ಜಿಲ್ಲೆಗಳು

ದಸರಾಗೆ ಯುನೆಸ್ಕೊ ಮಾನ್ಯತೆ: ತಿರುಗದ ಆಡಳಿತ ಯಂತ್ರ

ಜನಪ್ರತಿನಿಧಿಗಳು,ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆ ಎಂದು ಆರೋಪಿಸಿದ ಪ್ರಜ್ಞಾವಂತ ಮೈಸೂರಿಗರು

ಚಿರಂಜೀವಿ ಸಿ.ಹುಲ್ಲಹಳ್ಳಿ

ಮೈಸೂರು: ನಾಲ್ಕು ಶತಮಾನಗಳ ಸಂಸ್ಕೃತಿ-ಪರಂಪರೆ ಇತಿಹಾಸ ಹೊಂದಿರುವ ಮೈಸೂರು ದಸರಾಗೆ ವಿಶ್ವ ಸಂಸ್ಥೆಯ ಶೈಕ್ಷಣಿಕ, ವಿಜ್ಞಾನ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ) ನೀಡುವ ಇನ್ ಟ್ಯಾಂಜಿಬಲ್ ಕಲ್ಚರ್ ಹೆರಿಟೇಜ್(ಸಾಂಸ್ಕೃತಿಕ ಅಮೂರ್ತ ಪರಂಪರೆ) ಮಾನ್ಯತೆಗೆ ಅರ್ಜಿ ಸಲ್ಲಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕೆಲವು ವರ್ಷಗಳಿಂದ ಎದ್ದಿದ್ದ ಕೂಗು ಗುರಿ ತಲುಪುವಲ್ಲಿ ವಿಫಲವಾಗಿದೆ.
ಡಿ.ರಂದೀಪ್ ಅವರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಪರಂಪರೆ ಸಮಿತಿ ನಡೆದ ಸಭೆಯಲ್ಲಿ ಸಮಿತಿಯ ಸದಸ್ಯ ಹಾಗೂ ಪ್ರಾಚೀನ ಪುರಾತತ್ವ ನಿವೃತ್ತ ಪ್ರಾಧ್ಯಾಪಕರಾಗಿದ್ದ ಪ್ರೊ.ಎನ್.ಎಸ್.ರಂಗರಾಜು ಅವರು ಯುನೆಸ್ಕೊ ನೀಡುವ ಇನ್‌ಟ್ಯಾಂಜಿಬಲ್ ಕಲ್ಚರ್ ಹೆರಿಟೇಜ್ ಟ್ಯಾಗ್ ನೀಡಲು ಮನವಿ ಸಲ್ಲಿಸುವಂತೆ ಸಲಹೆ ನೀಡಿದ್ದರು. ನಂತರ ಇದಕ್ಕೆ ಸಮಿತಿ, ಜಿಲ್ಲಾಧಿಕಾರಿಗಳು ಹಾಗೂ ಪ್ರವಾಸ್ಯೋದಮ ಇಲಾಖೆಯು ಒಪ್ಪಿಗೆ ಸೂಚಿಸಿತ್ತು. ಆದರೆ, ಈ ಕಾರ್ಯಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ಪುರಾತತ್ವ ಇಲಾಖೆಗೆ ಪೂರ್ಣ ಪ್ರಮಾಣ ಅಧಿಕಾರಿಯ ನೇಮಕವಾಗದಿದ್ದ ಕಾರಣಗಳಿಂದ ವರ್ಷಗಳು ಉರುಳುತ್ತಾ ಹೋದರು ಯುನೆಸ್ಕೋಗೆ ಅರ್ಜಿ ಸಲ್ಲಿಸುವ ಕಾರ್ಯವೂ ನಡೆದಿಲ್ಲದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
೧೬೧೦ರಲ್ಲಿ ರಾಜ ಒಡೆಯರ್ ದಸರಾ ಮಹೋತ್ಸವ ಆರಂಭಿಸಿದರು. ಅಂದಿನಿಂದ ಇಂದಿನವರೆಗೂ ದಸರಾ ಮಹೋತ್ಸವ ತನ್ನದೇ ಆದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ಈಗ ಮೈಸೂರೆಂದರೆ ದಸರಾ ಎನ್ನುವಷ್ಟು ಪ್ರಸಿದ್ಧಿ ಪಡೆದಿದೆ. ೪೧೩ನೇ ದಸರಾ ಮಹೋತ್ಸವವು ಅದ್ಧೂರಿಯಾಗಿ ನಡೆಯಿತು. ಹತ್ತಾರು ಕೋಟಿ ರೂ.ಗಳು ವೆಚ್ಚವಾಯಿತು. ಆದರೂ ಯುನೆಸ್ಕೊ ಮಾನ್ಯತೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮಾತ್ರ ಶುರುವಾಗಿಲ್ಲ.


