ಮೈಸೂರು

ಆದಿವಾಸಿಗಳಿಗೆ ಸಿಗದ ಅರಣ್ಯ ಇಲಾಖೆ ಮಮತೆ

ಮೈಸೂರು ಭಾಗದಲ್ಲಿ ಹತ್ತಾರು ಪ್ರಕರಣ ದಾಖಲು

ನ್ಯಾಯಾಲಯಕ್ಕೆ ಅಲೆದಾಡುತ್ತಿರುವ ೧೫೦ ಆದಿವಾಸಿಗಳು

ಅರಣ್ಯವಾಸಿಗಳ ಹಕ್ಕು ರಕ್ಷಣೆ ಇನ್ನೂ ಗಗನಕುಸುಮ

ಮಂಜು ಕೋಟೆ

ಎಚ್.ಡಿ.ಕೋಟೆ: ಅರಣ್ಯದ ಮೇಲೆ ಪ್ರೀತಿ ಇಟ್ಟುಕೊಂಡು ಶತಮಾನಗಳಿಂದ ಮನಃಪೂರ್ವಕವಾಗಿ ಕಾಡು ರಕ್ಷಣೆ ವಾಡುತ್ತಿರುವ ಗಿರಿಜನ ಮಕ್ಕಳಿಗೆ ಅರಣ್ಯ ಇಲಾಖೆ ಎಂಬ ತಾಯಿಯಿಂದಲೇ ಸಿಗುತ್ತಿಲ್ಲ ಮಮತೆ.

ಮೈಸೂರು ಭಾಗದಲ್ಲಿಯೇ ರಾಜ್ಯದ ಮೂರನೇ ಒಂದು ಭಾಗದಷ್ಟು ಗಿರಿಜನರು ಬದುಕು ಕಂಡುಕೊಂಡಿದ್ದಾರೆ. ಆದಿವಾಸಿ ಕರಿಯಪ್ಪನ ಸಾವಿನ ಪ್ರಕರಣ ಈ ಭಾಗದ ಹಾಡಿಗಳಲ್ಲಿ ಭಯ ಮೂಡಿಸಿದೆ. ತಮ್ಮ ಹಕ್ಕುಗಳ ರಕ್ಷಣೆಗಾಗಿ ಆದಿವಾಸಿಗಳು ಹೊಸ ಮಾರ್ಗಗಳನ್ನು ಅರಸುವಂತಾಗಿದೆ.

ಮೈಸೂರು ಜಿಲ್ಲೆಯಲ್ಲಿ  215 , ಚಾಮರಾಜನಗರ ಜಿಲ್ಲೆಯಲ್ಲಿ140, ಕೊಡಗಿನಲ್ಲಿ 145 ಹಾಡಿಗಳಲ್ಲಿ ಒಟ್ಟಾರೆ ಅಂದಾಜು 3 ಲಕ್ಷ ಗಿರಿಜನರು ಇದ್ದಾರೆ. ಎಚ್.ಡಿ.ಕೋಟೆ ತಾಲ್ಲೂಕಿಗೆ ಹೊಂದಿಕೊಂಡಿರುವ ಬಂಡೀಪುರ ಹಾಗೂ ನಾಗರಹೊಳೆ ಉದ್ಯಾನವನದ ವ್ಯಾಪ್ತಿಯಲ್ಲಿ ಅಧಿಕವಾಗಿದ್ದು, ಹೆಚ್ಚು ದೌರ್ಜನ್ಯದ ಪ್ರಕರಣಗಳೂ ವರದಿಯಾಗುತ್ತಿವೆ.

ಎಚ್‌ಡಿಕೋಟೆ-ಸರಗೂರು ತಾಲ್ಲೂಕಿನ ನಾಗರಹೊಳೆ ಮತ್ತು ಬಂಡೀಪುರ ಅಭಯಾರಣ್ಯದ ವ್ಯಾಪ್ತಿಯಲ್ಲಿ ಕಾಡಿನೊಳಗೆ ಮತ್ತು ಕಾಡಿನ ಅಂಚಿನಲ್ಲಿರುವ 119 ಹಾಡಿಯಲ್ಲಿ ವಾಸಿಸುತ್ತಿರುವ 685 ಕುಟುಂಬದ 19 ಸಾವಿರ ಗಿರಿಜನರು ಹಲವಾರು ವರ್ಷಗಳಿಂದ ನಡೆಯುತ್ತಿರುವ ಸಾವಿನ ಪ್ರಕರಣದಿಂದಾಗಿ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅವರನ್ನು ಕಂಡರೆ ಭಯಭೀತಿಯಿಂದ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದೆ.

