ಜಿಲ್ಲೆಗಳು

ನಾಗರಹೊಳೆ, ಬಂಡೀಪುರದಲ್ಲಿ ಡಬಲ್‌ ಧಮಾಕಾ…!

ಕಬಿನಿ ಹಿನ್ನೀರಿನಲ್ಲಿ 4 ಮರಿಗಳ ಜತೆ ಹುಲಿ ದರ್ಶನ, ಬಂಡೀಪುರಕ್ಕೆ ಮತ್ತೆ ಬಂದಿದ್ದಾಳೆ ಸುಂದರಿ…

ಮೈಸೂರು: ಬಂಡೀಪುರ ಮತ್ತು ನಾಗರಹೊಳೆಯ ವನ್ಯಪ್ರೇಮಿಗಳಿಗೆ ಈಗ ಖುಷಿಯೋ ಖುಷಿ. ಕಾರಣವಿಷ್ಟೆ. ಅಪರೂಪಕ್ಕೆ ಕಾಣ ಸಿಗುವ ಹುಲಿಗಳು ಈಗ ಮರಿಗಳ ಜತೆ ದರ್ಶನ ನೀಡುತ್ತಿವೆ. ಬಂಡೀಪುರ ಬಿಟ್ಟು ಮಧುಮಲೈ ಅರಣ್ಯಕ್ಕೆ ಹೋಗಿದ್ದ ಸುಂದರಿ 18 ತಿಂಗಳ ಬಳಿಕ ಮರಿಯ ಜತೆ ಮರಳಿ ಬಂದಿದ್ದಾಳೆ. ಇತ್ತ ನಾಗರಹೊಳೆಯ ಅಂತರ ಸಂತೆ ವಲಯದಲ್ಲಿ ಎರಡು ಹುಲಿಗಳು ನಾಲ್ಕು-, ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಳ್ಳುತ್ತಿವೆ. ತಾಯಿ ಮತ್ತು ಮರಿಗಳ ಜತೆ ಎರಡು ಗಂಡು ಹುಲಿಗಳೂ ಸೇರಿಕೊಂಡಿವೆ. ಸಫಾರಿ ಪ್ರಿಯರು ಅತ್ಯಪರೂಪದ ಈ ಗ್ರೂಪ್‌ ಫೋಟೊಗಳನ್ನು ಕ್ಲಿಕ್ಕಿಸಿ ಖುಷಿಪಡುತ್ತಿದ್ದಾರೆ.

ಎಚ್.‌ ಡಿ. ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರಿನ ಬಳಿ ಡಿಸೆಂಬರ್‌ 10ರ ಬೆಳಿಗ್ಗೆ ವನ್ಯಜೀವಿ ಸಫಾರಿಯಲ್ಲಿ ತಾಯಿ ಹುಲಿ ಮತ್ತು ನಾಲ್ಕು ಮರಿಗಳ ದರ್ಶನವಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಎರಡು ಹೆಣ್ಣು ಹುಲಿಗಳು ತಲಾ ನಾಲ್ಕು ಮರಿಗಳಿಗೆ ಜನ್ಮ ನೀಡಿರುವುದು ಇದೇ ಪ್ರಥಮ ಬಾರಿ ಎಂದು ಅಂತರಸಂತೆ ವನ್ಯಜೀವಿ ವಲಯ ಅರಣ್ಯ ಅಧಿಕಾರಿ ಎಸ್.ಎಸ್. ಸಿದ್ದರಾಜು ಸಂತಸ ಹಂಚಿಕೊಂಡಿದ್ದಾರೆ.


ಎಚ್.‌ಡಿ.ಕೋಟೆಯ ತಾರಕ ಹಿನ್ನೀರು ವ್ಯಾಪ್ತಿಯಲ್ಲಿ ರಸೂಲ್ ಲೈನ್ ಫೀಮೇಲ್ ಹೆಸರಿನಿಂದ ಗುರುತಿಸಿಕೊಂಡಿರುವ ಹೆಣ್ಣು ಹುಲಿಯು 11 ತಿಂಗಳ ಹಿಂದೆ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಈ ಹೆಣ್ಣು ಹುಲಿಗೆ ಸೀಳುತುಟಿ ಎಂಬ ಗಂಡುಹುಲಿ ಜೋಡಿಯಾಗಿದೆ. ಕಳೆದ ಅಕ್ಟೋಬರ್ 12ರಂದು ಕಬಿನಿ ಹಿನ್ನೀರಿನ ವ್ಯಾಪ್ತಿಯಲ್ಲಿ ಈ ಹೆಣ್ಣು ಹುಲಿಯು ತನ್ನ ನಾಲ್ಕು ಮರಿಗಳೊಂದಿಗೆ ವನ್ಯಪ್ರಿಯರಿಗೆ ದರ್ಶನ ನೀಡಿತ್ತು.

ಅಂತರ ಸಂತೆಯ ಕಬಿನಿ ಹಿನ್ನೀರು ಪ್ರದೇಶದ ವನ್ಯಪ್ರಿಯರು ಬ್ಯಾಕ್ ವಾಟರ್ ಫೀಮೇಲ್ ಎಂದು ಕರೆಯುತ್ತಿರುವ ಹೆಣ್ಣು ಹುಲಿಯು ಆರು ತಿಂಗಳ ಹಿಂದೆ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಈ ಹೆಣ್ಣು ಹುಲಿಗೆ ಈಗ ಟೈಗರ್ ಟ್ಯಾಂಕ್ ಗಂಡುಹುಲಿ ಜೋಡಿಯಾಗಿದೆ. ಈ ಹುಲಿಯೂ ಇತ್ತೀಚೆಗೆ ತನ್ನ ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಂಡಿದೆ.