ಯುನೆಸ್ಕೋ ಮಾನ್ಯತೆ ಪಡೆದರೇ ಆಗುವ ಲಾಭ
ಇನ್‌ಟ್ಯಾಂಜಿಬಲ್ ಕಲ್ಚರ್ ಹೆರಿಟೇಜ್ ಟ್ಯಾಗ್ ಹಾಗೂ ಯುನೆಸ್ಕೋ ಕ್ಯಾಲೆಂಡರ್‌ನಲ್ಲಿ ದಸರಾವನ್ನು ಸೇರಿಸುವುದರಿಂದ ಜಗತ್ತಿನ ಎಲ್ಲ ಖಂಡಗಳಿಗೂ ದಸರೆಯ ಮಹತ್ವ ತಿಳಿಯಲಿದೆ. ಏಷ್ಯಾ ಹಾಗೂ ಯುರೋಪಿಯನ್ ರಾಷ್ಟ್ರಗಳಲ್ಲಿ ಈಗಾಗಲೇ ತಿಳಿದಿರುವ ಮೈಸೂರು ದಸರಾ ಮಹೋತ್ಸವದ ಬಗ್ಗೆ ಉಳಿದ ಖಂಡಗಳಲ್ಲಿ ದಸರೆಯ ಪರಂಪರೆ ಮತ್ತು ಸಂಸ್ಕೃತಿಯ ಅರಿವು ಹೆಚ್ಚಾಗಲಿದೆ.
ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವುದರ ಜೊತೆಗೆ ಜಾಗತಿಕ ಪ್ರವಾಸ್ಯೋದಮ ಬೆಳೆವಣಿಗೆಯೂ ಆಗಲಿದೆ. ಯುನೆಸ್ಕೋದ ಅನುದಾನ ಪ್ರತಿವರ್ಷ ಸಿಗಲಿದೆ. ದಸರಾ ಪರಂಪರೆ ರಕ್ಷಣೆಗೆ ಸಮಿತಿ ರಚಿಸಿ ಸಾಂಸ್ಕೃತಿಕ ಉತ್ತೇಜನ ನೀಡುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದಸರೆಗೆ ಮಹತ್ವ ಲಭ್ಯವಾಗುತ್ತದೆ. ಆ ಮೂಲಕ ಮೈಸೂರಿನ ಸಮಗ್ರ ಅಭಿವೃದ್ಧಿಗೂ ನೆರವಾಗಲಿದೆ ಎಂಬುದು ಮೈಸೂರಿನ ಪ್ರಜ್ಞಾವಂತರ ಅಭಿಪ್ರಾಯವಾಗಿದೆ.


ಮಾನ್ಯತೆಗೆ ಒಂದು ವರ್ಷ ಬೇಕು
ಇನ್‌ಟ್ಯಾಂಜಿಬಲ್ ಕಲ್ಚರ್ ಹೆರಿಟೇಜ್ ಟ್ಯಾಗ್ ನೀಡಲು ಯುನೆಸ್ಕೋಗೆ ಅರ್ಜಿ ಸಲ್ಲಿಸಿದ ಬಳಿಕ ಅಂತಾರಾಷ್ಟ್ರೀಯ ಮಟ್ಟದ ಪರಂಪರೆ ಮತ್ತು ಸಂಸ್ಕೃತಿ ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಿ, ಮೈಸೂರಿಗೆ ಕಳುಹಿಸಿಕೊಡಲಾಗುತ್ತದೆ. ಸಮಿತಿಯು ಅಧ್ಯಯನ ನಡೆಸಿದ ಬಳಿಕ ಯುನೆಸ್ಕೋಗೆ ವರದಿ ಸಲ್ಲಿಸುತ್ತದೆ. ಈ ಆಧಾರದಲ್ಲಿ ಯುನೆಸ್ಕೋ ಇನ್‌ಟ್ಯಾಂಜಿಬಲ್ ಕಲ್ಚರ್ ಹೆರಿಟೇಜ್ ಟ್ಯಾಗ್ ನೀಡುವುದನ್ನು ನಿರ್ಧರಿಸುತ್ತದೆ. ಈ ಪ್ರಕ್ರಿಯೆಗಳು ಅಂದುಕೊಂಡತೆ ನಿರಂತರವಾಗಿ ನಡೆದರೂ ಒಂದು ವರ್ಷದ ಅವಧಿ ಹಿಡಿಯುತ್ತದೆ. ಹೀಗಾಗಿ ಯುನೆಸ್ಕೋ ಮಾನ್ಯತೆ ಮಾಡಬೇಕಾದ ಮೊದಲ ಪ್ರಕ್ರಿಯೆಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಮಾಡಬೇಕಾಗಿದೆ.