ಪರಿಶಿಷ್ಟರಿಗೆ ಮೀಸಲಾಗಿರುವ ಹೆಗ್ಗಡದೇವನಕೋಟೆ ಕ್ಷೇತ್ರದಲ್ಲಿ ಗಿರಿಜನರಿಗೆ ಅರಣ್ಯ ಇಲಾಖೆಯವರು ನಡೆಸಿರುವ ಗುಂಡಿನ ದಾಳಿ ಮತ್ತು ಹಲ್ಲೆಗಳಿಂದ ಸಾವನ್ನಪ್ಪಿದ ಅನೇಕ ಕುಟುಂಬಗಳಿಗೆ ಪರಿಹಾರ ಮತ್ತು ನ್ಯಾಯದಿಂದ ಮುಂಚಿತವಾಗಿ ವಿವಿಧ ಪ್ರಕರಣಗಳಿಂದ  150 ಆದಿವಾಸಿ ಜನರು ನ್ಯಾಯಾಲಯಕ್ಕೆ  ಅಲೆದಾಡುತ್ತಿದ್ದಾರೆ.ಗಿರಿಜನರ 6 ಗಂಭೀರ ಪ್ರಕರಣಗಳಲ್ಲಿ 1 ಪ್ರಕರಣ ಮಾತ್ರ ಜೀವಂತವಾಗಿ ಉಳಿದು ನ್ಯಾಯಾಲಯ ಮತ್ತು ಸರ್ಕಾರದ ಪರಿಹಾರಕ್ಕಾಗಿ ಹಾಗೂ ನ್ಯಾಯಕ್ಕಾಗಿ ಭೀಮಸೇನ ಮತ್ತು ರವಿ ಗಿರಿಜನ ಮುಖಂಡರೊಂದಿಗೆ ಹೋರಾಟ ನಡೆಸುತ್ತಿದ್ದಾರೆ.

ಗಿರಿಜನರಿಗೆ ಸಮರ್ಪಕವಾದ ಬೆಂಬಲ ಹಾಗೂ ಅರಿವು ಹಣಕಾಸಿನ ತೊಂದರೆಯಿಂದ ಅರಣ್ಯ ಇಲಾಖೆಯ  ವಿರುದ್ಧವಾಗಿ ನ್ಯಾಯ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಆ ಕುಟುಂಬಗಳಿಗೆ ಪರಿಹಾರ ಮತ್ತು ನ್ಯಾಯ ಮರೀಚಿಕೆಯಾಗಿದೆ.

 

‘ಗಿರಿಜನರು ಮತ್ತು ಅರಣ್ಯ ಇಲಾಖೆಯವರಿಗೆ ಅರಣ್ಯ ಹಕ್ಕು ಕಾಯಿದೆ ವಿಚಾರವಾಗಿ ಅರಿವು ಮೂಡಿಸಬೇಕಾಗಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆದಿವಾಸಿ ಜನರಿಗೆ ಸರ್ಕಾರದ ಸೌಲಭ್ಯ ಮತ್ತು ಸವಲತ್ತುಗಳನ್ನು ಸಮರ್ಪಕವಾಗಿ ಒದಗಿಸಿದಾಗ ಗಿರಿಜನರು ಕಾಡನ್ನು ಅವಲಂಬಿಸುವುದು ಸ್ವಲ್ಪ ಕಡಿಮೆಯಾಗಲಿದೆ ಎನ್ನುವುದು ಗಿರಿಜನ ಮುಖಂಡ ವಡ್ಡರಗುಡಿ ಅವರ ಚಿಕ್ಕಣ್ಣ ಸಲಹೆ.

