ನಂಜನಗೂಡು : ಶಾಸಕ ದರ್ಶನ್ ದ್ರುವನಾರಾಯಣರ ಪ್ರಯತ್ನದಿಂದಾಗಿ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಿಗೂ ಟ್ರಾಮಾ ಸೌಲಭ್ಯ ಸಿಕ್ಕಿದೆ.
ಎರಡು ರಾಷ್ಟ್ರೀಯ ಹೆದ್ದಾರಿಗಳಿಂದಾಗಿ ಅಫಘಾಥದ ಬೀಡಾಗಿರುವ ದಕ್ಷೀಣ ಕಾಶಿ ನಂಜನಗೂಡಿಗೆ ಒಂದು ಅಫಘಾತ ತುರ್ತು ಚಿಕೀತ್ಸಾ ಘಟಕ ಟ್ರಾಮಾ ಸೆಂಟರ್ ತರುವ ಶಾಸಕ ದರ್ಶನ್ ದ್ರುವನಾರಾಯಣರ ಸತತ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಲಿಭಿಸಿದೆ.
ಬೆಂಗಳೂರು ನೀಲಗಿರಿ ರಸ್ತೆ ಬಾಗಲಕೋಟೆ ಬಿಳಗಿರಿ ರಂಗನ ಬೆಟ್ಟದ ರಸ್ತೆಗಳೆಂಬ ಎರಡು ಹೆದ್ದಾರಿಗಳು ಹಾದೂ ಹೊಗಿರುವ ನಂಜನಗೂಡಲ್ಲಿ ಇತ್ತೀಚಿಗೆ ರಸ್ತೆ ಅಫಘಾಥಗಳು ಹೆಚ್ಚಾಗಿದ್ದವು. ಪ್ರತಿನಿತ್ಯ ರಸ್ತೆ ಅಫಘಾತಗಳು ಕೇಳಿ ಬರುತ್ತಿದ್ದನ್ನು ತಿಳಿದ ಶಾಸಕ ದರ್ಶನ್ ದ್ರುವನಾರಾಯಣ ಅಫಘಾಥ ಕಡಿಮೆ ಮಾಡುವದರ ಜೊತೆ ಅಫಘಾತದ ಗಾಯಾಳುಗಳಿಗೆ ತುರ್ತು ಚಿಕೀತ್ಸೆ ದೊರಕಬೇಕು ಎಂದು ಆಲೋಚಿಸಿದ್ದರು. ಗಾಯಾಳುಗಳಿಗೆ ಸದ್ಯ ನಂಜನಗೂಡಲ್ಲಿ ತುರ್ತು ಚಿಕೀತ್ಸೆ ನೀಡಲು ಯಾವುದೇ ಸೌಲಭ್ಯವಿಲ್ಲದಿರುವದರಿಂದ ಅವರನ್ನು ಜಿಲ್ಲಾ ಕೇಂದ್ರ ಮೈಸೂರಿಗೆ ಕರೆದೊಯ್ಯಬೇಕಿತ್ತು. ಜಿಲ್ಲಾ ಕೇಂದ್ರಕ್ಕೆ ಹೋಗುವ ಮೊದಲೇ ಚಿಕಿತ್ಸೆ ದೊರೆಯದೇ ಅನೇಕರು ಮೃತ ಪಟ್ಟ ಘಟನೆಗಳನ್ನು ಗಮನಿಸಿದ ಶಾಸಕರು ಅಫಘಾಥದ ಬೀಡಾಗಿರುವ ತಮ್ಮ ಕ್ಷೇತ್ರದಲ್ಲೇ ಟ್ರಾಮಾ ಸೆಂಟರ್ ಘಟಕವನ್ನು ಆರಂಭಿಸಿದರೆ ಅನೇಕರ ಪ್ರಾಣ ಉಳಿಯಬಹುದು ಎಂದು ಆಲೋಚಿಸಿ ಆರೋಗ್ಯ ಇಲಾಖೆ ಹಾಗೂ ಸರ್ಕಾರದೊಂದಿಗೆ ಎರಡು ವರ್ಷಗಳಿಂದಲೂ ಪ್ರಯತ್ನಿಸುತ್ತಲೇ ಇದ್ದರು ಅವರ ಸತತ ಪರಿಶ್ರಮಕ್ಕೆ ಈಗ ಫಲಕೊಡುವ ಭರವಸೆ ವಿಧಾನ ಸಭೆಯಲ್ಲಿ ದರ್ಶನರಿಗೆ ಸಿಕ್ಕಿದೆ.
