ಮೈಸೂರು

ಮಗನ ಆಟ ಕಣ್ತುಂಬಿಕೊಂಡ ರಾಹುಲ್‌ ದ್ರಾವಿಡ್‌ ದಂಪತಿ

ಮೈಸೂರು: ಬಿಸಿಸಿಐ ಆಯೋಜನೆ ಮಾಡಿರುವ 19 ವರ್ಷದೊಳಗಿನ ಆಟಗಾರರ ಕೂಚ್‌ ಬಿಹಾರ್‌ ಟ್ರೋಫಿ ರಾಷ್ಟ್ರೀಯ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಮಗ ಸಮಿತ್‌ ದ್ರಾವಿಡ್‌ ಆಟವನ್ನು ದ್ರಾವಿಡ್‌ ದಂಪತಿಗಳು ಕಣ್ತುಂಬಿಕೊಂಡರು.

ನಗರದ ಮಾನಸಗಂಗೋತ್ರಿಯ ಶ್ರೀಕಂಠದತ್ತ ಒಡೆಯರ್‌ ಕ್ರೀಡಾಂಗಣದಲ್ಲಿ ಕರ್ನಾಟಕ ಕ್ರಿಕೆಟಟ್‌ ಅಸೋಸಿಯೇಷನ್‌ ಮೈಸೂರು ವಲಯದ ಸಹಕಾರದಿಂದ ಕರ್ನಾಕಟ ಹಾಗೂ ಉತ್ತರಖಂಡ್‌ ನಡುವಿನ ನಾಲ್ಕು ದಿನಗಳ ಪಂದ್ಯ ಆರಂಭವಾಗಿದೆ. ವಿವಿಧ ರಾಜ್ಯಗಳಲ್ಲಿ ವಿವಿಧ ತಂಡಗಳ ನಡುವೆ ಪಂದ್ಯ ನಡೆಯಲಿದ್ದು , ಸದ್ಯ  ಕರ್ನಾಟಕ ಹಾಗೂ ಉತ್ತರಖಂಡ್‌ ಪಂದ್ಯಾವಳಿ ಮೈಸೂರಿನಲ್ಲಿ ನಡೆಯುತ್ತಿದೆ.

ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಭಾರತ ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಪುತ್ರ ಸಮಿತ್‌ ದ್ರಾವಿಡ್‌ ಪ್ರತಿನಿಧಿಸುತ್ತಿದ್ದಾರೆ. ಮಗನ ಆಟವನ್ನು ನೋಡಲು ಪತ್ನಿ ಡಾ.ವಿಜೇತರೊಂದಿಗೆ ದ್ರಾವಿಡ್‌ ಕ್ರೀಡಾಂಗಣಕ್ಕೆ ಆಗಮಿಸಿದ್ದರು.

ಸ್ಟೆಪ್ಸ್‌ ಮೇಲೆ ಕೂತು ಆಟ ವೀಕ್ಷಿಸಿದ ʼದಿ ವಾಲ್‌ʼ
ಸಾಮಾನ್ಯವಾಗಿ ಯಾರೇ ಮುಖ್ಯ ಅತಿಥಿಗಳು ಕ್ರಿಕೆಟ್‌ ವೀಕ್ಷಣೆಗೆ ಬಂದರೂ, ಕರ್ನಾಟಕ ಕ್ರಿಕೆಟ್‌ ಅಸೋಸಿಯೇಷನ್‌ ಕಚೇರಿ ಅಥವ ಗಣ್ಯರು ಕುಳಿತುಕೊಳ್ಳುವ ಸ್ಥಳದಲ್ಲಿ ಕೂತು ಪಂದ್ಯ ವೀಕ್ಷಣೆ ಮಾಡುತ್ತಾರೆ. ಆದರೆ ದ್ರಾವಿಡ್‌ ದಂಪತಿಗಳು ಸಾಮಾನ್ಯರಲ್ಲಿ ಸಾಮಾನ್ಯರಂತೆ ಕ್ರೀಡಾಂಗಣದ ಸುತ್ತ ಇರುವ ಮೆಟ್ಟಲಿನ ಮೇಲೆ ಕುಳಿತು ಪಂದ್ಯ ವೀಕ್ಷಣೆ ಮಾಡಿದ್ದು ಎಲ್ಲರ ಗಮನ ಸೇಳೆದಿತ್ತು.

