ಜಿಲ್ಲೆಗಳು

ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಂ!

ಕಾಮಗಾರಿ ಸ್ಥಳದಲ್ಲೇ ಹೂತ ವಾಹನಗಳು; ತಮಿಳುನಾಡು ಸಂಪರ್ಕಿಸುವ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತ

ಚಾಮರಾಜನಗರ: ನಗರ ಹೊರವಲಯದ ಸೋಮವಾರಪೇಟೆ ಮೂಲಕ ತಮಿಳುನಾಡಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿಯುತ್ತಿದ್ದ ಚರಂಡಿ ನೀರು ತಪ್ಪಿಸಲು ೨ ದಿನಗಳ ಹಿಂದೆಯಷ್ಟೇ ಅಳವಡಿಸಿದ್ದ ಸಿಮೆಂಟ್ ಪೈಪ್ ಜೋಡಣೆ ಕಾಮಗಾರಿ ಸ್ಥಳದಲ್ಲೇ ಭಾರೀ ವಾಹನಗಳು ಶನಿವಾರ ಹೂತು ಕೊಂಡು ಕಿ.ಮೀ.ಗಿಂತಲೂ ಹೆಚ್ಚು ದೂರ ಟ್ರಾಫಿಕ್ ಜಾಂ ಸಮಸ್ಯೆ ಉಂಟಾಗಿತ್ತು.
ಬೆಳಿಗ್ಗೆ ೮ರಿಂದ ೯ ಘಂಟೆಯವರೆಗೆ ಟ್ರಾಫಿಕ್ ಜಾಂ ಉಂಟಾದ ಪರಿಣಾಮ ಕರ್ನಾಟಕ ಮತ್ತು ತಮಿಳುನಾಡು ನಡುವೆ ಸಂಚರಿಸುವ ವಾಹನಗಳು ನಿಂತಲ್ಲೇ ನಿಲ್ಲುವಂತಾಗಿತ್ತು.