ಇನ್ನು ಬಂಡೀಪುರದ ರಾಯಭಾರಿ ಎಂದು ಕರೆಸಿಕೊಳ್ಳುತ್ತಿದ್ದ ” ಪ್ರಿನ್ಸ್‌ʼ ಹುಲಿಯ ಮರಣದ ಬಳಿಕ ಹುಲಿ ದರ್ಶನ ವಿರಳವಾಗಿತ್ತು. ಈ ಕೊರತೆಯನ್ನು ನೀಗಿಸಿದ್ದು ಸುಂದರಿ. ಎರಡು ಹುಲಿ ಮರಿಗಳಿಗೆ ಜನ್ಮ ನೀಡಿದ್ದ ಸುಂದರಿ ಸುಮಾರು ಎರಡು ವರ್ಷಗಳ ಕಾಲ ಆಗಾಗ ಸಫಾರಿ ಹಾದಿಯಲ್ಲಿ ದರ್ಶನ ಕೊಡುತ್ತಿದ್ದಳು. ಇದ್ದಕ್ಕಿದ್ದಂತೆ ಅದೇನಾಯಿತೋ ಗೊತ್ತಿಲ್ಲ. ಸುಂದರಿ ತನ್ನ ಮರಿಗಳನ್ನು ತೊರೆದು ಮಧುಮಲೈ ಅರಣ್ಯಕ್ಕೆ ವಾಸ್ತವ್ಯ ಬದಲಿಸಿದ್ದಳು. ಈ ಮಧ್ಯೆ ಕೆಕ್ಕನಹಳ್ಳಿ ಸಮೀಪ ಮಾಯಾರ್ ರಾಣಿ ಎಂಬ ಹುಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದಳು. ಇತ್ತೀಚೆಗೆ ಆಕೆ ಕಾಣಿಸುತ್ತಿಲ್ಲ.

ಈ ಮಧ್ಯೆ 18 ತಿಂಗಳ ಬಳಿಕ ಸುಂದರಿ ತನ್ನ ಮರಿ ಜತೆ ಬಂಡೀಪುರಕ್ಕೆ ಮರಳಿದ್ದಾಳೆ. ಮೊನ್ನೆ ತನ್ನ ಕಂದನಿಗೆ ರಸ್ತೆ ದಾಟುವ ಬಗೆಯನ್ನು ಹೇಳಿಕೊಡುತ್ತಿದ್ದ ಸುಂದರಿ ಸಫಾರಿಗೆ ಹೊರಟವರ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾಳೆ. ಅವಳದು ಈಗಲೂ ಅದೇ ನಿರ್ಭೀತ, ಸ್ವಚ್ಛಂದ ನೋಟ. ಆರೇಳು ತಿಂಗಳು ಪ್ರಾಯದ ಮರಿ ಜತೆ ಸುಂದರಿ ವಾಕ್‌ ಮಾಡುತ್ತಿದ್ದರೆ ಬಂಡೀಪುರದ ಸೌಂದರ್ಯ ಇಮ್ಮಡಿಸಿದಂತೆ ಕಾಣುತ್ತಿದೆ. ಒಟ್ಟಾರೆಯಾಗಿ ನಾಗರಹೊಳೆ ಮತ್ತು ಬಂಡೀಪುರಕ್ಕೆ ಸಫಾರಿಗೆ ಬಂದರೆ, ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಡಬಲ್‌ ಧಮಾಕಾ ಗ್ಯಾರಂಟಿ..

andolanait

Recent Posts

ಮರ್ಯಾದೆಗೇಡು ಹತ್ಯೆ ವಿರೋಧಿಸಿ ಸಹಿ ಸಂಗ್ರಹ

ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…

2 hours ago

ಕೆ.ಆರ್.ಆಸ್ಪತ್ರೆ ಶೆಡ್ ನಲ್ಲಿ ಬೆಂಕಿ : ಹಾಸಿಗೆಗಳು ಬೆಂಕಿಗಾಹುತಿ

ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…

2 hours ago

ಹೊಸ ವರ್ಷಾಚರಣೆಗೆ ಮುನ್ನೆಚ್ಚರಿಕೆ : ಸೂಕ್ಷ ಪ್ರದೇಶಗಳ ಬಗ್ಗೆ ಸಮೀಕ್ಷೆ ವರದಿಗೆ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…

3 hours ago

ಸಿಲಿಂಡರ್‌ ಸ್ಪೋಟ ಪ್ರಕರಣ : ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮಂಜುಳ ಸಾವು

ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…

4 hours ago

ಇತಿಹಾಸ ಸೃಷ್ಟಿಸಿದ ಬಿಜೆಪಿ : ತಿರುವನಂತಪುರಂನ ಮೇಯರ್ ಆಗಿ ವಿ.ವಿ.ರಾಜೇಶ್ ಆಯ್ಕೆ

ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…

4 hours ago

ಅಧಿಕಾರ ಶಾಶ್ವತವಲ್ಲ : ‘ನನ್ನ ತಂದೆಯ ಇಚ್ಛೆಯಂತೆಯೇ ನಡೆಯುವೆ’ ; ಯತೀಂದ್ರ

ಚಿಕ್ಕೋಡಿ : ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಯಾವುದೇ…

4 hours ago