ಮೈಸೂರು

ವಿನಯ್‌ ಆತ್ಮಹತ್ಯೆ ಪ್ರಕರಣ| ಶಾಸಕ ಪೊನ್ನಣ್ಣ, ಮಂಥರ್ ಗೌಡ ರಾಜೀನಾಮೆಗೆ ಆಗ್ರಹಿಸಿದ ಎಂ.ಜಿ.ಮಹೇಶ್‌

ಮೈಸೂರು: ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಭಾಗವಾಗಿರುವ ಶಾಸಕರಾದ ಎ.ಎಸ್‌.ಪೊನ್ನಣ್ಣ ಹಾಗೂ ಮಂಥರ್‌ ಗೌಡ ರಾಜೀನಾಮೆ ನೀಡಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ಎಂ.ಜಿ.ಮಹೇಶ್‌ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಇಂದು(ಏಪ್ರಿಲ್‌.4) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕೊಡಗಿನ ಕಾಂಗ್ರೆಸ್‌ ಶಾಸಕರು, ಪೊಲೀಸರನ್ನು ಬಳಸಿಕೊಂಡು ತಮ್ಮ ರಾಜಕೀಯ ಎದುರಾಳಿಗಳನ್ನು ಮುಗಿಸಲು ಮುಂದಾಗಿದ್ದಾರೆ. ವಿನಯ್ ಸಾವಿಗೆ ಸಿದ್ದರಾಮಯ್ಯ, ಪೊನ್ನಣ್ಣ ಮತ್ತು ಮಂಥರ್ ಗೌಡ ನೇರ ಕಾರಣವಾಗಿದ್ದಾರೆ. ಹೀಗಾಗಿ ಅವರಿಬ್ಬರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಗೂಂಡಾ ಸರ್ಕಾರ ರೀತಿ ವರ್ತನೆ ಮಾಡುತ್ತಿದೆ. ಮೃತ ವಿನಯ್‌ ಸೋಮಯ್ಯ ಅವರ ಡೆತ್‌ ನೋಟ್‌ ನೋಡಿದರೆ ರಕ್ತ ಕುದಿಯುತ್ತದೆ. ವಿನಯ್ ಸಾವಿನ ಮೂಲಕ ರಾಜ್ಯಾದ್ಯಂತ ಜಾಗೃತಿ ಮೂಡಿಸುತ್ತೇವೆ. ಇನ್ನೂ ವಿನಯ್ ಆತ್ಮಹತ್ಯೆ ಪ್ರಕರಣವನ್ನ ಸಿಬಿಐ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ.

ಅರ್ಚನ ಎಸ್‌ ಎಸ್

Recent Posts

ಹೆಣ್ಣಿಗೆ ಬೇಕು ಹೆತ್ತವರ ಬೆಂಬಲ..

ಡಾ.ಯಮುನಾ ಬಿ.ರಾಜ್ ಪಿಯುಸಿ ರಿಸಲ್ಟ್ ಬಂತು.. ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮೂರೂ ವಿಭಾಗಗಳಲ್ಲಿಯೂ ಹುಡುಗಿಯರು ಹುಡುಗರಿಗಿಂತ ಹೆಚ್ಚಿನ ಸಾಧನೆ…

2 hours ago

ಆಟಿಸಂ ಮಕ್ಕಳ ಹಕ್ಕುಗಳು

ಅಂಜಲಿ ರಾಮಣ್ಣ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ವಕೀಲರು ರವಿ ಬಾಲ್ಯದಿಂದಲೂ ಬೇರೆ ಮಕ್ಕಳಿಗಿಂತ ವಿಭಿನ್ನ. ಶಾಲೆಯ ವಿದ್ಯಾಭ್ಯಾಸದಲ್ಲಿ ಆಸಕ್ತಿ…

2 hours ago

ಓದುಗರ ಪತ್ರ: ತ.ನಾಡು ಇತರ ರಾಜ್ಯಗಳಿಗೆ ಮಾದರಿ

ಪ್ರಜಾಪ್ರಭುತ್ವ ಸರ್ಕಾರ ಎಂದರೆ ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ತಮ್ಮ ಜನರನ್ನು ಪರೋಕ್ಷವಾಗಿ ಪ್ರತಿನಿಧಿಸುವ ಒಂದು ಭಾಗ. ಅದರಂತೆ ಸಂಸತ್ತಿನಲ್ಲೇ ಆಗಲಿ,…

2 hours ago

ಓದುಗರ ಪತ್ರ: ೪೦ಕ್ಕೂ ಹೆಚ್ಚು ಮರಗಳ ‘ಹತ್ಯೆ’ ಶಂಕಾಸ್ಪದ

ಮೈಸೂರಿನಲ್ಲಿ ೪೦ಕ್ಕೂ ಹೆಚ್ಚು ಮರಗಳ ಹನನ ನಡೆದಿದೆ. ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಧರೆಗೆ ಉರುಳಿಸುವ ಮೂಲಕ ಜಗತಿಕ ತಾಪಮಾನಕ್ಕೆ ಮೈಸೂರು…

2 hours ago

ಓದುಗರ ಪತ್ರ: ಎಲೆಕ್ಟ್ರಿಕ್‌ ಸ್ಕೂಟರ್‌ದಾರರಿಗೂ ಚಾಲನಾ ಪರವಾನಗಿ ಕಡ್ಡಾಯವಾಗಲಿ

ಇತ್ತೀಚಿನ ದಿನಗಳಲ್ಲಿ ಮೈಸೂರು ನಗರದಾದ್ಯಂತ ಎಲೆಕ್ಟ್ರಿಕ್ ಸ್ಕೂಟರ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿವೆ. ೫೦ ಸಿಸಿಗಿಂತ ಕಡಿಮೆ ಸಾಮರ್ಥ್ಯದ ಇ- ಸ್ಕೂಟರ್‌ಗಳಿಗೆ…

2 hours ago

ಓದುಗರ ಪತ್ರ: ಡಾ.ಅಂಬೇಡ್ಕರ್ ಮಾರ್ಗದಲ್ಲಿ ಸಾಗೋಣ

ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಭಾರತ ಸಂವಿಧಾನದ ಶಿಲ್ಪಿ ಅರ್ಥಶಾಸ್ತ್ರಜ್ಞ, ಸಮಾಜ ಸುಧಾರಕ, ತತ್ವಜ್ಞಾನಿ, ಇತಿಹಾಸಕಾರ ಎನ್ನುತ್ತೇವೆ. ಅವರು ಸಮಾನತೆ, ಮತದಾನದ ಹಕ್ಕು,…

3 hours ago