 

ಅರಣ್ಯ ನಿವಾಸಿಗಳ ಹಕ್ಕುಗಳು ಸಂರಕ್ಷಣೆಯಾಗಬೇಕು ಎಂದು ಒಂದೂವರೆ ದಶಕದ ಹಿಂದೆಯೇ ಕಾಯಿದೆ ರೂಪಿಸಿದರೂ ಅದು ನೆಪ ಮಾತ್ರವಾಗಿದೆ. ಕಾನೂನನ್ನೇ ತಿರುಚುವ ಕೆಲಸ ನಡೆದಿದೆ. ಗಿರಿಜನರನ್ನೇ ಹೊಡೆದು ಸಾಯಿಸುವ ಪ್ರಕರಣಗಳೂ ನಡೆಯುತ್ತಲೇ ಇವೆ. ಅರಣ್ಯ ಇಲಾಖೆಯವರಿಗೆ ಮೊದಲು ಸಂವಿಧಾನದ ಆಂಶವನ್ನು ತಿಳಿಸಿಕೊಡಬೇಕಾಗಿದೆ.

-ಡೀಡ್ ಶ್ರೀಕಾಂತ್. ಗಿರಿಜನಪರ ಹೋರಾಟಗಾರ ಹುಣಸೂರು

ಎಂಥ ಸನ್ನಿವೇಶದಲ್ಲೂ ಅರಣ್ಯ ಇಲಾಖೆ ಕೆಳಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಿರಿಜನರ ಮೇಲೆ ಅನಗತ್ಯ ಕಿರುಕುಳ ನೀಡಬಾರದು ಎನ್ನುವ ಸೂಚನೆಯನ್ನು ನೀಡಿದ್ದೇವೆ. ಬಹಳಷ್ಟು ಕಡೆ ಸೌಹಾರ್ದಯುತ ವಾತಾವರಣ ಈಗಲೂ ಇದೆ. ಪ್ರಾಣಿಬೇಟೆ, ಕಳ್ಳತನದಂಥ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಲೇಬೇಕಾಗುತ್ತದೆ. ಆದರೆ, ಜೀವಹಾನಿಯಂತಹ ಪ್ರಕರಣ ಆಗಬಾರದು.

-ಕುಮಾರ ಪುಷ್ಕರ್, ಎಪಿಸಿಸಿಎಫ್, ವನ್ಯಜೀವಿ ವಿಭಾಗ ಬೆಂಗಳೂರು.

ಇನ್ನೂ ಕ್ರಮವಿಲ್ಲವೇಕೆ?

20 ದಿನದ ಹಿಂದೆಯೇ ಅರಣ್ಯ ಇಲಾಖೆ ದೌರ್ಜನ್ಯದಿಂದ ಕರಿಯಪ್ಪ ಎಂಬ ಗಿರಿಜನ ವ್ಯಕ್ತಿ ಮೃತಪಟ್ಟು ಆರ್‌ಎಫ್‌ಒ ಸಹಿತ 17ಮಂದಿ ವಿರುದ್ದ ಮೊಕದ್ದಮೆ ದಾಖಲಾಗಿದೆ. ಈವರೆಗೂ ಅವರನ್ನು ಬಂಧಿಸಿಲ್ಲ. ಅರಣ್ಯ ಇಲಾಖೆಯೂ ಕ್ರಮ ಕೈಗೊಂಡಿಲ್ಲ. ಚಿಕ್ಕಮಗಳೂರಿನಲ್ಲಿ ಕೆಲ ದಿನಗಳ ಹಿಂದೆ ಗಿರಿಜನ ವ್ಯಕ್ತಿ ಮೇಲೆ ದಾಳಿ ಮಾಡಿದವರನ್ನು ಅಲ್ಲಿನ ಪೊಲೀಸರು ಬಂಧಿಸಲು ಸಾಧ್ಯವಾದರೆ ಮೈಸೂರು ಜಿಲ್ಲಾ ಪೊಲೀಸರು ಯಾಕೆ ಕ್ರಮ ವಹಿಸಿಲ್ಲ ಎನ್ನುವುದು ಇಲ್ಲಿನ ಗಿರಿಜನರ ಪ್ರಶ್ನೆ.

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago