಸಹಾಯಕಳಾಗಿದ್ದೆ . ಯಾವ ತಾಯಿಗೂ ಇಂತಹ ಸ್ಥೀತಿ ಬರಬಾರದು ಎಂದು ಗದ್ಗದಿತ ಕಂಠದಿಂದ ಆ ಮಹಿಳೆ ಹೇಳುತ್ತಿದ್ದರೆ, ಕೇಳುತ್ತಿದ್ದವರು ಸಂತೈಸಲು ಪದಗಳಿಲ್ಲದೆ, ಮೌನವಾಗಿಯೇ ಆಕೆಯ ನೋವಿಗೆ ಮಮ್ಮಲ ಮರುಗಿದರು.

ಜನರ ಬಡತನವನ್ನೇ ಬಂಡವಾಳ ಮಾಡಿಕೊಂಡಿದ್ದ  ಸ್ವಾಮೀಜಿ ನನ್ನ ಮಕ್ಕಳಂತೆ ಇತರೆ ಮಕ್ಕಳನ್ನೂ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎಂಬ ಸತ್ಯ ಅಲ್ಲಿರುವವರಿಗೆ ಗೊತ್ತಿತ್ತು. ಆದರೂ ಕೂಡ ಆ ಪೋಷಕರೆಲ್ಲರೂ ಮೌನಕ್ಕೆ ಶರಣಾಗಿದ್ದುದು ದುರಂತ ಎಂದು ಆಕೆ ಆಕ್ರೋಶದಿಂದ ನುಡಿದರು.

ಹಲವಾರು ವರ್ಷಗಳಿಂದ ಮಠದಲ್ಲಿ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ದುಷ್ಕೃತ್ಯ ನಿರಂತರವಾಗಿತ್ತು. ಸ್ವಾಮೀಜಿಯು ವಸತಿ ನಿಲಯದಲ್ಲಿದ್ದ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಅನೇಕ ಮಕ್ಕಳು ನನ್ನ ಬಳಿ ನೋವು ತೋಡಿಕೊಂಡಿದ್ದರು. ಪ್ರಭಾವಿಯಾದ ಸ್ವಾಮೀಜಿ ವಿರುದ್ಧ ಮಾತನಾಡುವ ಧೈರ್ಯ ನನಗಿರಲಿಲ್ಲ . ಅದೊಂದು ದಿನ ನನ್ನ ಬಳಿಗೆ ಬಂದ ಮಗಳು ಅಳುತ್ತಲೇ ನಡೆಯುತ್ತಿರುವ ವಿಚಾರ ಹೇಳಿದ್ದಳು. ಸ್ವಾಮೀಜಿ ನನ್ನನ್ನು ಮಧ್ಯಾಹ್ನದ ವೇಳೆೆಯೇ ಅವರ ಕೊಠಡಿಗೆ ಕರೆಸಿಕೊಳ್ಳುತ್ತಾರೆ. ನನಗೆ ಇನ್ನಿಲ್ಲದ ಹಿಂಸೆ ನೀಡುತ್ತಾರೆ. ನನಗೆ ಹಾಸ್ಟೆನಲ್ಲಿ ಇರಲು ಇಷ್ಟವಿಲ್ಲ ಎಂದು ಹೇಳಿದಳು. ಆದರೂ ಅಸಹಾಯಕಳಾದ ನಾನು,  ಮಗಳನ್ನು ಮತ್ತೆ ಹಾಸ್ಟಲ್‌ಗೆ ಕಳುಹಿಸಿದೆ ಎಂದಾಗ ಧ್ವನಿಯಲ್ಲಿ ದುಃಖ ಚಾಚಿಕೊಂಡಿತ್ತು.

ಇದೀಗ ಸತ್ಯವನ್ನು ಹೇಳಿರುವ ನನಗೆ ಅಲ್ಲಿನವರು ತೊಂದರೆ ಉಂಟುವಾಡಬಹುದು. ಹೀಗಾಗಿ ಸರ್ಕಾರ ನನ್ನ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ವಸತಿ ವ್ಯವಸ್ಥೆಯನ್ನು ಮಾಡಿಕೊಡಬೇಕು. ನನಗೆ ಸೂಕ್ತ ರಕ್ಷಣೆಯನ್ನು ನೀಡಬೇಕು. ನನಗೆ ಒಂದು ಉದ್ಯೋಗ ನೀಡಬೇಕು ಎಂದು ಮನವಿ ಮಾಡಿದರು.

ಮಠದಲ್ಲಿರುವ ಮಗು ಯಾರದ್ದು? 

ಇಂತಹುದೊಂದು ಪ್ರಶ್ನೆ ಇದೀಗ ಎಲ್ಲರಲ್ಲಿ ಕುತೂಹಲ ಮೂಡಿಸಿದೆ. ಮುರಘಾ ಮಠದಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗುವೊಂದಿರುವ ಬಗ್ಗೆ ಒಡನಾಡಿಯ ಪರಶು ಅವರಿಗೆ ಮಾಹಿತಿ ದೊರಕಿದೆ. ಮಗುವಿನ ತಂದೆ ಯಾರೂ ಎಂಬುದು ಮಠದ ಎಲ್ಲರಿಗೂ ಗೊತ್ತಿದೆ ಎಂದು ಕೆಲವರು ವಾಹಿತಿ ನೀಡಿದ್ದಾರೆ.

ಈ ಸಂಬಂಧ ಮಗುವಿನ ಮಗ್ಗೆ ವಾಹಿತಿ ಪಡೆಯುವ ಉದ್ದೇಶದಿಂದ ಪರಶು ಅವರು ನ್ಯಾಯಾಲಯದ ಗಮನಕ್ಕೆ ಈ ವಿಚಾರವನ್ನು ತಂದಿದ್ದಾರೆ. ಇದೀಗ ಮಠಕ್ಕೆ ತೆರಳಿರುವ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಮಗುವನ್ನು ಕರೆತಂದಿದ್ದಾರೆ.

‘ಸಿಬಿಐ ತನಿಖೆಯಾಗಲಿ’

ಈ ಪ್ರಕರಣದ ಸಂಬಂದ ಮಾತನಾಡಿದ ಒಡನಾಡಿ ಸಂಸ್ಥೆಯ ನಿರ್ದೇಶಕರಲ್ಲೊಬ್ಬರಾದ ಪರಶುರಾಮ್ ಅವರು, ಇದೊಂದು ದೊಡ್ಡ ಪ್ರಕರಣವಾಗಿದೆ.  ಸ್ವಾಮೀಜಿಯು ಕನಿಷ್ಠ ಮೂವತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

andolana

Recent Posts

ಎಚ್.ಡಿ.ಕೋಟೆಯಲ್ಲಿ ಮತ್ತೆ ಶುರುವಾಯ್ತು ಹುಲಿ ಉಪಟಳ

ಎಚ್.ಡಿ.ಕೋಟೆ : ತಾಲೂಕಿನ ಚೌಡಹಳ್ಳಿ ಗ್ರಾಮದ ಪಕ್ಕದಲ್ಲೇ ಇರುವ ಜಮೀನೊಂದರಲ್ಲಿ ಹಸುವಿನ ಮೇಲೆ ದಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು…

12 hours ago

ಇನ್ಸ್ಟಾಗ್ರಾಮ್ ಪರಿಚಯ : ಪೊಲೀಸಪ್ಪನ ಜತೆ ಮೈಸೂರು ಮೂಲದ ಗೃಹಿಣಿ ಎಸ್ಕೇಪ್

ಮೈಸೂರು : ಮೈಸೂರು ಮೂಲದ ಗೃಹಿಣಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ ಟೇಬಲ್ ನೊಂದಿಗೆ…

12 hours ago

ಮೈಸೂರಲ್ಲಿ ಸಂಭ್ರಮದ ಹನುಮೋತ್ಸವ ; ಮೆರವಣಿಗೆಯಲ್ಲಿ ಸಾಗಿದ ಅತ್ಯಾಕರ್ಷಕ ಹನುಮಮೂರ್ತಿಗಳು

ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ಏಳನೇ ವರ್ಷದ ಹನುಮೋತ್ಸವ ಮೆರವಣಿಗೆಯು…

13 hours ago

ಫೇಸ್‌ಬುಕ್‌ ಕಹಾನಿ | ಪ್ರೀತಿ ಹರಸಿ ಬಂದವನಿಗೆ ಹನಿಟ್ರ್ಯಾಪ್‌ ಗಾಳದ ಶಂಕೆ ; ಹಣಕ್ಕೆ ಡಿಮ್ಯಾಂಡ್‌….

ಮನೆಯಲ್ಲಿ ರಾತ್ರಿಯಿಡೀ ಕೂಡಿಹಾಕಿ ಹಲ್ಲೆ ನಡೆಸಿದ ಮೂವರು ಆರೋಪಿಗಳು; ಹನಿಟ್ರ್ಯಾಪ್ ಶಂಕೆ, ತನಿಖೆ ಚುರುಕು ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ…

14 hours ago

ಯುನಿಟಿ ಮಾಲ್‌ ನಿರ್ಮಾಣಕ್ಕೆ ವಿರೋಧ ಇಲ್ಲ : ಸಂಸದ ಯದುವೀರ್‌

ಮೈಸೂರು : ನಗರದಲ್ಲಿ ಯುನಿಟಿ ಮಾಲ್ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರ ಗೊಂದಲವಿಲ್ಲದ ಸ್ಥಳ ನೀಡದೆ ದಿಕ್ಕು…

14 hours ago

ಮೈಸೂರಲ್ಲಿ ಎರಡು ದಿನ ಮಾಗಿ ಸಂಭ್ರಮ : ಅವರೆಕಾಯಿ ಸೊಗಡು ಜೋರು…

ಮೈಸೂರು : ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗ್ರಾಹಕರ ಆಕರ್ಷಿಸುವ ಹಾಗೂ ಗ್ರಾಮೀಣ ಸೊಗಡಿನ…

14 hours ago