ಏನಿದು ಸಮಸ್ಯೆ :
ರಾಷ್ಟ್ರೀಯ ಹೆದ್ದಾರಿಯಲ್ಲಿ(೨೦೯) ಬರುವ ಸೋಮವಾರಪೇಟೆ ಮತ್ತು ಹರದನಹಳ್ಳಿ ಮಧ್ಯೆದ ಸೇತುವೆ ಅಡಿಯಲ್ಲಿ ಸರಾಗವಾಗಿ ಹರಿದು ಹೋಗುತ್ತಿದ್ದ ನೀರಿನ ಕಾಲುವೆ ರಸ್ತೆ ಕಾಮಗಾರಿ ಸಂದರ್ಭದಲ್ಲಿ ಮುಚ್ಚಿ ಹೋಗಿದೆ. ಹೀಗಾಗಿ ಕಳೆದ ೬ ತಿಂಗಳಿಂದ ರಸ್ತೆ ಮೇಲೆೆಯೇ ಚರಂಡಿ ನೀರುಹರಿದು ಪ್ರಯಾಣಿಕರಿಗೆ ತೊಂದರೆಯಾಗಿ ಅಪಘಾತಗಳಿಗೂ ಕಾರಣವಾಗಿತ್ತು.
ಈ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಸೂಚನೆ ಮೇರೆಗೆ ನಗರಸಭೆಯಿಂದ ಸಿಮೆಂಟ್ ಪೈಪ್‌ಗಳನ್ನು ೨ ದಿನಗಳ ಹಿಂದೆಯಷ್ಟೇ ಅಳವಡಿಸಿ ರಸ್ತೆ ಮೇಲೆ ಚರಂಡಿ ನೀರು ಹರಿಯುವುದನ್ನು ತಪ್ಪಿಸಲಾಗಿತ್ತು. ಶಾಸಕರೂ ಕಾಮಗಾರಿ ವೀಕ್ಷಣೆ ವಾಡಿದ್ದರು.
ಈ ಕಾಮಗಾರಿ ಸ್ಥಳದಲ್ಲಿ ಅಂದರೆ ಪೈಪ್‌ಗಳನ್ನು ಹಾಕಿರುವ ಜಾಗದ ಮೇಲ್ಭಾಗದಲ್ಲಿ ಸಿಮೆಂಟ್, ಜಲ್ಲಿ ಕಾಂಕ್ರೀಟ್ ಹಾಕದೆ ಕೇವಲ ಮಣ್ಣನ್ನಷ್ಟೇ ಹಾಕಿದ್ದರಿಂದ ಮಳೆಯ ಕಾರಣ ಭಾರೀ ವಾಹನಗಳು ಶನಿವಾರ ಹೂತುಕೊಂಡು ರಸ್ತೆ ಬಂದ್ ಆಗಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.
ನಂತರ ಹೂತಿದ್ದ ವಾಹನವೊಂದನ್ನು ದುಸ್ಸಾಹಸ ವಾಡಿ ಪಕ್ಕಕ್ಕೆ ಸರಿಸಲಾಗಿ ಸ್ವಲ್ಪ ಸ್ಥಳಾವಕಾಶವಾಯಿತು. ಈ ರಸ್ತೆಗೆ ಹೊಂದಿಕೊಂಡಂತೆ ಬೈಪಾಸ್ ರಸ್ತೆ ಇದ್ದು, ಅದೂ ತುಂಬಾ ಹಾಳಾಗಿದೆ. ಈ ಕಡೆಯಿಂದಲೂ (ತಾವರೆಕಟ್ಟೆಮೋಳೆ ವಾರ್ಗ) ವಾಹನಗಳು ಕೆಸರಿನ ಮಧ್ಯೆ ಸಂಚರಿಸಬೇಕಾಯಿತು.
ಸೋಮವಾರಪೇಟೆ, ದೊಡ್ಡಮೋಳೆ, ಚಿಕ್ಕಮೋಳೆ, ಹರದನಹಳ್ಳಿ, ವೆಂಕಟಯ್ಯನ ಛತ್ರ, ಅಮಚವಾಡಿ, ಬಸವಾಪುರ, ಬಿಸಲವಾಡಿ, ಅಟ್ಟುಗೂಳಿಪುರ ಮೊದಲಾದ ಗ್ರಾಮದವರು ಈ ವಾರ್ಗದಲ್ಲಿಯೇ ನಗರಕ್ಕೆ ಬಂದು ಹೋಗಬೇಕಿದ್ದು ರಸ್ತೆ ಅವ್ಯವಸ್ಥೆ ಗೊತ್ತಿದ್ದರೂ ಹೆದ್ದಾರಿ ಇಂಜಿನಿಯರ್‌ಗಳು ಮೌನ ವಹಿಸಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಾರ್ಗದಲ್ಲಿ ಟ್ರಾಫಿಕ್ ಜಾಂ ಸಮಸ್ಯೆ ಇದೇ ಮೊದಲಲ್ಲ. ಗುರುವಾರ ಸಂಜೆ ೬.೩೦ರಲ್ಲೂ ಉಂಟಾಗಿತ್ತು. ಅದರ ಹಿಂದೆಯೂ ಆಗಿತ್ತು. ವಾಹನ ಸವಾರರು ಪರಸ್ಪರ ಹಿಂದೆ -ಮುಂದೆ ನೋಡಿ ಕೊಂಡು, ವಾತನಾಡಿಕೊಂಡು ಸಂಚಾರ ಮಾಡಬೇಕಿತ್ತು ಹಾಗೂ ಟ್ರಾಫಿಕ್ ಜಾಂ ಆಗುತ್ತಿದೆ. ಅಂತರರಾಜ್ಯ ಸಂಪರ್ಕಿಸುವ ಈ ರಸ್ತೆ ಸ್ಥಿತಿ ನೋಡಿ ತಮಿಳುನಾಡು ಪ್ರಾಯಾಣಿಕರು ಹೇಸುವಂತಾಗಿದೆ ಎಂದು ದೊಡ್ಡಮೋಳೆ ಹನುರಾಜು ಕಟುವಾಗಿ ಟೀಕಿಸಿದ್ದಾರೆ.


