ಯುವ ದಸರಾದಲ್ಲಿ ಮಳೆಗೂ ಸೆಡ್ಡು ಹೊಡೆದು ಯುವ ಸಮೂಹ ಕುಣಿತ
ಮೈಸೂರು: ‘ಕಣ್ಣು ಹೊಡಿಯಾಕ ಮೊನ್ನೆ ಕಲತೀನಿ…ನಿನ್ನ ನೋಡಿ ಸುಮ್ನೆಂಗಿರ್ಲಿ’ ಎಂದು ಹಾಡುತ್ತಾ ಯುವ ದಸರಾ ವೇದಿಕೆಗೆ ಆಗಮಿಸಿದ ದಕ್ಷಿಣ ಭಾರತದ ಖ್ಯಾತ ಗಾಯಕಿ ಮಂಗ್ಲಿ, ನೆರೆದಿದ್ದ ಕಲಾಭಿಮಾನಿಗಳನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು.
ಯುವ ದಸರಾದ ಐದನೇ ದಿನದ ಕಾರ್ಯಕ್ರಮದಲ್ಲಿ ಮಳೆಗೂ ಸೆಡ್ಡು ಹೊಡೆದ ಯುವ ಸಮೂಹ ಗಾಯನ ರಸಸ್ವಾದ ಸವಿದರು. ಈ ವೇಳೆ ಮಾತನಾಡಿದ ಮಂಗ್ಲಿ ‘ನಾನು ಮೈಸೂರಲ್ಲಿ ನೀಡುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದೆ. ನನಗೆ ಮೈಸೂರು ಎಂದರೇ ಬಹಳ ಇಷ್ಟ. ತೆಲುಗು ಒಂದು ಮನೆಯಾದರೆ, ಕನ್ನಡವೂ ನನ್ನ ಇನ್ನೊಂದು ಮನೆ’ ಎಂದು ಹೇಳಿದ್ದಕ್ಕೆ ಮೈಸೂರಿಗರು ಪಿಧಾ ಆದರು.
ಏಕ್ ಲವ್ ಯಾ ಚಿತ್ರದ ‘ಎಣ್ಣೆಗೂ…ಹೆಣ್ಣಿಗೂ…’, ‘ಯಕ್ಕಾ ಸಕ್ಕಾ’ ಹಾಡುಗಳ ಜೊತೆಗೆ ತೆಲುಗಿನ ಗೀತೆಗಳನ್ನು ಹಾಡಿದರು. ಪುನೀತ್ ರಾಜ್ ಕುಮಾರ್ ಚಿತ್ರದ ‘ಬೊಂಬೆ ಹೇಳುತೈತೆ ನೀನೆ ರಾಜಕುಮಾರ್’ ಹಾಡು ಹಾಡಿದರು. ಇವರಿಗೆ ಗಾಯಕ ಅನಿರುದ್ಧ ಸಾಥ್ ನೀಡಿದರು.
ನಟಿ ಹರ್ಷಿಕಾ ಪೂಣಚ್ಚ ಅವರು ತಮ್ಮ ನೃತ್ಯದ ಮೂಲಕ ಎಲ್ಲರ ಮನಸೂರೆಗೊಂಡರು. ‘ನೀನಾದೆನಾ, ನೀನಾದೆನಾ… ನಿನ್ನೊಂದಿಗೆ ಈ ಜೀವನ…’, ‘ಕಣ್ಣು ಹೊಡಿಯಾಕ ಮೊನ್ನೆ ಕಲತೀನಿ’ ‘ಯಕ್ಕ ಸಕ್ಕಾ’ ಹಾಡುಗಳಿಗೆ ನೃತ್ಯ ಪ್ರದರ್ಶಿಸಿದರು. ಬಾಲಿವುಡ್ ಗಾಯಕ, ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಮತ್ತು ತಂಡದವರು ಸಂಗೀತ ರಸಮಂಜರಿ ಹಿಂದೆ ಹಾಡುಗಳು ಪ್ರೇಕ್ಷಕರ ಮನ ಗೆದ್ದವು.
ಮೈಸೂರಿನವರೇ ಆದ ನಟಿ ಪಾಯಲ್ ಅವರು ‘ಜೋಕೆ… ನಾನು ಬಳ್ಳಿಯ ಮಿಂಚು’ ಮತ್ತು ‘ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು’ ಹಾಡುಗಳಿಗೆ ಹೆಜ್ಜೆ ಹಾಕಿದರು. ರಂಗಿತರಂಗ ಖ್ಯಾತಿಯ ನಟಿ ರಾಧಿಕಾ ನಾರಾಯಣ್ ಅವರು ಅಪ್ಪು ಹಾಡುಗಳಿಗೆ ನೃತ್ಯ ಪ್ರದರ್ಶಿಸಿದರು. ಗಾಯಕ ಶಶಾಂಕ್ ಶೇಷಗಿರಿ, ಗಾಯಕಿ ಇಂಚರ ಹಾಡಿ ರಂಜಿಸಿದರು.
ಕಾರ್ಯಕ್ರಮದ ಆರಂಭದಲ್ಲಿಯೇ ಮಳೆ ತನ್ನ ಆಟ ಶುರು ಮಾಡಿತು. ೫ ನಿಮಿಷಗಳ ಕಾಲ ಬಿರುಸಾಗಿ ಸುರಿದ ಮಳೆ, ನಂತರ ತುಂತುರಾಗಿ ಉದುರಲಾರಂಭಿಸಿತು. ಆಸನದ ವ್ಯವಸ್ಥೆ ಇಲ್ಲದೆ, ಹಿಂದೆ ನಿಂತು ಕಾರ್ಯಕ್ರಮ ನೋಡುತ್ತಿದ್ದ ಪ್ರೇಕ್ಷಕರು ಕೊಡೆ ಹಿಡಿದು ಕಾರ್ಯಕ್ರಮ ಎಂಜಾಯ್ ಮಾಡಿದರು.
ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್ನವರು: ಪ್ರತಿಪಕ್ಷ…
ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…
ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…
ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…
ಬೆಂಗಳೂರು: ಮುಡಾ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ. ಕಚೇರಿಯಲ್ಲಿಯೇ ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ…
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…