ಜಿಲ್ಲೆಗಳು

ನಾಡಗೀತೆಗೆ ಅನಂತಸ್ವಾಮಿ ರಾಗ ಸಂಯೋಜನೆ : ಸಿಎಂರವರಿಗೆ ಅಜಯ್ ಶಾಸ್ತ್ರಿ ಧನ್ಯವಾದ

ಮೈಸೂರು : ನಾಡಗೀತೆ ಗಾಯನಕ್ಕೆ ಶೈಲಿಯ ದಾಟಿ ಮತ್ತು 2:30ನಿಮಿಷ ಕಾಲಮಿತಿಯನ್ನ ನಿಗದಿಪಡಿಸಿ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯನ್ನ ಅಧಿಕೃತಗೊಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ರವರಿಗೆ ನಗರದ ನಿರೂಪಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕರಾದ ಅಜಯ್ ಶಾಸ್ತ್ರಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.

ಮುಂದುವರಿದು,  ಮೈಸೂರು ರಾಜ್ಯವಿದ್ದಾಗ ಬಸಪ್ಪಶಾಸ್ತ್ರಿಗಳು ರಚಿಸಿದ ಕಾಯೌ  ಗೌರಿ ನಾಡಗೀತೆಯಾಗಿ ಎಲ್ಲೆಡೆ ಹಾಡಲಾಗುತ್ತಿತ್ತು, ನಂತರ ಕರ್ನಾಟಕ ರಾಜ್ಯ ರಚನೆಯಾದ ಬಳಿಕ ಕುವೆಂಪು ರವರು ರಚಿಸಿದ ಭಾರತಜನನೀಯ ತನುಜಾತೆ ಹಾಡುತ್ತಿದ್ದಾದರೂ ಅದು ಅಧಿಕೃತವಾಗಿ ರಾಜ್ಯ ಸರ್ಕಾರ ನಾಡಗೀತೆಯೆಂದು ಘೋಷಿಸಿರಲಿಲ್ಲ ರಾಷ್ಟ್ರಕವಿ ಕುವೆಂಪು ರವರು 1924ರಲ್ಲಿ ಭಾರತಜನನಿಯ ತನುಜಾತೆ ಗೀತೆಯನ್ನ ‘ಕಿಶೋರಚಂದ್ರವಾಣಿ’ ಎಂಬ ಕಾವ್ಯನಾಮದಡಿ ಬರೆದರು. ರಾಷ್ಟ್ರಕವಿ ಕುವೆಂಪು ರವರು ರಚಿಸಿರುವ ಭಾರತಜನನಿಯ ತನುಜಾತೆ ಗೀತೆಯನ್ನ ಮೈಸೂರು ಅನಂತಸ್ವಾಮಿ ರವರು ರಾಗಸಂಯೋಜಿಸಿ ರಾಜ್ಯದ ಎಲ್ಲೆಡೆ ಹಾಡುವ ಮೂಲಕ ಜನಸಮೂಹ ಹಾಡುವಂತೆ ಪ್ರೇರೇಪಿಸಿ ಜನಪ್ರಿಯಗೊಳಿಸಿದ್ದರು, 2004 ಫೆಬ್ರವರಿ 23ರಂದು ಕುವೆಂಪು ರವರ ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಭಾರತಜನನಿಯ ತನುಜಾತೆ ಗೀತೆಯನ್ನು ರಾಜ್ಯದ ಅಧಿಕೃತ ನಾಡಗೀತೆಯನ್ನಾಗಿ ನಿರ್ಧರಿಸಿ ಘೋಷಿಸಿತು.
ಇತ್ತೀಚಿನ ದಿನಗಳಲ್ಲಿ ಟ್ರಾಕ್ ಸಂಪ್ರದಾಯ ಬಂದ ಬಳಿಕ ನಾಡಗೀತೆಯನ್ನ ಯಾವ ಶೈಲಿಯ ರಾಗದಲ್ಲಿ ಹಾಡಬೇಕು, ದಾಟಿ ಮತ್ತು ಸಮಯ ನಿಗಧಿಯನ್ನು ಸಹ ರಾಜ್ಯ ಸರ್ಕಾರ ನಿಗಧಿಪಡಿಸಿರಲಿಲ್ಲ, ಇದೀಗ ಸಂಗೀತ ವಿದೂಷಿ‌ ಎಚ್. ಆರ್ ಲೀಲಾವತಿ ರವರ ಅಧ್ಯಕ್ಷತೆಯಲ್ಲಿ ಸಮಿತಿ ಶಿಫಾರಸು ಮಾಡಿದ ಪ್ರಕಾರ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ವೇದಿಕೆಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಹಾಡುವಾಗ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಲ್ಲಿ 2:30ನಿಮಿಷ ಇನ್ನೂ ಮುಂದೆ ನಾಡಗೀತೆಯನ್ನ ಹಾಡಬೇಕೆಂದು ಅಧಿಕೃತಗೊಳಿಸಿದೆ ನಮ್ಮ ಮೈಸೂರಿನ ಸಾಂಸ್ಕೃತಿಕತೆಗೆ ಕಲಾವಿದರ ತವರೂರಿಗೆ ಸಂದ ಗೌರವವಾಗಿದೆ, ಮೈಸೂರು ಕಲಾವಿದರ ಬಹಳ ವರ್ಷದ ಮಹದಾಸೆ ಈಡೇರಿದೆ ನಿರ್ಧಾರ ಕೈಗೊಂಡು ಅನುಮೋದನೆ ಮಾಡಿದೆ ಎಂದು ರಾಜ್ಯ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