ಯುನೆಸ್ಕೊಗೆ ಅರ್ಜಿ ಸಲ್ಲಿಸುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ. ಆದರೆ, ಕೆಲ ವರ್ಷಗಳಿಂದ ಪ್ರಾಚೀನ ಮತ್ತು ಪುರಾತತ್ವ ಇಲಾಖೆಯಲ್ಲಿ ಪೂರ್ಣ ಪ್ರಮಾಣದ ಆಯುಕ್ತರು ನೇಮಕ ಆಗದಿರುವ ಕಾರಣ ವಿಳಂಬವಾಗಿದೆ.

ಪ್ರೊ.ಎನ್.ಎಸ್.ರಂಗರಾಜು, ಪರಂಪರೆ ಸಮಿತಿ ಸದಸ್ಯ.

andolanait

Recent Posts

ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ತೈಲ ಬಿಕ್ಕಟ್ಟು: ಪಾಕಿಸ್ತಾನದಲ್ಲಿ ಗಣರಾಜ್ಯೋತ್ಸವ ಮೆರವಣಿಗೆ ರದ್ದು

ಇಸ್ಲಾಮಾಬಾದ್:‌ ಇರಾನ್‌, ಅಮೇರಿಕಾ-ಇಸ್ರೇಲ್‌ ಯುದ್ಧದಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ತೈಲ ಬಿಕ್ಕಟ್ಟು ಉಲ್ಬಣಗೊಂಡಿದೆ. ಇದರಿಂದ ಪಾಕಿಸ್ತಾನದಲ್ಲಿ ಗಣರಾಜ್ಯೋತ್ಸವ ಮೆರವಣಿಗೆ ರದ್ದಾಗಿದೆ. ಮಾರ್ಚ್.‌23ರಂದು…

2 hours ago

ಯುಗಾದಿ ಸಂಭ್ರಮ: ಓಂಕಾರೇಶ್ವರ ದೇವಾಲಯದಲ್ಲೂ ಬೇವು ಬೆಲ್ಲ ವಿತರಣೆ

ಮಡಿಕೇರಿ: ನಾಡಿನಾದ್ಯಂತ ಇಂದು ಹೊಸ ವರ್ಷ ಯುಗಾದಿ ಸಂಭ್ರಮ ಮನೆ ಮಾಡಿದ್ದು, ಕೊಡಗಿನ ಮನೆ ಮನೆಯಲ್ಲೂ ಯುಗಾದಿ ಹಬ್ಬದ ಸಡಗರ…

2 hours ago

ಟಿ.ನರಸೀಪುರ| ಯುಗಾದಿ ಸಂಭ್ರಮ: ತ್ರಿವೇಣಿ ಸಂಗಮಕ್ಕೆ ಹರಿದುಬಂದ ಭಕ್ತಸಾಗರ

ಟಿ.ನರಸೀಪುರ: ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಪುಣ್ಯಸ್ನಾನಕ್ಕೆಂದು ತ್ರಿವೇಣಿ ಸಂಗಮಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಮೈಸೂರು ಜಿಲ್ಲೆ…

3 hours ago

ಹುಣಸೂರು: ರೈಲ್ವೆ ಹಳಿ ತಡೆಗೋಡೆಗೆ ಸಿಲುಕಿ ಒದ್ದಾಡಿದ ಕಾಡಾನೆ

ಹುಣಸೂರು: ರೈಲ್ವೆ ಹಳಿ ತಡೆಗೋಡೆಗೆ ಸಿಲುಕಿ ಕಾಡಾನೆಯೊಂದು ಕೆಲಕಾಲ ಒದ್ದಾಟ ನಡೆಸಿದ ಘಟನೆ ತಾಲ್ಲೂಕಿನ ಉಡುವೆಪುರ ಬಳಿ ನಡೆದಿದೆ. ನಾಗರಹೊಳೆ…

3 hours ago

ಮೈಸೂರು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದ್ದು, ಭಾರೀ ಪ್ರಮಾಣದ ಹಾನಿಯಾಗಿದೆ. ಮೈಸೂರು ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದಾಗಿ…

3 hours ago

ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ: ಹಳ್ಳಿಗಳಲ್ಲಿ ಹೊನ್ನೇರು ಕಟ್ಟಿ ಸಂಭ್ರಮಿಸಿದ ಅನ್ನದಾತರು

ಮೈಸೂರು: ರೈತರು ಸಡಗರದಿಂದ ಕೃಷಿ ಚಟುವಟಿಕೆ ಆರಂಭಿಸುವ ಮೊದಲ ಹೆಜ್ಜೆ ಯುಗಾದಿಯಾಗಿದ್ದು, ಜಿಲ್ಲೆಯ ಹಲವೆಡೆ ಅನ್ನದಾತರು ಹೊನ್ನೇರು ಕಟ್ಟಿ ಭೂಮಿ…

3 hours ago