andolanait

Recent Posts

ಓದುಗರ ಪತ್ರ: ಪ್ರತಿಯೊಬ್ಬರಿಗೂ ನಾಗರಿಕ ಪ್ರಜ್ಞೆ ಅಗತ್ಯ

ಕೆಲವು ಜನರು ತಮ್ಮ ಮನೆಯ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳ, ರಸ್ತೆ ಬದಿಯಲ್ಲಿ ಸುರಿಯುವ ಮೂಲಕ ವಿರೂಪಗೊಳಿಸಿ ಸ್ವಚ್ಛ ಭಾರತದ ನಿಯಮವನ್ನು…

1 hour ago

ಓದುಗರ ಪತ್ರ: ಸಾರ್ವಜನಿಕವಾಗಿ ಶುಚಿ ಪ್ಯಾಡ್ ದೊರೆಯಲಿ

ಇಂದು ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಪುರುಷರಿಗೆ ಸರಿಸಮನಾಗಿ ದುಡಿಯುತ್ತಿದ್ದು, ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಮಹಿಳೆಯರು ಒಂದು…

1 hour ago

ಓದುಗರ ಪತ್ರ: ವಿದೇಶಿ ಸಂಗ್ರಹಾಲಯದಿಂದ ನಾಡಿನ ಶಿಲ್ಪಗಳನ್ನು ಹಿಂಪಡೆಯಿರಿ

ಕರ್ನಾಟಕದ ಸಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆಯ ಭಾಗವಾಗಿರುವ ಅನೇಕ ಅಮೂಲ್ಯವಾದ ಶಿಲ್ಪಗಳು ಬ್ರಿಟಿಷ್ ಮ್ಯೂಜಿಯಂ (ಲಂಡನ್), ಲೂವ್ರೇ ಮ್ಯೂಜಿಯಂ (ಪ್ಯಾರಿಸ್),…

1 hour ago

ಓದುಗರ ಪತ್ರ: ಬದನವಾಳು ಗ್ರಾಮ ಸ್ವರಾಜ್ಯದ ಕನಸನ್ನು ನೆನಪಿಸಿದ ಆಂದೋಲನ

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಪುಟ್ಟ ಗ್ರಾಮ ಬದನವಾಳುಗೆ ೧೯೨೭ಹಾಗೂ ೧೯೩೪ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭೇಟಿ ನೀಡಿ ಕೈಮಗ್ಗ…

1 hour ago

ಪ್ರೊ.ಆರ್.ಎಂ.ಚಿಂತಾಮಣಿ ಅವರ ವಾರದ ಅಂಕಣ: ಬ್ಯಾಂಕ್ ಠೇವಣಿಗಳಿಗಿಂತ ವೇಗವಾಗಿ ಸಾಲಗಳು ಬೆಳೆಯುತ್ತಿವೆ

ಪ್ರೊ.ಆರ್.ಎಂ.ಚಿಂತಾಮಣಿ ೨೦೨೫-೨೬ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಕೊನೆಯ ವೇಳೆಗೆ (ಡಿಸೆಂಬರ್೨೦೨೫) ದೇಶದಲ್ಲಿ ಉಪಭೋಗ (Consumption) ಮುಂದಾಗಿರುವ ಆರ್ಥಿಕ ಚಟುವಟಿಕೆಗಳು…

1 hour ago

ರಾಜ್ಯದ ಇತಿಹಾಸದ ಪುಟಗಳಲ್ಲಿ ಮೈಸೂರಿನ ದಾಖಲೆ

ಕೆ.ಬಿ.ರಮೇಶನಾಯಕ ದೇಶದಲ್ಲೇ ಹಲವು ಏಳು-ಬೀಳುಗಳು, ಸ್ಥಿತ್ಯಂತರವನ್ನು ಕಂಡ ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರು ಜಿಲ್ಲೆಯು ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ಮುಖ್ಯಮಂತ್ರಿಯಾಗಿ…

2 hours ago