andolanait

Recent Posts

ಕೆ.ಆರ್.ನಗರ | ಗಾಂಜಾ ಮಾರಾಟ : ಇಬ್ಬರ ಬಂಧನ

ಕೆ.ಆರ್.ನಗರ : ಪಟ್ಟಣದಲ್ಲಿ ಇಬ್ಬರು ಯುವಕರು ಮಾರುತಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ…

19 mins ago

ಮಿಷನ್ 40 ಫಾರ್ 90 ಡೇಸ್ : ಮಂಡ್ಯ ಜಿಲ್ಲೆಯಲ್ಲಿ SSLC ಫಲಿತಾಂಶ ಹೆಚ್ಚಳಕ್ಕೆ ವಿಶೇಷ ಅಭಿಯಾನ

ಮಂಡ್ಯ : ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ವಿನೂತನವಾಗಿ “ಮಿಷನ್ 40 ಫಾರ್ 90 ಡೇಸ್” ಅಭಿಯಾನವನ್ನು…

34 mins ago

ಗೃಹಲಕ್ಷ್ಮಿಗೆ ಮತ್ತೆ ತಾಂತ್ರಿಕ ಸಮಸ್ಯೆ ; ಬಾಕಿ ಹಣ ಬಿಡುಗಡೆ ವಿಳಂಬ?

ಬೆಂಗಳೂರು : ಬೆಳಗಾವಿ ಚಳಿಗಾಲದ ಅಧಿವೇಶನದ ಕಲಾಪದಲ್ಲಿ ರಾಜ್ಯ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದ್ದ ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ…

39 mins ago

ದುರಂಧರ್‌ ಸಕ್ಸಸ್ | ‌ದಿಢೀರ್‌ ಸಂಭಾವನೆ ಏರಿಕೆ ; ದೃಶ್ಯಂ-3 ಚಿತ್ರದಿಂದ ಹೊರಬಂದ ಅಕ್ಷಯ್‌ ಖನ್ನಾ

ಮುಂಬೈ : ಬಾಲಿವುಡ್‌, ಟಾಲಿವುಡ್‌, ಸ್ಯಾಂಡಲ್‌ವುಡ್‌ ಸೇರಿದಂತೆ ಎಲ್ಲಾ ವುಡ್‌ಗಳಲ್ಲಿಯೂ ಧುರಂಧರ್‌ದೆ ಹಾವಳಿ. ಈ ವರ್ಷದ ಅತಿ ಹೆಚ್ಚು ಕೆಲಕ್ಷನ್…

52 mins ago

ಅಧಿಕಾರ ಹಂಚಿಕೆ ದೊಂಬರಾಟದಂತಿದೆ : ಎಚ್.ಡಿ.ದೇವೇಗೌಡ ಟೀಕೆ

ಬೆಂಗಳೂರು : ಅಧಿಕಾರ ಹಸ್ತಾಂತರದ ವಿಚಾರದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹೈಡ್ರಾಮ ಆಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು…

1 hour ago

ಮಂತ್ರಾಲಯಕ್ಕೆ ಭೇಟಿ ನೀಡಿದ ನಟ ರಿಷಬ್‌ ಶೆಟ್ಟಿ ಕುಟುಂಬ

ರಾಯಚೂರು: ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಅವರಿಂದು ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು.…

2 hours ago