ತಮ್ಮ ಕ್ಷೇತ್ರದಲ್ಲಿ ಕಳೆದ ವರ್ಷ ೩೨೬ ಕ್ಕೂ ಹೆಚ್ಚು ರಸ್ತೆ ಅಫಘಾಥಗಳು ನಡೆದಿದ್ದು ೧೨೦ಕ್ಕೂ ಹೆಚ್ಚು ಸಾವುಗಳಾಗಿದ್ದನ್ನು ಚುಕ್ಕೆ ಪ್ರಶ್ನೆಯ ಮೂಲಕ ವಿಧಾನ ಸಭೆಯ ಮುಂದಿಟ್ಟ ಶಾಸಕರಿಗೆ ರಾಜ್ಯದ ಆರೋಗ್ಯ ಸಚಿವ ದಿನೇಶ ಗುಂಡುರಾವ ನಿಮ್ಮ ಮಾನವೀಯ ಕಳಕಳಿಯನ್ನು ಮನಗಂಡ ಸರ್ಕಾರ ನಂಜನಗೂಡೂ ಸೇರಿದಂತೆ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗೂ ಶಿಘ್ರದಲ್ಲೇ ಟ್ರಾಮಾ ಸೌಲಭ್ಯಗಳನ್ನು ನೀಡಲು ನಿರ್ಧರಿಸಿದೆ ಹಾಗೂ ಹೆಚ್ಚುವರಿಯಾಗಿ ತಾಲೂಕು ಆಸ್ಪತ್ರೆಗೆ ಟ್ರಾಮಾ ಸೌಲಭ್ಯಗಳ ಜೊತೆ ಅಂಬುಲೆನ್ಸ್ ಸಹ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ನಂಜನಗೂಡು ಶಾಸಕ ದರ್ಶನ ದ್ರುವನಾರಾಯಣರಿಂದಾಗಿ ಈಗ ಜಿಲ್ಲೆಯ ಎಲ್ಲ ತಾಲೂಕೂಗಳಿಗೂ ಟ್ರಾಮಾ ಸೌಲಭ್ಯ ದೊರೆಯು ದೊರಕಿದಂತಾಗಿದೆ
ಕೊರಿಯನ್ ಗೇಮ್ಸ್ ವ್ಯಸನದಿಂದ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇಂದು ನಮ್ಮ ಯುವಜನತೆ ಕೆ ಪಾಪ್ ಮತ್ತು ಕೆ…
ಮೈಸೂರಿನ ಶ್ರೀರಾಂಪುರ ೨ನೇ ಹಂತದಲ್ಲಿ ನಿವೇಶನನವೊಂದು ಕಳೆದ ೨೬ ವರ್ಷಗಳಿಂದ ಖಾಲಿಬಿದ್ದಿದೆ. ಈ ಖಾಲಿ ನಿವೇಶನದಲ್ಲಿ ಅಕ್ಕಪಕ್ಕದ ಮನೆಯ ನಿವಾಸಿಗಳು…
ಮೈಸೂರು ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಿರುವುದು ಸ್ವಾಗತಾರ್ಹ ಸಂಗತಿ. ಆದರೆ ಗ್ರಾಮದ ನೈಸರ್ಗಿಕ ಸಂಪತ್ತಾದ ‘ಬೆಳವಾಡಿ ಕೆರೆ’ಗೆ…
ನವೀನ್ ಡಿಸೋಜ ಜನವರಿಯಲ್ಲಿ ೬೩ ಎನ್ಡಿಪಿಎಸ್ ಪ್ರಕರಣಗಳು ದಾಖಲು; ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ಮಡಿಕೇರಿ: ಮಾದಕ ವಸ್ತುಗಳ ಮಾರಾಟ…
ಮಂಜು ಕೋಟೆ ಜಕ್ಕಹಳ್ಳಿ ಆಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮುಜುಗರ; ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಪೋಷಕರ ಆಗ್ರ ಎಚ್.ಡಿ.ಕೋಟೆ: ಗಿರಿಜನ ಮಕ್ಕಳ…
ಪ್ರಶಾಂತ್ ಎಸ್. ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಅನಾಹುತಕ್ಕೆ ಹಾದಿ ಎನ್.ಎಚ್.ಪಾಳ್ಯ,ಟೋಲ್ಗೇಟ್, ಶಿವಪುರ ತಿರುವಿನಲ್ಲಿ ರಿಫ್ಲೆಕ್ಟರ್,ಬ್ಯಾರಿಕೇಡ್ ಅಳವಡಿಕೆ ಅಗತ್ಯ ಮೈಸೂರು:…