ಹೆದ್ದಾರಿಯಲ್ಲಿ ಹರಿಯುತ್ತಿದ್ದ ಚರಂಡಿ ನೀರು ತಡೆಯಲು ಸಿಮೆಂಟ್ ಪೈಪ್‌ಗಳನ್ನು ಅಳವಡಿಸಿರುವ ಸ್ಥಳದಲ್ಲಿ ಕಾಂಕ್ರೀಟ್ ಹಾಕದೇ ಮಳೆಯ ಈ ಸಂದರ್ಭದಲ್ಲಿ ಮಣ್ಣು ಹಾಕಿದ್ದು ವಾಹನಗಳು ಹೂತು ಕೊಂಡು ಟ್ರಾಫಿಕ್ ಜಾಂ ಉಂಟಾಗಲು ನೇರ ಕಾರಣ. ಕೂಡಲೇ ಅಲ್ಲಿಗೆ ಕಾಂಕ್ರೀಟ್ ಹಾಕಿ ಹೆದ್ದಾರಿಯಲ್ಲಿ ಇನ್ನಾದರೂ ಸುಗಮವಾಗಿ ಸಂಚರಿಸುವಂತೆ ಮಾಡದಿದ್ದರೆ ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಗುವುದು.
ಹನುರಾಜ್,ದೊಡ್ಡಮೋಳೆ.

andolanait

Recent Posts

ಪಚ್ಚೆದೊಡ್ಡಿ ಗ್ರಾಮಕ್ಕೆ ತ್ರಿಸದಸ್ಯ ಸಮಿತಿ ತಂಡ ಭೇಟಿ

ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಸಿಎಂಗೆ ಪತ್ರ ಬರೆದಿದ್ದ ಗ್ರಾಮದ ವಿದ್ಯಾರ್ಥಿಗಳು ಹನೂರು: ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ನಿವಾಸಿಗಳಿಗೆ ಸಮರ್ಪಕ…

2 hours ago

ತ್ರಿಪುರ ಸುಂದರಿ ಅಮ್ಮನವರ ಜಾತ್ರೆಗೆ ಸಕಲ ಸಿದ್ಧತೆ

ಎಂ.ನಾರಾಯಣ್ ತಿ.ನರಸೀಪುರ ತಾಲ್ಲೂಕಿನ ಮೂಗೂರಿನಲ್ಲಿ ಜ.೩ರಂದು ಆಕರ್ಷಕ ಬಂಡಿ ಉತ್ಸವ; ೫ರಂದು ರಥೋತ್ಸವ ತಿ.ನರಸೀಪುರ: ಪುರಾಣ ಪ್ರಸಿದ್ಧ ತಾಲ್ಲೂಕಿನ ಮೂಗೂರಿನ…

2 hours ago

ಮತ್ತೆ ಆರಂಭವಾದ ಕೋಟೆ ಪೊಲೀಸ್ ಕ್ಯಾಂಟೀನ್

ಶಾಸಕರ ಸೂಚನೆಯ ಮೇರೆಗೆ ಕ್ಯಾಂಟೀನ್ ಆರಂಭ; ಬಡವರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸಂತಸ ಎಚ್.ಡಿ.ಕೋಟೆ: ಕಡಿಮೆ ದರದಲ್ಲಿ ರುಚಿಕರವಾದ ತಿಂಡಿ, ಊಟ…

2 hours ago

ಗುಬ್ಬಚ್ಚಿ ಶಾಲೆಯಲ್ಲಿ ಬರೀ 12 ವಿದ್ಯಾರ್ಥಿಗಳು!

ವರಹಳ್ಳಿ ಆನಂದ ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ ೧ರಿಂದ ೭ನೇ ತರಗತಿವರೆಗೆ ಪ್ರವೇಶಾವಕಾಶ ಇರುವ ಸ.ಹಿ.ಪ್ರಾ. ಶಾಲೆ ಮೈಸೂರು: ನೂರಾರು…

2 hours ago

ಕೊಡಗು‌ ಸಿದ್ದಾಪುರ ದರೋಡೆ ಪ್ರಕರಣ ಭೇದಿಸಲು ವಿಶೇಷ ಕಾರ್ಯಪಡೆ ಸಜ್ಜು

ಸಿದ್ದಾಪುರ :- ನಗರದಲ್ಲಿ ನಡೆದ ದರೋಡೆ ಪ್ರಕರಣ ಭೇದಿಸಲು ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ…

11 hours ago