ಮೈಸೂರು

ಹಿಂದೂ ಮಹಿಳೆ ಶವ ಸಂಸ್ಕಾರಕ್ಕೆ ಸಹಾಯ ಮಾಡಿದ ಮುಸ್ಲಿಂ ಸಮುದಾಯ

ಮೈಸೂರು,: ದೇಶದಲ್ಲಿ ಇದೀಗ ಬೇಕಿರುವುದು ಐಕ್ಯತೆ ಹಾಗೂ ನಾವೆಲ್ಲ ಒಂದು ಎಂಬ ಭಾವನೆ. ಇದಕ್ಕೆ ಪೂರಕವಾದ ಘಟನೆ ಮೈಸೂರಿನಲ್ಲಿ ನಡೆದಿದ್ದು, ಹಿಂದು-ಮುಸ್ಲಿಮರ ನಡುವೆ ಸೌರ್ಹಾದತೆ ಮೂಡುವಂತೆ ಮಾಡಿದೆ.

 
ಮೈಸೂರಿನ ಪುಲಿಕೇಶಿ ರಸ್ತೆಯ ಸುನ್ನಿ ಚೌಕದಲ್ಲಿ ಶಿವಮ್ಮ( ಕುಳ್ಳಿ) ಎಂಬ ಮಹಿಳೆ ತಡರಾತ್ರಿ ನಿಧನರಾಗಿದ್ದರು. ಇವರ ಅಂತ್ಯಸಂಸ್ಕಾರಕ್ಕೆ ಯಾರೊಬ್ಬರು ಕೂಡ ಮುಂದೆ ಬರಲಿಲ್ಲ. ಶಿವಮ್ಮರ ಬಂಧು ಬಾಂಧವರು ದೂರ ಉಳಿದರು. ಕೊನೆಗೆ ಶಿವಮ್ಮಳ ಅಂತಿಮ ಸಂಸ್ಕಾರಕ್ಕೆ ಮುಸ್ಲಿಂ ಬಾಂಧವರು ಹೆಗಲು ಕೊಟ್ಟು ನಾವೆಲ್ಲ ಒಂದೇ ಎಂಬ ಸಂದೇಶ ಸಾರಿದ್ದಾರೆ.

 

ಯಾವಾಗ ಶಿವಮ್ಮ ಅಂತ್ಯಸಂಸ್ಕಾರಕ್ಕೆ ಯಾರು ಬರಲಿಲ್ಲವೋ ಆಗ ಬಡಾವಣೆಯ ಮುಸ್ಲಿಂ ಬಾಂಧವರು ಮಾತುಕತೆ ನಡೆಸಿದರು. ಹಿಂದು ಸಂಪ್ರದಾಯದಂತೆ ಯಾವ ರೀತಿ ಪೂಜೆ-ಪುನಸ್ಕಾರ ಮಾಡಬೇಕು ಎಂಬುದನ್ನು ಚರ್ಚೆ ಮಾಡಿ ಇತರರಿಂದ ಕೇಳಿ ತಿಳಿದುಕೊಂಡರು. ಅಂತಿಮವಾಗಿ ಹಿಂದೂ ಮಹಿಳೆ ಅಂತ್ಯ ಸಂಸ್ಕಾರವನ್ನು ಸ್ಥಳೀಯರು ಹಿಂದೂ ಸಂಪ್ರದಾಯದಂತೆ ನೆರವೇರಿಸಿ, ಮಾನವೀಯತೆ ಮೆರೆದಿದ್ದಾರೆ.

ಜೋಡಿ ತೆಂಗಿನಮರದ ಸ್ಮಶಾನದಲ್ಲಿ ಹಿಂದೂ ಸಂಪ್ರದಾಯದಂತೆ ಮಾಜಿ ನಗರ ಪಾಲಿಕೆ ಸದಸ್ಯ ಸೋಹೆಲ್ ಬೇಗ್ ನೇತೃತ್ವದಲ್ಲಿ ಶವ ಸಂಸ್ಕಾರ ನಡೆಸಲಾಯಿತು. ಅಲ್ಲದೆ, ಕುಟುಂಬಕ್ಕೆ ಸಾಂತ್ವನ ಹೇಳಿರುವುದು ನಿಜಕ್ಕೂ ಶ್ಲಾಘನೀಯವಾಗಿತ್ತು. ಈ ಬಗ್ಗೆ ಮಾತನಾಡಿದ ಸೋಹೆಲ್ ಬೇಗ್, ನಿನ್ನೆ ರಾತ್ರಿಯಿಂದ ನಾವೇ ಮುಂದೆ ನಿಂತು ಶವಸಂಸ್ಕಾರ ಮಾಡಿದೆವು. ರಾಜ್ಯದ ಜನತೆಯಲ್ಲಿ ನಾನು ಮನವಿ ಮಾಡುವುದೆಂದರೆ ನಾವೆಲ್ಲರೂ ಒಂದೇ. ಹಿಂದು-ಮುಸ್ಲಿಂ ಎಂಬ ಬೇಧಭಾವ ಇರಬಾರದು. ಟಿಪ್ಪು ಜಯಂತಿ ದಿನ ನಾವು ಅನ್ನಸಂತರ್ಪಣೆ ಮಾಡಿದ್ದೆ. ಆ ವೇಳೆ ಎಲ್ಲಾ ಅಡುಗೆ ಕೆಲಸವನ್ನು ಅವರೇ ಮುಂದೆ ನಿಂತು ಮಾಡಿದ್ದರು ಎಂದು ಸ್ಮರಿಸಿಕೊಂಡರು.

 

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago