ಕವಿಗೋಷ್ಠಿಯಲ್ಲಿ ಕವಿತೆ ಓದುವುದಕ್ಕೆ ನಮ್ಮ ಅಣ್ಣನ ಜತೆ ಮೈಸೂರು ದಸರಾಕ್ಕೆ ಬಂದಿದ್ದೆ. ಅದು ನನ್ನ ಮೊದಲ ದಸರಾ ನೋಟವಾಗಿತ್ತು. ಆ ಸಂದರ್ಭದಲ್ಲಿ ಜನದಟ್ಟಣೆಯಿಂದ ಯಾವ ಕಡೆ ಹೋಗಬೇಕು ಎಂಬುದೇ ಗೊತ್ತಾಗುತ್ತಿರಲಿಲ್ಲ. ಹಾಗಾಗಿ ದಸರಾ ನೋಡಲು ಸಾಧ್ಯವಾಗಲಿಲ್ಲ.
ಅಂಬಾರಿ ಬರುವ ಸಂದರ್ಭದಲ್ಲಿ ನಮ್ಮ ವಾಹನ ನೋ ಪಾರ್ಕಿಂಗ್ನಲ್ಲಿ ಸಿಕ್ಕಿಕೊಂಡು ಚಡಪಡಿಸಿದೆವು. ಅಂಬಾರಿ ನೋಡಲು ಆಗದೇ ಇದ್ದರೂ ಮೈಸೂರಿನ ವೈಭವ ನೋಡಲು ರಮಣೀಯವಾಗಿತ್ತು. ಬರೀ ಚಿತ್ರಗಳಲ್ಲಿ ಅರಮನೆ ನೋಡಿದ್ದ ನಾವು ಮೊದಲ ಬಾರಿಗೆ ರಾತ್ರಿ ಸಮಯದಲ್ಲಿ ಅರಮನೆಯ ವೈಭೋಗವನ್ನು ನೋಡಿದ ಕ್ಷಣ, ತ್ರಿ ಸ್ಟಾರ್ ಹೋಟೆಲ್ನಲ್ಲಿ ಊಟ ಸವಿದದ್ದು ಎಂದಿಗೂ ಮರೆಯದ ನೆನಪು.
ಅರಸೊತ್ತಿಗೆ ವ್ಯವಸ್ಥೆಯ ಜತೆಗೆ ವೈಚಾರಿಕ ಸಂಘರ್ಷವು ಮೈಸೂರಿನಲ್ಲಿ ಬೆಳೆದಿದೆ. ಪ್ರಮುಖವಾಗಿ ರೈತರಿಲ್ಲದ ದಸರಾ ಊಹಿಸಿಕೊಳ್ಳಲು ಸಾಧ್ಯವಿಲ್ಲ. ದಸರಾ ಮೈಸೂರಿಗೆ ಸೀಮಿತವಾಗದೇ ಭಿನ್ನ ಸ್ವರೂಪದಲ್ಲಿ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ , ದಕ್ಷಿಣ ಕರ್ನಾಟಕ ಇವುಗಳ ಕಡೆ ನಡೆಸುವ ಅಗತ್ಯವಿದೆ.
–ಅರವಿಂದ ಮಾಲಗತ್ತಿ, ನಿವೃತ ಪ್ರಾಧ್ಯಾಪಕರು
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಏ.೨೪ರಂದು ಪ್ರಕಟವಾಗಲಿದೆ. ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸಿದರು ಎಂಬ ನಾಣ್ಣುಡಿಯಂತೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿರುವ…
ರಾಜ್ಯದಲ್ಲಿ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿರುವುದು ಶಿಕ್ಷಣ ಇಲಾಖೆಯ ವ್ಯವಸ್ಥಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಅಂಕಿಅಂಶಗಳ ಪ್ರಕಾರ…
ಮೈಸೂರು : ನಾವು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದೇವೆ. ನಮಗೆ ಜೀವ ಬೆದರಿಕೆ ಇದ್ದು, ರಕ್ಷಣೆ ಕೊಡಿ ಎಂದು ತುಮಕೂರು ಮೂಲದ…
ಪ್ರಶಾಂತ್ ಎಸ್. ಮೈಸೂರು : ನಗರ ಹೊರವಲಯದ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಹಾಗೂ ನಗರಪಾಲಿಕೆ ವ್ಯಾಪ್ತಿಯ ಕಂದಾಯ ಇಲಾಖೆ ನೌಕರರ…
ಚಾಮರಾಜನಗರ : ನೀರಿನ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಕಾರಣಕ್ಕೆ ತಾಲ್ಲೂಕಿನ ಮೂರು ಗ್ರಾಮ ಪಂಚಾಯಿತಿ ಕಾರ್ಯಾಲಯಗಳ ವಿದ್ಯುತ್ ಸಂಪರ್ಕವನ್ನು…