ನಂಜನಗೂಡು ಬಸ್ ನಿಲ್ದಾಣದಲ್ಲಿ ದಾರುಣ ಘಟನೆ
ನಂಜನಗೂಡು: ತಂದೆ ಎದುರೇ ಮಗ ಬಸ್ ನಿಲ್ದಾಣದಲ್ಲಿ ಬಸ್ ಚಕ್ರಕ್ಕೆ ಸಿಲುಕಿ ಸಾವಿಗೀಡಾದ ದಾರುಣ ಘಟನೆ ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ. ನಂಜನಪುರದ ಪ್ರಕಾಶ ಅವರ ಪುತ್ರ ಪ್ರಜ್ವಲ್ (೧೪) ಮೃತಪಟ್ಟ ಬಾಲಕ. ಊರಿಗೆ ತೆರಳಲು ನಗರದ ಬಸ್ ನಿಲ್ದಾಣಕ್ಕೆ ಆಗಮಿಸಿದಾಗ ಈ ದುರಂತ ನಡೆದಿದೆ.
ತಂದೆ ಬಸ್ ಹತ್ತಿದ್ದು ಮಗ ಪ್ರಜ್ವಲ್ ಮುಂಬಾಗಿಲಿನಲ್ಲಿ ಹತ್ತಲು ಹೋದಾಗ ಹಿಂಬಂದಿಯಲ್ಲಿ ಹತ್ತು ಎಂಬ ಧ್ವನಿ ಕೇಳಿದ ಬಾಲಕ ಹಿಂದಿನ ಬಾಗಿಲಿನಲ್ಲಿ ಹತ್ತಲು ಹೊದಾಗ ಚಾಲನೆಗೊಂಡ ಬಸ್ನ ಹಿಂಬದಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶವ ಸಾಗಿಸಲು ವಾಹನವೇ ಇಲ್ಲ: ಅಪಘಾತದಲ್ಲಿ ಸಿಲುಕಿದವರನ್ನು ಕೊಂಡೊಯ್ಯಲು ಅನೇಕ 108 ಆಂಬ್ಯುಲೆನ್ಸ್ ವಾಹನಗಳಿರುವ ನಂಜನಗೂಡಲ್ಲಿ ಶವಸಾಗಿಸಲು ವಾಹನದ ಕೊರತೆ ಇದೆ. ಬಸ್ ನಿಲ್ದಾಣದಲ್ಲಿ ಸಾವಿಗೀಡಾದ ಬಾಲಕನ ಶವ ಸಾಗಿಸಲು ಯಾವುದೇ ವಾಹನ ಬಾರದಿದ್ದಾಗ ಸಂಚಾರ ಠಾಣೆ ಎಸ್ಐ ಯಾಸ್ಮಿನ್ ತಾಜ್, ಆಟೋ ಚಾಲಕ ಪಾಷ ಆಗಮಿಸಿ ಮೃತದೇಹವನ್ನು ಸಾಗಿಸಿದರು.
ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…
ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…
ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…
ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…
ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್ವಾಶ್ ಮಾಡಲಾಗಿದೆ ಎಂಬ…
ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…