ಜಿಲ್ಲೆಗಳು

ಅನಧಿಕೃತ ಆಸ್ತಿಗಳಿಗೆ ಇನ್ನು ಖಾತೆ ಭಾಗ್ಯ

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಗ್ರಾಪಂಗಳನ್ನು ಮೇಲ್ದರ್ಜೆಗೇರಿಸಿದಾಗ ಉಂಟಾದ ಕಾನೂನು ತೊಡಕು ದೂರ: ಜಿಟಿಡಿ

ಮೈಸೂರು: ವರ್ಷದ ಹಿಂದೆ ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಪಂಗಳನ್ನು ಮೇಲ್ದರ್ಜೆಗೇರಿಸಿದ ಪರಿಣಾಮ ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬಂದಿರುವ ಗ್ರಾಪಂಗಳಲ್ಲಿ ಉದ್ಬವವಾಗಿದ್ದ ಅಧಿಕೃತ, ಅನಧಿಕೃತ ಆಸ್ತಿಗಳಿಗೆ ಖಾತೆ ಮಾಡುವ ಸಂಬಂಧ ಉಂಟಾಗಿದ್ದ ಆಡಳಿತಾತ್ಮಕ, ಕಾನೂನು ಸಮಸ್ಯೆ ಇದೀಗ ದೂರವಾಗಿದ್ದು, ಮಾಲೀಕರಿಗೆ ಖಾತೆ ಭಾಗ್ಯ ದೊರೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಶಾಸಕ ಜಿ.ಟಿ.ದೇವೇಗೌಡ ಅವರು, ಜ.2ರಂದು ನಗರಾಭಿವೃದ್ಧಿ ಇಲಾಖೆ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, ತಂತ್ರಾಂಶ ಸಿದ್ಧವಾದ ಮೇಲೆ ಖಾತೆ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ನಗರ ಹಾಗೂ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿಸಲ್ಪಟ್ಟ ಅಧಿಕೃತ, ಅನಧಿಕೃತ ಎಂದು ವಿಂಗಡಿಸಿರುವ ಆಸ್ತಿಗಳಿಗೆ ನಮೂನೆ-೩ ನೀಡಲು(ಖಾತೆ) ಆದೇಶದಲ್ಲಿ ತಿಳಿಸಲಾಗಿದೆ. ಇದರಿಂದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂದಾಜು ೧೦೩ ಬಡಾವಣೆ, ಪ್ರದೇಶಗಳ ಸುಮಾರು ೫೪,೦೦೦ ಆಸ್ತಿ ಮಾಲೀಕರಿಗೆ ಅನುಕೂಲವಾಗಲಿದೆ. ಮಾತ್ರವಲ್ಲದೇ ಇದರಿಂದ ಕ್ರಯ, ವಿಕ್ರಯ ಮಾಡಲು, ಬ್ಯಾಂಕ್ ಸಾಲ ಸೌಲಭ್ಯ ಪಡೆಯಲು, ಖಾತಾ ಬದಲಾವಣೆ, ಕಟ್ಟಡ ನಿರ್ವಾಣಕ್ಕೆ ನಕ್ಷೆ ಅನುಮೋದನೆ ಮತ್ತು ಪರವಾನಗಿ ಪಡೆಉಲು ಸಹಕಾರಿಯಾಗಲಿದೆ. ಇದೀಗ ಈ ಎಲ್ಲಾ ಆಸ್ತಿಗಳ ದಾಖಲೆಗಳನ್ನು ಸಾಫ್ಟ್‌ವೇರ್‌ಗೆ ಅಳವಡಿಸುವ ಕಾರ್ಯ ನಡೆಯುತ್ತಿದೆ. ಫೆಬ್ರವರಿ ಮೊದಲ ವಾರದಿಂದಲೇ ಖಾತೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮೈಸೂರು ಮಹಾ ನಗರಪಾಲಿಕೆಗೆ ಹೊಂದಿಕೊಂಡಂತಿರುವ ೧೦ ಗ್ರಾಮ ಪಂಚಾಯಿತಿಯ ವ್ಯಾಪ್ತಿಯನ್ನು (ಪೂರ್ಣ ಪ್ರಮಾಣ ಮತ್ತು ಭಾಗಶಃ) ಮೇಲ್ದರ್ಜೆಗೇರಿಸಿ ೧ ನಗರಸಭೆ (ಹೂಟಗಳ್ಳಿ ನಗರಸಭೆ), ೪ ಪಟ್ಟಣ ಪಂಚಾಯಿತಿಗಳನ್ನು (ಬೋಗಾದಿ, ರಮ್ಮನಹಳ್ಳಿ, ಶ್ರೀರಾಂಪುರ, ಕಡಕೊಳ) ರಚಿಸಲಾಯಿತು. ೨೦೨೧ರ ಆ.೧ರಿಂದ ಅಧಿಕೃತವಾಗಿ ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ಕಾರ್ಯ ಆರಂಭಿಸಿವೆ ಎಂದರು.
ಇದಕ್ಕೂ ಮುನ್ನ ಗ್ರಾಪಂಗಳಲ್ಲಿ ಕ್ರಮಬದ್ಧ ಆಸ್ತಿ (೯, ೧೧ಎ) ಕ್ರಮಬದ್ಧವಲ್ಲದ (೯, ೧೧ಬಿ) ಎಂದು ವರ್ಗೀಕರಿಸಿ ಖಾತಾ ವಿತರಿಸಲಾಗುತ್ತಿತ್ತು. ಆದರೆ, ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬಂದ ನಂತರ ಈ ಮಾದರಿ ಖಾತೆ ಮಾಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಈ ವ್ಯಾಪ್ತಿಯ ಜನರು ಪರದಾಡುವಂತಾಗಿತ್ತು ಎಂದರು.
ಈಗ ಪಪಂ ಹಾಗೂ ನಗರ ಸಭೆ ವ್ಯಾಪ್ತಿಉ ಭೂ ಪರಿವರ್ತನೆಯಾಗಿ ಬಡಾವಣೆ ಅನುಮೋದನೆಯಾಗದೆ ಹಾಗೂ ಮೂಲ ಸೌಲಭ್ಯಗಳನ್ನು ಕಲ್ಪಿಸದ ರವಿನ್ಯೂ ಬಡಾವಣೆಯ ಆಸ್ತಿಗಳಿಗೆ (ನಮೂನೆ ೩) ಖಾತೆ ಮಾಡಿಕೊಡಲಾಗುತ್ತದೆ ಎಂದು ತಿಳಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸೃಷ್ಟಿಯಾಗಿರುವ ಈ ಸಮಸ್ಯೆಗಳ ಬಗ್ಗೆ ನಾನು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿದೆ. ಬಳಿಕ ವಿಧಾನಸಭಾ ಅಧಿವೇಶನದಲ್ಲಿ ಈ ವಿಚಾರ ಚರ್ಚಿಸಲಾಯಿತು. ನಂತರ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲಾಯಿತು. ಸಮಿತಿಯು ಇದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ವರದಿಯನ್ನು ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು. ಇದಕ್ಕಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮೇಲ್ದರ್ಜೆಗೇರಿಸಿದ ಪಟ್ಟಣ ಪಂಚಾಯಿತಿ, ನಗರಸಭೆ ವ್ಯಾಪ್ತಿಯ ಗ್ರಾಪಂಗಳಿಗೆ ನಾನಾ ಯೋಜನೆಗಳಲ್ಲಿ 203 ಕೋಟಿ ರೂ. ಅನುದಾನ ಮಂಜೂರಾಗಿದೆ. 550 ಮನೆಗಳು ಮಂಜೂರಾಗಿದೆ. ಸ್ವಚ್ಛತೆ ಕೆಲಸವೂ ನಡೆದಿದೆ. ಈಗ ಖಾತೆಗೆೆ ಸಂಬಂಧಿಸಿದ ಸಮಸ್ಯೆಯನ್ನೂ ಬಗೆಹರಿಸಲಾಗಿದೆ.
-ಜಿ.ಟಿ.ದೇವೇಗೌಡ, ಶಾಸಕ

ಅಧಿಕೃತ ಆಸ್ತಿಗಳು :
-ಭೂ ಪರಿವರ್ತನೆಯಾಗಿ ಅನುಮೋದನೆಯಾಗಿರುವ ಬಡಾವಣೆಗಳು
-ಗ್ರಾಮ ಠಾಣಾ ಆಸ್ತಿಗಳು
-ಸರ್ಕಾರದಿಂದ ಮಂಜೂರಾದ ಆಸ್ತಿಗಳು
-ಕೆಐಎಡಿಬಿ ವತಿಯಿಂದ ಅನುಮೋದನೆಗೊಂಡ ಬಡಾವಣೆಗಳು

ಅನಧಿಕೃತ ಆಸ್ತಿಗಳು :
-ಭೂ ಪರಿವರ್ತನೆಾಂದ ಆದರೆ ಸಕ್ಷಮ ಪ್ರಾಧಿಕಾರ (ಮುಡಾ ಅಥವಾ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ) ದಿಂದ ಅನುಮೋದನೆಯಾಗದ ಬಡಾವಣೆಯ ಆಸ್ತಿಗಳು
-ಗ್ರಾಪಂಗಳು ಪೂರ್ಣ, ಭಾಗಶಃ ಮೇಲ್ದರ್ಜೆಗೇರಿಸಿ, ಪಂಚಾಯಿತಿಯಿಂದ ನಿರ್ವಹಿಸಿ, ಹಸ್ತಾಂತರಿಸಿದ ಆಸ್ತಿಗಳು
-ಕಟ್ಟಡ ಕಟ್ಟಲು ಪರವಾನಗಿ, ರಹದಾರಿ ಪಡೆಯದೆ ನಿರ್ಮಿಸಿದ ಕಟ್ಟಡಗಳು
-ಅಧಿಕೃತ ಆಸ್ತಿಯ ಮಾಲೀಕತ್ವ ಇಲ್ಲದ ನಿವೇಶನ, ಕಟ್ಟಡ

andolanait

Recent Posts

ಬೆಂಗಳೂರಿನಲ್ಲಿ ಸಾಕು ಪ್ರಾಣಿಗಳ ಮಾರಣಹೋಮ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾಕು ಅಮಾನವೀಯ ಘಟನೆ ನಡೆದಿದ್ದು, ಸಾಕು ಪ್ರಾಣಿಗಳನ್ನು ಚಿತ್ರಹಿಂಸೆ ನೀಡಿ ಕೊಂದು ವಿಕೃತಿ ಮೆರೆದಿರುವ…

32 mins ago

ನಾಯಕತ್ವ ಬಗ್ಗೆ ಯತೀಂದ್ರ ಹೇಳಿಕೆ: ಇದಕ್ಕೆ ಸಿಎಂ ಉತ್ತರಿಸಲಿ ಎಂದ ಡಿ.ಕೆ.ಶಿವಕುಮಾರ್‌

ಬೆಳಗಾವಿ: ರಾಜ್ಯದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್‌ ಕ್ಲಿಯರ್‌ ಆಗಿ ಹೇಳಿದೆ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ…

51 mins ago

ಜೀವಾವಧಿ ಶಿಕ್ಷೆಯಿಂದ ಪಾರಾಗಲು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಪ್ರಜ್ವಲ್‌ ರೇವಣ್ಣ

ಬೆಂಗಳೂರು: ಮನೆ ಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ…

1 hour ago

ಪೊಲೀಸ್‌ ಇಲಾಖೆಯಲ್ಲಿ 3 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ: ಸಚಿವ ಪರಮೇಶ್ವರ್‌

ಬೆಳಗಾವಿ: ಪೊಲೀಸ್‌ ಇಲಾಖೆಯಲ್ಲಿ 14 ಸಾವಿರ ಹುದ್ದೆಗಳು ಖಾಲಿಯಿದ್ದು, ಈ ಪೈಕಿ 3 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ…

2 hours ago

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ: ಯತೀಂದ್ರ ಸಿದ್ದರಾಮಯ್ಯ

ಬೆಳಗಾವಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್‌ ಸ್ಪಷ್ಟವಾಗಿ ಹೇಳಿದೆ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಮತ್ತೊಮ್ಮೆ ಬಾಂಬ್‌…

2 hours ago

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರ ಮುಚ್ಚುವ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ

ಬೆಂಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರ ಮುಚ್ಚುವ ರಾಜ್ಯ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಸರ್ಕಾರಿ ಆಸ್ಪತ್ರೆಯ…

3 hours ago